2014 : ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವಸಾಹಿತಿ ಪ್ರಶಸ್ತಿ ಪುರಸ್ಕೃತರು
01-11-2014, 6:59 AM
10-08-2014, 11:12 AM
1968 ರಲ್ಲಿ ತನ್ನ ಪ್ರಥಮ ಕಥೆ ಮತ್ತು ಕವನವನ್ನು ಪ್ರಕಟಿಸಿದ್ದ ಬಹುಭಾಷಾ ಕಥೆಗಾರ, ಕವಿ, ಗಾಯಕ, ನಟ, ನಿರ್ದೇಶಕ ಜಾನಪದ ಇತಿಹಾಸಕಾರ, ಅಧ್ಯಯನಕಾರ, ವಿಮರ್ಶಕ ಮುದ್ದು ಮೂಡುಬೆಳ್ಳೆ ಕಳೆದ 45 ವರುಷದಿಂದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚನೆಯನ್ನು ಮಾಡುತ್ತಾ ಬರುತ್ತಿದ್ದಾರೆ. ನಾಡು ನುಡಿಯಿದೊಂದು ಬಗೆ, ಕಾಂತಬಾರೆ-ಬುಧಬಾರೆ, ತುಳುನಾಡಿನ ಜಾನಪದ ವಾದ್ಯಗಳು, ತುಳು ರಂಗಭೂಮಿ ಮುಂತಾದವುಗಳು ಮುದ್ದು ಮೂಡುಬೆಳ್ಳೆ ಅವರ ಪ್ರಮುಖ ಅಧ್ಯಯನ ಕೃತಿಗಳು. ಕನ್ನಡ ಮಾತ್ರವಲ್ಲದೆ ತುಳು, ಕೊಂಕಣಿ ಮತ್ತು ಇಂಗ್ಲೀಷ್ ಭಾಷೆಯಲ್ಲೂ ಕೃತಿ ರಚನೆಯನ್ನು […]
08-08-2014, 10:41 AM
ಬಂಟ್ವಾಳ ತಾಲೂಕು ಕಳ್ಳಿಗೆÀ ಗ್ರಾಮದ ಮುಂಡಾಜೆ ನಿವಾಸಿಯಾಗಿರುವ ಚೇತನ್ ಮುಂಡಾಜೆ ಇವರು ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಉದಯೋನ್ಮಖ ಸಾಹಿತಿಯೂ ಹೌದು, ಕಲಿಕೆ, ಅಧ್ಯಯನ, ಭಾಗವಹಿಸುವಿಕೆ ಇವು ಇವರ ಆಸಕ್ತಿಯ ಕ್ಷೇತ್ರವೂ ಹೌದು. 2009ರಲ್ಲಿ ‘ಪಿಂಗಾರ’ ಎಂಬ ಕವನ ಸಂಕಲನವನ್ನು ಪ್ರಕಟಿಸಿರುವ ಶ್ರೀಯುತರು 2008-09ರಲ್ಲಿ ‘ಮಂಗಳಗಂಗೆ’ ಎಂಬ ಸಂಪಾದಿತ ಕೃತಿಯನ್ನು ಅನಾವರಣಗೊಳಿಸಿದ್ದಾರೆ. ಆಧುನಿಕ ಕನ್ನಡ ಕಾವ್ಯದಲ್ಲಿ ಬೆಂದ್ರೆಯವರ ಅನನ್ಯತೆ, ಮಂಗಳೂರ ಕ್ರಾಂತಿ ಕೆಲವು ಟಿಪ್ಪಣಿಗಳು, ಬೂತಾರಾಧನೆಯಲ್ಲಿ ನುಡಿಗಟ್ಟು, ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಸೀರೆಯಂಗಡಿಯಲ್ಲಿ ಮಾದರಿಗೆ ಪ್ರತಿಮೆ ಕವನ ವಿಶ್ಲೇಷಣೆ, […]
04-08-2013, 1:05 PM
