13-07-2019, 9:19 AM
ವೇಣೂರು : ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣವನ್ನು ಮೈಗೂಡಿಸಿಕೋಂಡು ಸಮಾಜದ ಆಸ್ತಿಯಾಗಬೇಕು ,ಅಪರಾಧ ಮಕ್ತ ,ದುಶ್ಚಟ ಮುಕ್ತ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದೆಯೆಂದು ಅಂಡಿಂಜೆ ಸರಕಾರಿ ಶಾಲೆಯ ಅಧ್ಯಾಪಕರಾದ ಶಶಿಧರ ಕೆ ಅಂಡಿಂಜೆ ನುಡಿದರು, ಅವರು ಯುವವಾಹಿನಿ (ರಿ) ವೇಣೂರು ಘಟಕದ ವಿದ್ಯಾರ್ಥಿ ವಿಭಾಗದ ಉದ್ಘಾಟನೆಯನ್ನು ವೇಣೂರು ಲಯನ್ಸ್ ಭವನದಲ್ಲಿ ನೇರವೇರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಪ್ರಧಾನ ಕಾರ್ಯದರ್ಶಿರಾಕೇಶ್ ಕುಮಾರ್ ಮಡುಕೋಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ […]
Read More
13-07-2019, 9:10 AM
ವೇಣೂರು : ಸೂಕ್ತವಾದ ಒಂದು ಉದ್ಯೋಗವನ್ನು ಪಡೆಯಬೇಕಾದರೆ ನಾವು ಯಾವ ತೆರನಾದ ಶಿಕ್ಷಣವನ್ನು ಪಡೆಯಬೇಕು ಎಂಬ ಮಾಹಿತಿಯನ್ನು ಪಡೆದುಕೊಂಡು ಅದರಂತೆಯೇ ನಾವು ಮುನ್ನಡೆದರೆ ನಮ್ಮ ಬದುಕು ಹಸನನಾಗುವುದರಲ್ಲಿ ಯಾವುದೇ ಸಂಶಯವಿಲ್ಲಯೆಂದು ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ರಾಸಾಯನಶಾಸ್ರ ಉಪನ್ಯಾಸಕರಾದ ಸಂತೋಷ್ ಎ ಹೇಳಿದರು. ಅವರು ಯುವವಾಹಿನಿ (ರಿ) ವೇಣೂರು ಘಟಕದ ವತಿಯಿಂದ ವೇಣೂರು ಲಯನ್ಸ್ ಭವನದಲ್ಲಿ ನಡೆದ ವೃತ್ತಿಮಾರ್ಗದರ್ಶನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಯುವವಾಹಿನಿ (ರಿ) ವೇಣೂರು ಘಟಕದ ಅಧ್ಯಕ್ಷರಾದ ನವೀನ್ ಪೂಜಾರಿ […]
Read More
09-07-2019, 1:32 PM
ವೇಣೂರು: ಹುಟ್ಟಿನಿಂದ ಸಾವಿನವರೆಗೂ ಕಾನೂನಿನ ಚೌಕಟ್ಟಿನಲ್ಲಿ ಬದುಕಬೇಕು. ಈಗಾಗಿ ಕಾನೂನಿನ ಸಾಮಾನ್ಯ ಜ್ಞಾನ ಎಲ್ಲರಿಗೂ ಅವಶ್ಯಕವಾಗಿದೆ. ನಿತ್ಯ ಜೀವನದಲ್ಲಿ ಕಾನೂನನ್ನು ಪಾಲಿಸುತ್ತಾ ಪ್ರಜ್ಞಾವಂತ ನಾಗರಿಕರಾಗೋಣ ಎಂದು ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಬಿ.ಕೆ. ನಾಗೇಶ್ಮೂರ್ತಿ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ ಬೆಳ್ತಂಗಡಿ, ವಕೀಲರ ಸಂಘ ಬೆಳ್ತಂಗಡಿ, ಯುವವಾಹಿನಿ ಘಟಕ ವೇಣೂರು ಹಾಗೂ ವೇಣೂರು ಸ.ಪ.ಪೂ. ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜು. 09 ರಂದು ವೇಣೂರು ಸ.ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಜರಗಿದ ಕಾನೂನು […]
