20-07-2026, 3:38 PM
ಕೊಲ್ಯ ಜುಲೈ 19 : ಯುವವಾಹಿನಿ (ರಿ) ಕೊಲ್ಯ ಘಟಕದ 2026-27 ನೇ ಸಾಲಿನ ಅಧ್ಯಕ್ಷರಾಗಿ ಜೀವನ್ ಕೊಲ್ಯ ಆಯ್ಕೆಯಾಗಿದ್ದಾರೆ 2026-27 ನೇ ಸಾಲಿನ ಕಾರ್ಯಕಾರಿ ಸಮಿತಿಅಧ್ಯಕ್ಷರು : ಜೀವನ್ ಕೊಲ್ಯಪ್ರಥಮ ಉಪಾಧ್ಯಕ್ಷರು : ಜೀವನ್ ಬೆರಿಕೆದ್ವಿತೀಯ ಉಪಾಧ್ಯಕ್ಷರು : ಲತೀಶ್ ಪಾಪುದಡಿಕಾರ್ಯದರ್ಶಿ : ಮುಕೇಶ್ ಕಿನ್ಯಜೊತೆ ಕಾರ್ಯದರ್ಶಿ : ಭಾಸ್ಕರ್ ಮಡ್ಯಾರ್ಕೋಶಾಧಿಕಾರಿ : ಅನಿತಾ ಸುಂದರ್ ನಿರ್ದೇಶಕರುನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಶಶಿಕಾಂತ್ ಪರ್ಯಾತ್ತೂರ್ವ್ಯಕ್ತಿತ್ವ ವಿಕಸನ ನಿರ್ದೇಶಕರು : ಸವಿತಾ ಬಂಗೇರಕ್ರೀಡಾ […]
Read More
19-07-2026, 2:00 PM
ಕೊಲ್ಯ ಜುಲೈ19 : ಯುವವಾಹಿನಿ (ರಿ) ಕೊಲ್ಯ ಘಟಕದ 2026–27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರುಪೂಜೆಯೊಂದಿಗೆ ಘಟಕದ ಅಧ್ಯಕ್ಷ ನಿತಿನ್ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 19.07.2026ರಂದು ನಡೆಯಿತು ಕಾರ್ಯಕ್ರಮವನ್ನು ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ) ಕೊಲ್ಯ–ಸೋಮೇಶ್ವರದ ಅಧ್ಯಕ್ಷ ಶೇಷಪ್ಪ ಬೈದ್ಯಮನೆ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯುವವಾಹಿನಿಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ, ಕಳೆದ ಒಂದು ವರ್ಷದ […]
Read More
19-07-2026, 2:00 PM
ಕೊಲ್ಯ, ಜುಲೈ 19: ಯುವವಾಹಿನಿ (ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ ಹಾಗೂ ಲೇಖಕರಾದ ವಿದ್ವಾನ್ ದಿ. ರಮನಾಥ್ ಕೋಟೆಕಾರ್ ಅವರ ಜನ್ಮದಿನದ ಅಂಗವಾಗಿ ರಾಜ್ಯ ಮಟ್ಟದ ಆನ್ಲೈನ್ ಕಥೆ ಮತ್ತು ಕವನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದಲೂ ಉತ್ತಮ ಸ್ಪಂದನೆ ದೊರೆತಿದ್ದು, ಕಥಾ ವಿಭಾಗದಲ್ಲಿ 133 ಹಾಗೂ ಕವನ ವಿಭಾಗದಲ್ಲಿ 231 ಕೃತಿಗಳು ಸಲ್ಲಿಕೆಯಾಗಿದ್ದವು. ಕಥಾ ವಿಭಾಗದಲ್ಲಿ ಡಾ. ಸುರೇಶ್ ನೆಗಳಗುಳಿ (ಮಂಗಳೂರು) ಅವರ […]
Read More
19-07-2026, 2:00 PM
ಅನಾವರಣಮಂಗಳೂರಿನಲ್ಲಿ ಜುಲೈ ಎಂದರೆ ಮಳೆಗೊಂದು ಹಬ್ಬ. ಕುದ್ರೋಳಿಯ ಕಿರಿದಾದ ಗಲ್ಲಿಗಳಲ್ಲಿ ನೀರು ಹರಿಯುತ್ತಿತ್ತು, ಆಟೋಗಳ ಹಾರ್ನ್, ತರಕಾರಿ ಮಾರುವವರ ಕೂಗು, ದೇವಸ್ಥಾನದ ಗಂಟೆ – ಎಲ್ಲವೂ ಸೇರಿ ಒಂದು ರಾಗ. ಆ ರಾಗದ ನಡುವೆ “ಕಲಾದರ್ಶಿನಿ” ಆರ್ಟ್ ಗ್ಯಾಲರಿ ಮಾತ್ರ ಮೌನವಾಗಿತ್ತು.ಸಂಜೆ 6:15. ಗ್ಯಾಲರಿಯೊಳಗೆ ಮೀರಾ ಒಬ್ಬಳೇ. ವಯಸ್ಸು 32, ಆದರೆ ಕಣ್ಣುಗಳಲ್ಲಿ 50 ವರ್ಷದ ಆಯಾಸ. ಮುಂದೆ 6 ಅಡಿ ಎತ್ತರದ ಖಾಲಿ ಕ್ಯಾನ್ವಾಸ್. ಪಕ್ಕದ ಟೇಬಲ್ ಮೇಲೆ ಒಣಗಿ ಬಿರುಕು ಬಿಟ್ಟ ಬ್ರಶ್ಗಳು, ಅಕ್ರಿಲಿಕ್ […]
