ಯುವವಾಹಿನಿ(ರಿ) ಮಾಣಿ ಘಟಕದ ಸದಸ್ಯರ ವಾತ್ಸಲ್ಯ ಪಯಣ…ಸ್ನೇಹ ಸಿಂಚನ-2019

ಮಾಣಿ : ದೇಶ ಸುತ್ತು ಕೋಶ ಓದು ಎನ್ನುವ ಮಾತಿನಂತೆ ಅನುಭವ ವಿಸ್ತಾರ ಹಾಗೂ ಯುವವಾಹಿನಿ ಕುಟುಂಬದ ಸದಸ್ಯರೊಳಗಿನ ಸ್ನೇಹ, ವಾತ್ಸಲ್ಯದ ಗಟ್ಟಿತನಕ್ಕಾಗಿ ಯುವವಾಹಿನಿ (ರಿ.) ಮಾಣಿ ಘಟಕವು ಹಮ್ಮಿಕೊಂಡ ಸುಂದರ ಕಾರ್ಯಕ್ರಮವೇ “ಸ್ನೇಹ ಸಿಂಚನ- ಯುವವಾಹಿನಿ ಕುಟುಂಬದ ವಾತ್ಸಲ್ಯ ಪಯಣ”

ಸ್ನೇಹ ಸಿಂಚನ ಪಯಣ ಸಾಗಿದ್ದು ಉಡುಪಿ ಜಿಲ್ಲೆಯ ಬ್ರಹ್ಮಾವರದ ಕಿಂಗ್ ಆಫ್ ಕಿಂಗ್ಸ್ ದ್ವೀಪಕ್ಕೆ.ದಿನಾಂಕ 03-03-19 ಅದಿತ್ಯವಾರದಂದು ಬೆಳಿಗ್ಗೆ 63ಮಂದಿ ಯುವವಾಹಿನಿ ಸದಸ್ಯರೊಂದಿಗೆ ತಂಡವು ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ ಇವರ ನೇತೃತ್ವದೊಂದಿಗೆ ಒಂದು ದಿನದ ಹೊರಸಂಚಾರಕ್ಕೆ ಹೊರಟಿತು.

