Yuvavahini

APR 08, 2018 4.56 PM IST

ಯುವವಾಹಿನಿ (ರಿ) ಉಡುಪಿ ಘಟಕ

ಅಂತರಂಗದಲ್ಲಿ ತಣ್ಣಗೆ ಹರಿದಾಡಿ ಮುದಗೊಳಿಸಿದ ಸಖೀ ಸಂವಾದ : ಪೂರ್ಣಿಮಾ ಸುರೇಶ್

ಪೂರ್ಣಿಮಾ ಸುರೇಶ್

ಸಖ್ಯ ಸುಖಕೆ ಪರಿಧಿ ಇದೆಯೇ? ಅಂತರಂಗದಲಿ ತಣ್ಣಗೆ ಹರಿದಾಡಿ ಮುದಗೊಳಿಸಿ,ಹಿತಾನುಭವ ಜೊತೆಜೊತೆಗೆ ಭದ್ರತೆಯ ಭಾವ ಉಣಿಸಿ ಸಮೃದ್ಧಗೊಳಿಸುವುದು.ಅಂತೇ ಸಖಿ- ಸಖ ಪದಗಳು ಪಂಚೇಂದ್ರಿಯಗಳ ಮುಟ್ಟಿದರೆ ಉಲ್ಲಾಸ. ತಂಗಾಳಿ ಸ್ಪರ್ಶಿಸಿದಂತೆ.
ಈ ಭಾವ ನೆನಕೆಗೆ ದಿನಾಂಕ‌08.04.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ನೆನಪಿನಲ್ಲಿ ” ಸಖೀ ಸಂವಾದ” ಅರಳಿಸುವ ಜವಾಬ್ದಾರಿಯನ್ನ ನಿಭಾಯಿಸಿತ್ತು.

ಹೆಸರಿನಲ್ಲೇ ಹೂವಿನಲಿ ಅಡಗಿಹ ಗಂಧದ ಸೆಳೆತ ..ಕರೆದವರು ಸಖೀ ಅಮಿತ. ವೇದಿಕೆಯಲ್ಲಿ ಸಂವಾದ, ಮಾತು, ಹರಟೆ, ಕನಸು ಎನ್ನುತ್ತ ನನ್ನ ಅಕ್ಕ ಪಕ್ಕ ಕೂತು ಹೆಣ್ಣಿನ ಸಮಸ್ಯೆ, ಜವಾಬ್ದಾರಿ, ಮನಸ್ಸು ಯೋಚನೆ..ಆಕೆಯ ಸಮಾಜಮುಖಿ ನಡೆ, ಗೌರವಿಸಲ್ಪಡುವ- ಘಾಸಿಗೊಳ್ಳುವ ಹೆಣ್ತನ, ಆಕೆಯ ವೃತ್ತಿ- ಪೃವೃತ್ತಿ..ಹೀಗೆ ತಮ್ಮೊಳಗನ್ನ ಹರವಿ ಸಂವಾದದ ಬೆಡಗನ್ನೂ ಹೆಚ್ಚಿಸಿ ನಿಜ ಅರ್ಥದಲ್ಲಿ ಪರಿಪೂರ್ಣಗೊಳಿಸಿದವರು ಈ ಸಾಧಕಿಯರು.

