
11-02-2024, 11:38 AM
ಕುಪ್ಪೆಪದವು : ಯುವವಾಹಿನಿ (ರಿ.) ಕುಪ್ಪೆಪದವು ಘಟಕದ 2024-25 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಕುಪ್ಪೆಪದವು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ದಿನಾಂಕ 11-02-2024 ರ ರವಿವಾರ ನಡೆಯಿತು. ನೂತನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪದಪ್ರದಾನಗೈದು, ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಗಳನ್ನು ಆದರ್ಶವಾಗಿಟ್ಟುಕೊಂಡು, ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾ ಬಿಲ್ಲವ […]
Read More

13-11-2022, 5:48 PM
ಕುಪ್ಪೆಪದವು :- ಯುವವಾಹಿನಿಯ ಶಿಸ್ತು ಬದ್ಧ ಕಾರ್ಯಕ್ರಮ, ಪಾರದರ್ಶಕತೆ, ಎಲ್ಲವನ್ನು ಗಮನಿಸಿ ಈ ಬಾರಿ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ. ಈ ಸಂಸ್ಥೆಯು ಬೇರೆ ಸಂಘಟನೆಗಿಂತ ವಿಭಿನ್ನವಾಗಿದೆ. ಸೇವಾ ಮನೋಭಾವ ಹೊಂದಿರುವ ಸಂಸ್ಥೆಯ ಕಾರ್ಯಕ್ರಮಕ್ಕೆ ಬೇರೆ ಯಾವ ಕಾರ್ಯಕ್ರಮದ ಒತ್ತಡವಿದ್ದರೂ ಕೂಡ ಪಾಲ್ಗೊಳ್ಳುವ ಅವಕಾಶ ಬಿಟ್ಟುಕೊಡಲಾರೆ. ಯುವವಾಹಿನಿ ಸಂಸ್ಥೆಗೆ ಯಾವುದೇ ರೀತಿಯ ಸಹಕಾರ ನೀಡಲು ಸದಾ ಸಿದ್ಧ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ ಮತ್ತು ತತ್ವಾದರ್ಶಗಳು ಸರ್ವರಿಗೂ ಅನ್ವಯವಾಗುವಂತಿವೆ […]
Read More

10-09-2022, 4:08 PM
ಕುಪ್ಪೆಪದವು:- ಯುವವಾಹಿನಿ (ರಿ.) ಕುಪ್ಪೆಪದವು ಘಟಕದ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮದಿನಾಚರಣೆ ಅಂಗವಾಗಿ ಗುರು ನಮನ ಸಲ್ಲಿಸಲಾಯಿತು. ನಾಗಂದಡಿ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ ರಾದ ಜಗದೀಶ್ ದುರ್ಗಾಕೊಡಿ, ಸ್ಥಾಪಕ ಅಧ್ಯಕ್ಷ ರಾದ ಅರುಣ್ ಕುಮಾರ್ ಅಂಬೇಲೋಟ್ಟು , ಮಾಜಿ ಅಧ್ಯಕ್ಷರಾದ ಅಜಯ್ ಅಮೀನ್ ಹಾಗೂ ಪದಾಧಿಕಾರಿಗಳು ಮತ್ತು ಘಟಕದ ಸದಸ್ಯರುಗಳು ಉಪಸ್ಥಿತರಿದ್ದರು.
Read More

14-08-2022, 2:46 PM
ಕುಪ್ಪೆಪದವು :- ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಒಂದರಿಂದ ಹತ್ತು ವರ್ಷದ ಒಳಗಿನ ಮಕ್ಕಳಿಗೆ ದ್ವಿತೀಯ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆಯು ದಿನಾಂಕ 14 ಆಗಸ್ಟ್ 2022ರಂದು ಶ್ರೀ ಮಹಾಲಿಂಗೇಶ್ವರ ಸಭಾಭವನ ಬೊಲಿಯ ಕಡೆಗುಂಡ್ಯ ಇಲ್ಲಿ ನಡೆಯಿತು. ಉದ್ಘಾಟನಾ ಕಾರ್ಯಕ್ರಮ ದಲ್ಲಿ ಘಟಕದ ಅಧ್ಯಕ್ಷರಾದ ಜಗದೀಶ್ (ತಿಮ್ಮಯ್ಯ) ದುರ್ಗಾಕೊಡಿ ಅಧ್ಯಕ್ಷತೆ ವಹಿಸಿದ್ದರು. ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಪೂಜಾರಿ ಬಲ್ಲಾಜೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು, ವೇದಿಕೆಯಲ್ಲಿ ಮುತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ […]
Read More