Read More
19-07-2026, 1:00 PM
ಊರ್ಮಿಳೆಯ ವ್ಯಥೆ ಅರಮನೆಯ ವೈಭೋಗ ಸಾಕೆನಿಸಿತು ಊರ್ಮಿಳೆಗೆ |ಪತಿಯ ಸಾಂಗತ್ಯ ಬೇಕೆನಿಸಿತು ಬಾಳ್ವೆಗೆ ||ಕೋಸಲದ ಕನ್ಯಾಮಣಿ ಬೆದರಿ ನಿಂತಳು |ಅಲಗಿನರಮನೆಯಲ್ಲಿ ಬೆಂದoತಾದಳು.|| ಲಕ್ಷ್ಮಣನ ಸಹಚಾರಿಣಿಯೆoಬ ಹೆಸರಿಲ್ಲ |ಸಂಬಂಧಗಳ ಹೊರತಾಗಿ ಅಸ್ಮಿತೆಯ ವರವಿಲ್ಲ ||ಜಗದ ಕಣ್ಣಿಗೆ ದುರಂತ ನಾಯಕಿ ಇವಳು |ಮೌನದಲ್ಲೇ ಸಹಿಸಿ ಕನಸುಗಳ ಬಲಿಕೊಟ್ಟವಳು || ಇವಳು ಬಯಸದೆ ಬಂದದ್ದು ಚಿರನಿದ್ರೆಯೋಗ |ಚಿರತಪಸ್ವಿಯಾಗಿ ಕಳೆದಳು ಜೀವನದ ಬಹುಭಾಗ ||ಒಡೆಯನ ಕರ್ತವ್ಯಪಾಲನೆಗೆ ಅಡ್ಡಿಬರುತ್ತಿರಲಿಲ್ಲ |ಆಲಸ್ಯತನದ ನಿದ್ದೆಗೆ ಮನವೊಪ್ಪುತ್ತಿರಲಿಲ್ಲ || ಪಾತ್ರದ ಹಿಂದಿದೆ ಮೌನ ಸಂಭಾಷಣೆಯ ದೃಶ್ಯಾವಳಿಗಳು |ಸಂಸಾರ ಬೆಳಗುವ […]
Read More
09-07-2026, 8:00 AM
ಕೊಲ್ಯ, ಜುಲೈ 9: ಯುವವಾಹಿನಿ (ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಶ್ರೀ ದುರ್ಗಾಪರಮೇಶ್ವರ ದೇವಸ್ಥಾನ, ಕುಂಪಲದಲ್ಲಿ ಗುರುವಾರ ಸಂಜೆ ನಡೆದ “ಗುರು ಆರಾಧನೆ – ಗುರು ಸಂದೇಶ” ಕಾರ್ಯಕ್ರಮವು ಭಕ್ತಿಭಾವದಿಂದ ಹಾಗೂ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ಭವಾನಿ ಶಂಕರ್ ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಬಳಿಕ ಯುವವಾಹಿನಿ ಘಟಕದ ಸದಸ್ಯರು ಹಾಗೂ ಕ್ಷೇತ್ರದ ಭಕ್ತರಿಂದ ಸುಮಧುರ ಗುರು ಭಜನಾ ಸಂಕೀರ್ತನೆ ನಡೆಯಿತು. ಭಜನೆಯ ನಂತರ ಕ್ಷೇತ್ರದ ಪ್ರಧಾನ ದೇವರಿಗೆ ಮಹಾಪೂಜೆ ನೆರವೇರಿಸಿ, ಶ್ರೀ ನಾರಾಯಣ […]
Read More
27-05-2026, 8:00 PM
ಕೊಲ್ಯ: ತುಳುನಾಡಿನ ಹೆಮ್ಮೆಯ ಕ್ರಾಂತಿಕಾರಿ ವೀರ, ಬ್ರಿಟಿಷರ ವಿರುದ್ಧ ರಣಕಹಳೆ ಊದಿದ ಇತಿಹಾಸ ಪುರುಷ ಮಂಜ ಬೈದ್ಯರ 190ನೇ ಪುಣ್ಯತಿಥಿ ಪ್ರಯುಕ್ತ ಸಂಸ್ಮರಣಾ ಕಾರ್ಯಕ್ರಮವು ಮೇ 27ರಂದು ಇಲ್ಲಿನ ಕೊಲ್ಯ ಬಿಲ್ಲವ ಸಂಘದ ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ–ಸೋಮೇಶ್ವರ ಇದರ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ್ ಸುವರ್ಣ ಕನೀರುತೋಟ ಅವರು ದೀಪ ಪ್ರಜ್ವಲಿಸಿ, ಮಂಜ ಬೈದ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ […]
Read More
17-05-2026, 9:00 PM
