ಯುವವಾಹಿನಿ(ರಿ) ಕೇಂದ್ರ ಸಮಿತಿ,ಮಂಗಳೂರು

ಮುದ್ದು ಮೂಡು ಬೆಳ್ಳೆ ಇವರಿಗೆ ವಿಶುಕುಮಾರ್ ಪ್ರಶಸ್ತಿ-2014

ಮುದ್ದು ಮೂಡು ಬೆಳ್ಳೆ ವಿಶುಕುಮಾರ್ ಪ್ರಶಸ್ತಿ -2014 ಪುರಸ್ಕ್ರತರು

1968 ರಲ್ಲಿ ತನ್ನ ಪ್ರಥಮ ಕಥೆ ಮತ್ತು ಕವನವನ್ನು ಪ್ರಕಟಿಸಿದ್ದ ಬಹುಭಾಷಾ ಕಥೆಗಾರ, ಕವಿ, ಗಾಯಕ, ನಟ, ನಿರ್ದೇಶಕ ಜಾನಪದ ಇತಿಹಾಸಕಾರ, ಅಧ್ಯಯನಕಾರ, ವಿಮರ್ಶಕ ಮುದ್ದು ಮೂಡುಬೆಳ್ಳೆ ಕಳೆದ 45 ವರುಷದಿಂದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚನೆಯನ್ನು ಮಾಡುತ್ತಾ ಬರುತ್ತಿದ್ದಾರೆ.
ನಾಡು ನುಡಿಯಿದೊಂದು ಬಗೆ, ಕಾಂತಬಾರೆ-ಬುಧಬಾರೆ, ತುಳುನಾಡಿನ ಜಾನಪದ ವಾದ್ಯಗಳು, ತುಳು ರಂಗಭೂಮಿ ಮುಂತಾದವುಗಳು ಮುದ್ದು ಮೂಡುಬೆಳ್ಳೆ ಅವರ ಪ್ರಮುಖ ಅಧ್ಯಯನ ಕೃತಿಗಳು. ಕನ್ನಡ ಮಾತ್ರವಲ್ಲದೆ ತುಳು, ಕೊಂಕಣಿ ಮತ್ತು ಇಂಗ್ಲೀಷ್ ಭಾಷೆಯಲ್ಲೂ ಕೃತಿ ರಚನೆಯನ್ನು ಮಾಡಿರುವ ಶ್ರೀಯುತರು ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಿಚಾರಗೋಷ್ಠಿಗಳಲ್ಲೂ ಭಾಗವಹಿಸಿದ್ದಾರೆ.
1953 ನೇ ಮೇ 7 ರಂದು ಜನಿಸಿರುವ ಮುದ್ದು ಮೂಡುಬೆಳ್ಳೆ ಮೂಲತಃ ಉಡುಪಿ ತಾಲೂಕಿನ ಮೂಡುಬೆಳ್ಳೆಯವರಾದರೂ ಪ್ರಸ್ತುತ ಮಂಗಳೂರು ನಿವಾಸಿ. ಕನ್ನಡ ಮತ್ತು ಸಮಾಜಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಪಡೆದವರು ಕೊಂಕಣಿ ಭಾಷೆಯಲ್ಲಿ ಸ್ನಾತಕೋತರ ಡಿಪ್ಲೊಮಾ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದವರು. 1976 ರಲ್ಲಿ ನ್ಯಾಯಾಂಗ ಇಲಾಖೆಯಲ್ಲಿ ಉದ್ಯೋಗಿಯಾಗಿ ಸೇವಾ ವೃತ್ತಿಯನ್ನು ಆರಂಭಿಸಿದ ಶ್ರೀಯುತರು 1985ರವರೆಗೆ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿದ್ದರು. ತದನಂತರದ ದಿನದಲ್ಲಿ ಮಂಗಳೂರು ಆಕಾಶವಾಣಿಗೆ ಸೇರ್ಪಡೆಗೊಂಡು ಅಲ್ಲಿ ಹಿರಿಯ ಕಾರ್ಯಕ್ರಮ ಉದ್ಘೋಷಕರಾಗಿ ಸೇವೆ ಸಲ್ಲಿಸಿ ಇತ್ತಿಚೆಗಷ್ಟೇ ನಿವೃತ್ತಿಯನ್ನು ಪಡೆದುಕೊಂಡರು.


