
ಯುವಸಿಂಚನ
ಯುವಸಿಂಚನ ಪತ್ರಿಕೆಯ 2025–26ನೇ ಸಾಲಿನ ಪ್ರಥಮ ಆವೃತ್ತಿಯನ್ನು ಬಿಡುಗಡೆಗೊಂಡಿದೆ. ಯುವವಾಹಿನಿಯ 35 ಘಟಕಗಳು ನಿರಂತರ ಕ್ರಿಯಾಶೀಲತೆಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಸೇವೆ ಸಲ್ಲಿಸುತ್ತಿರುವುದು ಅಪಾರ ಸಂತೋಷದ ವಿಷಯ. ಈ ಕಾರ್ಯಚಟುವಟಿಕೆಗಳು ಸಂಸ್ಥೆಯ ಚೈತನ್ಯ ಮತ್ತು ಬದ್ಧತೆಯ ಪ್ರತಿಬಿಂಬವಾಗಿವೆ. ಎಲ್ಲಾ ಘಟಕಗಳು ಸಮಯಕ್ಕೆ ಸರಿಯಾಗಿ ವರದಿಗಳನ್ನು ನೀಡಿ ಸಹಕರಿಸಿದಕ್ಕಾಗಿ ಅಭಿನಂದನೆಗಳು. ಯುವಸಿಂಚನಕ್ಕೆ ಲೇಖನ, ಕವನ, ಕಥೆಗಳನ್ನು ರಚಿಸಿ ಕೊಡುಗೆ ನೀಡಿದ ಎಲ್ಲಾ ಲೇಖಕರಿಗೆ ಹೃತ್ಪೂರ್ವಕ ವಂದನೆಗಳು. ಸಂಪಾದಕ ಬಳಗದ ಸಹಕಾರಕ್ಕೂ ಧನ್ಯವಾದಗಳು. ಯುವವಾಹಿನಿಯ ಎಲ್ಲಾ ಘಟಕಗಳು ಸಮಯಕ್ಕೆ ಸರಿಯಾಗಿ ವರದಿಗಳನ್ನು ನೀಡಿ ಸಹಕರಿಸಿದಕ್ಕಾಗಿ ಅಭಿನಂದನೆಗಳು. ಯುವಸಿಂಚನಕ್ಕೆ ಲೇಖನ, ಕವನ, ಕಥೆಗಳನ್ನು ರಚಿಸಿ ಕೊಡುಗೆ ನೀಡಿದ ಎಲ್ಲಾ ಲೇಖಕರಿಗೆ ಹೃತ್ತೂರ್ವಕ ವಂದನೆಗಳು. ಸಂಪಾದಕ ಬಳಗದ ಸಹಕಾರಕ್ಕೂ ಧನ್ಯವಾದಗಳು.

ನದಿ ಹರಿಯುವಾಗ ತನ್ನ ಶಬ್ದವನ್ನು ಜೋರಾಗಿಸುವುದಿಲ್ಲ. ಆದರೆ ಅದು ತಲುಪುವ ಪ್ರತಿಯೊಂದು ತೀರದಲ್ಲೂ ಜೀವನದ ಗುರುತು ಬಿಟ್ಟು ಹೋಗುತ್ತದೆ. ಅಕ್ಷರಗಳೂ ಹಾಗೆಯೇ ಮೌನವಾಗಿ ಹರಿದಾಗಲೇ ಅವು ಚಿಂತನೆಯ ನೆಲವನ್ನು ತೊಯ್ದು ಬಿಡುತ್ತವೆ. “ಯುವಸಿಂಚನ” ಒಂದು ಪತ್ರಿಕೆ ಮಾತ್ರವಲ್ಲ; ಅದು ಯುವವಾಹಿನಿಯ ಹರಿವಿನ ದಾಖಲಾತಿ. ಇಲ್ಲಿ ಪ್ರಕಟವಾಗುವ ಪ್ರತಿಯೊಂದು ಪದವೂ ಒಂದು ಅನುಭವದ ನೊರೆ, ಒಂದು ಸೇವೆಯ ನೆನಪು, ಒಂದು ಯುವ ಮನಸ್ಸಿನ ಸಂವಾದ. ಸುದ್ದಿ ಹೇಳುವುದು ಸುಲಭ;
