ಯುವವಾಹಿನಿ (ರಿ) ಕೇಂದ್ರ ಸಮಿತಿ,ಮಂಗಳೂರು

ಯುವವಾಹಿನಿ ವಿದ್ಯಾನಿಧಿ -2013

ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಉಪಸಮಿತಿ “ವಿದ್ಯಾನಿಧಿ” ಸಮಿತಿಯು ಮೂಲಧ್ಯೇಯಕ್ಕೆ ಅನುಗುಣವಾಗಿ, ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಬಡತನದ ಕಾರಣದಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಆರ್ಥಿಕ ಸಹಾಯವನ್ನು ನೀಡುವುದರ ಜೊತೆಗೆ ಅವರ ವ್ಯಕ್ತಿತ್ವ ವಿಕಸನ, ಶೈಕ್ಷಣಿಕ ಮಾಹಿತಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇದಲ್ಲದೆ ಈ ವಿದ್ಯಾರ್ಥಿಗಳ ಪೋಷಕರಿಗೂ ಉಪಯುಕ್ತವಾದ ಮಾಹಿತಿ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ಈ ಹಿನ್ನೆಲೆಯೊಂದಿಗೆ ಯುವವಾಹಿನಿ (ರಿ) ವಿದ್ಯಾನಿಧಿ ಉಪಸಮಿತಿಯ 2012-13ನೇ ಸಾಲಿನ ಕಾರ್ಯಕ್ರಮಗಳ ಸಂಕ್ಷಿಪ್ತ ವಿವರ ಈ ಕೆಳಗಿನಂತಿದೆ:
ವಿದ್ಯಾನಿಧಿ ಸಮಿತಿಯು ಈ ಸಾಲಿನಲ್ಲಿ ಸುಮಾರು 72 ವಿದ್ಯಾರ್ಥಿಗಳಿಗೆ ಎರಡು ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನವನ್ನು ಎರಡು ಹಂತಗಳಲ್ಲಿ ವಿತರಿಸಿದೆ. ಮೊದಲನೆಯ “ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರೇರಣಾ ಶಿಬಿರ”ವು ಕಳೆದ ದಿನಾಂಕ 29.07.2012ನೇ ರವಿವಾರದಂದು ಪೂರ್ವಾಹ್ನ ಯುವವಾಹಿನಿಯ ಕೇಂದ್ರ ಕಛೇರಿಯಲ್ಲಿ ಜರಗಿತ್ತು. ಈ ಶಿಬಿರವನ್ನು ಶ್ರೀಯುತ ಕಿರಣ್ ಕುಮಾರ್, ಅಧ್ಯಕ್ಷರು ಉಡುಪಿ ನಗರ ಸಭೆ ಇವರು ಉದ್ಘಾಟಿಸಿದರು. ಶ್ರೀ ಪದ್ಮರಾಜ್, ವಕೀಲರು ಹಾಗೂ ನೋಟರಿ ಮತ್ತು ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು ಇದರ ಟ್ರಸ್ಟಿ, ಜೇಸಿ ಸಂಪತ್ ಬಿ. ಸುವರ್ಣ, ಪೂರ್ವ ವಲಯಾಧ್ಯಕ್ಷರು, ವಲಯ ಭಾರತೀಯ ಜೇಸೀಸ್ ಸಂಸ್ಥೆ, ಶ್ರೀ ಅಕ್ಷಯ ಎನ್. ಬಂಗೇರ, ಮಾಲಕರು – ಅಕ್ಷಯ ಡೆವಲಪರ್ಸ್ ಸುರತ್ಕಲ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಕಿಶೋರ್ ಕೆ. ಬಿಜೈಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಭಾರತೀಯ ಜೇಸೀಸ್ ಸಂಸ್ಥೆಯ ರಾಷ್ಟ್ರೀಯ ತರಬೇತುದಾರರಾದ ಜೇಸಿ ಕೆ. ರಾಜೇಂದ್ರ ಭಟ್ ಇವರು ಅಂದು ತರಬೇತುದಾರರಾಗಿ ಭಾಗವಹಿಸಿದ್ದರು.
