ವಿಶುಕುಮಾರ್ ಬಗ್ಗೆ

ವಿಶುಕುಮಾರ್ ಪರಿಚಯ -ಸರಣಿ ಕಾರ್ಯಕ್ರಮ

ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಆಶ್ರಯದಲ್ಲಿ ಯುವವಾಹಿನಿ (ರಿ) ಸುರತ್ಕಲ್ ಘಟಕದ ಆತಿಥ್ಯದಲ್ಲಿ -ವಿಶುಕುಮಾರ್ ಪರಿಚಯ -ಸರಣಿ ಕಾರ್ಯಕ್ರಮವು ಪೆಬ್ರವರಿ 9ರಂದು ಯುವವಾಹಿನಿ ಸುರತ್ಕಲ್ ಘಟಕದ ವಾರದ ಸಭೆಯಲ್ಲಿ ನಡೆಯಿತು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಟಿ.ಶಂಕರ್ ಸುವರ್ಣ ಮತ್ತು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕರಾದ ಪ್ರದೀಪ್.ಎಸ್ .ಆರ್ ಸಸಿಹಿತ್ಲು ಭಾಗವಹಿಸಿದರು. ಟಿ. ಶಂಕರ್ ಸುವರ್ಣರವರು ,ವಿಶುಕುಮಾರವರ ಬರಹ, ಚಲನಚಿತ್ರ, ನಿರ್ದೇಶನ ಮತ್ತು ಅವರ ಜೀವನದ ಸಮಗ್ರ ಮಾಹಿತಿಯನ್ನುಸಭೆಗಿತ್ತರು. […]

Read More

ಯುವವಾಹಿನಿ(ರಿ.) ಬಜ್ಪೆ ಘಟಕದ ವತಿಯಿಂದ ಬಜ್ಪೆ ವಲಯದ ವಿಶುಕುಮಾರ್ ಭಾಷಣ ಸ್ಪರ್ಧೆ

ಬಜ್ಪೆ : ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ(ರಿ.) ಬಜ್ಪೆ ಘಟಕದ ಆತಿಥ್ಯದಲ್ಲಿ ಹಾಗೂ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದಲ್ಲಿ ಬಜ್ಪೆ ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಲಯ ಮಟ್ಟದ ವಿಶುಕುಮಾರ್ ಭಾಷಣ ಸ್ಪರ್ಧೆ ತಾ. 30.01.2019 ಬುಧವಾರ ಶ್ರೀ ನಾರಾಯಣಗುರು ಸಮುದಾಯ ಭವನ ಬಜ್ಪೆ ಇಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ರವೀಂದ್ರ ಪೂಜಾರಿ ಮಾಜಿ ಅಧ್ಯಕ್ಷರು, ಯುವವಾಹಿನಿ(ರಿ.) ಬಜ್ಪೆ ಘಟಕ ಈ ಕಾರ್ಯಕ್ರಮವನ್ನು‌ ಉದ್ಘಾಟಿಸಿ, ಕಲಾಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ವಿಶುಕುಮಾರ್ ಬಗ್ಗೆ ಮಾತನಾಡಿ […]

Read More

ವಿಶುಕುಮಾರ್ ಪರಿಚಯ ಸರಣಿ ಕಾರ್ಯಕ್ರಮ ಮಾಲಿಕೆ 19

ಎಕ್ಕಾರು ಪೆರ್ಮುದೆ : ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು, ವಿಶುಕುಮಾರ್ ಪ್ರಶಸ್ತಿ ಪ್ರಧಾನ ಸಮಿತಿ ಆಶ್ರಯದಲ್ಲಿ ಯುವವಾಹಿನಿ (ರಿ.), ಎಕ್ಕಾರು ಪೆರ್ಮುದೆ ಘಟಕದ ಆತಿಥ್ಯದಲ್ಲಿ ವಿಶು ಕುಮಾರ್ ಪರಿಚಯ ಸರಣಿ ಕಾರ್ಯಕ್ರಮ ಮಾಲಿಕೆ 19 ನಡೆಯಿತು. ಯುವವಾಹಿನಿ ರಿ‌. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ, ವಿಶುಕುಮಾರ್ ಪ್ರಶಸ್ತಿ ಪ್ರಧಾನ ಸಮಿತಿಯ ಮಾಜಿ ಸಂಚಾಲಕರಾದ ಕಿಶೋರ್ ಬಿಜೈ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಾಹಿತ್ಯ ಲೋಕದ ದಿಗ್ಗಜ ವಿಶುಕುಮಾರ್ ಅವರ ಸಾಹಿತ್ಯ ಕ್ಷೇತ್ರ, ರಾಜಕೀಯ ಕ್ಷೇತ್ರ, ಧಾರ್ಮಿಕ ಕ್ಷೇತ್ರ, […]

