ಯುವವಾಹಿನಿ (ರಿ.) ಬೆಂಗಳೂರು ಘಟಕ

ಪದಗ್ರಹಣ ಸಮಾರಂಭ

ಯುವವಾಹಿನಿ (ರಿ.) ಬೆಂಗಳೂರು ಘಟಕ

ಪದಗ್ರಹಣ ಸಮಾರಂಭ

ನವಿಲಿನ ನಾಟ್ಯ ಚೆಂದ ಕೋಗಿಲೆಯ ದನಿ ಚೆಂದ, ನಮ್ಮ ಯುವವಾಹಿನಿಯ ಪದಗ್ರಹಣ ಕಾರ್ಯಕ್ರಮ ಇವೆಲ್ಲದಕಿಂತ ಚೆಂದ,ನಮ್ಮ ಮನೆಯಲ್ಲಿ ಯಾವುದಾದರು ಶುಭ ಸಮಾರಂಭಗಳುನಡೆವ ಸಂದರ್ಭದಲ್ಲಿ ಬಂಧು ಬಳಗ ಸ್ನೇಹಿತರು ಎಲ್ಲರು ಸೇರಿ ಎಷ್ಟೊಂದು ಉತ್ಸಹದಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೆವೆಯೋ ಅದಕ್ಕಿಂದ ಒಂದು ಹೆಜ್ಜೆ ಮುಂದು ನಾವೆಲ್ಲರೂ ನಮ್ಮ ಮನೆ ನಮ್ಮ ಕುಟುಂಬ ಎನ್ನುವ ಭಾವನೆಯೊಂದಿಗೆ.
ಬೆಂಗಳೂರು ಯುವವಾಹಿನಿ ಘಟಕ ಸ್ಥಾಪನೆಯಾಗಿ ತನ್ನ ಒಂದು ವರ್ಷದ ಹಾದಿಯಲ್ಲಿ ಏನೆಲ್ಲ ಸಾಧಿಸಬಹುದು
ಎನ್ನುವುದನ್ನು ಸಾದಿಸಿ ತೋರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಣ್ಣುಮುಚ್ಚಿ ಬಿಡುವುದರ ವೇಳೆಗಾಗಲೇ ಒಂದು ವರ್ಷ ಮುಕ್ತಯವಾಗಿ ಎರಡನೇ ವರ್ಷದ ಪದಗ್ರಹಣ ಕಾರ್ಯಕ್ರಮಕ್ಕೆ ತಯಾರಾಗುತಿತ್ತು ಹೊಸತೊಂದು ಯುವ ಪಡೆ ಹೊಸ ಹುರುಪಿನೊಂದಿಗೆ,
ನವೆಂಬರ್ 17ರಂದು ದಿನ ನಿಗದಿಯಾದಂತೆ ನಮ್ಮ ಯುವವಾಹಿನಿ ರೀ ಬೆಂಗಳೂರು ಘಟಕ ಸಮಯ 3:30ಕ್ಕೆ ಸರಿಯಾಗಿ ಕಾರ್ಯಕ್ರಮವನ್ನು ಆ, ವಿಗ್ನ ವಿನಾಶಕ ವಿನಾಯಕನನ್ನು ಸ್ಮರಿಸುತ್ತ ಪ್ರಾಂಭಿಸಿದೆವೆ, ಉತ್ತಮ ನಿರೂಪಕರ ಕನ್ನಡ ತುಳು ವಾಕ್ ಚಾತುರ್ಯದೊಂದಿಗೆ ಸಾಮಾಜಿಕ ಕಳಕಳಿಯ ನಾಟಕದ ಮೂಲಕ ಹಳ್ಳಿಯ ಸೊಗಡನ್ನು ಸವಿಯುತ್ತ ಜಾನಪದೀಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಜೊತೆಗೂಡಿ ಊರಿನ ನೆನಪನ್ನು ಒಮ್ಮೆ ಕಣ್ಣೆದುರು ಮೂಡಿಸಿದರು ನಮ್ಮ ಯುವವಾಹಿನಿ ಬೆಂಗಳೂರು ಘಟಕದ ಕಲಾವಿದರು,ಯಕ್ಷಗಾದ ನೃತ್ಯ, ಹಾಗೆ ಸಿನೆಮಾ ಹಾಡುಗಳಿಗೆ ಒಂದು ಸ್ಟೆಪ್ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ನೀಡಿದರು ನಮ್ಮ ತಂಡದ ನೃತ್ಯಪಟುಗಳು, ಹಾಸ್ಯಮಯ ನೃತ್ಯದ ಮೂಲಕ ನೆರೆದಿದ್ದ ಯುವವಾಹಿನಿ ಯ ಬಂಧು ಮಿತ್ರರನ್ನ ನಗೆಗಡಲಿನಲ್ಲಿ ತೇಲಾಡಿಸಿದರು ನಮ್ಮ ಯುವವಾಹಿನಿ ಯ ಯುವ ಪಡೆಯ ಬಹುಮಖ ಪ್ರತಿಭೆಗಳು, ಹಾಗೆ ಒಂದು ಹೊಸ ವ್ಯಕ್ತಿಯ ಪರಿಚಯದೊಂದಿಗೆ ನೋಡುವ ಕಣ್ಣ್ಗಳಿಗೆ ಮಾತ್ರವಲ್ಲದೆ ಕೇಳೋ ಕಿವಿಗಳಿಗೂ ಕೋಗಿಲೆಯಕಂಠದ ನಮ್ಮ ತಂಡದ ಗಾಯಕರಿಂದ ಸಂಗೀತ ರಸದೌತಣವಿತರು.
ಈ ಎಲ್ಲ ಕಾರ್ಯಕ್ರಮಗಳ ನಡುವೆ ಸಮಾಜಕ್ಕೆ ಒಂದೊಳ್ಳೆಯ ಸಂದೇಶವನ್ನು ರವಾನಿಸುತ್ತ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪೂರ್ಣ ವಿರಾಮವನ್ನು ಹಾಕುತ್ತ ಪದಗ್ರಹಣ ಕಾರ್ಯಕ್ರವನ್ನು ಪ್ರಾಂಭಿಸಿದೆವು,
ಅತಿಥಿಗಳನ್ನು ವೇದಿಕೆಕೆಗೆ ಪರಿಚಯಿಸುತ್ತ, ಅವರನ್ನು ಗೌವರವಪೂರ್ವಕವಾಗಿ ಬರಮಾಡಿಕೊಂಡು ಯುವವಾಹಿನಿ ಬೆಳೆದು ಬಂದಹಾದಿಯನ್ನು ತಿಳಿಸುವುದರ ಮೂಲಕ ಬೆಂಗಳೂರು ಘಟಕದ ಸ್ಥಾಪನೆ ಮತ್ತು ಸ್ಥಾಪನೆಗೊಂಡು ನಂತರದ ದಿನಗಳ ಹಾದಿಯನ್ನು ಪರಿಚಯಿಸಿದೆವು, ಕಡಿಮೆ ಸಮಯದಲ್ಲಿ ಸಿಕ್ಕ ಅವಕಾಶಗಳೆಲ್ಲವನು ಸದುಪಯೋಗಿಸಿಕೊಂಡು ಎರಡನೇ ವರ್ಷದ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳಿಂದ ಮೆಚ್ಚುಗೆಯ ಮಾತುಗಳನ್ನು ಕೇಳಿದೇವು.
ನಮ್ಮ ಪದಗ್ರಹಣ ಕಾರ್ಯಕ್ರಮ್ಮಕ್ಕೆ ಆಗಮಿಸಿದ್ದ ಅತಿಥಿಗಳನ್ನು ಸನ್ಮಾನಿಸುತ್ತ ಅವರ ಜೊತೆ ಜೊತೆಗೆ, ಯುವವಾಹಿನಿಯ ಸಾಧಕರನ್ನು ಸನ್ಮಾನಿಸಲಾಯಿತು, ಅತಿಥಿಗಳ ಮಾತು ಪ್ರತಿಯೊಬ್ಬ ವ್ಯಕ್ತಿಗೂ ಸ್ಫೂರ್ತಿದಾಯಕವಾಗಿತ್ತು, ಅವರ ಯಶಸ್ಸಿನ ದಾರಿಯು ಪ್ರತಿಯೊಬ್ಬರಿಗೂ ಮಾರ್ಗದರ್ಶನ ಸಾಧನೆಗೆ ಬೇಕಾಗಿರುವುದು ಗುರಿ ತಾಳ್ಮೆ ಛಲ ಎನ್ನುವುದು ಅವರ ಮಾತುಗಳಲ್ಲಿನ ಮುಖ್ಯ ವಿಷಯವಾಗಿತ್ತು, ಸಭಾಕಾರ್ಯಕ್ರಮದ ಜೊತೆ ಜೊತೆ ಪದಗ್ರಹಣ ಕಾರ್ಯಕ್ರಮವು ಕೂಡ ಬಹಳ ಸುಂದರವಾಗಿ ನೆರವೇರಿತು. ಯುವವಾಹಿನಿ ಬೆಂಗಳೂರು ಘಟಕದ ನೂತನ ಅಧ್ಯಕ್ಷರು ಅಧಿಕಾರ ಸ್ವೀಕರಿಸುತ್ತ, ಘಟಕ ನಡೆದು ಬಂದ ದಾರಿಯನ್ನುನೆನಪಿಸಿದರು , ಇನ್ನು ಮುಂದೆ ಸಾಗುವ ದಾರಿಯಬಗ್ಗೆ ಆಲೋಚಿಸುತ್ತಾ, ಘಟಕದ ಎಲ್ಲರ ಸಹಕಾರವನ್ನು ಬಯಸಿದರು ಹಾಗು ಪ್ರತಿಜ್ನಾವಿಧಿ ಸ್ವೀಕರಿಸಿದರು. ಘಟಕದ ಬಲಿಷ್ಠವಾದ ಯುವ ಪಡೆಯನ್ನು ನೋಡಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರು ಸ್ವಾಮಿ ವಿವೇಕಾನಂದರನ್ನು ನೆನಪಿಸುತ್ತ ಯುವವಾಹಿನಿ ಬೆಂಗಳೂರು ಘಟಕದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಘಟಕದ ಅಧ್ಯಕ್ಷರುಗಳು ಶುಭಹಾರೈಸಿದರು.
ಒಂದು ವರ್ಷದ ಸುದೀರ್ಘ ಪ್ರಯಾಣವನ್ನು ಒಂದು ದಿನ ನೆನಪಿಸುತ್ತ ಪದಗ್ರಹಣ ಕಾರ್ಯಕ್ರಮ ಮುಗಿದೇಹೋಯಿತು.
ಬೇಂದ್ರೆಯವರ ಒಂದು ಹಾಡು ನೆನಪಾಗುತ್ತದ
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ಈ ಹಾಡಿನ ಹಾಗೆ
ಯುಗ ಯುಗಗಳೇ ಕಳೆದರು,
ಪದಗ್ರಹಣ ಕಾರ್ಯಕ್ರಮ ಮರಳಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ದೂರದ ಊರಿನಿಂದ ಹಾಗು ಒಂದು ದಿನವನ್ನು ಯುವವಾಹಿನಿಗಾಗಿ ಮೀಸಲಿಟ್ಟು ಪದಗ್ರಹಣ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾಗಿರುವ ಸರ್ವರಿಗೂ ಬೆಂಗಳೂರು ಯುವವಾಹಿನಿ ಘಟಕದ ಪರವಾಗಿ ಧನ್ಯವಾದಗಳು ಸಮರ್ಪಿಸುತಿದ್ದೇವೆ..
ನಿಮ್ಮ ಪ್ರೀತಿ ಸಹಕಾರ ಎಂದೆಂದಿಗೂ ನಮ್ಮೊಂದಿಗಿರಲಿ
ಯುವವಾಹಿನಿ (ರಿ.) ಬೆಂಗಳೂರು ಘಟಕ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 99644 75220
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ :
ಸ್ಥಳ :

ಯುವವಾಹಿನಿ(ರಿ.) ಕುಪ್ಪೆಪದವು ಘಟಕ

ದಿನಾಂಕ : 18-08-2024
ಸ್ಥಳ : ಕುದ್ರೋಳಿ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
ಯುವವಾಹಿನಿ ಸಂಸ್ಥೆಯ ಮೂವತೈದು ವರುಷಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಗೌರವ

ಯುವವಾಹಿನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

  ಮಂಗಳೂರು : ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನವೆಂಬರ್ ಒಂದರಂದು ನಡೆಯುವ...

Sunday, 30-10-2022
error: Content is protected !!