14-11-2019, 4:04 PM
ಇತ್ತೀಚೆಗೆ ಯುವಜನಾಂಗವು ಮದರಂಗಿ ಕಾರ್ಯಕ್ರಮದಲ್ಲಿ ಮಧ್ಯಪಾನಕ್ಕಾಗಿಯೇ ಆಸಕ್ತಿಯಿಂದ ಭಾಗವಹಿಸಿ, ಅನೇಕ ಅನಾಹುತವನ್ನು ಸೃಷ್ಟಿಸುತ್ತೀವೆ.ಆದರೆ ನಮ್ಮ ಘಟಕದ ಸಕ್ರಿಯೆ ಸದಸ್ಯೆಯಾಗಿರುವ ಕುಮಾರಿ ಹರ್ಷಿತರವರ ಮದರಂಗಿ ಶಾಸ್ತ್ರವು ಬಹಳ ವಿಭಿನ್ನತೆಗೆ ಸಾಕ್ಷಿಯಾಯಿತು. ದಿನಾಂಕ 13/11/2019ರಂದು ಅವಳ ಸ್ವಗೃಹವಾದ ಕುರಿಯಾಳದಲ್ಲಿ ಸಂಜೆ ಗೋಧೂಳಿ ಲಗ್ನದಲ್ಲಿ ಸತ್ಯನಾರಾಯಣ ಪೂಜೆ,ನಂತರ ಓಂಕಾರೇಶ್ವರ ಭಜನಾಮಂಡಳಿಯವರಿಂದ ಭಜನೆ ಕುಣಿತ ಅರಳುವ ಪ್ರತಿಭೆಗಳಿಂದ ಮಕ್ಕಳ ಮತ್ತು ಯುವಕರ ಸಾಂಸ್ಕೃತಿಕ ಕಾರ್ಯಕ್ರಮ,ಹಲವು ರೀತಿಯ ಮೋಜಿನ ಆಟಗಳು ಪ್ರೇಕ್ಷಕರನ್ನು ಮನರಂಜಿಸಿದವು. ಈ ರೀತಿಯಾಗಿ ಮಧ್ಯಪಾನವು ಸಮಾಜದ ಸ್ವಾಸ್ಥ್ಯದ ವಿನಾಶಕ್ಕೆ ಕಾರಣವಾಗುತ್ತಿದ್ದು , […]
Read More

03-11-2019, 4:12 PM
ದಿನಾಂಕ 03/11/2019 ರಂದು ಪೂರ್ವಾಹ್ನ 7.00ಘಂಟೆಗೆ ಬೇಸಾಯದ ಕಡೆಗೆ ನಮ್ಮ ನಡೆ ಎಂಬ ಪರಿಕಲ್ಪನೆಯಲ್ಲಿ ಇಂದು ನಮ್ಮ ಘಟಕದ ವತಿಯಿಂದ ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಬಹಳ ಆಸಕ್ತಿದಾಯಕವಾಗಿ ಮತ್ತು ಸಮರ್ಪಣಾ ಭಾವದಿಂದ ನಾಗಂದಡಿಯ ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆವು. ಕೇವಲ ಒಂದು ಗಂಟೆಯಲ್ಲಿ ಒಂದು ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯಕ್ರಮವನ್ನು ಪರಿಪೂರ್ಣಗೊಳಿಸಿದೆವು.ಇಂದಿನ ದಿನಗಳಲ್ಲಿ ಯುವ ಜನತೆಯು ಕೃಷಿಯತ್ತ ಒಲವು ಪ್ರದರ್ಶಿಸದ ಈ ಸಮಯದಲ್ಲಿ, ನಮ್ಮ ಘಟಕವು ಯುವಜನತೆಯನ್ನು ಒಗ್ಗೂಡಿಸಿ , ಈ ಕಾರ್ಯಕ್ರಮವನ್ನು […]
Read More

29-10-2019, 2:28 AM
ದಿನಾಂಕ 29/10/2019 ರಂದು ಪೂರ್ವಾಹ್ನ 9.00 ಘಂಟೆಗೆ ದೀಪಾವಳಿ ಹಬ್ಬದ ಪ್ರಯುಕ್ತ ನಮ್ಮ ಘಟಕದ ವತಿಯಿಂದ ಧಾನ್ಯಲಕ್ಮಿ ಮತ್ತು ಗೋವಿನ ಪೂಜೆಯನ್ನು ಫಲ ಪುಷ್ಪಗಳಿಂದ ಅಲಂಕರಿಸಿ,ಫಲವಸ್ತು ಮತ್ತು ಮಂತ್ರಾಕ್ಷೆಗಳನ್ನು ಸಮರ್ಪಿಸಿ ಹಾಗೂ ಹಣತೆ ಹಚ್ಚಿ, ದೀಪ ಪ್ರಜ್ವಲಿಸಿ ಷೊಡೋಪಚಾರಿ ವಿಧಿ ವಿಧಾನಗಳಿಂದ ಮಹಿಳಾ ಸದಸ್ಯರು ಸಾಮೂಹಿಕವಾಗಿ ಮಂತ್ರ ಪಠಿಸಿ, ಆರತಿ ಎತ್ತಿದೆವು. ಅಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸಿದೆವು. ಈ ಮೂಲಕ ನಮ್ಮ ಸದಸ್ಯರೆಲ್ಲರೂ ದೀಪಾವಳಿ ಹಬ್ಬದ ಆಚರಣೆ ಮತ್ತು ಮಹತ್ವದ ಸ್ವ ಅನುಭವ ಪಡೆದೆವು. ಈ […]
Read More

