Yuvavahini

SEP 14, 2018 2.22 PM IST

ಸಂಪಾದಕರ ಮಾತು : ರಾಜೇಶ್ ಸುವರ್ಣ

ಪ್ರಧಾನ ಕಾರ್ಯದರ್ಶಿ ಹುದ್ದೆ ನಿರ್ವಹಣೆಯ ಸಂತೃಪ್ತಿಯೊಂದಿಗೆ ಸ್ವಲ್ಪ ವಿಶ್ರಾಂತಿ ಪಡೆಯೋಣ ಅಂದುಕೊಂಡಿದ್ದೆ. ಆದರೆ ಎಲ್ಲರ ಒತ್ತಾಸೆ ಮತ್ತೊಂದು ಬಹುದೊಡ್ಡ ಜವಬ್ದಾರಿ ಹೆಗಲೇರಿದೆ. ಒತ್ತಡದ ವೃತ್ತಿ ಬದುಕಿನ ನಡುವೆ ಈ ಕೆಲಸ ತುಸು ಕಷ್ಟ ಅನಿಸಿದರೂ ಇದರಲ್ಲೊಂದು ಸಂತೃಪ್ತಿ ಇದೆ. ಬಿಟ್ಟರೂ ಬಿಡದಿ ಮಾಯೆ ಎಂಬಂತೆ ಮತ್ತೆ ಮತ್ತೆ ನಿಮ್ಮ ಜೊತೆ ನನ್ನ ನಿರಂತರ ಸಂಪರ್ಕಕ್ಕೆ ಸಿಕ್ಕ ಅವಕಾಶ ಅಂದುಕೊಂಡಿದ್ದೇನೆ. ಪ್ರಧಾನ ಕಾರ್ಯದರ್ಶಿ ಆಗಿದ್ದ ಸಮಯದಲ್ಲಿ ನನ್ನೆಲ್ಲ ಘಟಕಗಳೂ ಮತ್ತು ಸದಸ್ಯರ ಜೊತೆ ನಿಕಟ ಸಂಪರ್ಕ ಹೊಂದಿದ್ದೆ, ಹುದ್ದೆ ಬದಲಾದ ಬಳಿಕ ನಿರಂತರ ಸಂಪರ್ಕ ಕಷ್ಟ ಅನಿಸಿತ್ತು. ಆದರೆ ಅ ಗುರುಗಳ ಅನುಗ್ರಹದಿಂದ ನನಗೆ ಸಿಕ್ಕ ಅವಕಾಶ ಮತ್ತೊಂದು ವರುಷ ನಾನು ನಿಮ್ಮ ಜೊತೆ ನಿಕಟ ಸಂಪರ್ಕ ಇರಿಸಿಕೊಳ್ಳಲು ಸಾಧ್ಯವಾಗಿದೆ. ಕಳೆದ ಅವಧಿಯ ಆತ್ಮೀಯತೇ ಈ ವರುಷದ ನನ್ನ ಕೆಲಸಕಕ್ಕೆ ಸಹಕಾರಿ ಆದಿತು ಎನ್ನುವುದು ನನ್ನ ನಂಬಿಕೆ.

