Yuvavahini

SEP 16, 2018 3.17 PM IST

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಶಿವಗಿರಿಯಾತ್ರೆ

ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ದಿನಾಂಕ 16.09.2018 ರಂದು ನಡೆದ ಶಿವಗಿರಿಯಾತ್ರೆ ಯಶಸ್ವಿಯಾಗಿ ನಡೆಯಿತು . ಮಂಗಳೂರಿನಿಂದ ರೈಲಿನ ಮೂಲಕ ಹೊರಟ ಯುವವಾಹಿನಿಯ ಯಾತ್ರಾ ತಂಡವನ್ನು ವರ್ಕಳ ರೈಲು ನಿಲ್ದಾನದಲ್ಲಿ ಶಿವಗಿರಿ ಮಠದ ಪೂಜ್ಯ ಸತ್ಯಾನಂದತೀರ್ಥ ಶ್ರೀಗಳು ಸ್ವಾಗತಿಸುವ ಮೂಲಕ ಯಾತ್ರೆಯು ಆರಂಭವಾಯಿತು. ಸ್ವಾಮೀಜಿಯವರ ನೇತೃತ್ವದಲ್ಲಿ ಶಿವಗಿರಿಯಲ್ಲಿ ನ ನಾರಾಯಣಗುರುಗಳ ಮಹಾಸಮಾಧಿ ಮತ್ತು ಕೆಲ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಿದೆವು. ಆ ಬಳಿಕ ಗುರುಗಳ ಪೂರ್ವಾಶ್ರಮದ ಮನೆ, ಸುಬ್ರಹ್ಮಣ್ಯ ದೇವಾಲಯ, ನಾರಾಯಣಗುರುಗಳೇ ತನ್ನ ಕಯ್ಯಾರೆ ಪ್ರತಿಷ್ಟಾಪಿಸಿದ (ಶಿವಲಿಂಗ) ಅರಿವೀಪುರ ದೇವಸ್ಥಾನ ಸಂದರ್ಶನವೂ ಆಯಿತು. ನಂತರ ಕನ್ಯಾಕುಮಾರಿಯ ಶ್ರೀ ದೇವಿಯ ದರ್ಶನ ಮತ್ತು ವಿಶೇಷ ಪೂಜೆಯ ದರ್ಶನದ ವಿಶೇಷ ಅನುಭವವೂ ದೊರಕಿತು. ಮರುದಿನ ಬೆಳ್ಳಂಬೆಳಗ್ಗೆ ಗುರುಗಳು 6 ವರ್ಷ ತಪಗೈದ ಮರುತ ಮಲೈ ಬೆಟ್ಟ ಹತ್ತುವ ಮೂಲಕ ವಿಶೇಷ ಅನುಭವದೊಂದಿಗೆ ಗುರುಗಳ ಅನುಗ್ರಹಕ್ಕೆ ಯತ್ರಾರ್ಥಿಗಳು ಪಾತ್ರರಾದರು , ಬಳಿಕ ಕನ್ಯಾಕುಮಾರಿಯ ವಿವೇಕಾನಂದ ಬಂಡೆಗೆ ತೆರಳಿ ಕನ್ಯಾಕುಮಾರಿಯ ಒಂಟಿಕಾಲಿನ ದರ್ಶನ ಮತ್ತು ಅಲ್ಲಿಂದಲೇ ಭಾರತ ದರ್ಶನವೂ ಆದಂತಾಯಿತು. ತ್ರಿವೇಣಿ (ಅರಬ್ಬೀ,ಹಿಂದೂ,ಬಂಗಾಳಕೊಲ್ಲಿ ಸಮುದ್ರ) ಸಂಗಮನ್ನೂ ಕಣ್ತುಂಬಿಸಿಕೊಳ್ಳುವಂತಾಯಿತು.‌ ಬಳಿಕ ತಿರುವಂಕೂರಿನ ಒಡೆಯ ಅನಂತ ಪದ್ಮನಾಭನ ದರ್ಶನದೊಂದಿಗೆ ಯಾತ್ರೆ ಸಮಾಪನಗೊಂಡಿತು.
ಯುವವಾಹಿನಿ (ರಿ)ಮಂಗಳೂರು ಘಟಕದ ಅಧ್ಯಕ್ಷ ನವೀನ ಚಂದ್ರ ಹಾಗೂ ಘಟಕದ ಸದಸ್ಯರಾದ ಸದಾನಂದ ಕುಳಾಯಿಯವರ ಸಂಚಾಲಕತ್ವದಲ್ಲಿ ಒಟ್ಟು 2 ದಿನಗಳ ಕಾಲ ನಡೆದ ಈ ತೀರ್ಥಯಾತ್ರೆಯಲ್ಲಿ ಸಾಹಿತಿ, ಪತ್ರಕರ್ತರು, ಉದ್ಯಮಿಗಳು, ಉದ್ಯೋಗಿಗಳು, ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಈ ಬಾರಿ ಯುವಕರು ಹೆಚ್ಚು ಪಾಲ್ಗೊಂಡಿದ್ದರಿಂದ ಯಾತ್ರೆಯ ಉತ್ಸಾಹ ಇಮ್ಮಡಿಗೊಂಡಿದ್ದಂತೂ ಸುಳ್ಳಲ್ಲ. ಯಾತ್ರೆ ಪೂರ್ತಿ ಸ್ವಾಮೀಜಿಗಳು ಗುರುಗಳ ಜೀವನ ಚರಿತ್ರೆ ಸ್ಥಳಗಳ ಮಹತ್ವವನ್ನು ತಿಳಿಸಿದ್ದರಿಂದ ಬಂದವರಿಗೆಲ್ಲ ಅಧ್ಯಯನ ಪ್ರವಾಸದ ಅನುಭವವಾದಂತಾಯಿತು.ಎಲ್ಲಾ ಯತ್ರಾರ್ಥಿಗಳ ಸಹಕಾರದಿಂದ ಯಾತ್ರೆಯು ಯಶಸ್ವಿಯಾಗಿ ಸಮಾಪನ ಗೊಂಡಿತು

2 thoughts on “ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಶಿವಗಿರಿಯಾತ್ರೆ

  1. Very well managed by Yuvavahini Mangalore Chapter. It was very informative, very joyful, very interactive.. Thank you so much for making me a part of this wonderful journey.

  2. ನಮ್ಮ ಈ ಯಾತ್ರೆ ಒಂದು ಅಧ್ಯಯನ ಯಾತ್ರೆ ಆಗಿತ್ತು .
    ನಾರಾಯಣ ಗುರು ಸ್ವಾಮಿಗಳ ಸಾಮಾಜಿಕ ಕ್ರಾಂತಿಯ ಸಂಫೂರ್ಣ ಮಾಹಿತಿಯನ್ನು ಶಿವಗಿರಿ ಮಠದ ಶ್ರೀ ಗಳಾದ ಸತ್ಯಾನಂದ ತೀರ್ಥ ಸ್ವಾಮಿಗಳು ಬಂದಂಥ ಎಲ್ಲರಿಗೂ ಸವಿವರವಾಗಿ ತಿಳಿಸಿದ್ದಾರೆ. ಮರುತ್ತ ಮಲೆ ಬೆಟ್ಟದ ಮೇಲಿನ ಅನುಭವ ಬಹಳ ವಿಶೇಷ ವಾಗಿತ್ತು. ಎಲ್ಲ ರೂ ರೋಮಾಂಚನಗೊಂಡಿದ್ದರು…ಕನ್ಯಾ ಕುಮಾರಿ ಮತ್ತು ಅನಂತ ಪದ್ಮನಾಭ ದೇಗುಲದ ದರ್ಶನದೊಂದಿಗೆ ಯಾತ್ರೆಯು ಯಶಸ್ವಿಯಾಗಿ ಸಮಾಪನೆಗೊಂಡಿತು.
    ಈ ಶಿವಗಿರಿ ಯಾತ್ರೆಯನ್ನು ಯಶಸ್ವಿಯಾಗಿ ಸಂಘಟಿಸಿದ ಯುವವಾಹಿನಿಯ ಸರ್ವ ಸದಸ್ಯರಿಗೆ ಅಭಿನಂದನೆಗಳು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!