ಅಳಿವಿನಂಚಿನಲ್ಲಿರುವ ನಮ್ಮ ತುಳುನಾಡ ಸಂಸ್ಕ್ರತಿಯ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮ ಆದ್ಯ ಕರ್ತವ್ಯ ಎಂದು ಮುಖ್ಯ ಅತಿಥಿಗಳಾದ ದೇವೇಂದ್ರ ಡಿ. ಕೋಟ್ಯಾನ್ ತಿಳಿಸಿದರು. ಅಲ್ಲದೆ ಆಷಾಢದ ಕಷ್ಟ ಶ್ರಾವಣದ ಸುಖವನ್ನು ಸವಿವರವಾಗಿ ತಿಳಿಸುವುದರ ಮೂಲಕ ಕೃಷಿ ಬದುಕಿನ ಮೂಲಕ ತುಳುನಾಡ ಜನರ ಜೀವನ ಯಾವ ರೀತಿ ಬೆಸೆದುಕೊಂಡಿದೆ ಎನ್ನುವುದನ್ನು ತಿಳಿಸಿಕೊಟ್ಟರು. ಅಲ್ಲದೆ ತುಳುನಾಡ ಜನರ ಹಬ್ಬ ಹರಿದಿನಗಳ ಮಹತ್ವವನ್ನು ತಿಳಿಸಿಕೊಟ್ಟರು. ಅದೇ ರೀತಿ ಆಷಾಢ ಮಾಸದಲ್ಲಿ ದೇವಸ್ಥಾನಗಳು, ದೈವ ದೇವರುಗಳ ಪೂಜಾ ಕೈಂಕರ್ಯಗಳು ಸ್ಥಗಿತಗೊಂಡು ಶ್ರಾವಣ ಮಾಸದಲ್ಲಿ ಮತ್ತೆ ಪೂಜಾ ವಿಧಿ ವಿಧಾನಗಳ ಆರಂಭವನ್ನು ಜೊತೆಗೆ ಹಚ್ಚ ಹಸಿರಿನ ಸುಂದರ ಪರಿಸರದ ಬದಲಾವಣೆಯನ್ನು ಸುಲಲಿತವಾಗಿ ತಿಳಿಸಿಕೊಟ್ಟರು.
ಕಾರ್ಯಕ್ರಮವನ್ನು ಗಿಡ ನೀಡುವುದರ ಮೂಲಕ ಚಾಲನೆಯನ್ನು ಕೊಟ್ಟ ಶ್ರೀಯುತ ಆನಂದ ಪೂಜಾರಿ ಯವರು ಕೃಷಿಯಿಂದ ಸ್ವಾವಲಂಬಿ ಬದುಕಿನ ಬಗೆಗೆ ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತ ದೇವೆಂದ್ರ ಕೋಟ್ಯಾನ್ ಹಾಗೂ ಶ್ರೀಯುತ ಆನಂದ ಪೂಜಾರಿ ಭಾಗವಹಿಸಿದ್ದರು. ಅಳಿವಿನಂಚಿನಲ್ಲಿರುವ ಕೃಷಿ ಬದುಕನ್ನು ಮುಂದಿನ ಪೀಳಿಗೆಗೆ ತಿಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಾದರಿ ಎಂಬುವುದನ್ನು ಶ್ರೀಯುತ ಯೋಗೀಶ್ ಸನಿಲ್ ಇವರು ತಮ್ಮ ಪ್ರಾಸ್ತಾವಿಕ ನುಡಿಗಳ ಮೂಲಕ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಘಟಕದ ಅಧ್ಯಕ್ಷರಾದ ಶ್ರೀಮತಿ ವಾಣಿ ಗಣೇಶ್ ರವರು ವಹಿಸಿ ಕೊಂಡಿದ್ದರು. ಶ್ರೀಯುತ ಭಾಸ್ಕರ್ ಸಾಲ್ಯಾನ್ ಇವರು ಘಟಕದ ಸದಸ್ಯರಿಗೆ ಸಾಂಪ್ರದಾಯಿಕ ಆಟಗಳನ್ನು ಆಡಿಸಿ ರಂಜಿಸಿದರು.ಕಾರ್ಯದರ್ಶಿ ದಿವಿತ್ ಕುಮಾರ್ ಇವರು ಘಟಕದ ಸದಸ್ಯರಿಗಾಗಿ ಏರ್ಪಡಿಸಲಾದ ಛಾಯಾಚಿತ್ರ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಓದಿದರು. ಘಟಕದ ಸದಸ್ಯರು ಜಾನಪದ ನೃತ್ಯಕ್ಕೆ ಹೆಜ್ಜೆ ಹಾಕುವುದರ ಮೂಲಕ ಮೆರುಗು ತಂದರು. ಕುಮಾರಿ ಆದ್ಯ ಇವರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಆರಂಭಿಸಿದರು. ಶ್ರೀಯುತ ರಿತೇಶ್ ಕಾರ್ಯಕ್ರಮ ನಿರೂಪಿಸಿದರು.


