ಉಪ್ಪಿನಂಗಡಿ : ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ಮಹತ್ವಾಕಾಂಕ್ಷಿ ಕಾರ್ಯಕ್ರಮ “ಯುವಬಾಂಧವ್ಯ..2026” ದಿನಾಂಕ 25-04-2026 ನೇ ಶನಿವಾರದಂದು ಬಿಳಿಯೂರು ಗ್ರಾಮದ ಪೂಜಾರಿಪಾಲು ಹೊಸಮನೆಯಲ್ಲಿ ಸಂಜೆ 6.30ಕ್ಕೆ ನಡೆಯಿತು.
ಗುರುಸ್ತುತಿಯೊಂದಿಗೆ ಪ್ರಾರಂಭವಾದ ಯುವ ಬಾಂಧವ್ಯದ ಸಭಾಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷರಾದ ಮನೋಜ್ ಸಾಲ್ಯಾನ್ ಸ್ವಾಗತಿಸಿದರು, ಘಟಕದ ಕಾರ್ಯಚಟುವಟಿಕೆಗಳ ಬಗ್ಗೆ ವಿವರವಾಗಿ ತಿಳಿಸಿದರು.

ಆತಿಥ್ಯ ವಹಿಸಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯರೂ , ಸಮಾಜಸೇವಕರಾದ ತನಿಯಪ್ಪ ಪೂಜಾರಿಯವರು ಯುವಬಾಂಧವ್ಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ನಮ್ಮ ಸಮಾಜದ ಸಂಘಟನೆಗಳು ಯಾವುದೇ ಇದ್ದರೂ ಸೇವಾ ಮನೋಭಾವದ ಜೊತೆಗೆ ನಾವೆಲ್ಲ ಬಿಲ್ಲವರು ಎಂದು ಅರಿತು ಸೇರಬೇಕು ಎಂದು ತಿಳಿಸಿದರು. ಕಾರ್ಯದರ್ಶಿ ರಮೇಶ್ ಎಸ್ ಸಾಂತ್ಯರವರು ಕಾರ್ಯಕ್ರಮಗಳ ವರದಿ ಮಂಡಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಜಿ ಅಧ್ಯಕ್ಷರಾದ ಕುಶಾಲಪ್ಪ ಹತ್ತುಕಳಸೆ ಯವರು ಮಾತನಾಡುತ್ತಾ, ಗ್ರಾಮಮಟ್ಟದಲ್ಲಿ ಪ್ರತಿ ಮನೆಗೂ ಯುವವಾಹಿನಿಯ ಧ್ಯೇಯೋದ್ದೇಶವನ್ನು ತಿಳಿಸಿಕೊಟ್ಟು ಯುವಕರನ್ನು ಸಮಾಜದ ಮುನ್ನಲೆಗೆ ತರುವುದು ಉತ್ತಮವಾದ ವಿಚಾರ ಎಂದು ತಿಳಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಅಂಕಿತ್ ಎಮ್. ಜೆ, ನಿಕಟಪೂರ್ವ ಅಧ್ಯಕ್ಷರಾದ ನಾಣ್ಯಪ್ಪ ಕೋಟ್ಯಾನ್ ಉಪಸ್ಥಿತರಿದ್ದರು.
ಸಭೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಡೀಕಯ್ಯ ಗೌಂಡತ್ತಿಗೆ, ಕೃಷ್ಣಪ್ಪ ಪೂಜಾರಿ, ನಿರ್ದೇಶಕರುಗಳು, ಸಂಘಟನಾ ಕಾರ್ಯದರ್ಶಿಗಳು, ಸದಸ್ಯರುಗಳು, ಮತ್ತು ಸಮಾಜ ಬಂಧುಗಳು ಉಪಸ್ಥಿತರಿದ್ದರು. ರಾಜೀವ ಪೂಜಾರಿ ಧನ್ಯವಾದ ಗೈದರು. ವನಿತಾ ಕೃಷ್ಣಪ್ಪ ಸಹಕರಿಸಿದರು.