ಎರಡನೆಯ ಹಂತದ “ವಿದ್ಯಾರ್ಥಿ ವೇತನ ಹಾಗೂ ಪ್ರೇರಣಾ ಶಿಬಿರ ವು ಕಳೆದ ದಿನಾಂಕ 27.01.2013ನೇ ರವಿವಾರದಂದು ಪೂರ್ವಾಹ್ನ ಯುವವಾಹಿನಿಯ ಕೇಂದ್ರ ಸಮಿತಿಯ ಕಛೇರಿಯಲ್ಲಿ ಜರಗಿತು. ಶ್ರೀ ದಯಾನಂದ ಮುಂಬೈ ಇವರು ಅಂದಿನ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಡಾ. ಉಮ್ಮಪ್ಪ ಪೂಜಾರಿ ಪಿ, ಎಸೋಸಿಯೇಟ್ ಪ್ರೊಫೆಸರ್- ಶ್ರೀ ಗೋಕರ್ಣನಾಥ ಕಾಲೇಜು, ಮಂಗಳೂರು, ಶ್ರೀ ಬಿ. ತಮ್ಮಯ್ಯ ಸಲಹೆಗಾರರೂ, ಯುವವಾಹಿನಿ (ರಿ) ಕೇಂದ್ರ ಸಮಿತಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಕುಬೆವೂರು ಇವರು ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳ ಪ್ರಗತಿಯನ್ನು ಪರಿಶೀಲಿಸುವರೇ “ವಿದ್ಯಾರ್ಥಿಗಳ ಸಂವಹನ” ಕಾರ್ಯಕ್ರಮವನ್ನು ನಡೆಸಿ ಮುಂದೆ ಶ್ರೀಮತಿ ಗುಣವತಿ ರಮೇಶ್, ಶ್ರೀಮತಿ ತಾರಾ ಅಣ್ಣು ಪೂಜಾರಿ ಮತ್ತು ಶ್ರೀ ಟಿ. ಶಂಕರ ಸುವರ್ಣ ಇವರುಗಳಾದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಉಪಯೋಗವಾಗಬಲ್ಲ ಪ್ರೇರಣಾ ಶಿಬಿರವನ್ನು ನಡೆಸಲಾಯಿತು.
ಕಳೆದ 20 ವರುಷಗಳಿಂದ ವಿತರಿಸಲಾದ ವಿದ್ಯಾರ್ಥಿ ವೇತನದ ವಿವರ ಈ ರೀತಿ ಇದೆ.
ವರ್ಷ ವಿದ್ಯಾರ್ಥಿಗಳು ಮೊತ್ತ (ರೂ.)
1993-2005.    428.    1,88,100-00
2005-2006.    8.            25,000-00
2006-2007.    38.       1,00,000-00
2007-2008.    71.       2,00,000-00
2008-2009.    64.       1,30,000-00
2009-2010.    59.       1,50,000-00
2010-2011.    40.          80,000-00
2011-2012.    48.       1,30,000-00
2012-2013.    72.       2,00,000-00
ಯುವವಾಹಿನಿ ಕೇಂದ್ರ ಸಮಿತಿಯ ವತಿಯಿಂದ ಅಲ್ಲದೆ ನಮ್ಮ ಈ ಧ್ಯೇಯವನ್ನು ಯುವವಾಹಿನಿಯ ಹೆಚ್ಚಿನ ಎಲ್ಲ ಘಟಕಗಳೂ ತಮ್ಮಿಂದಾದಷ್ಟು ಮಟ್ಟಿಗೆ ನಡೆಸುತ್ತಾ ಬಂದಿದೆ. ಅವೆಲ್ಲವೂ ಘಟಕದ ಮುಂದಾಳತ್ವ ದಲ್ಲಿ ಕೇಂದ್ರ ಸಮಿತಿಯ ಮಾರ್ಗದರ್ಶನದಲ್ಲಿ ನಡೆದಿದೆ. ಇದಲ್ಲದೆ ಯುವವಾಹಿನಿಯ ಇತರ ಘಟಕಗಳಿಂದಲೂ ಪುಸ್ತಕ ವಿತರಣೆ, ಪ್ರೇರಣಾಶಿಬಿರ ಹಾಗೂ ಮಾಹಿತಿ ಶಿಬಿರಗಳು ನಡೆದಿವೆ.
