ಯುವವಾಹಿನಿ(ರಿ) ಕೆಂಜಾರು-ಕರಂಬಾರು ಘಟಕದ ಪದಗ್ರಹಣ

ಕೆಂಜಾರು-ಕರಂಬಾರು : ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶದೊಂದಿಗೆ ಸಮಾಜ ಸಾಧಕರನ್ನು ಗುರುತಿಸುವ, ವಿದ್ಯಾರ್ಜನೆ ಹಾಗೂ ಅಶಕ್ತರಿಗೆ ನೆರವು ನೀಡುವ ಮೂಲಕ ಯುವವಾಹಿನಿ ಕೆಂಜಾರು-ಕರಂಬಾರು ಘಟಕ ಸಮಾಜ ಮುಖೀಯಾಗಿದೆ. ಕುಟುಂಬ ಹಾಗೂ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಹೇಳಿದರು.

ಕೆಂಜಾರು-ಕರಂಬಾರಿನ ಶ್ರೀದೇವಿ ಭಜನ ಮಂದಿರದಲ್ಲಿ ದಿನಾಂಕ 06.01.2019 ರಂದು ನಡೆದ ಯುವ ವಾಹಿನಿ ಕೆಂಜಾರು-ಕರಂಬಾರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು. ಬಿಲ್ಲವ ಸೇವಾ ಸಂಘ ಪೇಜಾವರದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಉದ್ಘಾಟಿಸಿದರು. ವಿಮಾನ ನಿಲ್ದಾಣ ಪ್ರಾಧಿಕಾರ ಪೊಲೀಸ್‌ ಸಂಪರ್ಕಾಧಿಕಾರಿ ಗೋಪಾಲಕೃಷ್ಣ ಕೆ. ಅವರು ಶುಭ ಹಾರೈಸಿದರು.


ನೂತನ ಪದಾಧಿಕಾರಿಗಳು
2019-20 ನೇ ಸಾಲಿನ ಸಂಘದ ನೂತನ ಅಧ್ಯಕ್ಷರಾಗಿ ಯಶವಂತ ಬಿ., ಉಪಾಧ್ಯಕ್ಷರಾಗಿ ಯಶವಂತ ವಿ. ಮತ್ತು ಸುಜಾತಾ ಶೇಖರ, ಪ್ರಧಾನ ಕಾರ್ಯ ದರ್ಶಿ- ಪ್ರಸಾದ್‌ ಪಾಲನ್‌, ಜತೆ ಕಾರ್ಯದರ್ಶಿ- ಲೋಕೇಶ್‌ ಕುಂದರ್‌, ಕೋಶಾಧಿಕಾರಿ ಸಂತೋಷ್‌ ವಿ. ಕರಂಬಾರು, ಜತೆ ಕಾರ್ಯದರ್ಶಿ -ರಾಕೇಶ್‌ ಕೋಡಿ ಕೆಂಜಾರು, ನಿರ್ದೇಶಕರಾದ ಪ್ರಜ್ಞಾ, ತೃಪ್ತಿ, ರೂಪೇಶ್‌, ನಯನಾ, ಪ್ರತಿಮಾ ಪಾಲನ್‌, ರೇಶ್ಮಾ ಲೋಕೇಶ್‌, ಜೀತೇಶ್‌ ಸಾಲ್ಯಾನ್‌, ಸಂದೀಪ್‌, ಶೇಖರ್‌, ಭೂಷಣ್‌ ಕುಮಾರ್‌, ಪ್ರೀತೇಶ್‌ ಅರ್ಬಿ, ವಿದ್ಯಾ ಕಿಶೋರ್‌, ಸಂಚಾಲಕಿ ಪ್ರಭಾವತಿ ಕೇಶವ್‌, ಸಂಘಟನ ಕಾರ್ಯದರ್ಶಿಯಾಗಿ ಜಿತೇಶ್‌ ಕೆಂಜಾರು, ವಿನೋದ್‌ ಅರ್ಬಿ, ಸುದೇಶ್‌ ಕೆಂಜಾರ್‌, ಭರತ್‌ ಕುಮಾರ್‌, ನಿರಂಜನ್‌, ಹರೀಶ್‌ ಕೊಪ್ಪಳ ಅವರು ಆಯ್ಕೆಯಾದ ಪದಾಧಿಕಾರಿಗಳಿಗೆ ಪದವಿ ಪ್ರದಾನ ಬೋಧಿಸಿದರು.


