
ದಿನಾಂಕ 15-05-2025 : ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಕಾರ್ಮಿಕ ದಿನಾಚರಣೆ ಆಯೋಜಿಸಲಾಗಿತ್ತು.
ಕಾರ್ಮಿಕ ದಿನಾಚರಣೆ ಪ್ರಯುಕ್ತ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಭಗವಾನ್ ದಾಸ್. ಬಿ. ಎನ್. ನಿಕಟ ಪೂರ್ವ ಉಪಾಧ್ಯಕ್ಷರು,
ಭಾರತೀಯ ಮಜ್ದೂರ್ ಸಂಘ. ಕರ್ನಾಟಕ.
ಕಾರ್ಯಧ್ಯಕ್ಷರು, ಕೇಂದ್ರೀಯ ಸಮಿತಿ, ಕುದುರೆಮುಖ ಮಜ್ದೂರ್ ಸಂಘ. ಮಂಗಳೂರು ಇವರು ಆಗಮಿಸಿದ್ದರು.
ಭಗವಾನ್ ದಾಸ್ ಬಿ. ಎನ್ . ಮಾತನಾಡಿ ಭಾರತೀಯ ಮಜ್ದೂರ್ ಸಂಘದ ಚಿಂತನೆ ವಸುದೈವ ಕುಟುಂಬಕಂ ಅಂದರೆ ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿ ಎಂದು ಇಲ್ಲಿ ಕಾರ್ಮಿಕರ ಸ್ವಾರ್ಥ ಇರುವುದಿಲ್ಲ ಇಡೀ ಜಗತ್ತು ಮುಂದೆ ಬರಬೇಕಾದರೆ ಅಲ್ಲಿ ಕಾರ್ಮಿಕರು ಬಹಳ ಮುಖ್ಯ ಹಾಗೆ ಒಂದು ದೇಶದಲ್ಲಿ ಕೃಷಿಕ ಸೈನಿಕ ಮತ್ತು ಕಾರ್ಮಿಕ ಇವರು ಸುಭಿಕ್ಷೆಯಿಂದ ಇದ್ದರೆ ಆ ದೇಶಸುಭಿಕ್ಷವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಗವಾನ್ ದಾಸ್ ಬಿ ಎನ್ ಅವರನ್ನು ಘಟಕದ ವತಿಯಿಂದ ಗೌರವಿಸಲಾಯಿತು.
ಘಟಕದ ಅಧ್ಯಕ್ಷರಾದ ರಾಹುಲ್ ಸನಿಲ್, ಕಾರ್ಯದರ್ಶಿ
ನವೀನ್ ಕೋಟ್ಯಾನ್, ಉಪಾಧ್ಯಕ್ಷರಾದ ಸುರೇಖಾ ಮೋಹನ್, ಕೋಶಾಧಿಕಾರಿ ಮಮತಾ ತೇಜ್ ಪಾಲ್ ಘಟಕದ ಸ್ಥಾಪಕ ಅಧ್ಯಕ್ಷರು ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷರು ಹಾಗೂ ಕಾರ್ಯದರ್ಶಿ
ಯುವವಾಹಿನಿ (ರಿ) ಕಂಕನಾಡಿ ಘಟಕ


