
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ )ಮೂಡುಬಿದಿರೆ ಘಟಕ
ವ್ಯಕ್ತಿತ್ವ ವಿಕಸನ ಶಿಬಿರ ಹೊಂಬೆಳಕು- 2025,16/02/2025 ನೇ ಆದಿತ್ಯವಾರ ಸ್ಥಳ.. ಸಮಾಜ ಮಂದಿರ ಮೂಡುಬಿದಿರೆ
ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ, ಘಟಕದ ಅಧ್ಯಕ್ಷರು ಎಲ್ಲರನ್ನೂ ಸ್ವಾಗತಿಸಿದರು.
ಯುವ ಉದ್ಯಮಿ ಪುತ್ತಿಗೆ ಭಾಸ್ಕರ್ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾದ ಇರುವೈಲ್ ಬಿಲ್ಲವ ಸಂಘದ ಅಧ್ಯಕ್ಷರಾದ *ಕುಮಾರ್ ಪೂಜಾರಿಯವರು ಮತ್ತು ಘಟಕದ ನಿಕಟಪೂರ್ವ ಅಧ್ಯಕ್ಷರಾದ ಶಂಕರ್ ಏ ಕೋಟ್ಯಾನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು
🔶ವೇದಿಕೆಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರದ ಸಂಪನ್ಮೂಲ ವ್ಯಕ್ತಿ ರಾಜೇಶ್ ಸುವರ್ಣ ಬಂಟ್ವಾಳ ಹಾಗೂ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಡಾ ||ಶುಭಕರ್ ಅಂಚನ್ ಕಾರ್ಯದರ್ಶಿ ವಿನೀತ್ ಸುವರ್ಣ ಇವರೆಲ್ಲರು ಉಪಸ್ಥಿತರಿದ್ದರು.
🔶ಸಂಪನ್ಮೂಲ ವ್ಯಕ್ತಿ ರಾಜೇಶ್ ಸುವರ್ಣ ಬಂಟ್ವಾಳ ಇವರು ವ್ಯಕ್ತಿತ್ವ ವಿಕಸನ ಶಿಬಿರವನ್ನು ಬಹಳ ಅರ್ಥ ಗಂಭೀರವಾಗಿ ಯುವವಾಹಿನಿ ಯ ಬಗ್ಗೆ ತಿಳಿಸಿ ನಮ್ಮ ಯುವವಾಹಿನಿ ಸದಸ್ಯರು ಎಲ್ಲರೂ ಮುಂದೆ ಬಂದು ಮಾತಾಡುವ ಹಾಗೆ ಆಗಬೇಕು ಎಲ್ಲರೂ ಸಮಾಜದಲ್ಲಿ ನಾಯಕರಾಗಬೇಕು ಎಲ್ಲರಿಗೂ ಅಂತಹ ಗುಣವಿದೆ ನಾವೆಲ್ಲರೂ ಮುಂದೆ ಬಂದು ನಮ್ಮ ಸಮಾಜಕ್ಕೆ ಮಾದರಿ ವ್ಯಕ್ತಿ ಯಾಗಿ ಬೆಳೆಯಬೇಕು ಎಂದು ಹೇಳಿದರು…
🔶 ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿ ಗಳನ್ನು ಅಧ್ಯಕ್ಷರಾದ ಮುರಳೀಧರ ಕೋಟ್ಯಾನ್ ರವರು ಪುಷ್ಪ ಗಿಡ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯದರ್ಶಿ ವಿನೀತ್ ಸುವರ್ಣ ರವರ ವಂದನಾರ್ಪಣೆಯೊಂದಿಗೆ ರಾಷ್ಟ್ರಗೀತೆಯ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.