Read More

ಒಂದಿಷ್ಟು ಸಂಘಟನೆಗಾಗಿ, ಒಂದಿಷ್ಟು ವಿಶುಕುಮಾರ್ ನೆನಪಿಗಾಗಿ

ಯಡ್ತಾಡಿ : ಸಂಘಟನೆಯನ್ನು ಬಲಪಡಿಸುವ ಸಲುವಾಗಿ ಆರಂಭಿಸಿದ ‘ನಮ್ಮ ನಡೆ’ಯ ಮೂರನೇ ಕಾರ್ಯಕ್ರಮವನ್ನು, ‘ವಿಶುಕುಮಾರ್ ನೆನಪಿಗಾಗಿ’ ಸೈಬ್ರಕಟ್ಟೆ ದಾಳಾಡಿಮನೆ ನರಸಿಂಹ ಪೂಜಾರಿಯವರ ಮನೆಯಲ್ಲಿ 20-1-2019 ರಂದು ನಡೆಸಲಾಯಿತು. ನರಸಿಂಹ ಪೂಜಾರಿಯವರು ನಾರಾಯಣ ಗುರುಗಳಿಗೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ರಾಜ್ಯ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿಯವರು ನೆರೆದ ಜನರಿಗೆ ಅರ್ಥವಾಗುವ ರೀತಿಯಲ್ಲಿ ಫೆಬ್ರುವರಿ ೩ನೇ ತಾರೀಕಿನಂದು ನಡೆಯಲಿರುವ ಬಿಲ್ಲವ ಸಮಾವೇಶದ ಅಗತ್ಯ ಹಾಗೂ ಔಚಿತ್ಯದ ಬಗ್ಗೆ ವಿವರವಾಗಿ ಮನವರಿಕೆ ಮಾಡಿದರು. ಅವರನ್ನು ಯುವವಾಹಿನಿ(ರಿ) […]

Read More

ವಿಶುಕುಮಾರ್ ಪರಿಚಯ- ಸರಣಿ ಕಾರ್ಯಕ್ರಮ ಮಾಲಿಕೆ 23

ಬಜ್ಪೆ : ದಿನಾಂಕ 20.01.2019 ಆದಿತ್ಯವಾರ ಸಂಜೆ 05.00 ಕ್ಕೆ ಸರಿಯಾಗಿ ವಿಶುಕುಮಾರ್ ಪರಿಚಯ ಸರಣಿ ಕಾರ್ಯಕ್ರಮವನ್ನು ಯುವವಾಹಿನಿ(ರಿ.) ಬಜ್ಪೆ ಘಟಕದ ಆತಿಥ್ಯದಲ್ಲಿ ನಡೆಸಲಾಯಿತು. ವಿಶುಕುಮಾರ್ ಪರಿಚಯ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಕಿಶೋರ್ ಬಿಜೈ ಇವರು ಆಗಮಿಸಿ, ವಿಶು ಕುಮಾರ್‌ರವರ ಸಂಪೂರ್ಣ ಪರಿಚಯವನ್ನು ಸಭೆಯ ಮುಂದಿಟ್ಟರು. ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಕಾರ್ಯದರ್ಶಿಯಾದ ದಿನೇಶ್ ಸುವರ್ಣ ರಾಯಿ ಇವರು ಫೆಬ್ರವರಿ ತಿಂಗಳಲ್ಲಿ ನಡೆಯುವ ವಿಶುಕುಮಾರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವಿವರ […]

