Yuvavahini

MAY 23, 2017 12.58 PM IST

ರವಿರಾಜ್ ಅಜ್ರಿ:-ವಿಶುಕುಮಾರ್ ಎಂಬ ಬರಹಗಾರನ ಕಥೆ-5

ವಿಶುಕುಮಾರ್ ಹೀಗೊಂದು ನೆನಪು ……ಬರವಣಿಗೆ ವಿವಾದಗಳ ಸುಳಿಯಲ್ಲಿ!

               ದಿ. ವಿಶುಕುಮಾರ್
ವಿಶುಕುಮಾರ್ – ಯಾವುದೇ ಕೃತಿ ರಚಿಸಲಿ. ಅದು ಸಮಾಜವನ್ನು ಅಲ್ಲೋಲ ಕಲ್ಲೋಲವುಂಟು ಮಾಡುತ್ತದೆ; ಹಾಗೇ ವಿವಾದದ ಸುಳಿಯನ್ನು ಎಬ್ಬಿಸುತ್ತದೆ. ಅವರ ಬರವಣಿಗೆಯ ಶಕ್ತಿಯ ಜತೆಗೆ, ಸಮಾಜದಲ್ಲಿ ನಡೆಯುವ ಸತ್ಯ ಘಟನೆಯ ಒಂದು ಸೂಕ್ಷ್ಮದ ಎಳೆಯನ್ನು ಎತ್ತಿ, ಅದನ್ನು ತನ್ನದೇ ಶೈಲಿಯಲ್ಲಿ ವಿಶ್ಲೇಷಣೆ ಮಾಡುತ್ತ, ವಿವರಿಸುವ ಧಾಟಿ ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ.

ಸುಮಾರು 16 ಕಾದಂಬರಿಗಳನ್ನು ರಚಿಸಿದ್ದಾರೆ. ಎಲ್ಲವೂ ಒಂದಕ್ಕೊಂದು ವಿಭಿನ್ನ. ನಮ್ಮ ಬದುಕಿನ ಸತ್ಯ ಘಟನೆಗಳೇ- “ ಕರಾವಳಿ” ,” ಮದರ್ ” , ” ಪ್ರಜೆಗಳು ಪ್ರಭುಗಳು ” , “ ವಿಪ್ಲವ ” ಅವರ ಮೊದಲ ಕಾದಂಬರಿ ” ನೆತ್ತರಗಾನ “, ” ಭಗವಂತನ ಆತ್ಮ ಕಥೆ ” , ” ಕರ್ಮ ” , “ ಅಖಂಡ ಬ್ರಹ್ಮಚಾರಿಗಳು “- ಹೀಗೆ ಒಂದೊಂದು ಮೈಲುಗಲ್ಲುಗಳು. ಮತ್ತೆ ಹೆಸರಿಸಬಹುದಾದ ಕಾದಂಬರಿಗಳು : ಮಿಯಾಂಕಾಮತ್, ಗಗನ ಕಾಮಿಗಳು, ಹೋಮಾದೇವಿ, ಹಂಸಕ್ಷೀರ, ಭೂಮಿ, ಈ ಪರಿಯಬದುಕು, ಭಟ್ಕಳದಿಂದ ಬೆಂಗಳೂರಿಗೆ, ಕಪ್ಪು ಸಮುದ್ರ – ಮುಂತಾದವುಗಳು .
ಅವರ ನಿರ್ದೇಶನದ ” ಕೋಟಿ- ಚೆನ್ನಯ ” ಚಿತ್ರ ತುಳು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದೆ. ” ಡೊಂಕು ಬಾಲದ ನಾಯಕರು ” ರಾಜಕೀಯ ವಿಡಂಬನಾತ್ಮಕ ನಾಟಕ. ಆ ಕಾಲದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತು!
” ಕರಾವಳಿ ” ಕಾದಂಬರಿ ಕನ್ನಡ ಕಾದಂಬರಿ ಲೋಕದಲ್ಲಿ ಒಂದು ಕ್ರಾಂತಿಯನ್ನೇ ಮಾಡಿತು. ಮತೀಯ ಘರ್ಷಣೆಗೆ ಕಾರಣವಾಯಿತು. ” ಕರಾವಳಿ ” ಚಿತ್ರ – ಉಡುಪಿ ಮತ್ತು ದಕ್ಷಿಣ ಕನ್ನಡ ಅವಳಿ ಜಿಲ್ಲೆಗಳಲ್ಲಿ ಬಿಡುಗಡೆಯ ಭಾಗ್ಯವನ್ನೇ ಕಾಣಲಿಲ್ಲ!
