ಯುವವಾಹಿನಿ (ರಿ) ಯಡ್ತಾಡಿ ಘಟಕದ ವತಿಯಿಂದ

ನಮ್ಮ ನಡೆ, ಸ್ವಚ್ಛತೆ ಕಡೆ : ಯಡ್ತಾಡಿ ಘಟಕ

ಯಡ್ತಾಡಿ : ಸ್ವಾತಂತ್ರ್ಯ ದಿನದಂದು ಕೇವಲ ಧ್ವಜ ಹಾರಿಸಿ ಸಿಹಿ ತಿಂಡಿ ತಿಂದು ಮನೆಗೆ ಮರಳುವ ಬದಲು, ನಾಲ್ಕು ಜನರಿಗೆ ಉಪಯೋಗವಾಗುವ ಅರ್ಥಪೂರ್ಣ ಕಾರ್ಯಕ್ರಮವನ್ನು ಮಾಡುವುದು, ಯುವವಾಹಿನಿ (ರಿ) ಯಡ್ತಾಡಿ ಘಟಕದ ಪ್ರತಿ ವರುಷದ ಕಾರ್ಯಕ್ರಮ. ಈ ಬಾರಿ ಮಾಡಲೇ ಬೇಕಾದ ಕೆಲಸ ಎಲ್ಲರ ಕಣ್ಣೆದುರೇ ಇದ್ದರೂ, ಯಾರಿಗೂ ಈ ಮೊದಲು ಅನುಕೂಲಕರ ಸಮಯ ಒದಗಿ ಬಂದಿರಲಿಲ್ಲ. ಯಡ್ತಾಡಿಯಿಂದ ಕಂಬಳಗದ್ದೆಗೆ ಹೋಗುವ ಕಾಂಕ್ರೀಟ್ ರೋಡಿನ ಎರಡು ಬದಿಗಳಲ್ಲಿ ಹಬ್ಬಿದ ಗಿಡ ಮರ ಹಾಗು ಕಸ ಕಡ್ಡಿಗಳು, ಅದಾಗಲೇ ಪಾಚಿಯನ್ನು ಬೆಳೆಸಿ, ನಾಲ್ಕೈದು ಜನ ಆಯ ತಪ್ಪಿ ಬಿದ್ದಿದ್ದರು. ಹಾಗಾಗಿ ಯುವವಾಹಿನಿಯಿಂದ ಈ ರಸ್ತೆಯನ್ನು ಮತ್ತೆ ಚೊಕ್ಕವಾಗಿ, ಸುರಕ್ಷವಾಗಿ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.

ಈ ವರುಷ ನಾಗರಪಂಚಮಿ ಹಾಗೂ ಸ್ವಾತಂತ್ರ್ಯ ದಿನ ಒಂದೇ ದಿನ ಬಂದಿರುವುದರಿಂದ ಸದಸ್ಯರ ಪಾಲ್ಗೊಳ್ಳುವಿಕೆಯೇ ದೊಡ್ಡ ಸಮಸ್ಯೆಯಾಗಿತ್ತು. ಆದರೂ ಕೂಡ ನಿರೀಕ್ಷೆಗೂ ಮೀರಿ ಸರಿ ಸುಮಾರು ಮುವತ್ತು ಮಂದಿ ಈ ಕಾರ್ಯದಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಹಿಡಿದ ಕೆಲಸವನ್ನು ಬೇಗನೆ ಪೂರೈಸುವ ಸಲುವಾಗಿ, ನಮ್ಮ ಘಟಕದವರೆ ಆದ ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಕಡೆಯಿಂದ ಗಿಡಗಳನ್ನು ಕತ್ತರಿಸುವ ಕಟಿಂಗ್ ಮಷೀನ್ ತರಿಸಿ ಕೊಟ್ಟರು. ನಾಗರ ಪಂಚಮಿಗೆ ಬಂದ ಅಸಂಖ್ಯಾತ ಮಂದಿ ಯುವವಾಹಿನಿ ಸದಸ್ಯರ ಕೆಲಸವನ್ನು ಮನಸಾರೆ ಮೆಚ್ಚಿ ಹೊಗಳಿಕೆಯ ಉತ್ಸಾಹವನ್ನು ನೀಡಿದರು. ರಸ್ತೆಯನ್ನು ಸ್ವಚ್ಛಗೊಳಿಸಿ ಎರಡೂ ಬದಿಗಳಿಗೆ ಜಾರದಂತೆ ಸುಣ್ಣವನ್ನು ಹಾಕಿದಾಗ ಅದು ಹೊಸ ರೂಪವನ್ನೇ ಪಡೆದುಕೊಂಡಿತ್ತು.