Read More

ವಿಶುಕುಮಾರ್ ಪರಿಚಯ ಸರಣಿ ಮಾಲಿಕೆ-16

ಉಪ್ಪಿನಂಗಡಿ : ಕನ್ನಡ ನಾಡು ನುಡಿಗೆ ವಿಶು ಕುಮಾರ್ ಅವರ ಕೊಡುಗೆ ಅನನ್ಯಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಪ್ರೇಮನಾಥ್ ಕೆ ತಿಳಿಸಿದರು. ಅವರು ದಿನಾಂಕ 30.12.2018 ರಂದು ಕುಕ್ಕುಜೆ ವಿಜಯ ಶಿಲ್ಪಿ ಇವರ ಮನೆಯಲ್ಲಿ ಯುವವಾಹಿನಿ ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಆಶ್ರಯದಲ್ಲಿ ವಿಶುಕುಮಾರ್ ಪರಿಚಯ ಸರಣಿ ಮಾಲಿಕೆ-16 ರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಸಾಹಿತಿಯಾಗಿ, ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ, ಕವನ ,ಕಥೆ ,ಲೇಖನ […]

Read More

ವಿಶುಕುಮಾರ್ ಧೀಮಂತ ಸಾಹಿತಿ : ದಿನೇಶ್ ಸುವರ್ಣ ರಾಯಿ

ಕಡಬ : ಯುವವಾಹಿನಿ (ರಿ.)ಕೇಂದ್ರ ಸಮಿತಿ ಮಂಗಳೂರು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ(ರಿ) ಕಡಬ ಘಟಕದ ಆತಿಥ್ಯದಲ್ಲಿ ದಿನಾಂಕ 16.12.2018 ರಂದು ನಡೆದ ಕಥೆ ನಾಟಕಕಾರ ನಟ ಕಾದಂಬರಿಗಾರ ಸಾಹಿತಿ ದಿವಂಗತ ವಿಶು ಕುಮಾರ್ ಅವರ ವಿಶುಕುಮಾರ್ ಪರಿಚಯ ಸರಣಿ ಕಾರ್ಯಕ್ರಮದ ಮಾಲಿಕೆ 11 ರ ಸಂಪನ್ಮೂಲ ವ್ಯಕ್ತಿಯಾಗಿ ಪ್ರಶಸ್ತಿ ಪ್ರದಾನ ಸಮಿತಿಯ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಮಾತನಾಡಿ , ವಿಶು ಕಮಾರ್ ರವರು ಒಬ್ಬ ಉತ್ತಮ ಸಾಹಿತಿ, ಅಂಕಣಕಾರ, ಸಿನಿಮಾನಟ, ನಿರ್ಧೇಶಕ, […]

Read More

ವಿಶುಕುಮಾರ್ ಪರಿಚಯ ಕಾರ್ಯಕ್ರಮ

ಬೆಂಗಳೂರು : ಯುವವಾಹಿನಿ ಕೇಂದ್ರ ಸಮಿತಿಯ ಹಾಗು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಇದರ ಆಶ್ರಯದಲ್ಲಿ ಸರಣಿ ಕಾರ್ಯಕ್ರಮವಾದ ವಿಶುಕುಮಾರ್ ಪರಿಚಯ ಕಾರ್ಯಕ್ರಮವನ್ನು ದಿನಾಂಕ 16-12-2018 ರಂದು ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಕಾನ್ಶಿರಾಮ್ ನಗರದಲ್ಲಿ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಶಂಕರ್ ಸುವರ್ಣರವರು ವಿಶುಕುಮಾರ್ ಅವರ ಸಾಹಿತ್ಯ, ಕಾದಂಬರಿ, ಸಿನಿಮಾ ಕ್ಷೇತ್ರದ ಸಾಧನೆಯನ್ನು ಘಟಕದ ಸದಸ್ಯರಿಗೆ ಪರಿಚಯಿಸಿದರು. ನ್ಯಾಯವಾದಿ ನವನೀತ್ ಹಿಂಗಾಣಿ ವಿಶುಕುಮಾರ್ ಬದುಕು ಸಾಹಿತ್ಯದ ಬಗ್ಗೆ ಬೆಳಕು ಚೆಲ್ಲಿದರು. […]