ಸಮ್ಮಾನ, ಗೌರವ
ಕರಂಬಾರು ಸ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ನವೀನಾ ಕುಮಾರಿ, ಕರಾಟೆ ಶಿಕ್ಷಕ ನಿತಿನ್‌ ಎನ್‌. ಸುವರ್ಣ ಅವರನ್ನು ಸಮ್ಮಾನಿಸಲಾಯಿತು. ಕ್ರೀಡಾಪಟುಗಳಾದ ಶೋಭಿತ್‌ ರಾಜ್‌, ಜ್ಯೋತಿಕಾ, ಎಂಜಿನಿಯರ್‌ ಮಿಥುನ್‌ ಕುಮಾರ್‌, ಪ್ರಸೂತಿಗಾರ್ತಿ ಆನಂದಿ, ಕೃಷಿಕ ಮಹಾಬಲ ಪೂಜಾರಿ, ರಾಜ್ಯ ಜಾನಪದ ಪ್ರಶಸ್ತಿ ವಿಜೇತೆ ಯಮುನಾ ಕೋಟ್ಯಾನ್‌ ಅವರನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಘಟಕದ ಅಧ್ಯಕ್ಷ ಗಣೇಶ್‌ ಅರ್ಬಿ ಅಧ್ಯಕ್ಷತೆ ವಹಿಸಿದ್ದರು.
ಕೆಂಜಾರು-ಕರಂಬಾರಿನ ಶ್ರೀದೇವಿ ಭಜನ ಮಂದಿರದ ಅಧ್ಯಕ್ಷ ಸೇಸಪ್ಪ ಅಮೀನ್‌, ಜಗನ್ನಾಥ ಸಾಲ್ಯಾನ್‌, ಶಿವಣ್ಣ ವರ್ತೆ ಮುಂಡೂರು, ಪದ್ಮನಾಭ ಮರೋಳಿ, ಶೇಖರ ಪೂಜಾರಿ ಉಪಸ್ಥಿತರಿದ್ದರು. ಸುಜಾತಾ ಶೇಖರ್‌ ಸ್ವಾಗತಿಸಿದರು. ಜಿತೇಶ್‌ ಸಾಲ್ಯಾನ್‌ ವರದಿ ವಾಚಿಸಿದರು. ವಿನೋದ್‌ ಅರ್ಬಿ ನಿರೂಪಿಸಿದರು. ಪ್ರಸಾದ್‌ ಪಾಲನ್‌ ವಂದಿಸಿದರು.

One thought on “ಯುವವಾಹಿನಿ(ರಿ) ಕೆಂಜಾರು-ಕರಂಬಾರು ಘಟಕದ ಪದಗ್ರಹಣ

  1. ನೂತನ ಪದಾಧಿಕಾರಿಗಳ ತಂಡಕ್ಕೆ ಶುಭ ಹಾರೈಕೆಗಳು…

Leave a Reply

Your email address will not be published. Required fields are marked *

ಸಂಪರ್ಕಿಸಿ : +91 99644 75220
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ :
ಸ್ಥಳ :

ಯುವವಾಹಿನಿ(ರಿ.) ಕುಪ್ಪೆಪದವು ಘಟಕ

ದಿನಾಂಕ : 18-08-2024
ಸ್ಥಳ : ಕುದ್ರೋಳಿ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
ಯುವವಾಹಿನಿ ಸಂಸ್ಥೆಯ ಮೂವತೈದು ವರುಷಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಗೌರವ

ಯುವವಾಹಿನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

  ಮಂಗಳೂರು : ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನವೆಂಬರ್ ಒಂದರಂದು ನಡೆಯುವ...

Sunday, 30-10-2022
error: Content is protected !!