ದೇವರು ಕೊಟ್ಟ ಪ್ರತಿಭೆಯನ್ನು ಆಧರಿಸಿ ಬರಮಾಡಿಕೊಳ್ಳದೇ ಅವಕಾಶ ಇಲ್ಲ ಎಂದು ಹಲುಬುವವರೇ ಅಧಿಕವಾಗಿರುವ ಇಂದಿನ ದಿನದಲ್ಲಿ ತನ್ನೊಳಗೆ ದೇವರಿತ್ತ ಸುಪ್ತ ಪ್ರತಿಭೆಯನ್ನು ಒರೆಗೆ ಹಚ್ಚಿಕೊಂಡು ಸೀಮಿತವಾದ ಅವಕಾಶಗಳನ್ನೆ ಬಳಸಿಕೊಂಡು ಬೆಳೆಯುವವರು ತೀರಾ ವಿರಳ ಎನ್ನಬಹುದು. ಅಂತಹ ಪ್ರತಿಭೆಗಳ ಸಾಲಿನಲ್ಲಿ ಬರುವವರೇ ಕಿರಣ್ ಕುಮಾರ್ ಕೊಕುಡೆ. ಗ್ರಾಮೀಣ ಪ್ರದೇಶವಾದ ಕಿನ್ನಿಗೋಳಿ ಸಮೀಪದ ಕೊಕುಡೆ ನಿವಾಸಿಯಾಗಿರುವ ಕಿರಣ್ಕುಮಾರ್ 21 ರ ಹರೆಯದ ಯುವಕ. ಆದರೆ ಅವರು ಮೆರೆದ ಸಾಧನೆ ಮಾತ್ರ ೫೦ರ ಹಿರಿಯರೂ ನಾಚಬೇಕು ಎನ್ನುವಂತಹ ಸಾಧನೆ. ಸಾಹಿತ್ಯ ರಂಗದಲ್ಲಿ ಉತ್ತಮ […]
04-08-2013, 12:06 PM
ಲೋಹಿಯಾ, ಜಯಪ್ರಕಾಶ ನಾರಾಯಣ್ ರಂತಹ ಪ್ರಬಲ ಸಮಾಜವಾದಿಗಳ ಚಿಂತನೆಯನ್ನು ದಟ್ಟವಾಗಿ ಮೈಗೂಡಿಸಿಕೊಂಡ – ಗಾಂಧಿ ಯುಗದ ಧೀಮಂತ ಪತ್ರಿಕೋದ್ಯಮಿ ‘ಸಂಗಾತಿ’ಯ ನವೀನ್ಚಂದ್ರಪಾಲ್ ತನ್ನ 86ರ ಹರೆಯದ – ಇಂದಿನ ದಿನಗಳ ಪರ್ಯಂತ ತನ್ನ ಸ್ವತಂತ್ರ ನಿಲುವನ್ನು ಅಚಲವಾಗಿ ಕಾಯ್ದುಕೊಂಡಿರುವ ಅಪರೂಪದ ವ್ಯಕ್ತಿತ್ವದವರು. ಮಹಾರಾಷ್ಟ್ರ, ಗುಜರಾತ್ ಮುಂತಾದೆಡೆ ರಾಷ್ಟ್ರಮಟ್ಟದ ಹಲವು ಆಂಗ್ಲ ಪತ್ರಿಕೆಗಳಲ್ಲಿ ದುಡಿದರೂ ‘ಸಂಗಾತಿ’ ಕನ್ನಡ ವಾರಪತ್ರಿಕೆಯನ್ನು ಅಪೂರ್ವ ರೀತಿಯಲ್ಲಿ ಸ್ವಾತಂತ್ರ್ಯೋತ್ತರ ದಿನಗಳಿಂದ ಎರಡು ದಶಕಗಳಿಗೂ ಹೆಚ್ಚು ಕಾಲ ಹೊರಡಿಸಿ ಜನತಂತ್ರವನ್ನು ಎತ್ತಿ ಹಿಡಿದ ಸಾಹಸಿಗರು. ಸಿರಿ […]
04-11-2012, 7:05 AM
ಹದಿನೆಂಟು, ಹತ್ತೊಂಭತ್ತನೇ ಶತಮಾನಗಳಲ್ಲಿ ಕೇರಳದ ಸಮಾಜ ಅಜ್ಞಾನ, ಅಂಧಶ್ರದ್ಧೆಗಳ ಅಂಧಕಾರದಲ್ಲಿ ಮುಳುಗಿತ್ತು. ಕೆಳವರ್ಗದವರಿಗೆ ಮೇಲ್ವರ್ಗದವರ ಹಿಂಸೆ, ಕಿರುಕುಳಗಳಿಂದಾಗಿ ಬದುಕುವುದೇ ಕಷ್ಟವಾಗಿತ್ತು. ಆ ಕಾಲದ ಜಾತಿ ವ್ಯವಸ್ಥೆಯ ಕ್ರೂರತೆಯಿಂದ ಪಾರಾಗಲು ದಲಿತರು ಮತಾಂತರಕ್ಕೆ ಮುಂದಾಗುತ್ತಿದ್ದರು. ಅಂತಹ ವಿಲಕ್ಷಣ ಕಾಲಘಟ್ಟದಲ್ಲಿ ಜನ್ಮತಾಳಿದ ನಾರಾಯಣ ಗುರು ಎಳವೆಯಲ್ಲೇ ಸಮಾಜದಲ್ಲಿ ಬೇರೂರಿರುವ ಅಸ್ಪೃಶ್ಯತೆ, ಅಜ್ಞಾನ, ಮೂಢನಂಬಿಕೆಗಳನ್ನು ಕಂಡು ಮರುಗುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ದೀನದಲಿತರ ಸೇವೆ, ಶುಶ್ರೂಷೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ತಮ್ಮ ತಾಯಿ-ತಂದೆ ನಿಧನರಾದ ಮೇಲೆ ಹುಟ್ಟಿದೂರಿಗೆ ವಿದಾಯ ಹೇಳಿ ಪರಿವ್ರಾಜಕರಾಗಿ ಸಂಚಾರಕ್ಕೆ ತೊಡಗುವ ಗುರು, […]
04-11-2012, 6:28 AM
ಕರಾವಳಿ ಕಂಡ ಧೀಮಂತ ಪ್ರತಿಭಾಶಾಲಿಗಳ ಸಾಲಿನ ಮಿನುಗು ನಕ್ಷತ್ರವಾದ ವಿಶುಕುಮಾರ್ ದಂತಕತೆಯಾದ ವ್ಯಕ್ತಿ. ತುಳುವಿನ ಉಸಿರು, ಕನ್ನಡದ ಶಕ್ತಿ, ಸಮಾಜದ ಸ್ಫೂರ್ತಿ, ಚೆಲುವಿನ ಮೂರ್ತಿಯಾಗಿದ್ದ ವಿಶುಕುಮಾರ್ ಒಂದು ಕಾಲದ ಪ್ರತಿಭಾವಂತ ನಟ, ನಿರ್ದೇಶಕ, ಕಾದಂಬರಿಕಾರ, ಪತ್ರಕರ್ತ, ಸಂಘಟಕ, ಸಿನಿಮಾ ನಿರ್ದೇಶಕರಾಗಿ, ಶ್ರೇಷ್ಠ ಸಾಧನೆಗಳನ್ನು ಮಾಡಿದವರು, ಇನ್ನೆಷ್ಟೋ ಉಪಯುಕ್ತ ಕೊಡುಗೆಗಳನ್ನು ನೀಡಲಿರುವ ಭರವಸೆಯ ಅಕಾಲದಲ್ಲೇ ಅಗಲಿ ಹೋದವರು. 1797 ರಲ್ಲಿ ಟಿಪ್ಪುಸುಲ್ತಾನ್ ಸಮರ ಕಾಲದಲ್ಲಿ ಮಂಗಳೂರು ಬೋಳೂರಿನ ಕಡಲತೀರದಲ್ಲಿ ಕಟ್ಟಿಸಿದ ಕೋಟೆ ಸುಲ್ತಾನ್ ಬತ್ತೇರಿ, ಇಂದು ಪ್ರವಾಸಿಗರ ರಮ್ಯ ತಾಣ, […]
04-11-2012, 6:25 AM
ಅಧ್ಯಯನ ವಿಶುಕುಮಾರ್ ಕಾಲವಾಗಿ (1989) ಇದೀಗ 26 ವರ್ಷಗಳು ಪೂರ್ಣವಾಗುತ್ತಿದೆ. ಆದರೆ ಅವರು ಬಿಟ್ಟು ಹೋದ ಸಾಹಿತ್ಯ ಕೃತಿಗಳು, ನಾಟಕ, ಸಿನೆಮಾಗಳು ಇಂದಿಗೂ ನಮ್ಮನ್ನು ಕಾಡಿಸುತ್ತವೆ; ಯೋಚನೆಗೆ ಹಚ್ಚುತ್ತವೆ. ವಿಶುಕುಮಾರ್ ತಮ್ಮ ಕೃತಿಗಳಲ್ಲಿ ಆಯ್ದುಕೊಂಡ ವಸ್ತುಗಳು, ಸಾಮಾಜಿಕ ಸಮಸ್ಯೆಗಳು, ಸಂಘರ್ಷಗಳು, ಇವತ್ತಿಗೂ ಪ್ರಸ್ತುತವೆನಿಸುತ್ತವೆ. ವಿಶುಕುಮಾರ್ ಭಿನ್ನವಾಗಿ ಆಲೋಚಿಸುವ ಮನೋಧರ್ಮದವರು. ಹಾಗಾಗಿ ಕೆಲವೊಮ್ಮೆ ಅವರು ವಿವಾದಾತ್ಮಕ ವ್ಯಕ್ತಿಯೂ ಆದರು. ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಒಂದು ಕ್ಷೇತ್ರದಲ್ಲಿ ಯಶಸ್ಸನ್ನು, ಪ್ರಸಿದ್ಧಿಯನ್ನು ಪಡೆಯುವುದನ್ನು ನಾವು ಕಾಣುತ್ತೇವೆ. ಆದರೆ ವಿಶುಕುಮಾರ್ ತಾವು ಪ್ರವೇಶಿಸಿದ ಎಲ್ಲಾ […]