
ಯುವವಾಹಿನಿ (ರಿ) ಸುರತ್ಕಲ್ ಘಟಕದ 2025 -26 ನೇ ಸಾಲಿನ ಪದಗ್ರಹಣ ‘ಸಾರಥ್ಯ- 2025’ ಸಮಾರಂಭವು ದಿನಾಂಕ 19.01.2025 ರಂದು ಬ್ರಹ್ಮ ಶ್ರೀ ನಾರಾಯಣ ಗುರು ಸಭಾಗೃಹ ಕುಳಾಯಿಯಲ್ಲಿ ನಡೆಯಿತು. ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೂಜೆಯ ಮುಖೇನ
ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅನಂತರ ಘಟಕದ ಸದಸ್ಯರ ನೃತ್ಯ ವೈವಿದ್ಯ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸ೦ಘ ಕುಳಾಯಿ ಯ ಮಾಜಿ ಉಪಾಧ್ಯಕ್ಷರಾದ ಚಂದ್ರಹಾಸ ಮೂಡುಬೆಟ್ಟು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸ೦ಘ ಜಿಲ್ಲಾ ಸಮಿತಿ ಮಂಗಳೂರು ನ ಅಧ್ಯಕ್ಷರಾದ ಕುಶಾಲ್ ಪೂಜಾರಿ ,ತಾಲೂಕು ಯುವಜನ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷರಾದ ಸುಧಾಕರ ಅಮೀನ್ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಬಿವಿಪಿ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಘಟಕದ ಸದಸ್ಯರಾದ ಯಶಸ್ ಕುಕ್ಯಾನ್ ಮತ್ತು ರಾಷ್ಟ್ರ ಮಟ್ಟದ ಕರಾಟೆಯಲ್ಲಿ ಮಾಡಿದ ಸಾಧನೆಗಾಗಿ ಚಿನ್ನದ ಪದಕ ಗಳಿಸಿಕೊಂಡಿರುವ ಮಾಸ್ಟರ್ ಲಿಖಿತ್ ಸುವರ್ಣ ರವರಿಗೆ ಅಭಿನಂದಿಸಲಾಯಿತು. ಘಟಕದ ವಾರ್ಷಿಕ ಪತ್ರಿಕೆ ‘ಚಿಲುಮೆ’ ಯನ್ನು ಶ್ರೀಯುತ ಸುಧಾಕರ್ ಅಮೀನ್ ಅವರಿಂದ ಬಿಡುಗಡೆಗೊಳಿಸಲಾಯಿತು. ಈ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸ೦ಘ ಕುಳಾಯಿ ಗೆ ಘಟಕದ ಪರವಾಗಿ ಅಭಿನಂದಿಸಲಾಯಿತು. ಘಟಕದ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆಯನ್ನು ಅತಿಥಿಗಳು ನೆರವೇರಿಸಿದರು.
ನಿಯೋಜಿತ ಅಧ್ಯಕ್ಷರು ಶ್ರೀಮತಿ ವಾಣಿ ಗಣೇಶ್ ಇವರಿಗೆ ಹಾಗೂ ಸಾರಥ್ಯದ ನೂತನ ಪದಾಧಿಕಾರಿಗಳ ತಂಡಕ್ಕೆ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಲೋಕೇಶ್ ಕೋಟ್ಯಾನ್ ಕೂಳೂರು ಇವರು ಪ್ರಮಾಣ ವಚನ ಭೋಧಿಸಿ,ಘಟಕದ ನಿರ್ಗಮನ ಅಧ್ಯಕ್ಷರು ನಿಯೋಜಿತ ಅಧ್ಯಕ್ಷರಿಗೆ ಪೇಟ ತೊಡಿಸುವುದರ ಮುಖೇನ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
ತಮ್ಮ ಅಧಿಕಾರವದಿಯಲ್ಲಿ ಕ್ರಿಯಾಶೀಲರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ನಿರ್ಗಮನ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು ಮತ್ತು ಕೇಂದ್ರ ಸಮಿತಿಯ ಚುಕ್ಕಾಣಿ ಹಿಡಿದಿರುವ ಅಧ್ಯಕ್ಷರಾದ ಶ್ರೀ ಲೋಕೇಶ್ ಕೋಟ್ಯಾನ್ ಕೂಳೂರು ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಆಶೋಕ್ ಕುಮಾರ್ ವಹಿಸಿದರು. ಕುಮಾರಿ ಅದಿತಿಯವರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಗುರುಗಳ ಶುಭಾಶಿರ್ವಾದವನ್ನು ಬೇಡಿದರು.ಅಧ್ಯಕ್ಷರು ಎಲ್ಲರನ್ನೂ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುಲತಾ ಪೂಜಾರಿ ವಾರ್ಷಿಕ ವರದಿಯನ್ನು ಮಂಡಿಸಿದರು. ಯುವವಾಹಿನಿ (ರಿ) ಸುರತ್ಕಲ್ ಘಟಕದ ಮಾಜಿ ಅಧ್ಯಕ್ಷರಾದ ಶ್ರೀಯುತ ಭಾಸ್ಕರ್ ಸಾಲ್ಯಾನ್ ಪ್ರಾಸ್ತಾವಿಕ ನುಡಿಗಳೊಂದಿಗೆ ಯುವವಾಹಿನಿಯ ಪರಿಚಯ ಮತ್ತು ಸಾಧನೆಯ ವಿವರ ನೀಡಿದರು . ಕಾರ್ಯಕ್ರಮವನ್ನು ಶ್ರೀಯುತ ಸತೀಶ್ ಕೋಟ್ಯಾನ್ ಮತ್ತು ಗಾಯತ್ರಿ ಸತೀಶ್ ನಿರೂಪಿಸಿದರು.