ಕೊಲ್ಯ : ಬ್ರಹ್ಮಶ್ರೀ ನಾರಾಯಣಗುರು ಧ್ಯಾನ ಮಂದಿರದಲ್ಲಿ, ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ವಿಶೇಷ ‘ಗುರು ಪೂಜೆ’ ಹಾಗೂ ಭಜನಾ ಕಾರ್ಯಕ್ರಮವು ಅತ್ಯಂತ ಶ್ರದ್ಧಾಭಕ್ತಿ ಮತ್ತು ಸಂಭ್ರಮದೊಂದಿಗೆ 17.05.2026ರಂದು ಜರುಗಿತು. ಘಟಕದ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡ ಸತತ ಎರಡನೇ ವರ್ಷದ “ಶಿವಗಿರಿ ಯಾತ್ರೆ” ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ, ಕೊಲ್ಯ ಘಟಕದ ಆತಿಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಮೂಡಿಬಂದ ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷಿ “ಸಖೀ ಸಂವಾದ – 2026” ಕಾರ್ಯಕ್ರಮಗಳ ಯಶಸ್ಸಿನ ಕೃತಜ್ಞತಾ ರೂಪವಾಗಿ […]
Read More
17-05-2026, 2:00 PM
ಕೊಲ್ಯ : ಮಾನವ ಸೇವೆಯೇ ಮಾಧವ ಸೇವೆ ಎಂಬ ಧ್ಯೇಯದೊಂದಿಗೆ, ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಸೋಮೇಶ್ವರ ಮತ್ತು ಯುವವಾಹಿನಿ (ರಿ.) ಕೊಲ್ಯ ಘಟಕದ ಜಂಟಿ ಆಶ್ರಯದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಎರಡು ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಮೂಲಕ “ಸಹಾಯ ಹಸ್ತ” ಚಟುವಟಿಕೆಯನ್ನು ಹಮ್ಮಿಕೊಳ್ಳಲಾಯಿತು. ದಿನಾಂಕ 17-05-2026 ರಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಇಬ್ಬರು ತಾಯಂದಿರ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕಾಗಿ ಧನಸಹಾಯ ಹಸ್ತಾಂತರಿಸಲಾಯಿತು: ಸೋಮೇಶ್ವರ ನಿವಾಸಿ ದಾಮೋದರ ಪೂಜಾರಿ ಇವರ ಧರ್ಮಪತ್ನಿಯವರ ಚಿಕಿತ್ಸಾ ವೆಚ್ಚಕ್ಕಾಗಿ. […]
Read More
14-05-2026, 9:00 PM
ಕೋಟೆಕಾರ್: ಯುವವಾಹಿನಿ (ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ದಿನಾಂಕ 14-05-2026 ನೇ ಗುರುವಾರ ಸಾಯಂಕಾಲ 7 ಗಂಟೆಗೆ, ನೆತ್ತಿಲ ಕೋಟೆಕಾರಿನಲ್ಲಿರುವ ಘಟಕದ ಕಾರ್ಯದರ್ಶಿ ಸೌಮ್ಯ ಯೋಗೀಶ್ ರವರ ಗೃಹದಲ್ಲಿ ಗುರು ಸ್ಮರಣೆ-ಗುರು ಭಜನೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಯೋಗೀಶ್ ಕೋಟೆಕಾರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಭಕ್ತಿಪೂರ್ವಕ ಚಾಲನೆ ನೀಡಿದರು. ಘಟಕದ ಸದಸ್ಯರಿಂದ ಸುಮಧುರ ಗುರು ಭಜನಾ ಸಂಕೀರ್ತನೆ ನೆರವೇರಿತು.ಭಜನೆಯ ಬಳಿಕ ಗುರುಗಳಿಗೆ ಮಹಾಪೂಜೆ ನಡೆದು, ಕಾಫಿ ತೀರ್ಥ ಪ್ರಸಾದ ವಿತರಿಸಲಾಯಿತು. ಘಟಕದ ಮಾಜಿ […]
Read More