ಸುಮಾರು 3 ತಾಸುಗಳ ಕಾಲ ಅಂತರಂಗದ ರಿಂಗುಣಿತ ನಾದ ವೀಕ್ಷಕ,ಪ್ರೇಕ್ಷಕರನ್ನು ಹೊರಹೋಗದಂತೆ ತಡೆದು ಕೂರಿಸಿತು. ಭಾವ ನಶೆ, ವಾಸ್ತವದ ಸಜೀವ ಚಿತ್ರ ಚಿತ್ರಿಸುತ್ತ ..ಪ್ರತಿಸ್ಪಂದನವನ್ನೂ ಜೊತೆಜೊತೆಗೆ ಆಯುತ್ತ ನಡೆದ ನಡೆ ಇದಾಗಿತ್ತು. ಇದು ವಾದ- ಪ್ರತಿವಾದದ ಅಂಗಣವಾಗಿರಲಿಲ್ಲ. ಯಾವುದೋ ಸುಂದರ ಗೀತೆಯ ನೆನಪಿಸುತ್ತಾ ಗುನುಗುತ್ತಾ..ದಡದಲ್ಲಿರುವವರನ್ನೂ ತನ್ನಜೊತೆ ಕರೆದೊಯ್ಯುವ ನನ್ನೂರ ಹೊಳೆ ನೆನಪಾಯಿತು. ಇಲ್ಲೂ ಒಂದಿಷ್ಟು ಸಾತ್ವಿಕ ಆಕ್ರೋಶದ ಕಿಡಿ, ಅಸಾಯಕತೆಗಳು ಜೊತೆಜೊತೆಗೆ ಭರವಸೆ, ಬುಟ್ಟಿ ಪ್ರೀತಿ,ವಾತ್ಸಲ್ಯಗಳನ್ನೂ ಮನಸುಗಳಿಗೆ ರವಾನಿಸುವ ಕಾರ್ಯ ನಡೆದಿತ್ತು. ಬೆಳಕ ಉಂಡು, ಬೆಳಕು ತುಂಬುವ ಅನುಭಾವದ ಹೊಳಹು.
ವೇದಿಕೆಯಲ್ಲಿ ವೃತ್ತಿ ಗಾಂಭೀರ್ಯ ಉಟ್ಟು ಸಮವಸ್ತೃದಲ್ಲಿ ಪೋಲಿಸ್ ಠಾಣಾಧಿಕಾರಿ ಮುಕ್ತಾ, ಕಲಾವಿದೆ ಗೆಳತಿ ಮಾನಸಿ ಸುಧೀರ್, ಉಪನ್ಯಾಸಕಿ ಸಾಹಿತ್ಯದ ಎಳೆಎಳೆ ಬಿಡಿಸಿಡುವ ಸುಧಾರಾಣಿ, ಆಪ್ತ ಸಮಾಲೋಚಕಿ ಶಿಲ್ಪಾ ಜೋಷಿ, ಕನಸುಗಳನ್ನ ಕನಸುಗಳಾಗಿಯೇ ಇರಿಸದಿರಿ ಎನ್ನುತ್ತ ನಾಯಕತ್ವದ ಮಂತ್ರವನು ಮಹಿಳೆಯರಲಿ ತುಂಬುವ ಉದ್ಯಮಿ ರೇಣು ಜಯರಾಮ್ ಇವರೆಲ್ಲರೂ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದರು. ಎಲ್ಲರೂ ವ್ಯಕ್ತಿತ್ವವನು ಸುಂದರವಾಗಿ ಅರಳಿಸಿಕೊಂಡವರು . ಇವರ ನಡುವಿನಲಿ ಸಮನ್ವಯಕಾರಳಾಗಿ ನಾನು ಕೂತಿದ್ದು ….ನನ್ನ ಕೂರಿಸಿದ್ದು ಗೆಳತಿಯರಾದ ಸಂಧ್ಯಾ ಹಾಗೂ ಅಮಿತ. ಅವರಿಬ್ಬರಿಗೂ ಅಮಿತ ವಂದನೆಗಳು.

ಇದು ಸುಂದರವಾದ ಭಾವದೊಡ್ಡೋಲಗ..ನೆನಪಿನ ತೇರು ಸಾಗುತ್ತಲೇ ಇದೆ…ಮನಸಿಗಂಟಿರುವ ಪರಿಮಳ ಅಳಿಸಲಾಗದು.

ಎಲ್ಲ ಸಖಿಯರಿಗೆ ಹೃದಯ ಭಾಷೆಯಲಿ ವಂದನೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!