Yuvavahini

APR 27, 2024 7.24 AM IST

ಯುವವಾಹಿನಿ(ರಿ.) ಪಣಂಬೂರು-ಕುಳಾಯಿ ಘಟಕ

ಶಿವಗಿರಿ ಯಾತ್ರೆ

ಮಂಗಳೂರು: ಪಣಂಬೂರು-ಕುಳಾಯಿ ಘಟಕದ ವತಿಯಿಂದ ಶಿವಗಿರಿ ಯಾತ್ರೆಯು ದಿನಾಂಕ 27-04-2024 ರಿಂದ 30-04-2024 ವರೆಗೆ ನಡೆಯಿತು. 27-04-2024 ಶನಿವಾರ ಸಂಜೆ 6 ಗಂಟೆಗೆ 46 ಯಾತ್ರಾರ್ಥಿಗಳು ಮಾವೇಲಿ ರೈಲಿನ ಮೂಲಕ ಪ್ರಯಾಣ ಬೆಳೆಸಿ, 28 ರಂದು ಬೆಳಗ್ಗೆ ವರ್ಕಳ ಶಿವಗಿರಿಗೆ ತಲುಪಿದರು. ಬ್ರಹ್ಮ ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಶಾರದಾ ಮಾತೆಯ ದರ್ಶನ ಪಡೆದು ಪೂಜೆಯನ್ನು ನೆರವೇರಿಸಿ, ಕ್ಷೇತ್ರದಲ್ಲಿ, ಜರಗುತ್ತಿರುವ ಅಕ್ಷರಾಭ್ಯಾಸ, ಸರಳ ವಿವಾಹ ಪದ್ದತಿಯ ವಿಚಾರವನ್ನು ತಿಳಿದುಕೊಂಡೆವು. ನಂತರ ಗುರುಗಳು ವಾಸಿಸಿದ ಮನೆಯನ್ನು ಸಂದರ್ಶಸಿ ಅವರು ಉಪಯೋಗಿಸುತಿದ್ದ ಪರಿಕರಗಳನ್ನು ವೀಕ್ಷಣೆ ಮಾಡಿ, ಶಿವಗಿರಿಯ ಮಹತ್ವವನ್ನು ಎಲ್ಲರಿಗೂ ತಿಳಿಯಪಡಿಸಲಾಯಿತು.
ಶಿವಗಿರಿ ಕ್ಷೇತ್ರದ ಸಮೀಪವೇ ಇರುವ, ದೇಶ ವಿದೇಶಗಳಲ್ಲಿ ಅಧ್ಯಯನ ಮಾಡಿದ ಗುರುಗಳ ಶಿಷ್ಯ ನಟರಾಜ ಗುರುಗಳ ಪುಸ್ತಕ ಸಂಗ್ರಹಣ ಕೇಂದ್ರಕ್ಕೆ ಭೇಟಿ ನೀಡಿ ನಾರಾಯಣ ಗುರುಗಳ ಬಗ್ಗೆ ಸಾಕಷ್ಟು ಮಾಹಿತಿ ತಿಳಿದು ಕೊಳ್ಳುವಂತಾಯಿತು .
ಮಧ್ಯಾಹ್ನ 1:00 ಗಂಟೆಗೆ ಗುರುಗಳ ಜನ್ಮಸ್ಥಳ ಚಂಬಳಾoತಿಗೆ ಪ್ರಯಾಣ ಬೆಳೆಸಿ, ಗುರುಗಳು ವಾಸಿಸುತಿದ್ದ ಮನೆಯನ್ನು ವೀಕ್ಷಿಸಿದರು. ಅಲ್ಲಿ ಹಳೆಯ ಕಾಲದ ಮನೆಯು ಯಾವುದೇ ಆಧುನಿಕತೆಯ ಶೈಲಿಗೆ ನವೀಕರಿಸದೆ, ಮೂಲ ಮನೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಜೋಪಾನವಾಗಿ ಇಟ್ಟಿರುವುದನ್ನು ಗಮನಿಸಿದರು.
ನಂತರ ಪ್ರಯಾಣ ನಾರಾಯಣ ಗುರುಗಳು ಸ್ಥಾಪಿಸಿದ ಕುನ್ನುoಪಾರ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಚರ್ಮದ ಕಾಯಿಲೆಗೆ ಸಂಬಂಧಿಸಿದಂತೆ ವಿಶೇಷ ಪೂಜೆ ಮಾಡಿಸಿ, ನಂತರ ಸಹ ಭೋಜನ. ಅಲ್ಲೇ ತುಸು ವಿಶ್ರಾಂತಿ ಪಡೆದರು.
ನಂತರ ಗುರುಗಳು ಪ್ರಪ್ರಥಮವಾಗಿ ತನ್ನ ದಿವ್ಯ ಹಸ್ತದಲ್ಲಿ ಸ್ಥಾಪಿಸಿದ ಅರವಿಪುರಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲೇ ಪಕ್ಕದಲ್ಲಿರುವ ನೆಯ್ಯಾರ್ ನದಿಯಲ್ಲಿ ಸ್ನಾನ ಮಾಡಿ, ಬ್ರಹ್ಮ ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಶಿವಲಿಂಗ ದರ್ಶನ ಮಾಡಿದರು ಅಲ್ಲಿ ಯಾವುದೇ ಜಾತಿ ಧರ್ಮಗಳಿಲ್ಲದೆ, ಎಲ್ಲಾ ವರ್ಗದವರನ್ನು ತನ್ನ ಶಿಷ್ಯರಾಗಿ ಸ್ವೀಕರಿಸಿದ ಬಗ್ಗೆ ದಾಖಲೆಗಳನ್ನು ವೀಕ್ಷಿಸಿದರು. ಅದಲ್ಲದೇ, ಸಾಮಾಜಿಕ ಚಿಂತನೆಯ ಬಗ್ಗೆ ಅವರು ಕೈಗೊಂಡ ಹಲವಾರು ವಿಚಾರಗಳನ್ನು ತಿಳಿದುಕೊಂಡು, ಸಂಜೆ ಕನ್ಯಾಕುಮಾರಿ ಕ್ಷೇತ್ರಕ್ಕೆ ದರ್ಶನ ಮಾಡಿದ ನಂತರ ತಂಡ ಮರುತ್ವ ಮಲೈ ಆಶ್ರಮಕ್ಕೆ ಪ್ರಯಾಣ ಬೆಳಿಸಿ ಅಲ್ಲಿ ರಾತ್ರಿ ತಂಗಿದರು.
29 ರಂದು ಬೆಳಗ್ಗೆ 5:00 ಗಂಟೆಗೆ ಆಶ್ರಮದಲ್ಲಿ ನಾರಾಯಣ ಗುರುಗಳ ಸ್ತೋತ್ರ ಪಠಣ, ಸತ್ಸಂಗ, ಹಾಗೂ ಭಜನೆಯಲ್ಲಿ ಪಾಲ್ಗೊಂಡು ಮಂಗಳಾರತಿಯ ನಂತರ 6:00 ಗಂಟೆಗೆ ಮರುತ್ವ ಮಲೈ ಬೆಟ್ಟವನ್ನು ಏರಿದೆವು. ಎಲ್ಲಾ ಯಾತ್ರಾರ್ಥಿಗಳು ಉತ್ಸಾಹದಿಂದ ಬೆಟ್ಟವನ್ನು ಏರಿದರು. ಅಲ್ಲಿ ಗುರುಗಳು ಲೋಕ ಕಲ್ಯಾಣಕ್ಕಾಗಿ ಆರು ವರ್ಷಗಳ ಕಾಲ ತಪಸ್ಸು ಮಾಡಿದ ಗುಹೆಯನ್ನು ಸಂದರ್ಶಿಸಿ. ಅಲ್ಲೇ ಸಮೀಪವೇ ಇದ್ದ ಹನುಮಾನ್ ದೇವಾಲಯದಲ್ಲಿ ಪೂಜೆ ನೆರವೇರಿಸಿದೆವು. ಎಲ್ಲಾ ಯಾತ್ರಾರ್ಥಿಗಳು ಬೆಟ್ಟದಿಂದ ಕೆಳಗೆ ಇಳಿದು ಬೆಳಗಿನ ಉಪಹಾರ ಮುಗಿಸಿ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದರ ಧ್ಯಾನ ಕೇಂದ್ರಕ್ಕೆ ನಾವೆಯ ಮೂಲಕ ಭೇಟಿ ನೀಡಿದರು. ಮಧ್ಯಾಹ್ನ 2:00 ಗಂಟೆಗೆ ಮರುತ್ವ ಮಲೈ ಆಶ್ರಮದಲ್ಲಿ ಮದ್ಯಾಹ್ನದ ಮಹಾಪೂಜೆ ನಂತರ ಅನ್ನ ಪ್ರಸಾದ ಸ್ವೀಕರಿಸಿ, 3:30 ಶ್ರೀ ಅನಂತ ಪದ್ಮನಾಭ ದೇವಾಲಯಕ್ಕೆ ಭೇಟಿ ನೀಡಿ ನಂತರ ಮಾವೇಲಿ ಎಕ್ಸ್ ಪ್ರೆಸ್ ರೈಲಿನ ಮೂಲಕ ಪ್ರಯಾಣ ಮಾಡಿ ಮಂಗಳೂರಿಗೆ ವಾಪಸ್ಸಾದರು.
ಈ ಯಾತ್ರೆಯಿಂದ ನಾರಾಯಣ ಗುರುಗಳ ಬಗ್ಗೆ ಓದಿನಲ್ಲಿ ತಿಳಿದಿದ್ದರೂ, ಕೆಲವೊಂದು ವಿಚಾರ-ಧಾರೆಗಳನ್ನು ಸ್ಥಳ ವೀಕ್ಷಣೆಯ ಮೂಲಕ ಯಾತ್ರಾರ್ಥಿಗಳು ತಿಳಿದುಕೊಂಡರು. ಯಾತ್ರೆಯ ಸಂಚಾಲಕರಾಗಿ ಘಟಕದ ಮಾಜಿ ಅಧ್ಯಕ್ಷರುಗಳಾದ ರವಿಚಂದ್ರ ಕೋಡಿಕಲ್ ಮತ್ತು ಸುರೇಶ್ ಪೂಜಾರಿ ಮತ್ತು ಸಹ ಸಂಚಾಲಕರಾಗಿ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಯಶವಂತ್ ಕುಮಾರ್ ವಹಿಸಿದ್ದರು. ಯುವವಾಹಿನಿ(ರಿ.) ಮಂಗಳೂರು ಘಟಕದ ಸದಸ್ಯರಾದ ಸದಾನಂದ ಪೂಜಾರಿಯವರು ನಾರಾಯಣ ಗುರುಗಳ ಬಗ್ಗೆ ಮಹತ್ವ ವಿಚಾರದಾರೆಯನ್ನು ಯಾತ್ರಾರ್ಥಿಗಳಿಗೆ ತಿಳಿಯಪಡಿಸಿದರು.
ಈ ಯಾತ್ರೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವಾದರ್ಶದಂತೆ, ಯಾವುದೇ ಜಾತಿಗೆ ಸೀಮಿತವಾಗಿರದೇ ಇತರ ಸಮಾಜದವರಿಗೂ ಗುರುಗಳ ಬಗ್ಗೆ ತಿಳಿಯ ಪಡಿಸುವ ನಿಟ್ಟಿನಲ್ಲಿ ಬಿಲ್ಲವ, ಬಂಟ, ಕ್ರೈಸ್ತ, ಹೀಗೆ ಬೇರೆ ಬೇರೆ ಸಮುದಾಯದ ಒಟ್ಟು 46 ಸದಸ್ಯರು ಯತ್ರಾರ್ಥಿಗಳಾಗಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!