Read More

ವಿಶುಕುಮಾರ್ ಬರಹ ತೀಕ್ಷ್ಣತೆಯಿಂದ ಕೂಡಿತ್ತು: ಪ್ರೇಮನಾಥ್ ಬಂಟ್ವಾಳ

ಬೆಳ್ತಂಗಡಿ : ಶಾಂತ ಸ್ವಭಾವದ ವಿಶುಕುಮಾರ್ ತನ್ನ ಸುತ್ತಮುತ್ತಲಿನ ಜನರ ಜೀವನದ ಆಗುಹೋಗುಗಳ ಘಟನೆಗಳನ್ನು ಒಂದು ಚೌಕಟ್ಟಿನಲ್ಲಿ ಬರಹದ ರೂಪಕ್ಕೆ ತಂದರು ಅವರ ಬರಹ ತೀಕ್ಷ್ಣತೆ ಹಾಗೂ ನಿರ್ಭೀತಿಯಿಂದ ಕೂಡಿತ್ತು ಅವರು ಯಾರ ಮುಲಾಜಿಗೂ ಒಲಿಯುತ್ತಿರಲಿಲ್ಲ ತಮಗೆ ಅನಿಸಿದ್ದನ್ನು ಬರೆಯುತ್ತಿದ್ದರು. ಎಂದು ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಪ್ರೇಮನಾಥ್ ಬಂಟ್ವಾಳ್ ತಿಳಿಸಿದರು. ಅವರು ಶಾರದಾ ಮಂಟಪ ಗುರುವಾಯನಕೆರೆಯಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ(ರಿ.) ಬೆಳ್ತಂಗಡಿ ಘಟಕದ […]

Read More

ಕಾಯ ಅಳಿದರೂ ಜೀವಂತವಿರುವ ಅದಮ್ಯ ಚೇತನ ವಿಶುಕುಮಾರ್

  ಕೊಲ್ಯ: ವಿಶುಕುಮಾರ್ ಈ ನಾಡು ಕಂಡ ಮತ್ತು ನಮ್ಮ ಸಮಾಜದಲ್ಲಿ ಹುಟ್ಟಿಬೆಳೆದ ಓರ್ವ ಶ್ರೇಷ್ಠ ಕಾದಂಬರಿಕಾರ, ನಟ ,ನಿರ್ಮಾಪಕ ,ನಿರ್ದೇಶಕ ,ಪತ್ರಕರ್ತ ಮತ್ತು ಉತ್ತಮ ನಾಟಕಕಾರರಾಗಿದ್ದರು. ತಮ್ಮ ವೃತ್ತಿ ಜೀವನದಲ್ಲಿ ನೇರ ನಡೆ – ನುಡಿ ,ಪ್ರಾಮಾಣಿಕತೆ ಮತ್ತು ಶಿಸ್ತನ್ನು ಅಳವಡಿಸಿಕೊಂಡಿದ್ದ ಇವರು ,ಭ್ರಷ್ಟಾಚಾರದಿಂದ ಬೇಸತ್ತು, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಹುದ್ದೆಯನ್ನು ಅರ್ಧದಲ್ಲೇ ತೊರೆದು, ಅನ್ಯಾಯದ ವಿರುದ್ದ ಬಂಡಾಯದ ಬಾವುಟ ಹಾರಿಸಿದ ಓರ್ವ ಅಸಾಮನ್ಯ ವ್ಯಕ್ತಿ,ಇಂದು ಸತ್ತ ನಂತರವೂ ನಮ್ಮೆದುರು ಜೀವಂತವಿರುವ ‘ಮಹಾನ್ ಆತ್ಮ’ […]

Read More

ಸಂಪರ್ಕಿಸಿ : +91 99644 75220
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ :
ಸ್ಥಳ :

ಯುವವಾಹಿನಿ(ರಿ.) ಕುಪ್ಪೆಪದವು ಘಟಕ

ದಿನಾಂಕ : 18-08-2024
ಸ್ಥಳ : ಕುದ್ರೋಳಿ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
ಯುವವಾಹಿನಿ ಸಂಸ್ಥೆಯ ಮೂವತೈದು ವರುಷಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಗೌರವ

ಯುವವಾಹಿನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

  ಮಂಗಳೂರು : ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನವೆಂಬರ್ ಒಂದರಂದು ನಡೆಯುವ...

Sunday, 30-10-2022
error: Content is protected !!