ಯಾವುದೇ ಒಂದು ಸಂಸ್ಥೆಯಲ್ಲಿ, ಯಾವುದೇ ಒಂದು ಉದ್ಯೋಗದಲ್ಲಿ ಸರಿಯಾಗಿ ನಿಲ್ಲುತ್ತಿರಲಿಲ್ಲ .ವಿಶುಕುಮಾರ್ ಯಾಕೆ ಹೀಗೆ – ಇಂಥ ವಿವಾದದ ಸುಳಿಯಲ್ಲಿ ಸಿಕ್ಕುತ್ತಾರೆ ? ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ಬಹುಮುಖ ಪ್ರತಿಭಾವಂತ. ಕಾದಂಬರಿಗಾರ, ಚಲನಚಿತ್ರ ನಿರ್ಮಾಪಕ, ನಟ, ನಿರ್ದೇಶಕ, ನಾಟಕಕಾರ, ರಂಗಕರ್ಮಿ ,ಯಕ್ಷಗಾನ ಕಲಾವಿದ, ಹಾಡುಗಾರ, ನಾಟ್ಯವನ್ನು ಕಲಿತವರು, ಪತ್ರಕರ್ತ, ಒಬ್ಬ ಸರಕಾರಿ ಅಧಿಕಾರಿ- ಇವೆಲ್ಲಕ್ಕಿಂತಲೂ ಮುಖ್ಯವಾಗಿ ಅಪ್ಪಟ ರಾಜಕಾರಣಿ. ಇವೆಲ್ಲವನ್ನು ತನ್ನ ಕೇವಲ 49 ವರ್ಷದಲ್ಲಿ ಮಾಡಿ ಮುಗಿಸಿದರು!
ಇವರ ಸಾಧನೆಯನ್ನು ವಿಶ್ಲೇಷಿಸುತ್ತಾ ಮೇಲುಕು ಹಾಕುವುದೇ ಈ ಲೇಖನ ಮಾಲೆಯ ಉದ್ದೇಶ. ನಮ್ಮ ಯುವ ಪೀಳಿಗೆಗೆ ಇವರೊಂದು ಮಾದರಿ ಆಗ ಬಲ್ಲರೆಂದು ನಮ್ಮ ಅಭಿಪ್ರಾಯ.
ವಿಶುಕುಮಾರ್ ರ ಹಿನ್ನಲೆ ಏನು?
ವಿಶುಕುಮಾರ್ ಹುಟ್ಟಿದ್ದು ಒಬ್ಬ ಕಲಾರಸಿಕನ ಮನೆತನದಲ್ಲಿ- ಆ ಕಾಲದಲ್ಲಿ ಬೋಳೂರು ದೋಗ್ರ ಪೂಜಾರಿ ಚಿರಪರಿಚಿತ ಹೆಸರು. ಹವ್ಯಾಸಿ ಯಕ್ಷಗಾನ ಕಲಾವಿದ. ಅವರ ಬಣ್ಣದ ವೇಷವನ್ನು ನೋಡಿದ ಹಿರಿಯರು ಈಗಲೂ ಮೆಚ್ಚಿಕೊಳ್ಳುತ್ತಾರೆ. ೧೯೨೪ ರಲ್ಲಿ ” ಶ್ರೀ ಗೋಕರ್ಣನಾಥ ಯಕ್ಷಗಾನ ಮಂಡಳಿ” ಕಟ್ಟಿದ್ದರು. ಅದು ಕೆಲವು ವರ್ಷ ನಡೆಯಿತು. ಈ ನಡುವೆ ಮತ್ತೊಂದು ಮೇಳವನ್ನು 1925 ರಲ್ಲಿ ” ಜಗದಂಬಿಕಾ ಯಕ್ಷಗಾನ ಮಂಡಳಿ ” ಊರ್ವ – ಇದನ್ನು ಸ್ಥಾಪಿಸಿದರು. ಈ ಮೇಳವನ್ನು ಈಗಲೂ ಬೇರೆಯವರು ನಡೆಸಿಕೊಂಡು ಹೋಗುತ್ತಿದ್ದಾರೆ.
