ಸಿಂಚನ

ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆ ಬಿಡುಗಡೆ

ಮಂಗಳೂರು : ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆಯ ಫೆಬ್ರವರಿ ತಿಂಗಳ ಸಂಚಿಕೆಯನ್ನು ದಿನಾಂಕ 17.02.2019 ರಂದು ಮಂಗಳೂರು ಪುರಭವನದಲ್ಲಿ ನಡೆದ ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಭಾಸ್ಕರ್ ಕೆ, ವಕೀಲರಾದ ವಿಜಯಲಕ್ಷ್ಮಿ ವಿಶುಕುಮಾರ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕರಾಂ ಪೂಜಾರಿ, ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್, […]

Read More

ಗೌರವ ಸಂಪಾದಕರ ಮಾತು : ಜಯಂತ ನಡುಬೈಲು

ಸಾದ್ವಿಯೊಬ್ಬರ ಮಾತು ನೆನಪಾಗುತ್ತಿದೆ, ಎಲೆಯೊಂದು ಉದುರುತ್ತಾ ಹೇಳಿತು ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಅರಿತು ನಡೆಯುವುದೇ ಜೀವನ’ ಹೌದು, ಒಂದು ಮರಕ್ಕೆ ಮಣ್ಣಿನಿಂದ ಪೋಷಕಾಂಶಗಳು ಯಾವತ್ತಿನವರೆಗೆ ದೊರೆಯುತ್ತದೊ ಅಲ್ಲಿಯವರೆಗೆ ಮರ ಸುದೃಡವಾಗಿ ಬೆಳೆಯುತ್ತದೆ, ನಮ್ಮ ಸಮಾಜದ ನೊಂದ ಮನಕ್ಕೆ ಸಾಂತ್ವಾನದ ನೆರಳ ನೀಡಲು ಬಿತ್ತಿದ ಬೀಜ ಗಿಡವಾಗಿ, ಮರವಾಗಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅದೆಷ್ಟೋ ವರುಷದಿಂದ ಎಲ್ಲರೂ ಜೊತೆಯಾಗಿ ಧಾರೆ ಎರದ ನೀರಿನಿಂದ ನಳನಳಿಸುತ್ತಿದೆ. ನಮಗಿರುವುದು ಒಂದೇ ಬಳಲಿದವರಿಗೆ ನೆರಳು, ಹಸಿದವರಿಗೆ ಹಣ್ಣು, ಸಮಾಜದ ಯುವಕರು […]

Read More

ಸಂಪಾದಕರ ಮಾತು : ರಾಜೇಶ್ ಸುವರ್ಣ

ಒಮ್ಮೆ ಸೂರ್ಯ ಕೇಳಿದನಂತೆ ನಾನು ಮಾಡುವ ಕೆಲಸ ಯಾರು ಮಾಡ ಬಲ್ಲಿರಿ’ ಎಂದು, ಆಗ ಭೂಮಿಯೂ ಸೇರಿ ಎಲ್ಲವೂ ಸ್ತಬ್ದವಾಗಿತ್ತು ಚಿತ್ರಪಟದಂತೆ. ಅಷ್ಟರಲ್ಲಿ ಭೂಮಿಯಲ್ಲಿದ್ದ ಪುಟ್ಟ ಹಣತೆಯೊಂದು ಹೇಳಿತು. ಸೂರ್ಯ ನೀನು ಮಾಡುವ ಕೆಲಸ ನಾನು ಮಾಡಬಲ್ಲೆನು ಎಂದು. ಹೌದು ಪ್ರತಿಯೊಬ್ಬರಲ್ಲೂ ಒಂದು ಶಕ್ತಿ ಇದೆ, ಯುಗಯುಗಗಳು ಸೇರಿ ಮಹಾಯುಗವಾಗುವಂತೆ ಶಕ್ತಿಗಳ ಕ್ರೋಡೀಕರಣ ಅಶ್ವಶಕ್ತಿಯ ಹುಟ್ಟಿಗೆ ಕಾರಣವಾಗುತ್ತದೆ. ಇಂದು ಯುವವಾಹಿನಿಯಲ್ಲೂ ಇದೇ ನಡೆದು ಹೋಗಿದೆ. ಸೂರ್ಯನೇ ನಾಚುವಂತಹ ಸೇವಾ ದೀವಿಗೆಯನ್ನು ನಮ್ಮ ಘಟಕಗಳು ಹಚ್ಚಿದೆ. ಯಡ್ತಾಡಿಯಿಂದ ಬೆಂಗಳೂರಿನವರೆಗೆ […]

