07-01-2024, 10:00 AM
ಸುರತ್ಕಲ್: ಯುವಜನತೆಗೆ ದಿನನಿತ್ಯದ ಬದುಕಿನ ಬಾಳ ಬುಟ್ಟಿಯಲ್ಲಿ ನಾರಾಯಣ ಗುರುವರ್ಯರ ಜೀವನಚರಿತ್ರೆಯ ಆದರ್ಶ ಸಂದೇಶಗಳು ದಾರಿದೀಪವಾಗಿರಬೇಕು ಹಾಗೂ ಪರರಿಗೆ ಸದಾ ಒಳಿತನ್ನು ಬಯಸುವಂತಿರಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಪದವಿಪೂರ್ವ ಕಾಲೇಜು ಕಾಟಿಪಳ್ಳದ ಪ್ರಾಂಶುಪಾಲರಾದ ಉಮೇಶ್ ಎಂ. ಕರ್ಕೇರರರು ಹೇಳಿದರು. ಅವರು ಯುವವಾಹಿನಿ(ರಿ.) ಸುರತ್ಕಲ್ ಘಟಕದ 2023-2024ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವನ್ನು ದಿನಾಂಕ 07-01-2024 ರಂದು ದೇವಾಡಿಗ ಸಭಾಭವನ ಹೊಸಬೆಟ್ಟುವಿನಲ್ಲಿ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ ಸುರತ್ಕಲ್ ಘಟಕದ ಅಧ್ಯಕ್ಷರಾದ ತಾರ ಅಶೋಕ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. […]
Read More
18-12-2022, 3:40 PM
ಮಂಗಳೂರು:- ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಜರ್ಸ್ ಲಿಮಿಟೆಡ್ (ಎಂಸಿಎಫ್), ಪಣಂಬೂರು ಸಾರಥ್ಯದಲ್ಲಿ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆ ದೇರಳಕಟ್ಟೆ, ಧೂಮಾವತಿ ಫ್ರೆಂಡ್ಸ್ ಸರ್ಕಲ್ ಕೃಷ್ಣಾಪುರ ಮತ್ತು ಯುವವಾಹಿನಿ ಸುರತ್ಕಲ್ ಘಟಕದ ಸಹಯೋಗದಲ್ಲಿ ದಿನಾಂಕ 18 ಡಿಸೆಂಬರ್ ಭಾನುವಾರದಂದು ನೇತ್ರ ತಪಾಸಣಾ ಉಚಿತ ಶಿಬಿರ ನಡೆಯಿತು. ಎಂಸಿಎಫ್ನ ಸಿಎಂ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಸಾರಾಳ ಧೂಮಾವತಿ ದೈವಸ್ಥಾನ ಅಧ್ಯಕ್ಷ ಹರೀಶ್ ಸುವರ್ಣ ಶಿಬಿರವನ್ನು ಉದ್ಘಾಟಿಸಿದರು. ಧೂಮಾವತಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಅರುಣ್ ಅಂಚನ್, ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆಯ […]
Read More
27-07-2022, 4:43 PM
ಸುರತ್ಕಲ್ :- ಯುವವಾಹಿನಿ ಸುರತ್ಕಲ್ ವತಿಯಿಂದ 27 ಜುಲೈ 2022 ರಂದು ‘ಹಾವು- ನಾವು- ಪರಿಸರ’ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಯಿತು. ಸ್ನೇಕ್ಕಿರಣ್ ಕಾರ್ಯಕ್ರಮ ನಡೆಸಿಕೊಟ್ಟರು. ಸ್ನೇಕ್ಕಿರಣ್ರವರು ಪರಿಸರದ ಬಗೆಗೆ ಅರಿವು ಮೂಡಿಸಿ, ಪರಿಸರದಲ್ಲಿ ಮನುಷ್ಯ ಹಾಗೂ ಪ್ರಾಣಿ ಪಕ್ಷಿಗಳ ಪಾತ್ರ, ಪರಿಸರವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವ ಕ್ರಿಮಿಕೀಟಗಳು ಯಾವ ರೀತಿಯ ಪಾತ್ರವಹಿಸಿಕೊಂಡಿರುತ್ತದೆ ಎಂಬುವುದನ್ನು ತಿಳಿಸಿಕೊಟ್ಟರು. ಹಲವಾರು ವಿಧಗಳ ಹಾವುಗಳ ಬಗೆಗೆ ಪರಿಚಯ ಮಾಡಿಸಿ, ಅವುಗಳ ಸಂತಾನೋತ್ಪತ್ತಿ ಯಾವ ರೀತಿಯಾಗಿರುತ್ತದೆ ಮತ್ತು ಮನುಷ್ಯನಿಗೆ ಕಚ್ಚಿದಲ್ಲಿ ಯಾವ ರೀತಿಯ ಪರಿಣಾಮವಾಗಬಹುದು ಎಂಬುವುದನ್ನು […]
Read More
08-07-2022, 3:08 PM
ಸುರತ್ಕಲ್ :- ದಿನಾಂಕ 08 ಜುಲೈ 2022 ರಂದು ಘಟಕದ ವತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ನಮ್ಮ ಘಟಕದ ಸದಸ್ಯೆಯಾದ ಗಾಯತ್ರಿ ಸತೀಶ್ ರವರು ಪರಿಸರ ಉಳಿಸಿ ಗಿಡ ಬೆಳೆಸಿ ಎಂಬುದರ ಮೂಲಕ ಪರಿಸರ ದಿನಾಚರಣೆಯ ಬಗ್ಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಭೆಯಲ್ಲಿ ಹಾಜರಿದ್ದ ಮಾಜಿ ಅಧ್ಯಕ್ಷರಾದ ಶ್ರೀ ಯೋಗೀಶ್ ಸನಿಲ್ ರವರು ಸದಸ್ಯರೆಲ್ಲರಿಗೂ ಗಿಡಗಳನ್ನು ವಿತರಿಸಿ ಇನ್ನು ಮುಂದೆಯೂ ಇಂತಹ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು […]
Read More
19-06-2022, 2:29 PM
ಸುರತ್ಕಲ್ :- ದಿನಾಂಕ 19 ಜೂನ್ 2022 ರಂದು ಯುವವಾಹಿನಿ (ರಿ.) ಸುರತ್ಕಲ್ ಘಟಕದ ವತಿಯಿಂದ ತೋಕೂರು ಸುಬ್ರಮಣ್ಯ ದೇವಸ್ಥಾನದ ಜೀರ್ಣೋದ್ದಾರದ ಪ್ರಯುಕ್ತ ಒಂದು ದಿನದ ಕರ ಸೇವೆಯನ್ನು ನೆರವೇರಿಸಲಾಯಿತು. ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಸೇರಿ ಒಟ್ಟು 18 ಮಂದಿ ಈ ಸೇವೆಯಲ್ಲಿ ಪಾಲ್ಗೊಂಡು ಸೇವೆಯನ್ನು ಸಲ್ಲಿಸಲಾಯಿತು.
Read More
05-06-2022, 3:59 PM
ಯುವವಾಹಿನಿ (ರಿ.) ಕೇಂದ್ರ ಸಮಿತಿ ಹಾಗೂ ಯುವವಾಹಿನಿ (ರಿ.) ಪಣಂಬೂರು- ಕುಳಾಯಿ ಘಟಕದ ಸಹಯೋಗದಲ್ಲಿ ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ ಅಂತರ್ ಘಟಕಗಳ ಭಜನಾ ಸ್ಪರ್ಧೆ “ಮಾಧವ ಕೀರ್ತನೋತ್ಸವ -2022” ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಬಜ್ಪೆ ಘಟಕ ಪ್ರಥಮ, ಸುರತ್ಕಲ್ ಘಟಕ ದ್ವೀತಿಯ,ಮಂಗಳೂರು ಮಹಿಳಾ ಘಟಕ ತೃತೀಯ, ಬಹುಮಾನ ಪಡೆಯಿತು. ಶ್ರೇಯಾ ಬಜ್ಪೆ ಉತ್ತಮ ಭಜಕ ಪ್ರಶಸ್ತಿ, ಸುರತ್ಕಲ್ ಘಟಕದ ವಿಜಯ ಕುಕ್ಯಾನ್ ಉತ್ತಮ ತಬಲ ವಾದಕ ಪ್ರಶಸ್ತಿ, ದಿನೇಶ್ ಅಡ್ವೆ ಉತ್ತಮ […]
