Yuvavahini

NOV 15, 2019 3.36 PM IST

ಯುವವಾಹಿನಿ (ರಿ) ಕೊಲ್ಯ ಘಟಕ

ಮದ್ಯಮುಕ್ತ ಮದರಂಗಿ

ಯುವವಾಹಿನಿಯೆಂಬ ಕೂಡುಕುಟುಂಬದ ಸದಸ್ಯರೊಬ್ಬರ ಮದುವೆಯಲ್ಲಿ

“””ಮದ್ಯಮುಕ್ತ ಮದರಂಗಿ“””
ಪ್ರತಿಜ್ಞಾ ವಿಧಿ ಸಂಕಲ್ಪ
ದೊಂದಿಗೆ ನೆರವೇರಿಸಿ ನಾರಾಯಣ ಗುರುಗಳ ಸಂದೇಶವನ್ನು ಸಮಾಜಕ್ಕೆ ಸಾರಿದ ಅಭೂತಪೂರ್ವ ಕ್ಷಣ

ನಮ್ಮ ಘಟಕದ ಸದಸ್ಯರಾದ ಚಿ.ರಕ್ಷಿತ್ ಕೃಷ್ಣ ಸನಿಲ್ ರವರ ಮದುವೆಯ ಮದರಂಗಿ ಕಾರ್ಯಕ್ರಮ ವು ತಾರೀಕು 13-11-2019 ನೇ ಬುಧವಾರದಂದು ಸಾಯಂಕಾಲ ಮದುಮಗನ ನಿವಾಸ ಕೊಲ್ಯ ಕನೀರುಬೀಡುವಿನಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಸಂತ ಸೆಬಾಸ್ಟಿಯನ್ ಕಾಲೇಜು ಪೆರ್ಮನ್ನೂರು ತೊಕ್ಕೋಟು ಇಲ್ಲಿಯ ಉಪನ್ಯಾಸಕರಾದ ಸಾಹಿತಿ ಅರುಣ್ ಉಳ್ಳಾಲ್ ರವರ ಆಶಯ ಭಾಷಣದಲ್ಲಿ ತಿಳಿಯಪಡಿಸಿದ ವಿಚಾರ ಈ ಕಾರ್ಯಕ್ರಮವು “ಪರಿವರ್ತನೆ ಜಗದ ನಿಯಮ” ಎಂಬ ಕೃಷ್ಣವಾಣಿಯಂತೆ ನಕಾರಾತ್ಮತೆಯಿಂದ ಸಕಾರಾತ್ಮತೆಯೆಡೆಗೆ ಹೊಸ ದಾರಿಯನ್ನು ಎತ್ತಿ ತೋರಿಸುವಂತಿದೆ,ಮಾನವ ಜೀವನದಲ್ಲಿ ವೈದಿಕ ಜಗತ್ತು ಹದಿನಾರು ನಮೂನೆಯ ಸಂಸ್ಕಾರವನ್ನು ತಿಳಿಯಪಡಿಸಿದೆ,ಅದುವೇ ಷೋಡಶ ಸಂಸ್ಕಾರ ಈ ಷೋಡಶ ಸಂಸ್ಕಾರದಲ್ಲಿ ಮೂರು ಪ್ರಮುಖವಾದ ಸಂಸ್ಕಾರಗಳನ್ನು ನಮ್ಮ ಧರ್ಮಗುರುಗಳು ಹಾಗೂ ವೈದಿಕರು ಮುಖ್ಯವಾಗಿ ಅಳವಡಿಸಿಕೊಂಡಿದ್ದಾರೆ.ಅದರಲ್ಲಿ ಬಹು ಮುಖ್ಯವಾಗಿ ಮಧ್ಯ ಭಾಗದಲ್ಲಿ ಬರುವಂತಹ ಸಂಸ್ಕಾರ ಮದುವೆ.ಮದುವೆ ಅನ್ನುವಂತಹ ಕ್ರಮ ಹಿಂದೂ ಸಂಸ್ಕೃತಿಯಲ್ಲಿ ಅದರದ್ದೇ ಆದ ಇತಿಹಾಸ ಇದೆ ಅದನ್ನು ಉಳಿಸುವ ಪ್ರಯತ್ನವನ್ನು ಹಿಂದೂ ಸಂಸ್ಕೃತಿ,ಹಿಂದೂ ಧರ್ಮಕ್ಕನುಗುಣವಾಗಿ ನಾವು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಧರ್ಮ ಉಳಿಯುತ್ತದೆ ಎಂದು ಆಶಯ ಭಾಷಣದಲ್ಲಿ ನುಡಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ರವರು 