Read More

ಸೀಮೋಲ್ಲಂಘನ : ನೆಕ್ಕಿತಪುಣಿ ಗೋಪಾಲಕೃಷ್ಣ ಬೆಂಗಳೂರು

1987ರಲ್ಲಿ ಜನ್ಮತಾಳಿದ ಬಿಲ್ಲವ ಸಮಾಜದ ಯುವಶಕ್ತಿಯ ಸಂಚಯವಾದ ಯುವವಾಹಿನಿ ಇಂದು 31ರ ಹರೆಯದಲ್ಲಿ ರಾಜ್ಯಾದ್ಯಂತ 32 ಘಟಕಗಳನ್ನು ಸ್ಥಾಪಿಸುವ ಮೂಲಕ ಬಿಲ್ಲವ ಸಮಾಜದ ಭರವಸೆಯಾಗಿ ಬೆಳೆಯುತ್ತಿರುವುದು ಸಮಾಜದ ಬಂಧುಗಳೆಲ್ಲರೂ ಸಂತೋಷ ಮತ್ತು ಅಭಿಮಾನ ಪಡುವಂತಾಗಿದೆ. ನಮ್ಮ ಸಮಾಜದಲ್ಲಿ 1908ರ ವರೆಗೆ ಸಂಘಟನೆಯೆಂಬುದು ಇರಲಿಲ್ಲ. ಊರಲ್ಲಿ ಪರಂಪರಾಗತವಾಗಿ ಬಂದ ಗುರಿಕಾರರೇ ಆಯಾಯ ಊರು, ಗ್ರಾಮಗಳಲ್ಲಿನ ಸಮಾಜದಲ್ಲಿನ ಸಮಸ್ಯೆಗಳನ್ನು ಅಧಿಕಾರಯುತವಾಗಿ ಪರಿಹರಿಸುತ್ತಿದ್ದರು. ಇಂತಹ ಗುರಿಕಾರರ ಗುತ್ತು ಬರ್ಕೆ ಮನೆಗಳು ಸಾಮಾಜಿಕ ಮತ್ತು ಧಾರ್ಮಿಕ ವ್ಯಾಜ್ಯಗಳಿಗೆ ನ್ಯಾಯದಾನವನ್ನು ಮಾಡುತ್ತಿದ್ದರು. ಆಚಾರ, ವಿಚಾರ, […]

Read More

ಸಂಪಾದಕೀಯ : ರಾಜೇಶ್ ಸುವರ್ಣ

ಯುವಸಿಂಚನ ಓದುಗ ಮಿತ್ರರೇ, ಒಂದು ಪೇಟೆಯಲ್ಲಿ ಚಿನ್ನದ ಅಂಗಡಿ ಮತ್ತು ಕಬ್ಬಿಣದ ಅಂಗಡಿ ಅಕ್ಕಪಕ್ಕದಲ್ಲಿ ಇದ್ದವು. ಒಂದು ದಿನ ಚಿನ್ನದ ತುಂಡೊಂದು ಕಬ್ಬಿಣದ ಅಂಗಡಿಯ ಮುಂದೆ ಬಂದು ಬಿದ್ದವು. ಇದನ್ನು ಕಂಡು ಕಬ್ಬಿಣ ಚಿನ್ನದ ಬಳಿ ಕೇಳತ್ತೆ ಚಿನ್ನಕ್ಕ ಚಿನ್ನಕ್ಕ ನೀನೇಕೆ ಇಲ್ಲಿಗೆ ಬಂದಿದ್ದೀಯಾ ? ಇದಕ್ಕೆ ಚಿನ್ನ ಉತ್ತರಿಸುತ್ತೆ ಕಬ್ಬಿಣ್ಣಕ್ಕ ಅಲ್ಲಿ ನನ್ನನ್ನು ಬಡಿಯುತ್ತಿದ್ದಾರೆ ಅದರ ನೋವು ತಾಳದೇ ಇಲ್ಲಿಗೆ ಬಂದಿದ್ದೇನೆ. ಇದನ್ನು ಕಂಡು ಕಬ್ಬಿಣ ನಗುತ್ತಾ ಹೇಳತ್ತೆ ಅಯ್ಯೋ ಚಿನ್ನಕ್ಕ ಹೊಡೆತ ಯಾರಿಗೇ ತಾನೇ […]

Read More

ಗೌರವ ಸಂಪಾದಕರ ಮಾತು : ಜಯಂತ ನಡುಬೈಲ್

ಯುವವಾಹಿನಿಯ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು ಕಳೆದ ಹಲವು ವರುಷದಲ್ಲಿ ನೂರಾರು ಸಂಘಟನೆಗಳಲ್ಲಿ ಒತ್ತಡದ ಕೆಲಸ, ಆಗೆಲ್ಲ ನನ್ನ ಮಡದಿಯ ಮುನಿಸು ನಿಮಗೆ ಇದೆಲ್ಲ ಬೇಕಾ ? ಆಗೆಲ್ಲಾ ಗೊತ್ತಿಲ್ಲದಿದ್ದರೂ ಹಾಡೊಂದ ಗುಣುಗುತ್ತಿದ್ದೆ ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೇ …. ಏನಾಶ್ಚರ್ಯ ಈಗ ಒಂದೇ ಒಂದು ದಿನವೂ ವಿಶ್ರಾಂತಿ ಇಲ್ಲ. ನನ್ನ ಯುವವಾಹಿನಿಯ ಕುಟುಂಬ ನನಗೆ ವಿಶ್ರಾಂತಿಯನ್ನೂ ನೀಡದೆ ದಿನಕ್ಕೊಂದು ಮನೆಗೆ (ಘಟಕ) ಆಹ್ವಾನಿಸುತ್ತಲೇ ಇದ್ದಾರೆ. ಒಂದಕ್ಕಿಂತ ಒಂದು ಘಟಕದ ಭಿನ್ನ ಭಿನ್ನ ಕಾರ್ಯಕ್ರಮ, ಪ್ರತಿ […]

Read More

ಯುವಜನತೆಯಲ್ಲಿ ಬೆಳೆಯಬೇಕಾಗಿದೆ ವೈಚಾರಿಕತೆ : ಎ ಗೋಪಾಲ್ ಅಂಚನ್

ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಬಗೆಯಲ್ಲಿ ಕ್ರಾಂತಿಗಳು ನಡೆಯುತ್ತಿದೆ. ಮಾಹಿತಿ ತಂತ್ರಜ್ಞಾನ ಅಂಗೈಯಲ್ಲೇ ಅರಮನೆ ಕಟ್ಟಿಸಿಕೊಂಡಿದೆ. ಎಲ್ಲಾ ಬಗೆಯ ಶಿಕ್ಷಣ, ಮಾಹಿತಿ, ಜ್ಞಾನ ಶಾಖೆಗಳು ಈ ಹಿಂದಿಗಿಂತ ಇಂದು ಹೆಚ್ಚು ಸುಲಭವಾಗಿ, ಸರಳವಾಗಿ ಕೈಗೆಟುಕುತ್ತಿದೆ. ಆದರೆ, ಎಲ್ಲಾ ಬಗೆಯ ಶಿಕ್ಷಣವನ್ನು ತನ್ನದಾಗಿಸಿಕೊಂಡ ವಿದ್ಯಾವಂತರೆನಿಸಿಕೊಂಡ ಯುವಜನರು ಕೇವಲ ಅಕ್ಷರಸ್ಥರಾಗುತ್ತಿದ್ದಾರೆಯೇ ? ಅಥವಾ ನಿಜಾರ್ಥದಲ್ಲಿ ವಿಚಾರವಂತರಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ. ಯಾವುದೇ ಶಿಕ್ಷಣಗಳು ನಾವು ವೈಚಾರಿಕ ಚಿಂತನೆ ಮತ್ತು ವೈಜ್ಞಾನಿಕ ದೃಷ್ಠಿಕೋನ ಬೆಳೆಸಿಕೊಳ್ಳಲು ಕನಿಷ್ಠ ಪ್ರೇರಣೆಯನ್ನೂ ನೀಡದಿದ್ದರೆ ಅವುಗಳೆಲ್ಲವೂ […]

Read More

ಬಿಲ್ಲವರ ಅಸ್ಮಿತೆ : ಬಿ.ಎಮ್. ರೋಹಿಣಿ

ಬಹುಸಂಖ್ಯಾತರಾದ ಹಿಂದುಳಿದ ವರ್ಗದಲ್ಲಿ ಬಿಲ್ಲವರಿಗೊಂದು ವಿಶೇಷ ವಾದ ಅನನ್ಯತೆ ಇದೆ. ಶತಮಾನಗಳ ಹಿಂದೆ ಇವರು ಅಸ್ಪೃಶ್ಯ ಸಮುದಾಯ ದವರಾಗಿದ್ದರು ಎಂಬುದು ಈಗಿನ ಯುವಸಮುದಾಯಕ್ಕೆ ಬಹುಶಃ ತಿಳಿದಿರಲಾರದು. ಭೂತಾರಾಧಕರು ಎಂಬ ಕಾರಣಕ್ಕೆ ಅವರಿಗೆ ದೇವಸ್ಥಾನ ಪ್ರವೇಶ ಇರಲಿಲ್ಲ ಎಂಬ ಮಾತು ನಂಬಲರ್ಹವಲ್ಲ. ಯಾಕೆಂದರೆ ಹಿಂದುಳಿದ ವರ್ಗದ ಬೇರೆ ಸಮುದಾಯದವರು ಭೂತ, ದೈವಗಳನ್ನು ನಂಬುವವರು ಎಂದು ಬಹಿಷ್ಕರಿಸಲಿಲ್ಲ. ಅವರಿಗೆ ದೇವಸ್ಥಾನದ ಅಂಗಳಕ್ಕೆ ಪ್ರವೇಶವಿತ್ತು, ಬಿಲ್ಲವರಿಗೆ ದೇವಸ್ಥಾನದ ಅಂಗಳಕ್ಕೆ ಪ್ರವೇಶ ನಿಷಿದ್ಧ. ಬಿಲ್ಲವರು ದರ್ಶನ ಪಾತ್ರಿಗಳಾದುದರಿಂದ, ಪೂಜಾರಿಗಳೆಂಬ ಗೌರವ ಇರುವುದರಿಂದ ದೇವರಿಗೂ […]