ಸಮಾಜವನ್ನು ಅರ್ಥಮಾಡಿಕೊಳ್ಳುವುದು ಅಕ್ಷರಗಳ ನೈತಿಕ ಹೊಣೆ. ಸಂಪಾದಕೀಯದ ಜವಾಬ್ದಾರಿ ಅಕ್ಷರಗಳನ್ನು ಅಲಂಕರಿಸುವುದಲ್ಲ; ಅವುಗಳಿಗೆ ದಿಕ್ಕು ನೀಡುವುದು. ಯಾವುದನ್ನು ಹೇಳಬೇಕು ಎನ್ನುವುದಕ್ಕಿಂತ, ಯಾವುದನ್ನು ಹೇಳದೆ ಬಿಡಬೇಕು ಎಂಬ ವಿವೇಕವೂ ಸಂಪಾದನೆಯ ಭಾಗವೇ. ಸತ್ಯ, ಸಮತೋಲನ ಮತ್ತು ಸಂವೇದನೆ ಈ ಮೂರೂ ಸೇರಿದಾಗಲೇ ಪತ್ರಿಕೆ ವಿಶ್ವಾಸಾರ್ಹವಾಗುತ್ತದೆ.
ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಗಳು ಈ ಪುಟಗಳ ಮೌಲ್ಯಾಧಾರ. ಸಮಾನತೆ, ಮಾನವೀಯತೆ ಮತ್ತು ವಿಚಾರಶೀಲತೆ ಕೇವಲ ಉಲ್ಲೇಖಗಳಾಗಿ ಅಲ್ಲ, ಲೇಖನಗಳ ಧ್ವನಿಯಾಗಿ, ಚಿಂತನೆಯ ದಿಕ್ಕಾಗಿ ಮೂಡಬೇಕು. ಯುವಮನಸ್ಸುಗಳಿಗೆ ಪ್ರಶ್ನೆ ಹುಟ್ಟಿಸಿದರೆ, ಉತ್ತರ ಹುಡುಕುವ ಧೈರ್ಯವೂ ಇಲ್ಲಿಯೇ ಮೊಳೆಯಬೇಕು. ಈ ಸಂಚಿಕೆ ಒಂದು ನದಿಯ ಹರಿವಿನಂತೆಯೇ ಬಹು ಧ್ವನಿಗಳ ಸಂಗಮ. ಪ್ರತಿಯೊಂದು ಘಟಕದ ಅನುಭವ, ಪ್ರತಿಯೊಬ್ಬ ಸದಸ್ಯರ ಕೊಡುಗೆ ಒಟ್ಟಾಗಿ ಸೇರಿದಾಗಲೇ ಈ ಮುಖವಾಣಿ ಪೂರ್ಣವಾಗುತ್ತದೆ. ಓದುಗರಿಗೆ ತಲುಪಿದ ಕ್ಷಣದಲ್ಲಿ ಅಕ್ಷರಗಳ ಪಯಣ ಮುಗಿಯುವುದಿಲ್ಲ; ಅಲ್ಲಿಂದಲೇ ಅದರ ಅರ್ಥ ಆರಂಭವಾಗುತ್ತದೆ.
ಯುವಸಿಂಚನ ಹರಿಯಲಿ……
ಹೃದಯಗಳ ನಡುವೆ……..
ಚಿಂತನೆಗಳ ನಡುವೆ…….
ಮೌಲ್ಯಗಳ ನಡುವೆ……
–ಕಾರ್ಯನಿರ್ವಾಹಕ ಸಂಪಾದಕ
ಹರೀಶ್ ವಿ. ಪಚ್ಚನಾಡಿ
ಕಾರ್ಯ ನಿರ್ವಾಹಕ ಸಂಪಾದಕರು
9945618557
harishv179@gmail.com


