ಭಜನಾ ಸಂಕೀರ್ಥನೆ -ಯುವ ವಾಹಿನಿ( ರಿ.) ಶಕ್ತಿನಗರ ಘಟಕ
13-08-2025, 2:14 PM
ಯುವ ವಾಹಿನಿ( ರಿ.) ಶಕ್ತಿನಗರ ಘಟಕ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ (ರಿ.) ಸಹಯೋಗದಲ್ಲಿ 13-03-25ರಂದು ಗುರುವಾರ ಭಜನಾ ಸಂಕೀರ್ಥನೆ ನಡೆಯಿತು. ಘಟಕದ ಸದಸ್ಯರೆಲ್ಲರೂ ಭಾಗವಹಿಸಿದ್ದರು
13-08-2025, 2:14 PM
ಯುವ ವಾಹಿನಿ( ರಿ.) ಶಕ್ತಿನಗರ ಘಟಕ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ (ರಿ.) ಸಹಯೋಗದಲ್ಲಿ 13-03-25ರಂದು ಗುರುವಾರ ಭಜನಾ ಸಂಕೀರ್ಥನೆ ನಡೆಯಿತು. ಘಟಕದ ಸದಸ್ಯರೆಲ್ಲರೂ ಭಾಗವಹಿಸಿದ್ದರು
13-08-2025, 1:30 PM
ಯುವವಾಹಿನಿ (ರಿ) ಶಕ್ತಿನಗರ ಘಟಕ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ (ರಿ) ನಿಂದ ಜೋಕುಲಸಾನ ಶಕ್ತಿನಗರದ ನೇಮೋತ್ಸವದಲ್ಲಿ ಬಂದಂತಹ ಎಲ್ಲಾ ಭಕ್ತಾಭಿಮಾನಿಗಳಿಗೆ ಪಾನಕ ಸೇವೆ ದಿನಾಂಕ 15/3/2025ರಂದು ಮಾಡಲಾಯಿತು. ಜಾತ್ರಾ ಮಹೋತ್ಸವದಲ್ಲಿ ಸದಸ್ಯರೆಲ್ಲರೂ ಸೇರಿ ಸರಿ ಸುಮಾರು 3000 ಜನರಿಗೆ ಪಾನಕವನ್ನು ಹಂಚಲಾಯಿತು.
22-08-2024, 3:14 AM
ಶಕ್ತಿನಗರ : ದಿನಾಂಕ : 22-08-2024 ರಂದು ಬ್ರಹ್ಮಶ್ರೀ ನಾರಾಯಣಗುರು ಮಂದಿರ ಕುಂಟಲ್ಪಾಡಿ ಇಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು. ಪೂಜೆಯ ಮುಂದಾಳತ್ವವನ್ನು ಯುವ ವಾಹಿನಿ (ರಿ) ಶಕ್ತಿನಗರ ಘಟಕದ ನಾರಾಯಣ ಗುರುತತ್ವ ಪ್ರಚಾರಕರಾದ ಶ್ರೀ ಯೋಗೀಶ್ ಸುವರ್ಣ ಇವರು ವಹಿಸಿಕೊಂಡಿದ್ದರು. ಮೊದಲಿಗೆ ಬ್ರಹ್ಮಶ್ರೀ ನಾರಾಯಣಗುರು ಮಂದಿರ ಕುಂಟಾಲ್ಪಾಡಿ ಇಲ್ಲಿ ಮುಂಜಾನೆ ಗಣಹೋಮವನ್ನು ನಡೆಸಿ ಮಂದಿರವನ್ನು ಶುದ್ಧೀಕರಿಸಲಾಯಿತು. ನಂತರ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿ ಇವರ ಮನೆಯಲ್ಲಿ ಪ್ರತಿಷ್ಠಾಪಿಸಲಾಯಿತು. […]
15-08-2024, 4:33 AM
ಮಂಗಳೂರು: 15-08-2024 ಗುರುವಾರದಂದು 78ನೇ ಸ್ವಾತಂತ್ರೋತ್ಸವ ಆಚರಣೆಯ ಪ್ರಯುಕ್ತ ಬೆಳಿಗ್ಗೆ 10.00 ಘಂಟೆಗೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕುಂಟಲ್ಪಾಡಿಯಲ್ಲಿ ನಡೆಯಿತು. ನಾರಾಯಣ ಗುರುವರ್ಯರನ್ನು ಪ್ರಾರ್ಥಿಸಿ, ಘಟಕದ ಅಧ್ಯಕ್ಷರಾದ ಗಣೇಶ್ ಕೆ ಮಹಾಕಾಳಿ ಇವರು ಬಂದಂತಹ ಎಲ್ಲರನ್ನು ಸ್ವಾಗತಿಸಿದರು. ಘಟಕದ ಹಿರಿಯ ಸದಸ್ಯರೆಲ್ಲ ಸೇರಿ ಧ್ವಜಾರೋಹಣವನ್ನು ಮಾಡಿದರು. ಎಲ್ಲರೂ ಒಟ್ಟಿಗೆ ಧ್ವಜ ಗೀತೆಯನ್ನು ಹಾಡಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು. ಕುಮಾರಿ ಧೃತಿಯವರು ದೇಶಾಭಿಮಾನದ ಬಗ್ಗೆ ದೇಶಭಕ್ತಿ ಗೀತೆಯನ್ನು ಹಾಡಿದರು. ನಂತರ ಘಟಕದ ಹಿರಿಯ ಸದಸ್ಯರು ಹಾಗೂ […]
04-08-2024, 1:12 PM
ಮಂಗಳೂರು : 04/08/2024 ರಂದು ಆದಿತ್ಯವಾರ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕುಂಟಲ್ಪಾಡಿ ಇಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 200ಕ್ಕಿಂತಲೂ ಹೆಚ್ಚು ಜನ ಪಾಲ್ಗೊಂಡಿದ್ದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದವನ್ನು ಪಡೆದು ನಂತರ ಘಟಕದ ಮಹಿಳಾ ಸದಸ್ಯರಿಂದ ಹಾಗೂ ಸಣ್ಣ ಮಕ್ಕಳಿಂದ ಜಾನಪದ ನೃತ್ಯ , ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು. ನಂತರ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಘಟಕದ ಸದಸ್ಯರ ಮಕ್ಕಳಿಂದ ಪ್ರಾರ್ಥನೆ ನಡೆಸಿ ಘಟಕದ ಅಧ್ಯಕ್ಷರಾದ ಗಣೇಶ್ ಕೆ […]
09-06-2024, 3:16 PM
ಮಂಗಳೂರು: ಯುವವಾಹಿನಿ (ರಿ) ಶಕ್ತಿನಗರ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸಹಯೋಗದಲ್ಲಿ 09-06-2024ನೇ ಆದಿತ್ಯವಾರ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ ಮತ್ತು ಸಂಘಟನಾ ಕಾರ್ಯದರ್ಶಿಯಾದ ದೀಕ್ಷಿತ್ ಪೂಜಾರಿ ಮತ್ತು ಘಟಕದ ಅಧ್ಯಕ್ಷರಾದ ಗಣೇಶ್ ಕೆ. ಮಹಾಕಾಳಿ, ಉಪಾಧ್ಯಕ್ಷರಾದ ತುಕಾರಾಂ, ಕಾರ್ಯದರ್ಶಿ ಅಕ್ಷತಾ ಚರಣ್ ಇವರು ಉಪಸ್ಥಿತರಿದ್ದರು. ಉತ್ತಮ ಶ್ರೇಣಿಯಲ್ಲಿ ಅಂಕ ಪಡೆದ […]
26-05-2024, 3:47 PM
ಮಂಗಳೂರು: 26-05-2024 ಮುಂಜಾನೆ ಪ್ರಾರ್ಥನೆಯೊಂದಿಗೆ ನಾರಾಯಣ ಗುರು ಸ್ವಾಮಿಗಳಿಗೆ ನಮಿಸಿ, ಯುವವಾಹಿನಿ(ರಿ.) ಶಕ್ತಿನಗರ ಘಟಕದ ವತಿಯಿಂದ ಒಂದು ದಿನದ ಕಿರು ಪ್ರವಾಸವನ್ನು ಹಮ್ಮಿಕೊಂಡೆದ್ದರು. ಘಟಕದ ಅಧ್ಯಕ್ಷ ಗಣೇಶ್ ಕೆ ಮಹಾಕಾಳಿ, ಉಪಾಧ್ಯಕ್ಷರುಗಳಾದ ತುಕರಾಮ್, ಸುಜಾತಾ ನವೀನ್, ಕಾರ್ಯದರ್ಶಿ ಅಕ್ಷತಾ ಚರಣ್ ಹಾಗೂ ಮಾಜಿ ಅಧ್ಯಕ್ಷರಾದ ಭಾರತಿ ಗಣೇಶ್ ರವರು ಮುಂದಾಳತ್ವ ವಹಿಸಿಕೊಂಡರು. 