ಈ ವರ್ಷದ ವಿದ್ಯಾನಿಧಿ ಸಮಿತಿಯಲ್ಲಿ ಶ್ರೀ ಕಿಶೋರ್ ಕೆ. ಬಿಜೈ ಅಧ್ಯಕ್ಷರಾಗಿ, ಡಾ| ಸದಾನಂದ ಕುಂದರ್ ಸಂಚಾಲಕರಾಗಿ, ಶ್ರೀ ಹರೀಂದ್ರ ಸುವರ್ಣ ಮೂಲ್ಕಿ, ಶ್ರೀ ಗಂಗಾಧರ ಪೂಜಾರಿ ಸುರತ್ಕಲ್, ಶ್ರೀ ಭಾಸ್ಕರ ಸುವರ್ಣ ಉಡುಪಿ ಸದಸ್ಯರಾಗಿ ಶ್ರೀ ಸುಜಿತ್‍ರಾಜ್ ಸುರತ್ಕಲ್ ಆಂತರಿಕ ಲೆಕ್ಕ ಪರಿಶೋಧಕರಾಗಿದ್ದಾರೆ.
ಮುಂದೆಯೂ ಯುವವಾಹಿನಿ (ರಿ) ವಿದ್ಯಾನಿಧಿ ಸಮಿತಿಯು ತನ್ನ ಮೂಲಧ್ಯೇಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಉಪಯೋಗವಾಗಬಲ್ಲ ಕಾರ್ಯಕ್ರಮಗಳನ್ನು ಸಂಯೋಜಿಸುವುದರ ಜೊತೆಗೆ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಇನ್ನೂ ಮುಂದುವರಿಸುವುದೆಂದು ಈ ಮೂಲಕ ತಿಳಿಸಲಿಚ್ಚಿಸು ತ್ತೇವೆ. ಈ ವಿದ್ಯಾನಿಧಿಯಿಂದ ಸಹಾಯ ಪಡೆದು ವಿದ್ಯಾ ರ್ಜನೆ ಮುಗಿಸಿ ಉದ್ಯೋಗ ಪಡೆದುಕೊಂಡ ವಿದ್ಯಾರ್ಥಿ ಗಳಿಂದ “ವಿದ್ಯಾನಿಧಿ”ಯು ಸಾಧ್ಯತೆ ಮಿತಿಯಲ್ಲಿ ಸಹಕಾರ ವನ್ನು ಯಾಚಿಸುತ್ತದೆ. ನಮ್ಮ ಸಮಾಜದ ಕೊಡುಗೈ ದಾನಿಗಳ ಸಹಕಾರವನ್ನು ಮುಂದೆಯೂ ನಿರೀಕ್ಷಿಸುವ,

ತಾರಾನಾಥ ಹೆಚ್.ಬಿ., ವಿದ್ಯಾನಿಧಿ ಕಾರ್ಯದರ್ಶಿ-2012-13

Leave a Reply

Your email address will not be published. Required fields are marked *

ಸಂಪರ್ಕಿಸಿ : +91 99644 75220
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ :
ಸ್ಥಳ :

ಯುವವಾಹಿನಿ(ರಿ.) ಕುಪ್ಪೆಪದವು ಘಟಕ

ದಿನಾಂಕ : 18-08-2024
ಸ್ಥಳ : ಕುದ್ರೋಳಿ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
ಯುವವಾಹಿನಿ ಸಂಸ್ಥೆಯ ಮೂವತೈದು ವರುಷಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಗೌರವ

ಯುವವಾಹಿನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

  ಮಂಗಳೂರು : ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನವೆಂಬರ್ ಒಂದರಂದು ನಡೆಯುವ...

Sunday, 30-10-2022
error: Content is protected !!