Read More
30-06-2019, 8:25 AM
ವೇಣೂರು: ಯುವವಾಹಿನಿ ಘಟಕ ವೇಣೂರು ಇದರ ಆಶ್ರಯದಲ್ಲಿ ಗ್ರಾ.ಪಂ. ವೇಣೂರು, ಹಿಂದೂ ರುದ್ರಭೂಮಿ ಅನುಷ್ಠಾನ ಸಮಿತಿ ಬಜಿರೆ, ಅರಣ್ಯ ಇಲಾಖೆ ವೇಣೂರು ಇದರ ಸಹಕಾರದಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ರಮವು ರವಿವಾರ ಬಜಿರೆ ಹಿಂದೂರುದ್ರಭೂಮಿ ಮೋಕ್ಷ ಧ್ವಾರ ಇಲ್ಲಿ ಜರಗಿತು. ವೇಣೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುವವಾಹಿನಿ ಘಟಕದ ಅಧ್ಯಕ್ಷ ನವೀನ್ ಪಚ್ಚೇರಿ ಅಧ್ಯಕ್ಷತೆ ವಹಿಸಿದ್ದರು. ವೇಣೂರು ಗ್ರಾ.ಪಂ. ಉಪಾಧ್ಯಕ್ಷ […]
Read More
23-06-2019, 3:59 PM
ವೇಣೂರು: ಆರೋಗ್ಯ ಮತ್ತು ಶಿಕ್ಷಣಕ್ಕೆ ಉತ್ತೇಜನ ನೀಡುವ ವೇಣೂರು ಯುವವಾಹಿನಿ ಘಟಕದ ಕಾರ್ಯವೈಖರಿಯೇ ವಿಶಿಷ್ಟ. ಯುವ ಮನಸ್ಸುಗಳಿಂದ ನಿಶ್ವಾರ್ಥವಾಗಿ ನಡೆಯುವ ಇಂತಹ ಸೇವೆಯಿಂದ ಸಂಘಟನೆ ಜನಸಾಮಾನ್ಯರಿಗೆ ಹತ್ತಿರವಾಗುತ್ತಿದೆ. ಇಂತಹ ಸಮಾಜಸೇವೆಯ ಪರಿಕಲ್ಪನೆ ಎಲ್ಲೆಡೆ ಫಸರಿಸಲಿ ಎಂದು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಹೇಳಿದರು. ಯುವವಾಹಿನಿ ವೇಣೂರು ಘಟಕದ ವತಿಯಿಂದ ರವಿವಾರ ವೇಣೂರು ಲಯನ್ಸ್ ಕ್ಲಬ್ ಸಭಾಭವನದಲ್ಲಿ ಜರಗಿದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಆಸರೆ ಎಂಬ […]
Read More
31-05-2019, 4:03 PM
ವೇಣೂರು : ಯುವವಾಹಿನಿ ವೇಣೂರು ಘಟಕಕ್ಕೆ ಕಲಾಕಾರ್ ಕಲೋತ್ಸವ ಸಮಾರಂಭದಲ್ಲಿ ಯುವಕೀರ್ತಿ ಬಿರುದು ಪ್ರದಾನ ಮಾಡಲಾಯಿತು. ಯುವವಾಹಿನಿ ವೇಣೂರು ಘಟಕದ ಸಮಾಜಮುಖಿ ಸೇವಾ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ನವೀನ್ ಪುಚ್ಚೇರಿ, ನಿಕಟಪೂರ್ವ ಅಧ್ಯಕ್ಷ ನಿತೀಶ್ ಎಚ್, ಸತೀಶ್ ಪಿ.ಎನ್ ಮತ್ತಿತರರು ಉಪಸ್ಥಿತರಿದ್ದರು
Read More
08-05-2019, 3:19 AM