Read More

ಪುಸ್ತಕ ನಮ್ಮ ಜೀವನಕ್ಕೆ ಬೆಳಕು ಕೊಡುವಂತಹದು : ಹರಿಶ್ಚಂದ್ರ ಪಿ. ಸಾಲ್ಯಾನ್

ಮುಲ್ಕಿ : ಓದಿನಲ್ಲಿ ಸಿಗುವ ಆನಂದ ಅನುಭವ, ಒಳ್ಳೆಯ ವಿಚಾರ ಬೇರೆ ಯಾವ ತಂತ್ರಾಂಶದಿಂದ ಸಿಗಲು ಸಾಧ್ಯವಿಲ್ಲ. ಪುಸ್ತಕ ನಮ್ಮ ಜೀವನಕ್ಕೆ ಬೆಳಕು ಕೊಡುವಂತಹದು, ಈ ನಿಟ್ಟಿನಲ್ಲಿ ಯುವವಾಹಿನಿ ಮುಖವಾಣಿ ಯುವಸಿಂಚನ ಪತ್ರಿಕೆಯ ಸಾಧನೆ ಗಮನಾರ್ಹವಾದುದು ಎಂದು ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕರಾದ ಹರಿಶ್ಚಂದ್ರ ಪಿ. ಸಾಲ್ಯಾನ್ ಅಭಿಪ್ರಾಯ ಪಟ್ಟರು. ಅವರು ದಿನಾಂಕ 14.11.2018 ರಂದು ಮುಲ್ಕಿ ಸಿ. ಎಸ್. ಐ ಬಾಲಿಕಾಶ್ರಮದಲ್ಲಿ ಯುವವಾಹಿನಿ (ರಿ) ಮುಲ್ಕಿ ಘಟಕದ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ […]

Read More

ತಮ್ಮಯರ ಸಾಧನೆ ಅನುಕರಣೀಯ-ಡಾ.ಏರ್ಯ

ಮಂಗಳೂರು : ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಸನ್ಮಾನಿಸಿ ಮಾತನಾಡಿ, ಬಿ.ತಮ್ಮಯ ಅವರು ಸಾಹಿತಿ, ಸಂಘಟಕರರಾಗಿ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಜತೆಯಲ್ಲಿ ಅವರು ಅಪ್ಪಟ ಮಾನವತಾವಾದಿಯಾಗಿ ಪ್ರೀತಿ, ಭಾಂದವ್ಯದ ಸಮಾಜ ಕಟ್ಟುವಲ್ಲಿಯೂ ಶ್ರಮಿಸಿದವರು. ಈ ಇಳಿವಯಸ್ಸಿನಲ್ಲೂ ಸಾಹಿತ್ಯ, ಸಂಸ್ಕೃತಿ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಸೇವೆ ಅನುಕರಣೀಯವಾದುದು ಎಂದರು. ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ವತಿಯಿಂದ ತುಳು ವಿದ್ವಾಂಸರು, ಸಂಶೋಧಕರು, ಸಾಹಿತಿಗಳು, ಕಲಾವಿದರು, ಸಂಘಟಕರನ್ನು ಗುರುತಿಸಿ “ಚಾವಡಿ ತಮ್ಮನ” ಮಾಡಿ ಗೌರವಿಸುವ […]

Read More

ಸಂಪರ್ಕಿಸಿ : +91 99644 75220
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ :
ಸ್ಥಳ :

ಯುವವಾಹಿನಿ(ರಿ.) ಕುಪ್ಪೆಪದವು ಘಟಕ

ದಿನಾಂಕ : 18-08-2024
ಸ್ಥಳ : ಕುದ್ರೋಳಿ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
ಯುವವಾಹಿನಿ ಸಂಸ್ಥೆಯ ಮೂವತೈದು ವರುಷಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಗೌರವ

ಯುವವಾಹಿನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

  ಮಂಗಳೂರು : ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನವೆಂಬರ್ ಒಂದರಂದು ನಡೆಯುವ...

Sunday, 30-10-2022
error: Content is protected !!