04-12-2025, 5:31 PM
ಯುವವಾಹಿನಿ ಸಂಸ್ಥೆಯ ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದು, ಇದರ ಸದಸ್ಯರ ಶಿಸ್ತುಬದ್ದ ಸೇವಾ ಚಟುವಟಿಕೆ, ಬದ್ಧತೆಯಿಂದಾಗಿ ಯುವಕರು ಯುವವಾಹಿನಿಯತ್ತ ಒಲವು ತೋರಿಸುತ್ತಿದ್ದಾರೆ, ಅಲ್ಲದೆ ಇತರ ಸೇವಾ ಸಂಸ್ಥೆಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂದು ಪೆರ್ನೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಪೆರ್ನೆ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ತನಿಯಪ್ಪ ಪೂಜಾರಿ ತಿಳಿಸಿದರು. ಅವರು ಘಟಕದ ವತಿಯಿಂದ ಲೀಲಾವತಿ ಕೊರಗಪ್ಪ ಪೂಜಾರಿ ಹತ್ತು ಕಳಸೆ ಇವರ ಮನೆಯಲ್ಲಿ ನಡೆದ “ಯುವ ಭಾಂದವ್ಯ.. 2025” ಅಕ್ಟೋಬರ್ ತಿಂಗಳ […]
Read More
04-12-2025, 5:23 PM
ಯುವವಾಹಿನಿ(ರಿ)ಕೇಂದ್ರಸಮಿತಿಯ ಸಹಕಾರದೊಂದಿಗೆ ಯುವವಾಹಿನಿ ಅಶ್ರಯ ಯೋಜನೆಯಡಿಯಲ್ಲಿ ನಿರ್ಮಿಸಿದ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಪೆಲತ್ತಡಿ ಕಮಲ ಪೂಜಾರ್ತಿಯವರಿಗೆ ಮನೆಯ ಹಸ್ತಾಂತರ ಕಾರ್ಯಕ್ರಮ ಹಾಗೂ ತುಳಸಿ ಪೂಜಾ ಆಚರಣೆ ದಿನಾಂಕ 12.11.2025 ಬುಧವಾರ . ಸಂಜೆ ಭಜನಾ ಕಾರ್ಯಕ್ರಮದ ಜೊತೆಗೆ ತುಳಸಿ ಪೂಜೆಯ ನಂತರ ಸಭಾ ಕಾರ್ಯಕ್ರಮವನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ) ಕುದ್ರೋಳಿ ಮಂಗಳೂರು ಇದರ ಅಧ್ಯಕ್ಷರಾದ ಶ್ರೀಯುತ ನವೀನ್ ಚಂದ್ರ ಡಿ ಸುವರ್ಣ ಇವರು ಉದ್ಘಾಟಿಸಿದರು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಲೋಕೇಶ್ […]
Read More
01-12-2025, 3:06 PM
ದಿನಾಂಕ 19-10-2025 ನೇ ಆದಿತ್ಯವಾರ ದಂದು ದೀಪಾವಳಿ ಹಬ್ಬದ ಪ್ರಯುಕ್ತ ಬಡ ಕುಟುಂಬಗಳಿಗೆ ದಿನಸಿ ವಿತರಣೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಘಟಕದ ಅಧ್ಯಕ್ಷರಾದ ಲತೀಶ್ ಪೂಜಾರಿ ರವರು ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ದೀಪ ಬೆಳಗಿಸಿ, ಪ್ರಾರ್ಥಿಸಿದರು. ನಂತರ ಸದಸ್ಯರ ಜೊತೆಗೆ ಸೇರಿಕೊಂಡು ದೀಪಾವಳಿ ಹಬ್ಬವನ್ನು ನಮ್ಮಂತೆಯೇ ಬಡ ಕುಟುಂಬದವರೂ ಆಚರಣೆ ಮಾಡಬೇಕು ಎಂಬ ಉದ್ದೇಶದಿಂದ 8 ಬಡ ಕುಟುಂಬಗಳಿಗೆ ಒಂದು ತಿಂಗಳಿಗೆ ಬೇಕಾದಷ್ಟು ದಿನಸಿ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಘಟಕದ ಕಾರ್ಯದರ್ಶಿ ಜಯಲಕ್ಷ್ಮಿ, […]
Read More
01-12-2025, 3:01 PM