ದೋಗ್ರ ಪೂಜಾರಿ ಕಲಿತದ್ದು ಬರೀ ಎರಡನೇ ತರಗತಿ! ಅಪಾರ ಜ್ಞಾನವಂತ, ವಿನಯವಂತ, ಉದಾರಿ. ಅವರು ಬದುಕಿಗೆ ಬೋಳೂರು ಸುಲ್ತಾನ್ ಬತ್ತೇರಿ ನದಿ ದಡ(ಫಲ್ಗುಣಿ- ಗರುಪುರ) ದಲ್ಲಿ ” ನಿಸರ್ಗ ಫಲಾಹಾರ ಮಂದಿರ ” ಊಟ- ತಿಂಡಿ ಹೋಟೆಲ್ ನಡೆಸುತ್ತಿದ್ದರು. ಈಗ ಈ ಜಾಗ ಪ್ರವಾಸ ತಾಣಕ್ಕೆ ಸೇರಿದೆ.
ದೋಗ್ರ ಪೂಜಾರಿ ಅವರನ್ನು ಜ್ಞಾನವಂತ ಹಾಗೂ ಉದಾರಿ ಯಾಕೆಂದು ಈ ಮಾತು ಹೇಳ್ತೇವೆಂದರೆ- ಅವರ ಹೋಟೆಲ್ ನಲ್ಲಿ ಹುಡುಗರಿಗೆ ಯಕ್ಷಗಾನ ಹಾಗೂ ತಾಳೆ ಮದ್ದಳೆ ಕಲಿಸುತ್ತಿದ್ದರು. ಕಲಿಕೆಯ ಜತೆಗೆ ಆ ಹುಡುಗರಿಗೆ ತಿಂಡಿ- ಕಾಫಿ ಕೂಡ ಕೊಡುತ್ತಿದ್ದರು! ಹೋಟೆಲ್ ಪಕ್ಕದ ಖಾಲಿ ಜಾಗದಲ್ಲಿ ” ಯುನೈಟ್ ಸ್ಪೋಟ್ಸ್ ಕ್ಲಬ್ ” ನವರು ನಾಟಕದ ಪ್ರಾಕ್ಟೀಸು ಮಾಡುತ್ತಿದ್ದರು. ಇದು ” ದೋಗ್ರ ಮೇಳ” ದ ಕತೆಯಾದರೆ, ಕಳೆದ ೩೬ ವರ್ಷಗಳಿಂದ ” ಬೋಳೂರು ದೋಗ್ರ ಪೂಜಾರಿ ಸ್ಮಾರಕ ಯಕ್ಷಗಾನ ಕೇಂದ್ರ ” ಎಂಬ ಹೆಸರಿನಲ್ಲಿ ಪ್ರಶಸ್ತಿ ಪ್ರದಾನವನ್ನು ಅವರ ಮಕ್ಕಳು ನಡೆಸಿಕೊಂಡು ಬರುತ್ತಿದ್ದಾರೆ. ಆ ದಿನ ಯಕ್ಷಗಾನ ತಾಳೆ ಮದ್ದಳೆ ಕೂಡ ನಡೆಯುತ್ತಿದೆ .ಈಗ ಅದರ ಯಜಮಾನಿಕೆಯನ್ನು ಬಿ. ದಾಮೋದರ ನಿಸರ್ಗ ನೋಡಿಕೊಳ್ಳುತ್ತಿದ್ದಾರೆ.
ಇಂಥ ಪುಣ್ಯ ವಂಥನಿಗೆ 1937 ಮಾರ್ಚಿ 4 ರಂದು ವಿಶುಕುಮಾರ್ ಹಿರಿಮಗನಾಗಿ ಜನಿಸಿದರು . ತಾಯಿಯ ಹೆಸರು ಚಂದ್ರಾವತಿ. ದೋಗ್ರ ಪೂಜಾರಿ ದಂಪತಿಗೆ ಒಟ್ಟು ಹತ್ತು ಮಂದಿ ಮಕ್ಕಳು. ಆರು ಮಂದಿ ಗಂಡು ಮಕ್ಕಳು. ನಾಲ್ಕು ಮಂದಿ ಹೆಣ್ಣು ಮಕ್ಕಳು.
