ಘಟಕದ 2025 26 ನೇ ಸಾಲಿನ ಪದಗ್ರಹಣ ಸಮಾರಂಭವು ದಿನಾಂಕ 24/8/ 25ರ ಆದಿತ್ಯವಾರ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಅಧ್ಯಕ್ಷರಾದ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕಣ್ಣಂಗಾರು ಸೀನ ಪೂಜಾರಿಯವರು ಮಾತನಾಡಿ ಪಡುಬಿದ್ರಿ ಘಟಕವು ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ವಿದ್ಯೆಗೂ ಮಹತ್ವ ನೀಡುತ್ತಿದೆ ಯುವ ಜನರಿಗೆ ವ್ಯಕ್ತಿತ್ವ ವಿಕಸನಗೊಳಿಸಲು ಯುವವಾಹಿನಿ ಅಂತಹ ಸಂಸ್ಥೆಗಳು ಮಾದರಿಯಾಗಿವೆ ಎಂದರು
ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಅವರು ಮಾತನಾಡಿ ವಿದ್ಯೆನಮ್ಮನ್ನು ಸ್ವತಂತ್ರವಾಗಿಸುತ್ತದೆ ಯುವಕರು ನಾಗರಿಕ ಸೇವೆಯ ಉದ್ಯೋಗದ ಬಗ್ಗೆ ಗಮನ ಹರಿಸಬೇಕು ಎಂದರು. ಮುಖ್ಯ ಅತಿಥಿಯಾದ ಉದ್ಯಮಿ ಗಣೇಶ್ ಗುಜರನ್ ಮಾತನಾಡಿ ವಿದ್ಯೆ ಉದ್ಯೋಗದಂತೆ ಸಂಘಟನೆಯು ಮುಖ್ಯ ಯುವಕರಿಗೆ ಮಾರ್ಗದರ್ಶನದ ಅಗತ್ಯವಿದೆ ಉದ್ಯೋಗದೊಂದಿಗೆ ಕೃಷಿಯತ್ತ ಆದ್ಯತೆ ಯುವ ಸಮೂಹ ನೀಡಬೇಕು ಎಂದರು .
ಶೈಕ್ಷಣಿಕ ಸಾಧಕರಾದ ಶ್ರೀಶ ಜಯಪುಜಾರಿ ಹಾಗೂ ಸುದೀನ್ ಪೂಜಾರಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಾಗೂ 30 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು .ನೂತನ ಸದಸ್ಯರು ಘಟಕಕ್ಕೆ ಸೇರ್ಪಡೆಗೊಂಡರು . ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ನೂತನ ಅಧ್ಯಕ್ಷರಾದ ವಿದಿತ್ ಪೂಜಾರಿ ನೂತನ ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿ ಶುಭ ಹಾರೈಸಿದರು. ಅಧ್ಯಕ್ಷ ಶಶಿಕಲ ಯಶೋಧರ ರವರು ನೂತನ ಅಧ್ಯಕ್ಷರಾದ ವಿದಿತ್ ಪೂಜಾರಿ ಕರ್ನಿರೆಯವರಿಗೆ ಮತ್ತು ಕಾರ್ಯದರ್ಶಿ ಸುಜಾತ ಪ್ರಸಾದ್ ರವರು ನೂತನ ಕಾರ್ಯದರ್ಶಿ ಭಾಸ್ಕರ್ ಎನ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಘಟಕದ ಅಧ್ಯಕ್ಷರಾದ ಶಶಿಕಲ ಯಶೋದರ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಗಣೇಶ್ ಗುಜರನ್ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ದೀಪಕ್ ಕೋಟ್ಯಾನ್, ಸುಜಾತ ಪ್ರಸಾದ್ ,ಭಾಸ್ಕರ್ ಎನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .
ಸುಜಾತ ಹರೀಶ್ ಪ್ರಾರ್ಥನೆ ಮಾಡಿದರು. ಸುರೇಶ್ ಪೂಜಾರಿ ಪ್ರಸ್ತಾಪಿಸಿದರು. ಕಾರ್ಯದರ್ಶಿ ಸುಜಾತ ಪ್ರಸಾದ್ ಗತ ಸಾಲಿನ ಕಾರ್ಯ ಚಟುವಟಿಕೆಗಳ ವರದಿ ಮಂಡಿಸಿದರು. ಅಶ್ವತ್ ಎಸ್ ನೂತನ ಪದಾಧಿಕಾರಿಗಳ ಪಟ್ಟಿ ವಾಚಿಸಿದರು. ಚೈತ್ರ ಗಣೇಶ್ ಚೈತ್ರ ಮನೋಹರ್ , ಮತ್ತು ರವಿರಾಜ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು . ಭಾಸ್ಕರ್ ಏನ್ ಅಂಚನ್ ವಂದಿಸಿದರು