ವೇಣೂರು : ಯುವವಾಹಿನಿ (ರಿ) ವೇಣೂರು ಘಟಕದ ಅಂಡಿಂಜೆ ಗ್ರಾಮಸಂಚಾಲನ ಸಮಿತಿಯ ವತಿಯಿಂದ ಮರಕಡಿಯುವ ಮೆಷಿನ್ ತಾಗಿ ಗಾಯಗೊಂಡು ಆರ್ಥಿಕ ಸಂಕಷ್ಟದಲ್ಲಿರುವ ಅಂಡಿಂಜೆ ಗ್ರಾಮದ ಕಾನ ಮನೆಯ ಪ್ರವೀಣ್ ಪೂಜಾರಿಯವರಿಗೆ 10,000/ ರೂಪಾಯಿ ಸಾಂತ್ವನ ನಿಧಿಯನ್ನು ಹಸ್ತಾಂತರ ಮಾಡಲಾಯಿತು ,ಈ ಸಂದರ್ಭದಲ್ಲಿ ಸಂಚಾಲನ ಸಮಿತಿಯ ಅಧ್ಯಕ್ಷರಾದ ರಾಕೇಶ್ ಪೂಜಾರಿ ,ಕಾರ್ಯದರ್ಶಿ ರಕ್ಷಿತ್ ಹಲಕ್ಕಿ,ಅಂಡಿಂಜೆ ಗ್ರಾಮ ಪಂಚಾಯತ್ ಸದಸ್ಯರಾದ ನಿತೀನ್ ಮುಂಡೇವು, ಯುವವಾಹಿನಿ ವೇಣೂರು ಘಟಕದ ನಿರ್ದೇಶಕರಾದ ಪ್ರಶಾಂತ್ ನವಜ್ಯೋತಿ ,ಉಮೇಶ್ಚಂದ್ರ ಅಂಬಲ,ಸತೀಶ್ ಪಿ ಎನ್,ಶುಭಕರ ರಾಗಿಮೇರು , […]
Read More
27-01-2019, 3:59 PM
ವೇಣೂರು : ಸಂಘಟನೆಗಳು ಉದ್ಯೋಗ, ಶಿಕ್ಷಣದ ಜತೆಗೆ ಸಮು ದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ಅದುವೇ ಮೂಲ ಉದ್ದೇಶವಾಗಬೇಕು. ಸಮುದಾಯದ ಅಭಿವೃದ್ಧಿಯ ವಿಷಯ ದಲ್ಲಿ ಹಸ್ತಕ್ಷೇಪ ಸಲ್ಲದು. ಸಾಮಾಜಿಕ ಸೇವೆಯಲ್ಲಿ ಯುವವಾಹಿನಿ ಯುವಕರ ಪ್ರೇರಕ ಶಕ್ತಿ ಆಗಿದೆ ಎಂದು ಹೇಳಿದರು.ಅಲ್ಲದೆ ಜಿಲ್ಲೆಯಲ್ಲಿ ಯುವವಾಹಿನಿ ಉತ್ತಮ ಕಾರ್ಯಸಾಧನೆ ಮಾಡಿದೆ. ಅದಕ್ಕಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗಳಿಸಿರುವುದು ನಮಗೆಲ್ಲ ಹೆಮ್ಮೆ. ಸಮಾಜದ ಅಭಿವೃದ್ಧಿಗೆ ಪೂರಕವಾಗಿರುವ ಈ ಸಂಘಟನೆಗೆ ಎಲ್ಲರೂ ಬೆಂಬಲ ನೀಡಬೇಕಿದೆ.ಅವಿಭಜಿತ ಜಿಲ್ಲೆ ಯಲ್ಲಿ ಬಿಲ್ಲವರೇ ಬಹುಸಂಖ್ಯಾಕರಾಗಿ ದ್ದಾರೆ. ಆದರೆ ನಮ್ಮಲ್ಲಿ […]
Read More
20-01-2019, 1:41 PM
ವೇಣೂರು :ಯುವವಾಹಿನಿ(ರಿ) ವೇಣೂರು ಘಟಕದ ಆಶ್ರಯದಲ್ಲಿ ಮತ್ತು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ದಿನಾಂಕ 20/1/2019ನೇ ಆದಿತ್ಯವಾರ ವೇಣೂರಿನ ಪಲ್ಗುಣಿ ನದಿಗೆ ಪಾರಂಪರಿಕ ಕಟ್ಟ ಹಾಕುವ ಮೂಲಕ ನದಿ ಮಟ್ಟ ಏರಿಕೆಗೆ ಶ್ರಮದಾನ ಮತ್ತು ಜಲ ಸಾಕ್ಷರತೆ ಅರಿವು ಕಾರ್ಯಕ್ರಮವು ವೇಣೂರಿನ ಕೈತೇರಿ ಎಂಬಲ್ಲಿ ನಡೆಯಿತು . ಉಪವಿಭಾಗಾಧಿಕಾರಿ ಡಾ.ಹೆಚ್.ಕೆ.ಕೃಷ್ಣ ಮೂರ್ತಿಯವರು ಚಾಲನೆ ನೀಡುವುದರೊಂದಿಗೆ ದಿನವಿಡೀ ನಡೆದ ಶ್ರಮದಾನದಲ್ಲಿ ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷರಾದ ನಿತೀಶ್ ಹೆಚ್. ಜಿಲ್ಲಾ ಪಂ.ಸದಸ್ಯರಾದ ಧರಣೇಂದ್ರ ಕುಮಾರ್,ಶೇಖರ್ ಕುಕ್ಕೇಡಿ,ಪತ್ರಕರ್ತ ಪದ್ಮನಾಭ ಕುಲಾಲ್, ಯುವವಾಹಿನಿ […]
Read More