09-10-2019, 8:28 AM
ದಿನಾಂಕ 08/10/2019 ರಂದು ದಸರಾ ಉತ್ಸವದ ಪ್ರಯುಕ್ತ ಶ್ರೀ ದುರ್ಗೆಶ್ವರಿ ದೇಗುಲದಿಂದ ಹೊರಡುವ ಶೋಭಾ ಯಾತ್ರೆಗೆ ಯುವವಾಹಿನಿ ಕುಪ್ಪೆಪದವು ಘಟಕದ ವತಿಯಿಂದ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀರವರ ಪ್ರತಿಮೆಯನ್ನು ಸ್ತಬ್ಧ ಚಿತ್ರದ ಪ್ರದರ್ಶನ ಮೂಲಕ ಅವರ ಜೀವನ ಚರಿತ್ರೆಯನ್ನು ತಿಳಿಸುವ ಮೂಲಕ ಭವ್ಯ ಮೆರವಣಿಗೆಯಲ್ಲಿ ಸಾಗಲಾಯಿತು. ಮೆರವಣಿಗೆಯ ಉದ್ದಕ್ಕೂ ನಮ್ಮ ಸದಸ್ಯರೆಲ್ಲರೂ ಈ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.(ಈ ಕಾರ್ಯಕ್ರಮಕ್ಕೆ ದಿನೇಶ್ ರಾಯಿರವರು ಹಿನ್ನೆಲೆ ಧ್ವನಿಯಾಗಿ ತೆರೆಯ ಮರೆಯಲ್ಲಿ ಕಾರ್ಯ ನಿರ್ವಹಿಸಿ ಸ್ತಬ್ಧ ಚಿತ್ರಕ್ಕೆ […]
Read More

13-09-2019, 9:07 AM
ದಿನಾಂಕ 13/09/2019 ರಂದು 165 ನೇ ನಾರಾಯಣಗುರು ಜಯಂತಿಯ ಪ್ರಯುಕ್ತ ಕುಪ್ಪೆಪದವಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಯುವವಾಹಿನಿ (ರಿ.) ಕುಪ್ಪೆಪದವು ಘಟಕದ ವತಿಯಿಂದ ಅಧ್ಯಕ್ಷರು/ಉಪಾಧ್ಯಕ್ಷರು/ ಸ್ಥಾಪಕ ಅಧ್ಯಕ್ಷರು ಪದಾಧಿಕಾರಿಗಳು,ಸದಸ್ಯರು ಹಾಗೂ ಹಿರಿಯರಾದ ಉಮೇಶ್ ಅಮೀನ್ ರವರ ಮಾರ್ಗದರ್ಶನದಲ್ಲಿ ವಿಶೇಷ ಗುರು ವಂದನೆ ಸಲ್ಲಿಸಲಾಯಿತು.
Read More

28-07-2019, 4:44 AM
ಕುಪ್ಪೆಪದವು : ಒಂದು ದಿನದ ಪ್ರವಾಸ ಕಾರ್ಯಕ್ರಮವನ್ನು 28/07/2019 ರಂದು ಹಮ್ಮಿಕೊಳ್ಳಲಾಯಿತು. ಈ ಪ್ರವಾಸಕ್ಕೆ ಸುಮಾರು 52 ಕ್ಕಿಂತ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು. ಎಲ್ಲಾ ಸದಸ್ಯರು ಮುಂಜಾನೆ 5.00 ಘಂಟೆಗೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಸೇರಿದರು. ಅಲ್ಲಿಂದ ನಮ್ಮ ಪ್ರಯಾಣ ಸಾಗಿದ ಹಾದಿ……ಸಿಗಂದೂರು ಚೌಡೇಶ್ವರಿ ದೇವಾಲಯ .ಜೋಗು ಜಲಪಾತ ಹೀಗೆ ಶಿವಮೊಗ್ಗ ಜಿಲ್ಲೆಯ ಪ್ರಕೃತಿಯ ಸೊಬಗನ್ನು ಸವಿಯುತ್ತಾ, ಬೇಡಿದ್ದನ್ನು ಕರುಣಿಸುವ ತಾಯಿಯ ದೇಗುಲ ದರ್ಶನ ಮತ್ತು ಜೀವನದಲ್ಲಿ ಒಮ್ಮೆ ನೋಡಲೇ ಬೇಕಾದ ಜೋಗುಜಲಪಾತದ ರಮಣೀಯ ದೃಶ್ಯ […]
Read More