ರಸ್ತೆ ಕೆಲಸ ಪೂರ್ಣಗೊಂಡ ನಂತರ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಕರೆಸಿ, ನಮ್ಮ ಕೆಲಸದ ವಿವರ ನೀಡಿ, ಮುಂದೆ ಮಾಡಬೇಕಿರುವ ಕೆಲಸದ ಮನವರಿಕೆ ಮಾಡಲಾಯಿತು. ನಮ್ಮ ಕೆಲಸದಿಂದ ಸಂತೃಪ್ತಿ ಹೊಂದಿದ ಅಧ್ಯಕ್ಷರು ಪಂಚಾಯತ್ ಕಡೆಯಿಂದ ರಸ್ತೆಯ ಎರಡು ಬದಿಗು ಮಣ್ಣು ತುಂಬಿಸುವ ಭರವಸೆ ನೀಡಿದರು. ಯುವವಾಹಿನಿಯ ಸಮಾವೇಶದಲ್ಲಿ ಮಾನ್ಯ ಸಚಿವರೊಬ್ಬರು ಹೇಳಿದಂತೆ, ಸರಕಾರ ಮಾಡಬೇಕಿರುವ ಕೆಲಸ ಕಾರ್ಯಗಳನ್ನು ಮಾಡುವ ಸಂಘ ಸಂಸ್ಥೆಗಳು, ಸರಕಾರದ ಸವಲತ್ತುಗಳನ್ನು ಕೇಳಿ ಪಡೆಯುವ ಕೆಲಸ ಕೂಡಾ ಮಾಡಬೇಕಿದೆ.
ರಸ್ತೆಯ ಕೆಲಸ ಮುಗಿದ ನಂತರ ಸ್ವಚ್ಛತಾ ತಂಡ ಅನಾಥವಾಗಿರುವ ರುದ್ರಭೂಮಿಯತ್ತ ನಡೆಯಿತು. ಅಲ್ಲಿಯೂ ಒಂದು ಘಂಟೆಯ ಕಾಲ ಎಲ್ಲರೂ ಸೇರಿ, ಸಾಧ್ಯವಾದಷ್ಟು ಸ್ವಚ್ಛತೆ ನಡೆಸಿ, ರುದ್ರಭೂಮಿಗೆ ಹೊಸ ರೂಪ ನೀಡಲಾಯಿತು.

ಸ್ವಚ್ಛತಾ ಕಾರ್ಯಕ್ರಮ ಮುಗಿದ ನಂತರ, ಪಾಲ್ಗೊಂಡ ಎಲ್ಲ ಸದಸ್ಯರಿಗೂ ಪ್ರಕೃತಿಯ ಮಡಿಲಲ್ಲಿ ಊಟದ ವ್ಯವಸ್ಥೆ ಮಾಡಿ ಸಂಘಟನೆಯನ್ನು ಬಲಪಡಿಸುವ ಕಾರ್ಯವನ್ನೂ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಯಡ್ತಾಡಿ ಘಟಕದ ಅಧ್ಯಕ್ಷರಾದ ಸತೀಶ್ ಕುಮಾರ್ ಸ್ವಾಗತಿಸಿದರು , ಕಾರ್ಯದರ್ಶಿ ಚಂದ್ರ ಯಡ್ತಾಡಿ ವಂದಿಸಿದರು ,

2 thoughts on “ನಮ್ಮ ನಡೆ, ಸ್ವಚ್ಛತೆ ಕಡೆ : ಯಡ್ತಾಡಿ ಘಟಕ

  1. ಸಮಾಜದ ಋಣ ಸಂದಾಯದ ಕೆಲಸ ,ಉತ್ತಮ ಪರಿಸರ, ಆರೋಗ್ಯಕರ ವಾತಾವರಣ ನಿರ್ಮಾಣ ಹಾಗೂ ಸ್ವಚ್ಚತಾ ಜಾಗ್ರತಿ ಮೂಡಿಸುವಲ್ಲಿ ನಿಮ್ಮ ಕಾರ್ಯ ಶ್ಲಾಘನೀಯ ಅಭಿನಂದನೆಗಳು….

Leave a Reply to ಅಶೋಕ್ ಕುಮಾರ್ ಪಡ್ಪು ಉಪ್ಪಿನಂಗಡಿ Cancel reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!