Yuvavahini

AUG 06, 2017 1.07 PM IST

ಸಿಂಚನ ವಿಶೇಷಾಂಕ : 2017

ದಾರಿದೀಪ

ಭಗವಂತನನ್ನು ಪೂಜಿಸಿದರೆ
ಅಮ್ಮ ಬರುವುದಿಲ್ಲ ಆದರೆ
ಅಮ್ಮನನ್ನು ಪೂಜಿಸಿದರೆ
ಭಗವಂತ ಖಂಡಿತಾ ಬರುತ್ತಾನೆ.

ಜೀವನದಲ್ಲಿ ಎಲ್ಲಾವನ್ನು
ಶಾಶ್ವತವಾಗಿ ಪಡೆಯಲು
ಬಯಸುತ್ತೇವೆ
ಆದರೆ
ಜೀವನವೇ ಶಾಶ್ವತವಲ್ಲ ಎಂಬುದನ್ನು ಮರೆಯುತ್ತೇವೆ.

ನೀವೂ ಇನ್ನೊಬ್ಬರ ಕೆಲಸಗಳ ಬಗ್ಗೆ ಚುಚ್ಚಿ
ಮಾತನಾಡುವ ಬದಲು
ಇನ್ನೊಬ್ಬರು ನಿಮ್ಮನ್ನು ಮೆಚ್ಚಿ
ಮಾತನಾಡುವಂತಹ ಕೆಲಸ ಮಾಡಿ.

ಹುಟ್ಟಿದವರು ಒಂದು ದಿನ ಸಾಯಲೇಬೇಕು
ಹಾಗಂತ ದಿನವು ಸತ್ತು ಬದುಕುವುದಲ್ಲ ಬದುಕು,
ಸಾಧ್ಯವಾದರೆ ಆಗಬೇಕು ನಮ್ಮ ಬದುಕು
ಮತ್ತೊಬ್ಬರ ಬಾಳಿನ ಬೆಳಕು
ಬೆಳಕಾಗದಿದ್ದರೂ ಅಡ್ಡಿಯಿಲ್ಲ
ನಮ್ಮಿಂದ ಇನ್ನೊಬ್ಬರ ಬಾಳು
ಕತ್ತಲಾಗದಿದ್ದರೆ ಸಾಕು.

ಜೇನು ಹುಳ ಕೂಡಿಟ್ಟ ತುಪ್ಪ,
ಇರುವೆ ಕೂಡಿಟ್ಟ ಸಕ್ಕರೆ,
ಜಿಪುಣ ಕೂಡಿಟ್ಟ ಹಣ
ಇವು ಯಾವತ್ತೂ ಪರರ ಪಾಲಾಗುತ್ತದೆ.

ನಂಬಿಕೆಗಿಂತ ಸಂದೇಹ ಹೆಚ್ಚಾದರೆ
ಯಾವ ಸಂಬಂಧವೂ ಉಳಿಯಲ್ಲ.
ಸಂದೇಹದ ನಡುವೆ ನಂಬಿಕೆ ಗಟ್ಟಿ ಇದ್ದರೆ
ಯಾವ ಮನುಷ್ಯ ಮುರಿಯಲ್ಲ.

ಒಂದು ಹೂವು ಮತ್ತೊಂದು ಹೂವಿನೊಂದಿಗೆ
ಸ್ಪರ್ಧೆಗಿಳಿಯುವುದಿಲ್ಲ, ಸುಂದರವಾಗಿ ಅರಳುವುದಷ್ಟೇ
ಅವುಗಳ ಕೆಲಸ. ನಮ್ಮ ವ್ಯಕ್ತಿತ್ವವು ಕೂಡ ಹೀಗೆ
ಇರಲಿ. ಆಗ ಮಾತ್ರ ಸಮಾಜದಲ್ಲಿ
ಗೌರವದಿಂದ ಬಾಳಬಹುದು.

ಹಣವಿರುವವನು
ಹಣವಿರುವವರಿಗಷ್ಟೇ ಶ್ರೀಮಂತ
ಆದರೆ ಗುಣವಿರುವವನು ಸದಾ ಶ್ರೀಮಂತನಾಗಿರುತ್ತಾನೆ
ಸಾಧನೆಯ ಹಾದಿಯಲ್ಲಿ
ಸವಾಲು, ಕಷ್ಟಗಳು ನಿಶ್ಚಿತ ಅವನ್ನೆಲ್ಲ
ಎದುರಿಸಿ ಯಶಸ್ಸಿನ ಪತಾಕೆ ಹಾರಿಸುವವನೇ ಧೀರ.

ಶತ್ರುವೊಬ್ಬ ಮುಂದುವರಿದರೂ
ಪರವಾಗಿಲ್ಲ, ಆದರೆ ಗೆಳೆಯನೊಬ್ಬ
ಹಿಂದುಳಿಯಬಾರದು ಸುತ್ತುತ್ತಿರುವ
ಈ ಭೂಮಿಯಲ್ಲಿ
ಸತ್ತು ಹೋಗುವವರು ನಾವೆಲ್ಲ…
ಹೊತ್ತು ತಂದಿಲ್ಲ ಏನನ್ನು
ಒಯ್ಯುವುದಿಲ್ಲ ಯಾವುದನ್ನೂ…
ಇದ್ದಷ್ಟು ದಿನ ಗಳಿಸಬೇಕು
ಸಾವಿಲ್ಲದ ಸ್ನೇಹವನ್ನು…

ಮರದಿಂದ ಕೆಳ ಬಿದ್ದ ಹೂ ಮತ್ತೆ
ಅರಳುವುದಿಲ್ಲ… ಆದರೆ
ಬೇರುಗಳು ಗಟ್ಟಿಯಾಗಿದ್ದರೆ
ಮತ್ತೆ ಹೊಸ ಹೂಗಳು ಹುಟ್ಟುತ್ತವೆ…
ಹಾಗೆಯೆ ನಮ್ಮ ಜೀವನದಲ್ಲಿ
ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ
ಎಂಬುದಕ್ಕಿಂತ, ಇನ್ನೂ ಜೀವನದಲ್ಲಿ
ಮುಂದೆ ಎಷ್ಟೊಂದು ಬೆಳೆಯಬೇಕಿದೆ, ಗುರಿ
ಮುಟ್ಟಬೇಕಿದೆ ಎಂಬುದು ಮುಖ್ಯ…

ಸಂಜೀವ ಸುವರ್ಣ ಗ್ರೀನ್‌ಪಿಚ್ ಕುಳಾಯಿ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!