Yuvavahini

FEB 17, 2019 2.29 PM IST

2018 ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪುರಸ್ಕ್ರತ

ರಂಗನಟ ವಸಂತ ವಿ.ಅಮೀನ್

ನಟ, ನಿರ್ದೇಶಕ, ಪತ್ರಕರ್ತ, ಸಾಹಿತಿ ದಿ.ವಿಶುಕುಮಾರ್ ಅವರ ನೆನಪಿನಲ್ಲಿ ಯುವವಾಹಿನಿ ಸಂಸ್ಥೆಯು, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಮೂಲಕ ಕೊಡಮಾಡುವ 2018 ನೇ ಸಾಲಿನ ವಿಶುಕುಮಾರ್ ಪ್ರಶಸ್ತಿಗೆ ಹಿರಿಯ ರಂಗನಟ, ನಿರ್ದೇಶಕ, ಸಾಹಿತಿ ವಸಂತ ವಿ.ಅಮೀನ್ ಅಯ್ಕೆಯಾಗಿದ್ದಾರೆ. ಯುವವಾಹಿನಿ ಸಂಸ್ಥೆಯು ಕಳೆದ 16 ವರುಷದಿಂದ ಈ ಪ್ರಸಸ್ತಿಯನ್ನು ನೀಡುತ್ತಾ ಬಂದಿದ್ದು ವಿಶುಕುಮಾರ್ ಅವರು ಸೇವೆ ಸಲ್ಲಿಸಿರುವ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರನ್ನು ಆಯ್ಕೆ ಮಾಡಿ ಈ ಪ್ರಶಸ್ತಿ ನೀಡುತ್ತಿದೆ. 2018 ನೇ ಸಾಲಿಗೆ ರಂಗಭೂಮಿ ಕ್ಷೇತ್ರವನ್ನು ಆಯ್ಕೆ ಮಾಡಲಾಗಿದ್ದು ರಂಗಭೂಮಿಯಲ್ಲಿ 35 ವರುಷಗಳ ಅನನ್ಯ ಸೇವೆ ಸಲ್ಲಿಸಿರುವ ವಸಂತ ವಿ.ಅಮೀನ್ ಅವರನ್ನು ಆಯ್ಕೆ ಮಾಡಲಾಗಿದೆ.
ಮಾನವ ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡಿರುವ ವಸಂತ ಅಮೀನ್ ಅವರು, `ಮಾನವ’ ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ.
ಒರಿಯರ್ದೊರಿ ಅಸಲ್ ನಾಟಕದ ನಿರ್ದೇಶನ ಹಾಗೂ ನಾಟಕದಲ್ಲಿ ಮುಖ್ಯ ಪಾತ್ರ, ಅಂಚಿಲತ್ತ್ ಇಂಚಿಲತ್ತ್ , ನಂಬುನನೆ ನಂಬೊಡು ಹಾಗೂ ಬೆನ್ಪಿನೊರಿ ತಿನ್ಪಿನೊರಿ ತುಳು ನಾಟಕಕ್ಕೆ ಸಲಹೆ ಸಹಕಾರ ಹಾಗೂ ನಟನೆ, ಗಂಗುನ ಗಮ್ಮತ್ತ್ ಹಾಗೂ ಬದ್ಕೆರೆಗಾದ್ ಸೈಪಿನಕುಲು, ಮಲ್ಲ ವಿಷಯ ಎಲ್ಯ ಮಲ್ಪಡ್ಚಿ ನಾಟಕದಲ್ಲಿ ಮುಖ್ಯ ಪಾತ್ರ, ಕುಸಲ್ದ ಕುಸೆಲ್ ನಾಟಕದ ನಿರ್ದೇಶನ, ಬಿರ್ಸೆ ತುಳು ಸಿನಿಮಾದಲ್ಲಿ ನಟನೆ, ಇಂದ್ರಲೋಕೊಡು ಮಾಲಾಶ್ರೀ ತುಳು ನಾಟಕದ ನಿರ್ದೇಶನ, ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಮಕರ ಜ್ಯೋತಿ, ಕನ್ನಡ ನಾಟಕದ ರಚನೆ, ನಿರ್ದೇಶನ ಹಾಗೂ ಗೀತಾ ಸಾಹಿತ್ಯ., ಬದ್‍ಕೊಂಜಿ ಕಬಿತೆ ಹಾಗೂ ಆಲಡೆ ತುಳು ಸಿನಿಮಾದ ಕತೆ, ಸಂಭಾಷಣೆ ಹಾಗೂ ಗೀತಾರಚನೆ, ನಂದಾರ ನಂದಾದೀಪ ಚಾರಿತ್ರಿಕ ತುಳು ಹಾಸ್ಯ ನಾಟಕದ ರಚನೆ, ನಿರ್ದೇಶನ ಹಾಗೂ ನಟನೆ, ವಜ್ರಕಂಬ, ಕದಿರೆದ ಕತೆ, ಶ್ರೀ ಕೃಷ್ಣದೇವರಾಯ, ಕೋಟಿ ಚೆನ್ನಯ್ಯ, ಬೀರ ಸಿರಿತ ಸಿಂಗದ ಕಿನ್ನಿ, ಕಿವುಡರ ಕತೆ, ಜಗಜ್ಯೋತಿ ನಿತ್ಯಾನಂದ, ಶನೀಶ್ವರ ಮಹಿಮೆ, ನಾಟಕಗಳ ರಚನೆ, ಕಾನೂನು ಕಣ್ಣ್ ಮುಚ್ಚಿನಗ ಎಂಬ ಸಾಮಾಜಿಕ ನಾಟಕದ ರಚನೆ, ವಿಶ್ವ ದಾಖಲೆಯ ತುಳು ಸಿನೆಮ ಸೆಪ್ಟಂಬರ್ 8 ಸಂಭಾಷಣೆ, ನಮ ಒಯಿಕ್ಕ್‍ಲಾ ಸೈ ತುಳು ಹಾಸ್ಯ ನಾಟಕದ ರಚನೆ ಹಾಗೂ ನಿರ್ದೇಶನ, ಒಯಿಕ್‍ಲಾ ಯೋಗ ಬೋಡು, ಬುಡಿ ಬುಡಿ ಗಡಿ ಬಿಡಿ, ರಡ್ಡೆಟ್ಟ್ ಏರೆಡ್ಡೆ, ಪೊರ್ಲದಾಯೆ, ಎದುರುಡೊಂಜಿ ಪಿರವುಡೊಂಜಿ, ಆಪಿನ ಆವೊಡೆ ಹಾಗೂ ದಾದ ಮಲ್ಪೆರೆ ಆಪುಂಡು ನಾಟಕದಲ್ಲಿ ನಟನೆ, ದಾನೆ ಆಪುಂಡು ತೂಕ ನಾಟಕದ ಕಥೆ ಹಾಗೂ ಸಂಭಾಷಣೆ, ಏರ್‍ಂದ್ ಏರೆಗೊತ್ತು ನಾಟಕದ ನಿರ್ದೇಶನ, ಏರಾ ಉಲ್ಲೆರ್ ಈ ಇಲ್ಲಡ್ ನಾಟಕಕ್ಕೆ ಸಾಹಿತ್ಯ ಒದಗಿಸಿರುವ ವಸಂತವ ವಿ.ಅಮೀನ್ ಅವರಿಗೆ, ಕುಲಾಲ ಪ್ರತಿಷ್ಠಾನ ಮಂಗಳೂರು ಇವರಿಂದ “ಸಾಹಿತ್ಯದ ಸಿರಿ” ಬಿರುದು, ತುಳು ನಾಟಕ ಕಲಾವಿದರ ಒಕ್ಕೂಟ(ರಿ) ಮಂಗಳೂರು ದಕ್ಷಿಣ ಕನ್ನಡ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವರ ಸಹೋಗದಲ್ಲಿ “ತೌಳವ ಪ್ರಶಸ್ತಿ”,ಕುಸಲ್ದ ಕಲಾವಿದೆರ್ ಕುಡ್ಲ ಇವರಿಂದ ಸನ್ಮಾನ, ಮುಂಬಾಯಿಯಲ್ಲಿ ನಾಟಕ ಆಯೋಜಕರ ವತಿಯಿಂದ ಅಭಿನಂದನೆ, ಬಿಲ್ಲವರ ಅಸೋಸಿಯೇಶನ್ ಮುಂಬಾಯಿ ಇವರಿಂದ ಅಭಿನಂದನೆ ದಕ್ಕಿದೆ.
ನಟನೆ, ನಿರ್ದೇಶನ, ರಂಗ ಸಾಹಿತ್ಯ, ಮತ್ತು ರಂಗಭೂಮಿಯ ಸಮಗ್ರ ಸಾಧನೆಯನ್ನು ಗುರುತಿಸಿ ವಸಂತ ವಿ.ಅಮೀನ್ ಇವರಿಗೆ ೨೦೧೮ ನೇ ಶಾಲಿನ ವಿಶುಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಮಾರ್ಚ್ 01, ಭಾನುವಾರ
ಸ್ಥಳ : ಸಣ್ಣ ಕೈಗಾರಿಕಾ ಸಂಘದ ಸಭಾಂಗಣ, ಯೆಯ್ಯಾಡಿ ಮಂಗಳೂರು

ಯುವವಾಹಿನಿ ಪದಾಧಿಕಾರಿಗಳು ಹಾಗೂ ಅರ್ಹ ಸದಸ್ಯರಿಗೆ ತರಬೇತಿ ಕಾರ್ಯಾಗಾರ

ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ದಿನಾಂಕ : 2026ನೇ ಫೆಬ್ರವರಿ 28, ಶನಿವಾರ
ಸ್ಥಳ : ನಾರಾಯಣಗುರು ಆಡಿಟೋರಿಯಂ ಬನ್ನಂಜೆ

ಯುವವಾಹಿನಿ (ರಿ) ಉಡುಪಿ ಘಟಕದ ರಜತ ಸಡಗರದ ಸಲುವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ಬಿಲ್ಲವ ಬಂಧುಗಳ ಪ್ರತಿಭಾನ್ವೇಷಣೆ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!