1976-96 ರ ನಡುವೆ ಮಾಸ್ತಿ ಕಥಾ ಪುರಸ್ಕಾರ ಸೇರಿದಂತೆ 9 ಬಾರಿ ತನ್ನ ಕಥೆಗಳಿಗೆ ಬಹುಮಾನವನ್ನು ಪಡೆದುಕೊಂಡಿದ್ದಾರೆ. 1978 ರಲ್ಲಿ ಚೇತನಾ ಸಾಹಿತ್ಯೋತ್ಸವ ಕಾವ್ಯ ಪ್ರಶಸ್ತಿ, 2004 ರಲ್ಲಿ ಗೋರೂರು ಪ್ರಶಸ್ತಿ, 1994 ರಲ್ಲಿ ಒಸಯೋ ತುಳು ಕಥಾ ಸಂಕಲನ, 1999 ರಲ್ಲಿ ಪೂವರಿ ಜಾನಪದ ಕೃತಿ, 2009 ರಲ್ಲಿ ಕನ್ನೆಗ ತುಳು ಕವನ ಸಂಕಲನ ಇವೆಲ್ಲ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳಿಸಿವೆ. 2004 ರಲ್ಲಿ ಸತ್ಯದ ಸುರಿಯ ಸಾಯದ ಪಗರಿ ತುಳು ಕಾದಂಬರಿಗೆ ಪಣಿಯಾಡಿ ಪ್ರಶಸ್ತಿಯೂ ಲಭಿಸಿದೆ. ಇದಲ್ಲದೆ 2012 ರಲ್ಲಿ ಕಾಂತಾಬಾರೆ -ಬೂದಬಾರೆ ಜಾನಪದ ಅಧ್ಯಯನ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಪ್ರಶಸ್ತಿಯನ್ನೂ ಪಡೆದಿರುವರು. 2009ರಲ್ಲಿ ಆಕಾಶವಾಣಿಯ ರಾಜ್ಯ ಮಟ್ಟದ ಪ್ರಶಸ್ತಿ, 2012ರಲ್ಲಿ ಆಕಾಶವಾಣಿಯ ರಾಷ್ಟ್ರೀಯ ಪ್ರಶಸ್ತಿ ವಿಜೇತರು. ಇವರ ಮೂರು ಕೃತಿಗಳು ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಗೆ ಪಠ್ಯವಾಗಿದೆ, ಆತ್ಮಶಕ್ತಿಯ ತ್ರೈ ಮಾಸಿಕದ ಉಪ ಸಂಪಾದಕ, ಕೋಟಿ ಚೆನ್ನಯ ಪಾಡ್ದನ ಸಂಪುಟದ ಸಂಪಾದಕೀಯ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ 2009 ರಿಂದ ಬಿಲ್ಲವರ ಗುತ್ತು/ಗುರಿಕಾರ ಮನೆತನಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ತಂಡದ ಸದಸ್ಯರೂ ಆಗಿ ಜಾನಪದ ಅಧ್ಯಯನದಲ್ಲಿ ನಿರತರಾಗಿದ್ದಾರೆ.
ತನ್ನ ಹನ್ನೆರಡನೇ ವರುಷದಲ್ಲೇ ಬರವಣಿಗೆಯತ್ತ ಆಕರ್ಷಿತರಾದ ಶ್ರೀಯುತರು ಕಥೆ, ಕವನ, ನಾಟಕ, ಸಂಶೋಧನೆಗೆ ಸಂಬಂಧಿಸಿ ಈವರೆಗೆ 30 ಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಚೆರಾನ್ ರಹಸ್ಯ ಪತ್ತೆದಾರಿ ಕಾದಂಬರಿ, ನಮನ ಕವನ ಸಂಕಲನ, ಓದುತ್ತೀರಾ ನನ್ನ ಕಥೆ, ಮೆಟ್ಟಿಲುಗಳು, ಗೂಢ ಮತ್ತು ಇತರ ಕಥೆಗಳು, ಸುಖ ದ್ವನಿ, ಮೂಡುಬೆಳ್ಳೆ ಕಥೆಗಳು ಇವೆಲ್ಲ ಕಥಾ ಸಂಕಲನಗಳು, ಇದಲ್ಲದೆ ಉದಿಪು, ಒಸಯೋ ತುಳು ಕೃತಿಗಳು ವಿ.ವಿ ಪಠ್ಯವಾಗಿದೆ, ನೇತಾಜಿ ಸುಭಾಷ್ ಚಂದ್ರ ಬೋಸ್, ವ್ಯಕ್ತಿ ಪರಿಚಯ, ಜಾನಪದ ಇನೆ ರೂಪಕೊಲು, ನಮ ಎಡ್ಡೆನಾ ಊರೆಡ್ಡೆ ನಾಟಕ, ಕಾಂತಾಬಾರೆ ಬೂದಬಾರೆ ಸಂಶೋಧನಾ ಕೃತಿ, ಪೂವರಿ ಅಧ್ಯಯನ ಲೇಖನ, ಮುಂತಾದ ಕೃತಿಗಳನ್ನೂ ರಚಿಸಿದ್ದಾರೆ.
