ಯುವವಾಹಿನಿ (ರಿ) ಕೆಂಜಾರು- ಕರಂಬಾರು ಘಟಕ
ಪದಗ್ರಹಣ ಕಾರ್ಯಕ್ರಮ 09-03-2025 ಆದಿತ್ಯವಾರ
ಶ್ರೀ ದೇವಿ ಭಜನಾಮಂದಿರ
ಬಜಪೆ ಶ್ರೀ ನಾರಾಯಣ ಗುರು ಸಮಾಜ ಮಂದಿರದ ಅಧ್ಯಕ್ಷರಾದ ಶ್ರೀಯುತ ಶಿವರಾಮ ಪೂಜಾರಿಯವರು ಶ್ರೀ ನಾರಾಯಣ ಗುರು ಸ್ವಾಮಿಯವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆಯಿತ್ತರು.ಶ್ರೀಮತಿ ಪ್ರತಿಮಾ ಪುನಿತ್ ಅವರು ಪ್ರಾರ್ಥನೆ ಮಾಡಿದರು. ಘಟಕದ ಅಧ್ಯಕ್ಷರಾದ ವಿನೋದ್ ಕುಮಾರ್ ಅವರು ಸ್ವಾಗತಿಸಿದರು. ಶ್ರೀಯುತ ಮಂಜು ಪೂಜಾರಿ ಭಂಡಾರಮನೆ ಇವರು ದೀಪ ಬೇಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರಿಸಿದರು.ಘಟಕದ ಮಾಜಿ ಅಧ್ಯಕ್ಷರಾದ ಪ್ರಸಾದ್ ಪಾಲನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯದರ್ಶಿ ಮಿಥುನ್ ಕುಮಾರ್ ಒಂದು ವರ್ಷದ ವರದಿ ವಾಚಿಸಿದರು.ನಂತರ ಚುನಾವಣಾ ಅಧಿಕಾರಿಯಾದ ನಿಕಟ ಪೂರ್ವ ಅಧ್ಯಕ್ಷರಾದ ಭರತೇಶ್ ಅವರು ನೂತನ ತಂಡವನ್ನು ಪರಿಚಯಿಸಿದರು, ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೊಕೇಶ್ ಕೋಟ್ಯಾನ್ ಅವರು
ನೂತನ ತಂಡಕ್ಕೆ ಪ್ರಮಾಣ ವಚನ ಭೋಧಿಸಿದರು. ನೂತನ ಅಧ್ಯಕ್ಷರಾಗಿ ಸಂದೀಪ್ ಪೂಜಾರಿ ಕೋರಮನೆ ಹಾಗೂ ಕಾರ್ಯದರ್ಶಿ ಶ್ರೀಮತಿ ನವ್ಯ ಜಯಂತ್ ಅವರು ಇತರ ನಿರ್ದೇಶಕರುಗಳೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು. ನಮ್ಮೂರಿನ ಹಿರಿಯ ಭಜನಾ ಗುರುಗಳಾದ ಯಾದವ ಸುವರ್ಣ ಬಜ್ಪೆ, ಶ್ರೀಮತಿ ಜಾನಕಿ ಪರಶುರಾಮ ಪಾಲನ್ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿಯವರನ್ನು ಅವರ ಕೊಡುಗೆಯನ್ನು ಗುರುತಿಸಿ ಗಣ್ಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.SSLC,PUC ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಯಿತು.ಹಾಗೂ ನಮಗೆ ಪ್ರತಿಯೊಂದು ಕಾರ್ಯಕ್ರಮಕ್ಕೆ ಆಶ್ರಯ ನೀಡುತ್ತಿರುವ ಶ್ರೀ ದೇವಿ ಭಜನಾ ಮಂದಿರದ ಮೇಲ್ಛಾವಣಿಯ ಕಾಮಗಾರಿಗೆ ನಮ್ಮ ಘಟಕದಿಂದ ₹5555/- ನ್ನು ಅಧ್ಯಕ್ಷರು ಭಜನಾ ಮಂದಿರದ ಅಧ್ಯಕ್ಷರಿಗೆ ಹಸ್ತಾಂತರಿಸಿದರು.ಮುಖ್ಯ ಅತಿಥಿಗಳಾದ ಶ್ರೀ ಅನಿಲ್ ಕುಮಾರ್ ಮತ್ತು ಜಗನ್ನಾಥ ಸಾಲಿಯಾನ್ ಶುಭ ಹಾರೈಸಿದರು.ಪ್ರಮಾಣ ವಚನ ಬೋಧಿಸಿದ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಮಾತಾಡಿ ಸಂದೀಪ್ ಪೂಜಾರಿ ಮತ್ತು ಅವರ ನೂತನ ತಂಡಕ್ಕೆ ಶುಭ ಹಾರೈಸಿದರು ವೇದಿಕೆಯಲ್ಲಿ ಶ್ರೀ ದೇವಿ ಭಜನಾ ಮಂದಿರದ ಅಧ್ಯಕ್ಷ ಮಿತ್ರದಾಸ್ ಅಮೀನ್, ಬಜಪೆ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಉಪಾಧ್ಯಕ್ಷ ರಾದ ಶೇಖರ ಪೂಜಾರಿ ಕರಂಬಾರು, ಕೇಂದ್ರ ಸಮಿತಿಯ ಸಂಘಟಣಾ ಕಾರ್ಯದರ್ಶಿ ಹಾಗೂ ನಮ್ಮ ಘಟಕದ ಉಸ್ತುವಾರಿ ವಹಿಸಿದ ಹರೀಶ್ ಕೋಟ್ಯಾನ್ ಕುದನೆ ಉಪಸ್ಥಿತರಿದ್ದರು. ನೂತನ ಅಧ್ಯಕ್ಷ ಸಂದೀಪ್ ಪೂಜಾರಿ ಮಾತಾಡಿ ಎಲ್ಲರ ಸಹಕಾರ ಕೋರಿದರು… ಅಧ್ಯಕ್ಷರು ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. . ನೂತನ ಕಾರ್ಯದರ್ಶಿ ಶ್ರೀಮತಿ ನವ್ಯ ಜಯಂತ್ ಅವರು ಧನ್ಯವಾದ ಸಮರ್ಪಿಸಿದರು
AUG 07, 2025 4.49 PM IST


