Yuvavahini

APR 15, 2018 4.53 PM IST

ಯುವಸಿಂಚನ ಏಪ್ರಿಲ್ 2018

ಸಂಪಾದಕರ ಮಾತು : ಶುಭಾ ರಾಜೇಂದ್ರ

ಓದುಗ ಮಿತ್ರರಿಗೆ ನಮಸ್ಕಾರಗಳು
ಬರೆಯಬೇಕು ಎಂದು ಅನಿಸುತ್ತಿದೆ ಆದರೆ ಪದಗಳು ಸಿಗುತ್ತಿಲ್ಲ, ಹೇಳಬೇಕು ಅನಿಸುತ್ತಿದೆಆದರೆ ಮಾತುಗಳು ಬರುತ್ತಿಲ್ಲ, ಮೂರು ಸಂಚಿಕೆ ಹೊರಬರುವಷ್ಟರಲ್ಲಿ ನೂರಾರು ಕರೆಗಳು ಅಭಿನಂದನೆಯ ಮಹಾಪೂರಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತಲೇ ಸಾಗುತ್ತಿದೆ.
ನಾವು ನಿವೆಲ್ಲ ಬದಲಾವಣೆ ಬಯಸುತ್ತಿದ್ದೇವೆ ಎನ್ನುವುದಕ್ಕೆ ನಿಮ್ಮ ಪ್ರತಿಕ್ರಿಯೇಗಳೇ ಸಾಕ್ಷೀ. ಹಲವಾರು ಮಂದಿ ಪತ್ರದ ಮೂಲಕ ನಮ್ಮನ್ನು ಪ್ರೋತ್ಸಾಹಿಸಿದರೆ ಇನ್ನು ನೂರಾರು ಮಂದಿ ಕರೆ ಮಾಡಿ ಯುವಸಿಂಚನವನ್ನು ಅಭಿನಂದಿಸಿದ್ದಾರೆ. ಇದು ಸಂಪಾದಕ ಮಂಡಳಿಯ ಸಾಧನೆಯಲ್ಲ ಬದಲಾಗಿ ಪ್ರತಿಯೊಂದು ಘಟಕದ, ಕೇಂದ್ರ ಸಮಿತಿಯ ಪದಾಧಿಕಾರಿಗಳ ಮತ್ತು ಮಾಜಿ ಅಧ್ಯಕ್ಷರುಗಳ ಸಹಕಾರದ ಫಲ. ನಾವೆಲ್ಲ ಒಂದುಗೂಡಿ ಚಿಂತಿಸಿದ ಫಲ, ಇಂದು ಅಭಿನಂದನೆಯ ಮೂಲಕ ನಮಗೆ ಮರು ಸಂದಾಯವಾಗುತ್ತಿದೆ. ಬರವಣಿಗೆಯಲ್ಲಿ ಪಳಗದ ನನ್ನ ಕೈ ಇಂದು ಹತ್ತಕ್ಷರ ಬರೆಯುವಷ್ಟರ ಮಟ್ಟಿಗೆ ಪಳಗಿದೆ. ಯುವವಾಹಿನಿ ನನ್ನನ್ನು ಈ ಹಂತಕ್ಕೆ ತಂದಕಾರಣದಿಂದ ನನ್ನಲ್ಲೂ ಸುಪ್ತವಾಗಿದ್ದ ಪ್ರತಿಭೆ ಇಂದು ಹೊರ ಬರುವಂತಾಯಿತು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅತಿಥಿಯೊಬ್ಬರು ಹೇಳುತ್ತಿದ್ದರು, ಉಳ್ಳವನನ್ನೂ ಇಲ್ಲದವನನ್ನೂ ಸಮಾನವಾಗಿ ಕಾಣುವ, ತಳಮಟ್ಟದವರಿಗೆ ಮೊದಲ ಆದ್ಯತೆ ನೀಡುವ, ಎಲ್ಲರಿಗೂ ಸಮಾನ ಅವಕಾಶ ನಿಡುವ, ಪ್ರತಿಭೆಗೆ ತಕ್ಕ ಮನ್ನಣೆ ನೀಡುವ ಒಂದು ಸಂಘಟನೆ ಇದ್ದರೆ ಅದು ಯುವವಾಹಿನಿ ಎಂದು. ಹೌದು ಈ ಮಾತು ನೂರಕ್ಕೆ ನೂರರಷ್ಟು ನಿಜ. ಯುವವಾಹಿನಿ ತನ್ನೊಳಗೆ ಮತ್ತು ಯುವಸಿಂಚನದ ಮೂಲಕ ಪ್ರತಿಯೊಬ್ಬರಿಗೂ ಒಂದು ಉತ್ತಮವಾದ ಅವಕಾಶವನ್ನು ನೀಡಿದೆ, ನೀಡುತ್ತಿದೆ. ಯುವವಾಹಿನಿ ಎಂಬ ವರ್ತುಲದೊಳಗೆ ಒಮ್ಮೆ ಬಂದು ಇಲ್ಲಿನ ಸವಿಯನ್ನು ಅನುಭವಿಸಿದರೆ ಮಾತ್ರ ಇದು ಅನುಬವಕ್ಕೆ ಬರಲು ಸಾಧ್ಯ.