ಮೊಗವೀರ ಪತ್ರಿಕೆಯ ಅತ್ಯತ್ತಮ ಲೇಖಕ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಬಹುಮಾನ, ಗೋರೂರು ಸಾಹಿತ್ಯ ಪುರಸ್ಕಾರ, ಭಾರತೀಯ ಜೇಸಿಸ್ ಪ್ರಶಸ್ತಿ, ಏಷ್ಯಾ- ಫೆಸಿಫಿಕ್ ಅಂತರಾಷ್ಟ್ರೀಯ ಪ್ರತಿಭಾಶಾಲಿಗಳ ದಾಖಲೆ ಸೇರ್ಪಡೆ, ಕರ್ನಾಟಕ ಜಾನಪದ ಆಟ ಕೂಟ ಪ್ರಶಸ್ತಿ, ಪಣಿಯಾಡಿ ಕಾದಂಬರಿ ಪ್ರಶಸ್ತಿ, ಪುನರೂರು ಸಂಶೋಧನಾ ಪ್ರಶಸ್ತಿ, ಅಖಿಲ ಕರ್ನಾಟಕ ಬಾನುಲಿ ನಾಟಕ ನಿರ್ಮಾಣ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ದತ್ತಿ ನಿಧಿ ಪ್ರಶಸ್ತಿ ಇವೆಲ್ಲ ಇವರ ಸಾಧನಗೆ ಸಂದ ಗೌರವಗಳಾಗಿವೆ.
ಸಾಹಿತ್ಯಕ್ಕೆ ಇವರ ಅನನ್ಯ ಸೇವೆಯನ್ನು ಗುರುತಿಸಿ ಹರೀಶ್ ನಿಂಜೂರು ಅವರು 2012 ರಲ್ಲಿ ಮೈಸೂರಿನ ಭಾಷಾ ಸಂಸ್ಥೆಗಾಗಿ `ಮುದ್ದು ಮೂಡುಬೆಳ್ಳೆ ತುಳು ಭಾಷಾ ಸಾಹಿತ್ಯ ಸೇವೆ ‘ ಎನ್ನುವ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿದ್ದಾರೆ. 1973 ರಲ್ಲಿ ಬಿಡುಗಡೆಯಾದ ಮೊದಲ ಕೋಟಿ ಚೆನ್ನಯ ಸಿನಿಮಾದಲ್ಲಿ ಬಣ್ಣ ಹಚ್ಚಿದ ಬೆಳ್ಳೆ ಅವರು, ಹಲವಾರು ಧ್ವನಿ ಸುರುಳಿಗಳಿಗೆ ಸಾಹಿತ್ಯ ಒದಗಿಸಿದ್ದಾರೆ, ಬ್ರಹ್ಮಶ್ರೀ ನಾರಾಯಣ ಗುರು ಸಾಕ್ಷ್ಯ ಚಿತ್ರ, ಕೋಟಿ ಚೆನ್ನಯ ಸಾಕ್ಷ್ಯ ಚಿತ್ರ, ಕಾಂತಾಬಾರೆ ಬೂದಬಾರೆ, ಅಮರ್‍ಬೊಳ್ಳಿಲು ಸಾಕ್ಷ್ಯಚಿತ್ರ, ಕೋಟಿ ಚೆನ್ನಯ ಸುಪ್ರಭಾತ ಇವೆಲ್ಲ ಪ್ರಮುಖವಾದುದು.
ಸಾಹಿತ್ಯ ಸಂಸ್ಕøತಿ ವೇದಿಕೆ ಮೂಡು ಬೆಳ್ಳೆ ಉಡುಪಿ ಇಲ್ಲಿ ಅಧ್ಯಕ್ಷರಾಗಿ, ಆಕಾಶವಾಣಿ ದೂರದರ್ಶನ ಉದ್ಯೋಗಿಗಳ ಸಂಘದಲ್ಲಿ ಅಧ್ಯಕ್ಷರಾಗಿ, ಅಖಿಲ ಭಾರತ ಆಕಾಶವಾಣಿ ಉದ್ಘೋಷಕರ ಸಂಘದ ಕರ್ನಾಟಕ ರಾಜ್ಯ ಶಾಖೆಯಲ್ಲಿ ಕೋಶಾಧಿಕಾರಿಯಾಗಿ, ಕನ್ನಡ ಸಾಹಿತ್ಯ ಪರಿಷತ್, ಸೃಜನ ಉಡುಪಿ, ಬ್ರಹ್ಮ ಬೈದರ್ಕಳ ಸಾಂಸ್ಕøತಿಕ ಅಧ್ಯಯನ ಪ್ರತಿಷ್ಠಾಣ ಆದಿ ಉಡುಪಿ ಇದರ ಗೌರವ ವಿಶ್ವಸ್ಥರಾಗಿ, ನವರಂಗಯುವಕ ಮಂಡಲ, ನಾರಾಯಣ ಗುರು ಕಲಾವೃಂದ, ತುಳು ನಾಟಕ ಕಲಾವಿದರ ಸಂಘ ಮುತಾಂದ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸ್ತುತ ಆತ್ಮಶಕ್ತಿ ತ್ರೈ ಮಾಸಿಕ ಪತ್ರಿಕೆಯ ಗೌರವ ಉಪ ಸಂಪಾದಕರಾಗಿ, ದ.ಕ ಜಿಲ್ಲಾಡಳಿತದ ‘ಮಂಗಳೂರು ದರ್ಶನ’ ಗ್ರಂಥ ಸಂಪುಟ ಯೋಜನೆಯ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತ ಮುದ್ದು ಮೂಡುಬೆಳ್ಳೆ ಅವರ ಸಮಗ್ರ ಸಾಹಿತ್ಯ ಸೇವೆಯನ್ನು ಗುರುತಿಸಿ ಯುವವಾಹಿನಿಯು ವಿಶುಕುಮಾರ್ ದತ್ತಿ ನಿಧಿ ಸಂಚಾಲನ ಸಮಿತಿ ಮೂಲಕ ನೀಡುತ್ತಿರುವ ‘ವಿಶುಕುಮಾರ್ ಪ್ರಶ್ತಸ್ತಿ’ಗೆ ಆಯ್ಕೆ ಮಾಡಿದೆ.