ಘಟಕದ ಸಂಘಟನಾ ಕಾರ್ಯದರ್ಶಿ ತುಳಸೀ ಸುಜೀರ್ ರವರ ಮನೆಯಲ್ಲಿ ದಿನಾಂಕ 25-10-2025 ನೇ ಶನಿವಾರ ದಂದು ನೆರವೇರಿತು. ಮನೆ ಮನೆ ಭಜನೆಯಲ್ಲಿ ಘಟಕದ ಅಧ್ಯಕ್ಷರಾದ ಲತೀಶ್ ಪೂಜಾರಿ, ಪ್ರಥಮ ಉಪಾಧ್ಯಕ್ಷರಾದ ಗೀತಾ ವಸಂತ್, ನಿಕಟಪೂರ್ವ ಅಧ್ಯಕ್ಷರಾದ ಇಂದಿರಾ ಸುರೇಶ್, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಭಾಸ್ಕರ್ ಕೋಟ್ಯನ್, ದೀಕ್ಷಿತ್ ಸಿ ಎಸ್ , ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
Read More
01-12-2025, 2:55 PM
ಕೋಟಿ ಚೆನ್ನಯ್ಯ ಟ್ರೋಫಿ-2025″ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಭಾನುವಾರ, ಅಕ್ಟೋಬರ್ 12 ರಂದು ನಾಡಪ್ರಭು ಕೆಂಪೇಗೌಡ ಬ್ಯಾಡ್ಮಿಂಟನ್ ಕೋರ್ಟ್, ವಿಜಯನಗರ ದಲ್ಲಿ ನಡೆಯಿತು. ಪುರುಷರ ಸಿಂಗಲ್ಸ್, ಡಬಲ್ಸ್, ಮಹಿಳೆಯರ ಡಬಲ್ಸ್ , ಮಿಕ್ಸಡ್ ಡಬಲ್ಸ್ ಪಂದ್ಯಗಳು* ನಡೆದವು. ಮಧ್ಯಾಹ್ನ 3 ಗಂಟೆಯಿಂದ ಮಾಸಿಕ ಸಭೆ ಹಾಗೂ ಬಹುಮಾನ ವಿತರಣೆ ಸಮಾರಂಭ ನಡೆಯಿತು. ಬ್ಯಾಡ್ಮಿಂಟನ್ ಕೋರ್ಟ್, ರೆಫರಿಗಳು, ಜಡ್ಜ್ ಹಾಗೂ ಇತರೆ ಸ್ಥಳೀಯ ವ್ಯವಸ್ಥೆಗಳನ್ನು ಕ್ರೀಡಾ ನಿರ್ದೇಶಕರು ಕಿಶನ್ ಪೂಜಾರಿ ಮತ್ತು ರಕ್ಷಾ ಪ್ರಾಯೋಜಿಸಿದ್ದರು. ಸುಂದರ ಟ್ರೋಫಿಗಳು ಮತ್ತು […]
Read More
01-12-2025, 2:47 PM
ಯುವವಾಹಿನಿ (ರಿ.) ಬೆಂಗಳೂರು ಘಟಕದ 41 ಮಂದಿ ಸದಸ್ಯರು ತಮ್ಮ ಜೀವನದ ಮೊದಲ ಶಿವಗಿರಿ ತೀರ್ಥಯಾತ್ರೆಯನ್ನು 31 ಅಕ್ಟೋಬರ್ 2025 ರಂದು ಮೆಜಸ್ಟಿಕ್ ರೈಲು ನಿಲ್ದಾಣ ದಿಂದ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಹಾಗೂ ಕಾರ್ಯದರ್ಶಿಯಾದ ಸಂತೋಷ್ ಪಣಪಿಲ ಇವರ ಮಾರ್ಗದರ್ಶನದಲ್ಲಿ ಪ್ರಾರಂಭಿಸಿದರು. ಗುರುಗಳ ಕೃಪೆಯಿಂದಲೇ ಈ ಯಾತ್ರೆ ಸಾಧ್ಯವಾಯಿತು ನವೆಂಬರ್ 1, ಶನಿವಾರದ ಬೆಳಿಗ್ಗೆ ತಂಡ ಶಿವಗಿರಿ ತಲುಪಿತು. ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು ನಮ್ಮ ತಂಡಕ್ಕೆ ಆಶೀರ್ವಾದ ನೀಡಿ, ಎಲ್ಲ ವ್ಯವಸ್ಥೆಗಳನ್ನು ಸುಗಮವಾಗಿ ನಡೆಸಿಕೊಟ್ಟರು. ತಂಡವು […]
Read More
01-12-2025, 2:38 PM
ಯುವವಾಹಿನಿ (ರಿ.) ಪಡುಬಿದ್ರಿ ಘಟಕ ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಪಡುಬಿದ್ರಿ ಶಾಖೆ ಹಾಗೂ ಲಯನ್ಸ್ ಕ್ಲಬ್ ಪಡುಬಿದ್ರಿ ಇದರ ಜಂಟಿ ಸಹಯೋಗದೊಂದಿಗೆ ದಿನಾಂಕ 02/11/2025 ಭಾನುವಾರ ದಂದು ಉಚಿತ ನೇತ್ರ ತಪಾಸಣಾ ಶಿಬಿರ ವು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇದರ ವೈದ್ಯಕೀಯ ತಂಡದೊಂದಿಗೆ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ ಇಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಚಿತ್ತರಂಜನ್ ಬೋಳಾರ್ ನೆರವೇರಿಸಿದರು. […]