ವಿಶುಕುಮಾರ್ ಅವರ ಮೂಲ ಹೆಸರು ವಿಶ್ವನಾಥ. ಅನಂತರದವರು: ಮಧುಕುಮಾರ್, ಪುರುಷೋತ್ತಮ, ದಾಮೋದರ, ಯದುವೀರ ಮತ್ತು ದೇವೇಂದ್ರ. ಹೆಣ್ಣು ಮಕ್ಕಳಲ್ಲಿ ಹಿರಿಯವರು ವೇದಾವತಿ , ಉಮಾವತಿ, ಸುಗಂಧಿ ಮತ್ತು ಸುಮತಿ. ಸುಗಂಧಿ ಮತ್ತು ಸುಮತಿ ಅವಳಿ – ಜವಳಿ ಮಕ್ಕಳು. ಪುರುಷೋತ್ತಮ ಮತ್ತು ವೇದಾವತಿ ಈಗಿಲ್ಲ.
ಇವರಲ್ಲಿ ಮಧುಕುಮಾರ್ ಯಕ್ಷಗಾನ ಭಾಗವತಿಕೆ ಮತ್ತು ಪ್ರಸಂಗ ಕರ್ತ, ಪುರುಷೋತ್ತಮ ಕೆಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ ಹಾಗೂ ಅಭಿನಯಿಸಿದ್ದಾರೆ. ದಾಮೋದರ್ ಕಂಟ್ರಾಕ್ಟರ್ – ಸಾಹಿತ್ಯ,ಸಂಘ-ಸಂಸ್ಥೆಗಳಲ್ಲಿ ತೊಡಗಿದ್ದಾರೆ. ಯದುವೀರ ಹೋಟೆಲ್ ನಡೆಸಿಕೊಂಡು ಬರುತ್ತಿದ್ದಾರೆ . ದೇವೇಂದ್ರ ಕೂಡ ಕಂಟ್ರಾಕ್ಟರ್ ಆಗಿದ್ದಾರೆ .
ಅಳಿಯ ಸಂತಾನ ಕುಟುಂಬ:
ದೋಗ್ರ ಪೂಜಾರಿ ಮತ್ತು ಕೇಂದ್ರದ ಮಾಜಿ ಸಚಿವ ಕಾಂಗ್ರೇಸ್ ನಾಯಕ ಜನಾರ್ಧನ ಪೂಜಾರಿ ಒಂದೇ ಕುಟುಂಬ. ದೋಗ್ರ ಪೂಜಾರಿ ಅವರ ಅಣ್ಣನ ಮಗ ಜನಾರ್ಧನ ಪೂಜಾರಿ. ಅಳಿಯ ಸಂತಾನವಾದುದರಿಂದ ಅವರ ಕುಟುಂಬಕ್ಕೆ ೬೨ ಮುಡಿ ಗೇಣಿ ಬರುವ ವರ್ಗದಾರರು. ಕವರು ಪಾಲು ಪ್ರಕಾರ ದೋಗ್ರ ಪೂಜಾರಿ ಅವರಿಗೆ ೧೦ ಮುಡಿ ಗೇಣಿ ಬರುವ ಜಾಗವಾದರೆ, ಜನಾರ್ಧನ ಪೂಜಾರಿ ತಂದೆಯವರಿಗೆ ೧೨ ಮುಡಿ ಗೇಣಿ ಬರುವ ಸ್ಥಳ . ಈ ಗೇಣಿ ಬರುವ ಸ್ಥಳ ಮರೋಳಿ ಗ್ರಾಮದಲ್ಲಿದೆ. ದೋಗ್ರ ಪೂಜಾರಿ ಮನೆ ಇರುವುದೇ ಮರೋಳಿ ಗ್ರಾಮದಲ್ಲಿ. ಆ ಮನೆಯಲ್ಲಿ ಈಗ ದಾಮೋದರ ನಿಸರ್ಗ ಇದ್ದಾರೆ.
ಇದು ವಿಶುಕುಮಾರ್ ರ ಕುಟುಂಬದ ಹಿನ್ನಲೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!