ವಿಶುಕುಮಾರ್ ಪ್ರಶಸ್ತಿ ಪದಾನ ಸಮಾರಂಭ -2014

  • ಅಧ್ಯಕ್ಷತೆ :
    ಡಾ| ಸತ್ಯನಾರಾಯಣ ಮಲ್ಲಿಪಟ್ಣ
    ಪ್ರಾಂಶುಪಾಲರು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು
    ಪ್ರಶಸ್ತಿ ಪ್ರದಾನ :
    ಶ್ರೀ ಮಲಾರ್ ಜಯರಾಮ್ ರೈ
    ಪತ್ರಕರ್ತರು ಹಾಗೂ ಸಾಹಿತಿ
    ಮುಖ್ಯ ಅತಿಥಿಗಳು :
    ಶ್ರೀಮತಿ ಜಾನಕಿ ಬ್ರಹ್ಮಾವರ
    ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
    ಶ್ರೀ ಬಿ.ಎ. ಮೊಹಮ್ಮದ್ ಹನೀಫ್
    ಮಾಜಿ ಅಧ್ಯಕ್ಷರು, ಬ್ಯಾರಿ ಸಾಹಿತ್ಯ ಅಕಾಡೆಮಿ
    `ವಿಶುಕುಮಾರ್ ಪ್ರಶಸ್ತಿ’ ಪುರಸ್ಕøತರು :
    ಶ್ರೀ ಮುದ್ದು ಮೂಡುಬೆಳ್ಳೆ
    ಬಹುಭಾಷಾ ಸಾಹಿತಿ, ಸಂಶೋಧಕರು
    ಯುವವಾಹಿನಿ ಯುವ ಸಾಹಿತ್ಯಪ್ರಶಸ್ತಿ – ಪುರಸ್ಕ್ರತರು
    ಶ್ರೀ ಚೇತನ್ ಮುಂಡಾಜೆ
    ಸಾಹಿತ್ಯ ಪ್ರತಿಭೆ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 99644 75220
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ :
ಸ್ಥಳ :

ಯುವವಾಹಿನಿ(ರಿ.) ಕುಪ್ಪೆಪದವು ಘಟಕ

ದಿನಾಂಕ : 18-08-2024
ಸ್ಥಳ : ಕುದ್ರೋಳಿ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
ಯುವವಾಹಿನಿ ಸಂಸ್ಥೆಯ ಮೂವತೈದು ವರುಷಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಗೌರವ

ಯುವವಾಹಿನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

  ಮಂಗಳೂರು : ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನವೆಂಬರ್ ಒಂದರಂದು ನಡೆಯುವ...

Sunday, 30-10-2022
error: Content is protected !!