ಕೊಣಾಜೆ: ಯುವವಾಹಿನಿ (ರಿ.) ಗ್ರಾಮ ಚಾವಡಿ ಕೊಣಾಜೆ ಘಟಕದ ವತಿಯಿಂದ ದಿನಾಂಕ 01-03-2026, ಭಾನುವಾರದಂದು ಕಣ್ಣೂರಿನತ್ತ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಪ್ರವಾಸವು ಅತ್ಯಂತ ಯಶಸ್ವಿಯಾಗಿ ಮತ್ತು ಸಂಭ್ರಮದಿಂದ ನೆರವೇರಿತು.

ಬೆಳಿಗ್ಗೆ 5.45ಕ್ಕೆ ಗ್ರಾಮ ಚಾವಡಿ ಗುರುಮಂದಿರದಲ್ಲಿ ಗುರುಗಳಿಗೆ ನಮನ ಸಲ್ಲಿಸಿ ಪ್ರವಾಸಕ್ಕೆ ಚಾಲನೆ ನೀಡಲಾಯಿತು. ಘಟಕದ ಒಂದನೇ ಉಪಾಧ್ಯಕ್ಷರಾದ ಮುರಳೀಧರ ಕೊಣಾಜೆ ಅವರ ನೇತೃತ್ವದಲ್ಲಿ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಒಟ್ಟು 52 ಮಂದಿ ಈ ಪ್ರವಾಸದಲ್ಲಿ ಪಾಲ್ಗೊಂಡಿದ್ದರು. ದಾರಿಯಲ್ಲಿ ಪರ್ಸಿನಕಡವು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಲಾಯಿತು.
ಕಣ್ಣೂರಿನ ಪ್ರಸಿದ್ಧ ‘ವಿಸ್ಮಯ ವಾಟರ್ ಅಮ್ಯೂಸ್ಮೆಂಟ್ ಪಾರ್ಕ್’**ನಲ್ಲಿ ತಂಡವು ದಿನವಿಡೀ ವಿವಿಧ ಡ್ರೈ ಗೇಮ್ಸ್ ಹಾಗೂ ವಾಟರ್ ಗೇಮ್ಸ್ಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಪ್ರವಾಸದ ಸಂಚಾಲಕರಾಗಿ ರೋಷನ್ ಮಜ್ಜೆಲು ಮತ್ತು ಲೋಕೇಶ್ ಕಾರ್ಯನಿರ್ವಹಿಸಿದರು.
ಬಸ್ಸಿನ ಪ್ರಯಾಣದ ಅವಧಿಯಲ್ಲಿ ಸಾಂಸ್ಕೃತಿಕ ನಿರ್ದೇಶಕಿ ಪೂರ್ಣಿಮಾ ಪಜೀರು ಮತ್ತು ಕೋಶಾಧಿಕಾರಿ ಅಜಿತ್ ತಾರೀಪಾಡಿ ಅವರು ವಿವಿಧ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಿದ್ದರು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಹಿಳಾ ನಿರ್ದೇಶಕಿ ರೇಖಾ ಬೊಳ್ಳೂರು ಅವರು ಸಿದ್ಧಪಡಿಸಿದ ಸ್ವಾದಿಷ್ಟ ಉಪಹಾರವು ಪ್ರವಾಸದ ಮೆರುಗು ಹೆಚ್ಚಿಸಿತು.
ರಾತ್ರಿ 10 ಗಂಟೆಗೆ ತಂಡವು ಸುರಕ್ಷಿತವಾಗಿ ಗ್ರಾಮ ಚಾವಡಿಗೆ ಮರಳಿತು. ಸದಸ್ಯರೆಲ್ಲರೂ ಪ್ರವಾಸದ ಕುರಿತು ತಮ್ಮ ಸಂತಸದ ಅನಿಸಿಕೆಗಳನ್ನು ಹಂಚಿಕೊಂಡರು.


