ಯುವವಾಹಿನಿ (ರಿ)ಮೂಡುಬಿದಿರೆ ಘಟಕದ*
ಆತಿಥ್ಯದಲ್ಲಿ
*ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ(ರಿ) ಕಡಂದಲೆ-ಪಾಲಡ್ಕ* ಹಾಗೂ *ಮಹಿಳಾ ಘಟಕದ* ಸಹಯೋಗದೊಂದಿಗೆ *ವಿಶ್ವ ಮಹಿಳಾ ದಿನಾಚರಣೆ* ಅಂಗವಾಗಿ *ಮಾ. 9ರಂದು* *ಬಿಲ್ಲವ ಸಂಘ, ಕಡಂದಲೆ-ಪಾಲಡ್ಕದಲ್ಲಿ* ಸಾಧಕ ಮಹಿಳೆಯರಿಗೆ ಸನ್ಮಾನ ಮತ್ತು ಮಾಹಿತಿ ಕಾರ್ಯಕ್ರಮ *“ಸಮರ್ಪಣೆ-2025”*
ಕಾರ್ಯಕ್ರಮವು ಕಡಂದಲೆ – ಪಾಲಡ್ಕ ಇಲ್ಲಿ ಜರುಗಿತು.
ಅನ್ನಪೂರ್ಣದ *ಶ್ರೀಮತಿ ಪ್ರಶಾಂತಿ ಶೇಖರ ಅಂಚನ್* ರವರು ದೀಪಾ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಡಂದಲೆ-ಪಾಲಡ್ಕ ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕದ ಅಧ್ಯಕ್ಷೆ *ಶ್ರೀಮತಿ ಸೌಮ್ಯ ಗಣೇಶ್* ರವರು ಪ್ರಸ್ತಾವನೆಯೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.
ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕರಾದ *ಸುಶಾಂತ್ ಕರ್ಕೇರ* ರವರು ಮಾತನಾಡಿ ಮಹಿಳಾ ದಿನಾಚರಣೆಯ ಶುಭಾಶಯವನ್ನು ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಘಟಕದ ಅಧ್ಯಕ್ಷ *ಮುರಳೀಧರ ಕೋಟ್ಯಾನ್* ಮಾತನಾಡುತ್ತಾ ಮಹಿಳೆಯರ ಸಾಧನೆಯನ್ನು ಗುರುತಿಸಿ ಸನ್ಮಾನಿಸುವುದು ಇಡೀ ಸಮಾಜಕ್ಕೆ ಲಾಭದಾಯಕವಾಗಿದ್ದು ಎಲ್ಲವನ್ನೂ ಅರಿತುಕೊಂಡು, ಕಾನೂನಿನ ಅರಿವನ್ನು ಬೆಳೆಸಿಕೊಂಡು ಸಬಲರಾಗಬೇಕು ಎಂದರು.
🔶 ಸಂಪನ್ಮೂಲ ವ್ಯಕ್ತಿ ಗಳಾಗಿ ಭಾಗವಹಿಸಿದ್ದ ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ *ಶ್ರೀಮತಿ ಶೋಭಾ ಸುರೇಶ್* ಮತ್ತು ವಕೀಲೆ *ಶ್ರೀಮತಿ ಮೇಘರಾಣಿ* ಕಾರ್ಯಕ್ರಮಕ್ಕೆ ಪೂರಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರೂ ಮತ್ತು ಪಾಲಡ್ಕ ಗ್ರಾ.ಪಂ. ಘನತ್ಯಾಜ್ಯ ನಿರ್ವಹಣಾ ವಾಹನದ ಚಾಲಕಿ ಯವರನ್ನು ಸನ್ಮಾನಿಸಲಾಯಿತು. ವ್ಯಕ್ತಿತ್ವ ವಿಕಸನ ನಿರ್ದೇಶಕರಾದ *ಶುಭಕರ್ ಅಂಚನ್* ರವರು ಮಿಮಿಕ್ರಿ ಪ್ರದರ್ಶಿಸುವ ಮೂಲಕ ನೆರೆದಿರುವ ಸಭೀಕರನ್ನು ಮನರಂಜಿಸಿದರು.
*ಶ್ರೀಮತಿ ರಶ್ಮಿ ರಾಜೇಶ್* ಪ್ರಾರ್ಥಿಸಿದರು. *ಶ್ರೀಮತಿ ಜಾನಕಿ ವಸಂತ್* ನಿರೂಪಿಸಿದ ಕಾರ್ಯಕ್ರಮದಲ್ಲಿ *ಕು. ಅಕ್ಷತಾ ಮಾರೂರು* ವಂದಿಸಿದರು.


