2018 ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪುರಸ್ಕ್ರತ

ರಂಗನಟ ವಸಂತ ವಿ.ಅಮೀನ್

ನಟ, ನಿರ್ದೇಶಕ, ಪತ್ರಕರ್ತ, ಸಾಹಿತಿ ದಿ.ವಿಶುಕುಮಾರ್ ಅವರ ನೆನಪಿನಲ್ಲಿ ಯುವವಾಹಿನಿ ಸಂಸ್ಥೆಯು, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಮೂಲಕ ಕೊಡಮಾಡುವ 2018 ನೇ ಸಾಲಿನ ವಿಶುಕುಮಾರ್ ಪ್ರಶಸ್ತಿಗೆ ಹಿರಿಯ ರಂಗನಟ, ನಿರ್ದೇಶಕ, ಸಾಹಿತಿ ವಸಂತ ವಿ.ಅಮೀನ್ ಅಯ್ಕೆಯಾಗಿದ್ದಾರೆ. ಯುವವಾಹಿನಿ ಸಂಸ್ಥೆಯು ಕಳೆದ 16 ವರುಷದಿಂದ ಈ ಪ್ರಸಸ್ತಿಯನ್ನು ನೀಡುತ್ತಾ ಬಂದಿದ್ದು ವಿಶುಕುಮಾರ್ ಅವರು ಸೇವೆ ಸಲ್ಲಿಸಿರುವ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರನ್ನು ಆಯ್ಕೆ ಮಾಡಿ ಈ ಪ್ರಶಸ್ತಿ ನೀಡುತ್ತಿದೆ. 2018 ನೇ ಸಾಲಿಗೆ ರಂಗಭೂಮಿ ಕ್ಷೇತ್ರವನ್ನು ಆಯ್ಕೆ ಮಾಡಲಾಗಿದ್ದು ರಂಗಭೂಮಿಯಲ್ಲಿ 35 ವರುಷಗಳ ಅನನ್ಯ ಸೇವೆ ಸಲ್ಲಿಸಿರುವ ವಸಂತ ವಿ.ಅಮೀನ್ ಅವರನ್ನು ಆಯ್ಕೆ ಮಾಡಲಾಗಿದೆ.
ಮಾನವ ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡಿರುವ ವಸಂತ ಅಮೀನ್ ಅವರು, `ಮಾನವ’ ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ.
ಒರಿಯರ್ದೊರಿ ಅಸಲ್ ನಾಟಕದ ನಿರ್ದೇಶನ ಹಾಗೂ ನಾಟಕದಲ್ಲಿ ಮುಖ್ಯ ಪಾತ್ರ, ಅಂಚಿಲತ್ತ್ ಇಂಚಿಲತ್ತ್ , ನಂಬುನನೆ ನಂಬೊಡು ಹಾಗೂ ಬೆನ್ಪಿನೊರಿ ತಿನ್ಪಿನೊರಿ ತುಳು ನಾಟಕಕ್ಕೆ ಸಲಹೆ ಸಹಕಾರ ಹಾಗೂ ನಟನೆ, ಗಂಗುನ ಗಮ್ಮತ್ತ್ ಹಾಗೂ ಬದ್ಕೆರೆಗಾದ್ ಸೈಪಿನಕುಲು, ಮಲ್ಲ ವಿಷಯ ಎಲ್ಯ ಮಲ್ಪಡ್ಚಿ ನಾಟಕದಲ್ಲಿ ಮುಖ್ಯ ಪಾತ್ರ, ಕುಸಲ್ದ ಕುಸೆಲ್ ನಾಟಕದ ನಿರ್ದೇಶನ, ಬಿರ್ಸೆ ತುಳು ಸಿನಿಮಾದಲ್ಲಿ ನಟನೆ, ಇಂದ್ರಲೋಕೊಡು ಮಾಲಾಶ್ರೀ ತುಳು ನಾಟಕದ ನಿರ್ದೇಶನ, ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಮಕರ ಜ್ಯೋತಿ, ಕನ್ನಡ ನಾಟಕದ ರಚನೆ, ನಿರ್ದೇಶನ ಹಾಗೂ ಗೀತಾ ಸಾಹಿತ್ಯ., ಬದ್‍ಕೊಂಜಿ ಕಬಿತೆ ಹಾಗೂ ಆಲಡೆ ತುಳು ಸಿನಿಮಾದ ಕತೆ, ಸಂಭಾಷಣೆ ಹಾಗೂ ಗೀತಾರಚನೆ, ನಂದಾರ ನಂದಾದೀಪ ಚಾರಿತ್ರಿಕ ತುಳು ಹಾಸ್ಯ ನಾಟಕದ ರಚನೆ, ನಿರ್ದೇಶನ ಹಾಗೂ ನಟನೆ, ವಜ್ರಕಂಬ, ಕದಿರೆದ ಕತೆ, ಶ್ರೀ ಕೃಷ್ಣದೇವರಾಯ, ಕೋಟಿ ಚೆನ್ನಯ್ಯ, ಬೀರ ಸಿರಿತ ಸಿಂಗದ ಕಿನ್ನಿ, ಕಿವುಡರ ಕತೆ, ಜಗಜ್ಯೋತಿ ನಿತ್ಯಾನಂದ, ಶನೀಶ್ವರ ಮಹಿಮೆ, ನಾಟಕಗಳ ರಚನೆ, ಕಾನೂನು ಕಣ್ಣ್ ಮುಚ್ಚಿನಗ ಎಂಬ ಸಾಮಾಜಿಕ ನಾಟಕದ ರಚನೆ, ವಿಶ್ವ ದಾಖಲೆಯ ತುಳು ಸಿನೆಮ ಸೆಪ್ಟಂಬರ್ 8 ಸಂಭಾಷಣೆ, ನಮ ಒಯಿಕ್ಕ್‍ಲಾ ಸೈ ತುಳು ಹಾಸ್ಯ ನಾಟಕದ ರಚನೆ ಹಾಗೂ ನಿರ್ದೇಶನ, ಒಯಿಕ್‍ಲಾ ಯೋಗ ಬೋಡು, ಬುಡಿ ಬುಡಿ ಗಡಿ ಬಿಡಿ, ರಡ್ಡೆಟ್ಟ್ ಏರೆಡ್ಡೆ, ಪೊರ್ಲದಾಯೆ, ಎದುರುಡೊಂಜಿ ಪಿರವುಡೊಂಜಿ, ಆಪಿನ ಆವೊಡೆ ಹಾಗೂ ದಾದ ಮಲ್ಪೆರೆ ಆಪುಂಡು ನಾಟಕದಲ್ಲಿ ನಟನೆ, ದಾನೆ ಆಪುಂಡು ತೂಕ ನಾಟಕದ ಕಥೆ ಹಾಗೂ ಸಂಭಾಷಣೆ, ಏರ್‍ಂದ್ ಏರೆಗೊತ್ತು ನಾಟಕದ ನಿರ್ದೇಶನ, ಏರಾ ಉಲ್ಲೆರ್ ಈ ಇಲ್ಲಡ್ ನಾಟಕಕ್ಕೆ ಸಾಹಿತ್ಯ ಒದಗಿಸಿರುವ ವಸಂತವ ವಿ.ಅಮೀನ್ ಅವರಿಗೆ, ಕುಲಾಲ ಪ್ರತಿಷ್ಠಾನ ಮಂಗಳೂರು ಇವರಿಂದ “ಸಾಹಿತ್ಯದ ಸಿರಿ” ಬಿರುದು, ತುಳು ನಾಟಕ ಕಲಾವಿದರ ಒಕ್ಕೂಟ(ರಿ) ಮಂಗಳೂರು ದಕ್ಷಿಣ ಕನ್ನಡ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವರ ಸಹೋಗದಲ್ಲಿ “ತೌಳವ ಪ್ರಶಸ್ತಿ”,ಕುಸಲ್ದ ಕಲಾವಿದೆರ್ ಕುಡ್ಲ ಇವರಿಂದ ಸನ್ಮಾನ, ಮುಂಬಾಯಿಯಲ್ಲಿ ನಾಟಕ ಆಯೋಜಕರ ವತಿಯಿಂದ ಅಭಿನಂದನೆ, ಬಿಲ್ಲವರ ಅಸೋಸಿಯೇಶನ್ ಮುಂಬಾಯಿ ಇವರಿಂದ ಅಭಿನಂದನೆ ದಕ್ಕಿದೆ.
ನಟನೆ, ನಿರ್ದೇಶನ, ರಂಗ ಸಾಹಿತ್ಯ, ಮತ್ತು ರಂಗಭೂಮಿಯ ಸಮಗ್ರ ಸಾಧನೆಯನ್ನು ಗುರುತಿಸಿ ವಸಂತ ವಿ.ಅಮೀನ್ ಇವರಿಗೆ ೨೦೧೮ ನೇ ಶಾಲಿನ ವಿಶುಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 99644 75220
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ :
ಸ್ಥಳ :

ಯುವವಾಹಿನಿ(ರಿ.) ಕುಪ್ಪೆಪದವು ಘಟಕ

ದಿನಾಂಕ : 18-08-2024
ಸ್ಥಳ : ಕುದ್ರೋಳಿ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
ಯುವವಾಹಿನಿ ಸಂಸ್ಥೆಯ ಮೂವತೈದು ವರುಷಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಗೌರವ

ಯುವವಾಹಿನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

  ಮಂಗಳೂರು : ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನವೆಂಬರ್ ಒಂದರಂದು ನಡೆಯುವ...

Sunday, 30-10-2022
error: Content is protected !!