20 ಕ್ಕೂ ಅಧಿಕ ಸದಸ್ಯರಿಗೆ ಹಾಗೂ ಆಸಕ್ತ ಬಂಧುಗಳಿಗೆ ಪ್ರತಿಜ್ಞಾ ವಿಧಿ ಸಂಕಲ್ಪವನ್ನು ಬೋಧಿಸಿ ಸರಳ ಸಮಾರಂಭಕ್ಕೆ ಆದ್ಯತೆ ನೀಡೋಣ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಮದುವೆ ಎಂಬ ಶುಭಕಾರ್ಯದಲ್ಲಿ ಮಧ್ಯಮ ವರ್ಗದವರ ಸಾಲದ ಹೊರೆಯನ್ನು ತಗ್ಗಿಸಲು ಇಂತಹ ಸರಳ ಕಾರ್ಯಕ್ರಮದ ಆಯೋಜನೆ ಮಾಡುವ ಮೂಲಕ ಆಗಲು ಸಾಧ್ಯ ಎಂದು ಹೇಳಿದರು.
ಘಟಕದ ಅಧ್ಯಕ್ಷರಾದ ಆನಂದ ಮಲಯಾಳಕೋಡಿಯವರು ಮಾತನಾಡಿ ಗುರುಗಳ ಸಂದೇಶವನ್ನು ಸಾರುವ ಈ ಅರ್ಥವತ್ತಾದ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಆಯೋಜಿಸಲು ಆಸಕ್ತರಿದ್ದಲ್ಲಿ ಯುವವಾಹಿನಿ ಯು ಸದಾ ಕೈಜೋಡಿಸುತ್ತದೆ ಎಂದು ತಿಳಿಯಪಡಿಸಿದರು.
ಮದುಮಗನ ಸಹೋದರಿ ಘಟಕದ ಸದಸ್ಯರಾದ
ಶ್ರೀಮತಿ ರಶ್ಮಿತಾ ಸನಿಲ್ ರವರು ಇಂತಹ ಕಾರ್ಯಕ್ರಮವನ್ನು ಅಯೋಜಿಸುವುದರಿಂದ ಮದ್ಯಸೇವನೆಯ ಸಂಭ್ರಮ ಮಾಡಿ ಸಾಲದ ಹೊರೆ ಹೊರುವುದರ ಬದಲು ಆಶ್ರಮವಾಸಿಗಳಿಗೆ ಒಂದು ಹೊತ್ತಿನ ಊಟ ಕೊಟ್ಟರೆ ನಮಗೆ ಪುಣ್ಯ ಸಿಗುವುದರಲ್ಲಿ ಸಂಶಯವಿಲ್ಲ ಎಂದು ಮೆಚ್ಚುಗೆಯ ಮಾತನ್ನಾಡಿದರು.
ಘಟಕದ ವತಿಯಿಂದ ಮದುಮಗನ ಮನೆಗೆ ಉಡುಗೊರೆಯಾಗಿ ನಾರಾಯಣ ಗುರುಗಳ ಸಂದೇಶದ ಜ್ಯೋತಕವಾಗಿ ಗುರುಗಳ ಭಾವಚಿತ್ರವನ್ನು ಘಟಕದ ಅಧ್ಯಕ್ಷರು,ಅಥಿಗಳು ಹಾಗೂ ಘಟಕಕ್ಕೆ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದ ಸಾಹಿತಿ ರಮಾನಾಥ್ ಕೋಟೆಕಾರ್ ರವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು .
ಇಂತಹ ವಿಭಿನ್ನ ಕಾರ್ಯಕ್ರಮದ ಆಯೋಜನೆಯ ಸಂದೇಶವನ್ನು ತಿಳಿದು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಜ್ಞಾ ವಿಧಿ ಸಂಕಲ್ಪವನ್ನು ಮಾಡಿ ಮದುಮಗನಿಗೆ ವಿಶೇಷವಾದ ಉಡುಗೊರೆಯನ್ನು ನೀಡಿದ ಎಕ್ಕೂರು ನಿವಾಸಿ ಜಯಪ್ರಕಾಶ್ ಮತ್ತು ಅವರ ಮಿತ್ರರು ಮದ್ಯ ಮುಕ್ತ ಮದರಂಗಿ ಸಂಭ್ರಮದಲ್ಲಿ ಸೇರಿದ ಹಿತೈಷ್ಟಿ ಬಂಧುಗಳ ಗಮನಸೆಳೆದ ವ್ಯಕ್ತಿಯಾದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಅರಣ್ ಉಳ್ಳಾಲ್ ಹಾಗೂ ನರೇಶ್ ಕುಮಾರ್ ಸಸಿಹಿತ್ಲು ರವರಿಗೆ ಮದುಮಗ ಪುಸ್ತಕದ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಪ್ರದೀಪ್,ಕೇಂದ್ರ ಸಮಿತಿಯ ತತ್ವ ಪ್ರಚಾರದ ನಿರ್ದೇಶಕರಾದ ಜಗದೀಶ ಸುವರ್ಣ,ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹರೀಶ್ ಸನಿಲ್ ಹಾಗೂ ಬಿಲ್ಲವ ಸೇವಾ ಸಮಾಜ(ರಿ) ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷರಾದ ವೇಣುಗೋಪಾಲ್ ಕೊಲ್ಯ ಸಭೆಯಲ್ಲಿ ಉಪಸ್ಥಿತಿತರಿದ್ದರು.
ಕೊಲ್ಯ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಕುಸುಮಾಕರ ಕುಂಪಲ ರವರು ಅತಿಥಿಗಳನ್ನು ಸ್ವಾಗತಿಸಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕರಾದ ಮೋಹನ್ ಮಾಡೂರು ರವರು ವಂದನಾರ್ಪಣೆಗೈದರು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಮಾರ್ಚ್ 01, ಭಾನುವಾರ
ಸ್ಥಳ : ಸಣ್ಣ ಕೈಗಾರಿಕಾ ಸಂಘದ ಸಭಾಂಗಣ, ಯೆಯ್ಯಾಡಿ ಮಂಗಳೂರು

ಯುವವಾಹಿನಿ ಪದಾಧಿಕಾರಿಗಳು ಹಾಗೂ ಅರ್ಹ ಸದಸ್ಯರಿಗೆ ತರಬೇತಿ ಕಾರ್ಯಾಗಾರ

ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ದಿನಾಂಕ : 2026ನೇ ಫೆಬ್ರವರಿ 28, ಶನಿವಾರ
ಸ್ಥಳ : ನಾರಾಯಣಗುರು ಆಡಿಟೋರಿಯಂ ಬನ್ನಂಜೆ

ಯುವವಾಹಿನಿ (ರಿ) ಉಡುಪಿ ಘಟಕದ ರಜತ ಸಡಗರದ ಸಲುವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ಬಿಲ್ಲವ ಬಂಧುಗಳ ಪ್ರತಿಭಾನ್ವೇಷಣೆ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!