Read More
30-01-2022, 12:50 PM
ಸುರತ್ಕಲ್ : ಯುವವಾಹಿನಿ ಸುರತ್ಕಲ್ ಘಟಕದ 2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿವೇಕ್ ಬಿ.ಕೋಟ್ಯಾನ್ ಆಯ್ಕೆಯಾಗಿದ್ದಾರೆ ಕಾರ್ಯದರ್ಶಿ : ಮೃದುಲಾ ಪವನ್ ಉಪಾಧ್ಯಕ್ಷ : ತಾರಾ ಅಶೋಕ್ ಹಾಗೂ ಅಶೋಕ್ ಕುಮಾರ್ ಕೋಶಾಧಿಕಾರಿ : ವಾಣಿ ಗಣೇಶ್ ಜತೆ ಕಾರ್ಯದರ್ಶಿ : ಶೈಲೇಶ್ ಕೋಟ್ಯಾನ್ ಸಂಘಟಕನಾ ಕಾರ್ಯದರ್ಶಿ : ರೇವತಿ ನವೀನ್ ವ್ಯಕ್ತಿತ್ವ ವಿಕಸನ ನಿರ್ದೇಶಕರು ವಿದ್ಯಾ ಕೇಶವ್ ಕ್ರೀಡೆ, ಆರೋಗ್ಯ ಮತ್ತು ಸಮಾಜಸೇವಾ ನಿರ್ದೇಶಕರು : ಶ್ರೀನಿವಾಸ್ ಸುವರ್ಣ ಕಲೆ ಮತ್ತು ಸಾಹಿತ್ಯ ನಿರ್ದೇಶಕರು […]
Read More
07-07-2019, 2:19 PM
ಸುರತ್ಕಲ್ : ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಸುರತ್ಕಲ್ ಘಟಕದ ಅತಿಥ್ಯದಲ್ಲಿ ಫಾದರ್ಸ್ ಡೇ ಯ ಪ್ರಯುಕ್ತ ಯುವವಾಹಿನಿ ಅಂತರ್ ಘಟಕ ಪುರುಷರಿಗಾಗಿ ” ಏರ್ ಬಿರ್ಸೆರ್ ನಳ ಪಾರಿವಾರೊಡು” ಅಡುಗೆ ಸ್ಪರ್ಧೆಯನ್ನು ಹಾಗೂ ವಿವಿಧ ಘಟಕಗಳ ಮಹಿಳೆಯರಿಗಾಗಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸೀರೆ ಮತ್ತು ಕೇಶವಿನ್ಯಾಸ ಸೌಂದರ್ಯ ಸ್ಪರ್ಧೆಯನ್ನು ಸುರತ್ಕಲ್ ತಾರಾ ಟವರ್ಸ್ ಸಭಾಂಗಣದಲ್ಲಿ ದಿನಾಂಕ 07.07.2019 ರಂದು ಅಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಪಡುಬಿದ್ರಿಯ ಹೋಟೆಲ್ ಉದ್ಯಮಿ ವೈ.ಸುಕುಮಾರ್ ಉದ್ಘಾಟಿಸಿದರು. […]
Read More
09-02-2019, 3:19 PM
ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಆಶ್ರಯದಲ್ಲಿ ಯುವವಾಹಿನಿ (ರಿ) ಸುರತ್ಕಲ್ ಘಟಕದ ಆತಿಥ್ಯದಲ್ಲಿ -ವಿಶುಕುಮಾರ್ ಪರಿಚಯ -ಸರಣಿ ಕಾರ್ಯಕ್ರಮವು ಪೆಬ್ರವರಿ 9ರಂದು ಯುವವಾಹಿನಿ ಸುರತ್ಕಲ್ ಘಟಕದ ವಾರದ ಸಭೆಯಲ್ಲಿ ನಡೆಯಿತು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಟಿ.ಶಂಕರ್ ಸುವರ್ಣ ಮತ್ತು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕರಾದ ಪ್ರದೀಪ್.ಎಸ್ .ಆರ್ ಸಸಿಹಿತ್ಲು ಭಾಗವಹಿಸಿದರು. ಟಿ. ಶಂಕರ್ ಸುವರ್ಣರವರು ,ವಿಶುಕುಮಾರವರ ಬರಹ, ಚಲನಚಿತ್ರ, ನಿರ್ದೇಶನ ಮತ್ತು ಅವರ ಜೀವನದ ಸಮಗ್ರ ಮಾಹಿತಿಯನ್ನುಸಭೆಗಿತ್ತರು. […]
Read More