ಅಂಗಡಿಯೊಂದರಲ್ಲಿ ದ್ರಾಕ್ಷಿ ಖರೀದಿಸಲು ಹೋದೆ, ದ್ರಾಕ್ಷಿ ಕೆ.ಜಿ ಎಂಭತ್ತು ಎಂದ ಅಂಗಡಿಯಾತ, ಕಡಿಮೆ ಮಾಡಲು ಚರ್ಚೆ ಮಾಡಿದೆ, ಕಡಿಮೆಗೆ ಬೇಕಾದರೆ ಇಲ್ಲಿದೆ ಮೇಡಂ ಎಂದ. ಅಲ್ಲಿ ಗೊಂಚಲಿನಿಂದ ಚದುರಿದ್ದ ದ್ರಾಕ್ಷಿ ಇದ್ದವು. ತಕ್ಷಣ ನಾನು ಕೇಳಿದೆ ಅಲ್ಲಿರುವ ಎರಡೂ
ಬುಟ್ಟಿಯಲ್ಲಿರುವುದು ದ್ರಾಕ್ಷಿಯೇ ಆದರೂ ದರದಲ್ಲೇಕ್ಕೆ ವ್ಯತ್ಯಾಸ ಎಂದು. ಅಂಗಡಿಯಾತ ಹೇಳಿದ ಎಂಭತ್ತು ರೂಪಾಯಿ  ದ್ರಾಕ್ಷಿ ಗೊಂಚಲಿನಲ್ಲಿದೆ ಅದಕ್ಕೆ ಬೆಲೆ ಜಾಸ್ತಿ ಇನ್ನೊಂದು ಬುಟ್ಟಿಯಲ್ಲಿರುವುದು ಉದುರಿದೆ ಹಾಗಾಗಿ ದರ ಕಡಿಮೆ ಎಂದು. ಹೌದು ಬಂದುಗಳೇ,
ಯಾವಾಗ ನಾವು ಒಟ್ಟಿಗೆ ಇರುತ್ತೇವೆಯೋ ಅಲ್ಲಿ ಬೆಲೆ ಜಾಸ್ತಿ,ಸಿಹಿಯೂ ಜಾಸ್ತಿ. ಅದೇ ನಾವು ಉದುರಿ ಚದುರಿ ಹೋದರೆ ನಮ್ಮ ಬದುಕಿಗೆ ಬೆಲೆಯೇ ಇರುವುದಿಲ್ಲ. ಯುವಸಿಂಚನ ನೀವೆಲ್ಲ ಒಪ್ಪುವ ಮಾದರಿಯಲ್ಲಿ ನಿಮ್ಮ ಕೈಯಲ್ಲಿದೆಎಂದರೆ ಅದರ ಹಿಂದೆ ನಿಮ್ಮೆಲ್ಲರ ಪರಿಶ್ರಮವಿದೆ, ಸಲಹೆ ಸೂಚನೆಸಹಕಾರ ಇದೆ ಎನ್ನುವುದನ್ನು ಮರೆಯಲಾರೆ. ಎಂದಿನಂತೆ ಈ ಬಾರಿಯೂ ಎಲ್ಲಾ ಘಟಕಗಳು ಸಕಾಲದಲ್ಲಿ ವರದಿಗಳನ್ನು ನೀಡಿದೆ. ಎಲ್ಲಾ ಘಟಕಗಳನ್ನೂ ಈ ಸಂದರ್ಭ ಅಭಿನಂದಿಸುತ್ತೇನೆ. ಅದೇ ರೀತಿ ಲೇಖನ ನೀಡಿ ಸಹಕರಿಸಿದ
ಲೇಖಕರಿಗೂ ವಂದನೆಗಳು.ಜಾಹೀರಾತು ನೀಡಿ ನಮ್ಮ ಆರ್ಥಿಕ ಹೊರೆ ತಗ್ಗಿಸಿದ ಬಂಧುಗಳಿಗೆ ಕೃತಜ್ಞತೆಗಳು. ಎಂದಿನಂತೆ ಈ ಬಾರಿಯ ಸಿಂಚನದ ಬಗ್ಗೆಯೂ ನಿಮ್ಮ ಅಭಿಪ್ರಾಯಗಳಿಗೆ ಕಾಯುತ್ತೇವೆ. ಸರಿ ತಪ್ಪುಗಳನ್ನು ತಿಳಿಸಿ ಮುಂದಿನ ದಿನದಲ್ಲಿ ಬದಲಾವಣೆಯೊಂದಿಗೆ ಮತ್ತೊಂದು ಹೊಸ ಹೆಜ್ಜೆ ಇಡುತ್ತೇವೆ.
– ಸಂಪಾದಕರು

One thought on “ಸಂಪಾದಕರ ಮಾತು : ಶುಭಾ ರಾಜೇಂದ್ರ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!