Read More
01-12-2025, 2:32 PM
2025-26 ರ ಸಾಲಿನ ಪದಪ್ರದಾನ ಸಮಾರಂಭ 03.11.2025ರ ಸೋಮವಾರದಂದು ಕಾರ್ಕಳದ ಕಾರ್ಕಳ ಇನ್ ಬೈಪಾಸ್ ನಲ್ಲಿ ನಡೆಯಿತು. ಘಟಕದ ಅಧ್ಯಕ್ಷರಾದ ಮಮತಾ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಹಿರಿಯರಾದ ಭಾಸ್ಕರ್ ಎಸ್ ಕೋಟ್ಯಾನ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಕಾರ್ಕಳ ಯುವವಾಹಿನಿಯು ಯುವ ಸದಸ್ಯರನ್ನು ಒಗ್ಗೂಡಿಸಿಕೊಂಡು ಶೈಕ್ಷಣಿಕ, ಧಾರ್ಮಿಕ, ಆರೋಗ್ಯಸೇವೆ ಮಾಡುವ ಜೊತೆಗೆ ಮಾದರಿ ಸಂಘವಾಗಿ ಬೆಳೆಯುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು. ಮುಖ್ಯ ಅತಿಥಿಗಳಾಗಿ ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ […]
Read More
01-12-2025, 2:27 PM
ಘಟಕದ ಆಶ್ರಯದಲ್ಲಿ ದಿನಾಂಕ:02-11-2025 ಆದಿತ್ಯವಾರದಂದು ತುಳುವೆರೆ ತುಳಸಿ ಪರ್ಬ ಕಾರ್ಯಕ್ರಮವು ಹೆಜಮಾಡಿ ಬಿಲ್ಲವರ ಸಂಘದಲ್ಲಿ ಜರಗಿತು. * ತುಳಸಿ ಪೂಜೆಯ ವಿಧಿ ವಿಧಾನಗಳನ್ನು ಗುರು ಮಂದಿರದ ಅರ್ಚಕರಾದ ಹರೀಶ್ ಶಾಂತಿ ಮುಂಬೈ ಇವರ ನೇತೃತ್ವದಲ್ಲಿ ಗುರು ಮಂದಿರದಲ್ಲಿ ನೆರವೇರಿಸಲಾಹಿತು. * ನಂತರ ಸಭಾ ಕಾರ್ಯಕ್ರಮವು ಹೆಜಮಾಡಿ ಬಿಲ್ಲವರ ಸಂಘದ ವಠಾರದಲ್ಲಿ ಪ್ರಾಥನೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ನಿಶಾಂಕ್.ಎಸ್.ಕೋಟ್ಯಾನ್ ರವರು ವಹಿಸಿದ್ದು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ […]
Read More
01-12-2025, 2:20 PM
ನಾವು ಬಹಳ ವಿಜೃಂಭಣೆಯಿಂದ ಆಚರಿಸುವ ದೀಪಗಳ ಹಬ್ಬ ತುಳಸಿ ಪೂಜೆಯ ಪ್ರಯುಕ್ತ ಘಟಕದ ಸದಸ್ಯರಿಗೆ ” ಬೆಳಕಿನ ಚಿತ್ತಾರ” ಎಂಬ ಸಾಂಪ್ರದಾಯಿಕ ಗೂಡು ದೀಪ ಹಾಗೂ ” ತಮಸೋಮಾ ಜ್ಯೋತಿರ್ಗಮಯ” ಎಂಬ ಮಣ್ಣಿನ ಹಣತೆಯಿಂದ ಬೆಳಗಿದ ಮನೆಯಂಗಳ ಹಾಗೂ ತುಳಸಿ ಪೂಜೆಯ ಪ್ರಯುಕ್ತ ಘಟಕದ ಸದಸ್ಯರಿಗೆ ರಂಗೋಲಿ ಬಿಡಿಸಿ ಹೂವಿನ ಅಲಂಕಾರವನ್ನು ಮಾಡಿ ಮಣ್ಣಿನ ಹಣತೆ ಬೆಳಗಿದ ಅಂದ ಚೆಂದದ ತುಳಸಿಯ ಛಾಯಾಚಿತ್ರದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶ್ರೀಮತಿ ಸುಫ್ರಿಯಾ ಸುಂದರ್ ಸಾಲಿಯಾನ್ ಹಾಗೂ ಶ್ರೀಮತಿ ಸೌಮ್ಯವಾಣಿ ಸಿ […]
Read More