ಸಿಂಚನ ವಿಶೇಷಾಂಕ : 2017

ಕನವರಿಸುವುದೇ ಬಾಲ್ಯ ಮತ್ತೊಮ್ಮೆ…….: – ನಿರ್ಮಲ ಗೋಪಾಲ್

ಮಳೆರಾಯಗೆ ಅಡ್ಡ ಹಿಡಿಯಬೇಕಿದ್ದ
ಬಣ್ಣಬಣ್ಣದ ಛತ್ರಿಯ ತುಂಬೆಲ್ಲಾ…
ಕುಂಟಲ ಹಣ್ಣುಗಳದ್ದೇ ಕಾರುಬಾರು…
ನಾ ನೆನದರೂ ಹಣ್ಣು
ನೆನೆಯಬಾರದೆಂಬ ಕಕ್ಕುಲತೆ…

ಅಮ್ಮ ಬೈಯುವಳೆಂದು ಹಸಿರೆಲೆಗಳ ತಿಂದು
ಕುಂಟಲ ಬಣ್ಣವ ಮಾಸಿಸಿ… ನಾಲಗೆ ಬಿಳಿ ಮಾಡಿದ
ನೆನೆದರೆ ಕನವರಿಸದೇ…ಬಾಲ್ಯ..ಇನ್ನೊಮ್ಮೆ…?

ಗೆಳತಿಯರೊಡನೆ ಓಡೋಡಿ
ಜೊತೆಗೂಡಿ ಗುಡ್ಡ ತೋಡು ದಾಟಿ
ಪ್ರೀತಿಯ ಶಾಲೆಗೆಂದು ಪ್ರೀತಿಯಿಂದ ಬರುತ್ತಿದ್ದ
ಅಂದಿನ ಮನಸ್ಸು ಇಂದಿನ ಮಕ್ಕಳಿಗಿಹುದೇ…!

ಶಾಲೆಗಿಹುದು ಕಲ್ಲು ಮುಳ್ಳ …ಗುಡ್ಡದ ಹಾದಿ…
ಆದರೆ… ಈ ದಿನಗಳಲ್ಲಿ… ಎಂದೂ ಅನ್ನಿಸಲಿಲ್ಲ…
ಕಲ್ಲು ಮುಳ್ಳೆಂದು….
ಅದರೀಗ ಮನೆಯ ಮೆಟ್ಟಲಿಳಿಯಬೇಕೆಂದರೆ
ಬೇಕು ಕಾಲಿಗೆರಡು ಜೋಡು…!

ದಾರಿಯುದ್ದಕ್ಕೂ ಪಕ್ಕದ ಮನೆಯಲ್ಲಿ
ಎಂದೋ ನೋಡಿದ ಗೆಳತಿಯ
ಸಿನಿಮಾ ಕತೆಗಳಿನ್ನೂ ಮನಸ್ಸಲ್ಲಿವೆ…
ಕಣ್ಣೆದುರು ಓಡುತ್ತಲ್ಲಿವೆ…

ಹಾದಿಯಲ್ಲಿ ಒಂದು ಗುಂಪಿನ
ಗೆಳತಿಯರು ಕಣ್ಮರೆಯಾದರೆ…
ಕೂಗುತ್ತಿದ್ದ ಕೂ…ಕೂ…
ಇನ್ನೂ… ಕಿವಿಯಲ್ಲಿ ಗುಂಯ್ ಗುಟ್ಟುತ್ತಿವೆ…
ಎರಡು ಜಡೆ ಹೆಣೆದು… ನೀಲಿ ಬಿಳಿ ಅಂಗಿಯ
ಶಾಲೆಗೋಡುತ್ತಿದ್ದ ಸೊಬಗ ಹೇಳತೀರದು…

ಆಗಿನ ಶಕ್ತಿಮಾನ್
ಈಗಿನ ಡೋರೆಮಾನ್‌ಗೆ
ಎಂದಾದರೂ ಸಮನಾದನೇ…?

ಅಂದಿನ ಕುಂಟ ಬಿಲ್ಲೆಗಳಿಂದು
ಕುಂಟಿಯೇ ಹೋಗಿವೆ…!
ಕಲ್ಲಾಟಕ್ಕಂತೂ ಕಲ್ಲುಗಳ ಹೆಕ್ಕುವವರಾರು…?
ಹುಡುಕುವವರಾರು…?

ನಿರ್ಮಲಾ ಗೋಪಾಲ್ ,ಬಜ್ಪೆ 94493 86373

10 thoughts on “ಕನವರಿಸುವುದೇ ಬಾಲ್ಯ ಮತ್ತೊಮ್ಮೆ…….: – ನಿರ್ಮಲ ಗೋಪಾಲ್

  1. ಕುಂಟಲ, ಕುಂಟೆ ಬಿಲ್ಲೆಗಳ ಜೊತೆಗೆ ಕಳೆದು ಹೋದ ಅದೆಷ್ಟೋ ಬಾಲ್ಯದ ಕನಸುಗಳನ್ನು ಹುಡುಕಬೇಕಾಗಿದೆ…..ಹೆಕ್ಕಿ ಕೊಡುವವರು ಯಾರು….
    ಕವಿತೆ ಚೆನ್ನಾಗಿ ಮೂಡಿ ಬಂದಿದೆ.

  2. Kuntal da nenapanaga balyada aa savi nennepulu onjonje flashback du barodundu.

    Eini bondolu,jambolu,thojank champakayi,pejakayi anchene yetho soppu phalokulu thuyerijji

  3. ಮತ್ತೆ ಮತ್ತೆ ನೆನೆದರೆ ಮರಳಿ ಬಾರದ ಆ ದಿನಗಳನ್ನು
    ಮಣ್ಣು ಸೇರುವ ತನಕ ಮರೆಯಲು ಸಾಧ್ಯವಿಲ್ಲ

    ಬಾಲ್ಯದ ಆ ಭಾವನೆಗಳನ್ನು ಕಲ್ಪಿಸುವ ಕ್ಷಣಗಳು
    ನೆನೆಸಿಕೊಂಡರೆ ಬರುವ ಆ ನಗು ತುಂಬಾ ಚೆನ್ನ

Leave a Reply to Mahesh Cancel reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!