ಶ್ರೀ ಕೃಷ್ಣ ಪರಮಾತ್ಮ ಹೇಳಿದಂತೆ ಬದಲಾವಣೆ ಜಗದ ನಿಯಮ, ನಾವು ಬದಲಾವಣೆಗೆ ಒಗ್ಗಿದರೆ ಮಾತ್ರ, ಎಲ್ಲರಿಗಿಂತ ಭಿನ್ನರಾಗಲು ಸಾಧ್ಯ. ಯುವ ಸಿಂಚನದಲ್ಲಿ ಕಳೆದ ಅವಧಿಯ ಬದಲಾವಣೆ ಯುವವಾಹಿನಿಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಇತರ ಜಾತಿ ಸಂಘಟನೆಗಳೂ ಮೂಗಿನ ಮೇಲೆ ಬೆರಳಿರಿಸಿಕೊಳ್ಳುವಂತಾಗಿತ್ತು. ಇದಾಗಿ ವರುಷ ಉರುಳಿತು ಮತ್ತೊಂದು ಹೊಸ ಬದಲಾವಣೆಗೆ ಸಿದ್ದರಾಗುವ ಅಗತ್ಯತೆ ಇದೆ ಎನ್ನುವುದು ನನ್ನ ನಂಬಿಕೆ. ಈ ನಿಟ್ಟಿನಲ್ಲಿ ಒಂದಷ್ಟು ಭಿನ್ನತೆಯೊಂದಿಗೆ ಯುವ ಸಿಂಚನವನ್ನು ನಿಮ್ಮ ಕೈಗಿತ್ತಿದ್ದೀನಿ. ಮತ್ತೆ ಬದಲಾವಣೆ ಬೇಕೆ? ಎನ್ನುವುದು ನಿಮ್ಮ ಅಭಿಪ್ರಾಯ. ನಮ್ಮೆಲ್ಲರ ಉದ್ದೇಶ ಒಂದೇ ಯುವವಾಹಿನಿ ಸ್ಥಿರಸ್ಥಾಯಿ ಆಗಬೇಕು, ಇಲ್ಲಿ ಎಲ್ಲರ ಆಟವೂ ವರುಷವೊಂದು ಮಾತ್ರ ಮತ್ತೆ ಹೊಸ ಆಟ ಶುರು ಆಗಲೇ ಬೇಕು, ಆದರೆ ಪ್ರತಿಯೊಬ್ಬರ ಆಟವೂ ಒಂದು ಭಿನ್ನತೆಯನ್ನು ಉಂಟುಮಾಡುತ್ತದೆ ಎನ್ನುವುದು ಸತ್ಯ. ಈ ಸಂಚಿಕೆ ಅತೀ ಹೆಚ್ಚು ಸುದ್ದಿ, ಲೇಖನ, ಅಭಿಪ್ರಾಯಗಳಿಂದ ಪೋಣಿಸಲ್ಪಟ್ಟಿದೆ, ಎಲ್ಲಾ ಘಟಕಗಳ ಮಾಹಿತಿಯನ್ನೂ ಇಲ್ಲಿ ದಾಖಲೀಕರಿಸಿದ್ದೇವೆ ಕೇಳಿದಾಗ ನೆಪ ಹೇಳದೆ ಘಟಕಗಳ ವರದಿ ನೀಡಿದ, ಲೇಖನ, ಕವನ ನೀಡಿದ ಪ್ರತಿಯೊಬ್ಬರಿಗೂ ನನ್ನ ನಮನಗಳು. ತಪ್ಪು ಒಪ್ಪು ಸಹಜ ಅದನ್ನು ತಿದ್ದುವ ಅವಕಾಶ ಇದೆ, ನಿಮ್ಮ ಅಭಿಪ್ರಾಯ ಏನೇ ಇದ್ದರೂ ತಿಳಿಸಿ. ಯುವ ಸಿಂಚನದ ಹೊಸ ಪ್ರಯತ್ನ ಯುವವಾಹಿನಿ ಸದಸ್ಯರ ಮುದ್ದು ಕೃಷ್ಣ ಪೋಟೋ ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಬಂದಿದೆ, ನಿಮ್ಮ ಉತ್ಸಾಹ ನಮ್ಮಲ್ಲೂ ಹೊಸ ಚೈತನ್ಯ ಉಂಟು ಮಾಡಿದೆ. ಹೀಗಾಗಿ ಮುಂದಿನ ಸಂಚಿಕೆ ಮತ್ತೊಂದು ಸ್ಪರ್ಧೆಯೊಂದಿಗೆ ಮೂಡಿ ಬರಲಿದೆ, ಭಾಗವಹಿಸಿದ ಪುಟಾಣಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!