ಯುವವಾಹಿನಿ (ರಿ) ಅಡ್ವೆ ಘಟಕ
ಅಂಥರ್ಘಟಕ ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್ 2025

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇವರ ಆಶ್ರಯದಲ್ಲಿ, ಅಡ್ವೆ ಘಟಕದ ಅತಿಥ್ಯದಲ್ಲಿ ,ಬ್ರಹ್ಮ ಬೈದರ್ಕಳ ಗರಡಿ ಅಡ್ವೆಯ ಸಹಯೋಗದೊಂದಿಗೆ ಮಹಿಳಾ ದಿನಾಚರಣೆಯ ಪ್ರಯುಕ್ತ ಯುವವಾಹಿನಿಯ ಇತಿಹಾಸದಲ್ಲಿ ಪ್ರಪ್ರಥಮವಾಗಿ ಅಂಥರ್ಘಟಕ ಮಹಿಳಾ ಕ್ರಿಕೆಟ್ ಪಂದ್ಯಕೂಟ 2025 ಅತ್ಯಂತ ವಿಜ್ರಂಬನೆಯಿಂದ ಮೇ 4 ಆದಿತ್ಯವಾರದಂದು ಅಡ್ವೆ ಕೋಟಿ ಚೆನ್ನಯ ಕಂಬಳ ಮೈದಾನದಲ್ಲಿ ಜರುಗಿತು.
ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಪಲಿಮಾರು ಗ್ರಾಮ ಪಂಚಾಯತಿ ಅಧ್ಯಕ್ಷರು ಶ್ರೀಮತಿ ಸುಮಲತಾ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಧ್ವಜಾರೋಹಣಗೊಂಡು ಕುಮಾರಿ ಮೋಕ್ಷ ಇವರ ಪ್ರಾರ್ಥನೆಯೊಂದಿಗೆ ಶ್ರೀ ಮಹಾಗಣಪತಿ ದೇವಸ್ಥಾನ ಅಡ್ವೆ ಇಲ್ಲಿ ಅರ್ಚಕರಾದ ಶ್ರೀ ಜೆನ್ನಿ ರವಿಶಂಕರ್ ಭಟ್ ಇವರ ಅಮೃತ ಹಸ್ತದೊಂದಿಗೆ , ಅಧ್ಯಕ್ಷರು ಶ್ರೀ ವರುಣ್ ಕುಮಾರ್ ಇವರ ಸಭಾ ಸಭಾಧ್ಯಕ್ಷತೆಯಲ್ಲಿ ಉದ್ಘಾಟನೆಗೊಂಡಿತು. ವೇದಿಕೆಯಲ್ಲಿ ಉಪಸ್ಥಿತಿ ಇದ್ದಂತಹ ಎಲ್ಲಾ ಅತಿಥಿಗಳು ಪಂದ್ಯಾಟವು ಒಳ್ಳೆಯ ರೀತಿಯಲ್ಲಿ ಸಾಗಿಬರಲಿ ಎಂದು ಆಟಗಾರರಿಗೆ ಶುಭಾಶಯ ನೀಡಿದರು.
ಅದೇ ರೀತಿ ಗ್ರಾಮದ ಪ್ರಥಮ ಪ್ರಜೆ ಫಲಿಮಾರು ಗ್ರಾಮ ಪಂಚಾಯತಿ ಅಧ್ಯಕ್ಷರು ಸುಮಲತಾ ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉದ್ಘಾಟಕರು ಜೆನ್ನಿ ರವಿಶಂಕರ್ ಭಟ್ ಸಭಾಧ್ಯಕ್ಷರಾದ ಶ್ರೀ ವರುಣ್ ಕುಮಾರ್ ಮುಖ್ಯ ಅತಿಥಿಗಳಾದ ಶ್ರೀಮತಿ ಸುಮಲತ ಶೆಟ್ಟಿ , ಮುಖ್ಯೋಪಾಧ್ಯಾಯರು ಶ್ರೀಮತಿ ಕವಿತಾ , ಯುವವಾಹಿನಿ ರೀ ಕೇಂದ್ರ ಸಮಿತಿ ಮಂಗಳೂರು ಇಲ್ಲಿಯ ಪ್ರಧಾನ ಕಾರ್ಯದರ್ಶಿ ಶ್ರೀ ಬಾಬು ಪೂಜಾರಿ, ಸಂಘಟನಾ ಕಾರ್ಯದರ್ಶಿ ಶ್ರೀ ದೀಪಕ್ , ಮಹಿಳಾ ಸಂಘಟನಾ ನಿರ್ದೇಶಕರು ಶ್ರೀಮತಿ ಕವಿತಾ ತಾರಾನಾಥ್ ಉಪಸ್ಥಿತಿಯರಿದ್ದರು. ಅಂತಿಮವಾಗಿ ಘಟಕದ ಮಹಿಳಾ ನಿರ್ದೇಶಕರು ಸುಮನ ಮನೋಜ್ ವಂದಿಸಿದರು ತದನಂತರ 9 ತಂಡಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಲೀಗ್ ಮಾದರಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ನಡೆಯಿತು ಅಂತಿಮವಾಗಿ ಪಡುಬಿದ್ರಿ ಚಾಂಪಿಯನ್ , ಪ್ರಥಮ ರನ್ನರ್ ಆಫ್ ಕೂಳೂರು ,ದ್ವಿತೀಯ ರನ್ನರ್ ಆಫ್ ಗ್ರಾಮ ಚಾವಡಿ ಕೊಣಚೆ, ತೃತೀಯ ರನ್ನರ್ ಅಪ್ ಬಜಪೆ ಘಟಕ ಪಡೆದುಕೊಂಡರು . ಅದೇ ರೀತಿ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಚೈತ್ರ ,ಬೆಸ್ಟ್ ಬೌಲರ್ ಪಡುಬಿದ್ರಿ ಕವಿತಾ , ಬೆಸ್ಟ್ ಫೀಲ್ಡರ್ ಕೂಳೂರು ಸಿಂಚನ, ಸರಾಣಿ ಶ್ರೇಷ್ಠ ಪ್ರಶಸ್ತಿ ಪಡುಬಿದ್ರೆಯ ಪೂಜಾ ಇವರು ವೈಯಕ್ತಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು .
ಸಂಜೆ 6 ಗಂಟೆಗೆ ಸರಿಯಾಗಿ ಅತಿಥಿಗಳ ಕೂಡುವಿಕೆಯಲ್ಲಿ ಅದ್ದೂರಿ ಸಮಾರೋಪ ಸಮಾರಂಭ ನಡೆಯಿತು .
ಕೇಂದ್ರ ಸಮಿತಿ ಮಂಗಳೂರು ಇಲ್ಲಿಯ ಅಧ್ಯಕ್ಷರು ಶ್ರೀ ಲೋಕೇಶ್ ಕೊಟ್ಯಾನ್ ಇವರ ಸಭಾಧ್ಯಕ್ಷರತೆಯಲ್ಲಿ , ಗೀತಾ N ಸುವರ್ಣ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈತ ಜಿತೇಶ್ ಆಚಾರ್ಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಶ್ರತೀಕ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು .
ಅತಿಥಿಗಳು ಮಾತನಾಡಿ.. ಈ ಕಾರ್ಯಕ್ರಮದ ಯಶಸ್ಸು ಯುವವಾಹಿನಿ ಯ ಎಲ್ಲಾ ಸದಸ್ಯರಿಗೆ ಸಲ್ಲುತ್ತದೆ , ಯುವ ಪ್ರತಿಭೆಗಳ ಸೂಕ್ತ ವೇದಿಕೆಯನ್ನು ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿ ಮುನ್ನಡೆಯುತಿದೆ ಎಂದು ಸಂತಸ ವ್ಯಕ್ತಪಡಿಸಿದರು .
ಸಭಾಧ್ಯಕ್ಷರು ಶ್ರೀ ಲೋಕೇಶ್ ಕೋಟ್ಯಾನ್ ಈ ಕಾರ್ಯಕ್ರಮ ಆಯೋಜನೆಯ ಬಗ್ಗೆ ಘಟಕದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು . ವುಮೆನ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು .
ವೇದಿಕೆಯಲ್ಲಿ ಶ್ರೀ ಲೋಕೇಶ್ ಕೋಟ್ಯಾನ್, ಕೊಳಚೂರ್ ಕೊಂಡೆಟ್ಟು ಸುಕುಮಾರ್ ಶೆಟ್ಟಿ, ಲೋಕೇಶ್ ಅಮೀನ್ , ಶ್ರೀ ವೈ. ಸುಧೀರ್ ಕುಮಾರ್ , ರಾಹೇಶ್ವರ್ ಪೈ , ಶ್ರೀಮತಿ ಕವಿತಾ ತಾರಾನಾಥ್, ತಾರಾನಾಥ್ ಕೋಟ್ಯಾನ್ ಉಪಸ್ಥಿತರಿದ್ದರು.
ಕ್ರೀಡಾ ನಿರ್ದೇಶಕರು ಶ್ರೀ ತಾರಾನಾಥ್ ಕೋಟ್ಯಾನ್ ವಂದಿಸಿದರು. . ಅಂತಿಮವಾಗಿ ಧ್ವಜಅವರೋಹಣ ಮಾಡುವ ಮುಖಾಂತರವಾಗಿ ಕಾರ್ಯಕ್ರಮ ಮುಕ್ತಾಯಗೊಂಡಿತು.
ಶರತ್ ಅಡ್ವೆ ಕಾರ್ಯಕ್ರಮ ನಿರೂಪಿಸಿದರು