ಮಾತುಕತೆ, ನಗು,ನಲಿದಾಟಗಳೊಂದಿಗೆ ಆರಂಭಗೊಂಡ ಪಯಣವು ಮೊದಲಿಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯನ್ನು ತಲುಪಿತು.ಶ್ರೀ ಮಾತೆಯ ದರ್ಶನ ನಂತರ ಬೆಳಗ್ಗಿನ ಉಪಹಾರವನ್ನು ಅಲ್ಲೆ ಪೂರೈಸಿಕೊಂಡು ಬ್ರಹ್ಮಾವರಕ್ಕೆ ಯುವವಾಹಿನಿಯ ಪಯಾಣ ಮುಂದುವರೆಯಿತು. ಸಮುದ್ರ ಹಿನ್ನೀರಿನ ನಡುಗುಡ್ಡೆಯಾಗಿರುವ ಕಿಂಗ್ ಆಫ್ ಕಿಂಗ್ಸ್ ದ್ವೀಪಕ್ಕೆ ಕರೆದೊಯ್ಯಲು ಅದಾಗಲೇ ಬೋಟ್ ತಯಾರಾಗಿ ನಿಂತಿತ್ತು. ಯುವವಾಹಿನಿ ಸದಸ್ಯರೆಲ್ಲರೂ ಉತ್ಸಾಹದಿಂದಲೇ ಬೋಟ್ ಹತ್ತಿ ಕುಳಿತುಕೊಂಡರು.ಬೋಟ್ ಚಲನೆ ಪಡೆದು ದ್ವೀಪದೆಡೆಗೆ ಚಲಿಸಿತು. ಸುತ್ತಲಿನ ಜಲರಾಶಿ ಹಾಗೂ ತೆಂಗಿನ ತೋಟಗಳ ನೋಟವು ಸದಸ್ಯರೆಲ್ಲರಿಗೂ ವಿಶಿಷ್ಟವಾದ ಅನುಭವವನ್ನು ನೀಡಿದವು. ತೋಟದ ನಡುವೆ ನಿರ್ಮಿಸಲಾಗಿದ್ದ ನಾನಾ ರೀತಿಯ ಸಾಹಸಮಯ, ಕಸರತ್ತಿನ ಅವಕಾಶಗಳಲ್ಲಿ ನಾಮುಂದು ತಾಮುಂದು ಎಂದು ಪಾಲ್ಗೊಂಡು ಸಂತೋಷ ಪಟ್ಟರು,ತದನಂತರ ದ್ವೀಪದ ವ್ಯವಸ್ಥಾಪಕರು ಮತ್ತು ಯುವವಾಹಿನಿ ಘಟಕದ ಕಾರ್ಯದರ್ಶಿ ಮತ್ತು ಕೋಶಧಿಕಾರಿ ಕೆಲವು ಮನರಂಜನಾತ್ಮಕ ಆಟಗಳ ಮೂಲಕ ಸದಸ್ಯರೆಲ್ಲರ ಸಂಪೂರ್ಣ ಪಾಲ್ಗೊಳ್ಳುವಿಕೆಯನ್ನು ಸಾಧಿಸುವಲ್ಲಿ ಯಶಸ್ವಿಯಾದರು. ಮುಂದಕ್ಕೆ ಕಬಡ್ಡಿ, ಹಗ್ಗದ ಮೇಲಿನ ನಡಿಗೆ, ಜೋಕಾಲಿ ಇತ್ಯಾದಿಗಳಲ್ಲಿ ಆಡಿ ಸದಸ್ಯರೆಲ್ಲರು ಸಂತೋಷ ಪಟ್ಟರು.
ಮಧ್ಯಾಹ್ನದ ಭೋಜನ ನಂತರ ಮತ್ತೆ ಮೋಜಿನ ಆಟಗಳಲ್ಲಿ ಯುವವಾಹಿನಿ ಸದಸ್ಯರು ತೊಡಗಿಸಿಕೊಂಡರು. ಅಷ್ಟರಲ್ಲಾಗಲೇ ದ್ವೀಪದ ಸುತ್ತಲಿನ ನೀರಿನ ಮಟ್ಟವು ಗಣನೀಯವಾಗಿ ಇಳಿಕೆಯಾಗಿ ನೀರಾಟವಾಡುವ ಅವಕಾಶದ ಸಮಯ ಬಂದಾಗಿತ್ತು. ಎಲ್ಲಾ ಸದಸ್ಯರು ಅತ್ಯಂತ ಉತ್ಸಾಹದಿಂದ ತ್ರೋಬಾಲ್, ವಾಲಿಬಾಲ್, ಕಬಡ್ಡಿ, ಕ್ರಿಕೆಟ್ ಇತ್ಯಾದಿಗಳನ್ನು ನೀರಿನಲ್ಲೇ ಆಡುವ ಸ್ಥಳದೆಡೆಗೆ ತೆರಳಿದರು. ಸಂಜೆಯವರೆಗೆ ನೀರಿನಲ್ಲಿ ಆಡಿ, ಈಜಿ ಖುಷಿ ಪಟ್ಟರು. ಸಮಯ ಸಂಜೆ ನಾಲ್ಕು ಕಳೆಯುತ್ತಿದ್ದಂತೆ ನೀರಿನಿಂದ ಮೇಲೆ ಬರುವಂತೆ ವ್ಯವಸ್ಥಾಪಕರ ಸೂಚನೆಯಾಯಿತು. ಅದರಂತೆ ಮರಳಿ ದ್ವೀಪದೊಳಕ್ಕೆ ಪ್ರವೇಶಿಸಿದ ಸ್ನೇಹ ಸಿಂಚನದ ಸದಸ್ಯರು ಶವರ್ ಬಾತ್ ನ ಆನಂದವನ್ನು ಹಾಡಿನೊಂದಿಗೆ ಅನುಭವಿಸುತ್ತಾ ಸಂತಸಪಟ್ಟರು. ಸಂಜೆ ಗಂಟೆ ಐದಕ್ಕೆ ಸರಿಯಾಗಿ ಮನಸ್ಸಿಲ್ಲದ ಮನಸ್ಸಿನೊಂದಿಗೆ ಕಿಂಗ್ ಆಫ್ ಕಿಂಗ್ಸ್ ಗೆ ವಿದಾಯ ಹೇಳಿ ಮರಳಿ ಮಾಣಿಯೆಡೆಗೆ ಸದಸ್ಯರ ಮರು ಪ್ರಯಾಣ ಆರಂಭವಾಯಿತು. ಒಟ್ಟಿನಲ್ಲಿ ಕಿಂಗ್ ಆಫ್ ಕಿಂಗ್ಸ್ ದ್ವೀಪದಲ್ಲಿ ಒಂದು ದಿನದ ಮಟ್ಟಿಗೆ king ಗಳಾಗಿ ಸಂತೋಷ ಅನುಭವಿಸಿದ ಸವಿ ನೆನಪಿನೊಂದಿಗೆ ಯುವವಾಹಿನಿ ಯ ಸದಸ್ಯರು ಮರಳಿ ತಮ್ಮ ಮನೆಯನ್ನು ಸೇರಿದರು.

One thought on “ಯುವವಾಹಿನಿ(ರಿ) ಮಾಣಿ ಘಟಕದ ಸದಸ್ಯರ ವಾತ್ಸಲ್ಯ ಪಯಣ…ಸ್ನೇಹ ಸಿಂಚನ-2019

Leave a Reply to Pradeep kotian Cancel reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!