30 ಜನರೊಂದಿಗೆ ಕ್ಷೇತ್ರ ದರ್ಶನವನ್ನು ಮಾಡಿದೆವು ಮೊದಲಿಗೆ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರಟು, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಉಪಹಾರವನ್ನು ಮುಗಿಸಿ ನಂತರ ಕಡಿಯಾಳಿ ದುರ್ಗಾಪರಮೇಶ್ವರಿ […]
23-03-2024, 3:29 PM
ಮಂಗಳೂರು: ಊರಿನ 10 ಜನ ಸೇರಿ, ಸಮಾನ ಸ್ವಇಚ್ಛೆ ಇದ್ದರೆ ಗುರು ಮಂದಿರ ಅತೀ ಶೀಘ್ರದಲ್ಲಿ ಪ್ರತಿಷ್ಠಾಪನೆ ಸಾಧ್ಯ ಎಂದು ದಿನಾಂಕ 23-03-2024 ರಂದು ಯುವವಾಹಿನಿ(ರಿ.) ಶಕ್ತಿನಗರ ಘಟಕದ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆ ಮಾಡಿರುವ ಕುಮಾರ್ ಪೂಜಾರಿ ಇರುವೈಲ್ ನುಡಿದರು. ಕಾರ್ಯಕ್ರಮವು ಕುಂಟಲ್ಪಾಡಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ನಡೆಯಿತು. 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಗಣೇಶ್ ಕೆ. ಮಹಾಕಾಳಿ ಒಂದನೇ ಉಪಾಧ್ಯಕ್ಷರಾಗಿ ತುಕಾರಾಂ, ಎರಡನೆಯ ಉಪಾಧ್ಯಕ್ಷರಾಗಿ ಸುಜಾತ, ಕಾರ್ಯದರ್ಶಿಯಾಗಿ […]
21-01-2024, 9:18 AM
ಯುವವಾಹಿನಿ (ರಿ.) ಶಕ್ತಿನಗರ ಘಟಕ ಮತ್ತು ನಾರಾಯಣಗುರು ಮಂದಿರ ಕುಂಟಲ್ಪಾಡಿ ಇದರ ವತಿಯಿಂದ ಗುರು ಪೂಜೆಯು ದಿನಾಂಕ 18-01-2024 ರ ಗುರುವಾರದಂದು ಸಂಜೆ 8:30ಕ್ಕೆ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಮಾಜ ಸೇವಾ ನಿರ್ದೇಶಕರಾದ ಜಯರಾಮ್ ಪೂಜಾರಿ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿಯವರನ್ನು ಗೌರವಿಸಲಾಯಿತು. ಕೇಂದ್ರ ಸಮಿತಿಯ ಕೋಶಾಧಿಕಾರಿಗಳಾದ ಹರೀಶ್ ವಿ ಪಚ್ಚನಾಡಿ, ಪ್ರಚಾರ ನಿರ್ದೇಶಕರಾದ ಪೃಥ್ವಿರಾಜ್ ಎಂ ಕಂಕನಾಡಿ, ಘಟಕದ ಮಾಜಿ ಅಧ್ಯಕ್ಷರಾದ ಭಾರತಿ ಜಿ.ಅಮೀನ್, ಕೇಂದ್ರ […]
05-11-2022, 2:49 PM
ಶಕ್ತಿನಗರ:- ಯುವವಾಹಿನಿ ಶಕ್ತಿನಗರ ಘಟಕದ ವತಿಯಿಂದ ಯುವವಾಹಿನಿಯ ಮುಖ್ಯ ಧ್ಯೇಯಗಳಲ್ಲಿ ಒಂದಾದ “ಸಂಪರ್ಕ” ಎಂಬ ಪದಕ್ಕೆ ಅರ್ಥ ಬರುವಂತೆ ಘಟಕದ ಸದಸ್ಯರು ಸೇರಿ ಒಂದು ದಿನದ ಕಿರು ಪ್ರವಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸುಮಾರು 24 ಸದಸ್ಯರ ತಂಡವು ತಾರೀಕು 05 ನವೆಂಬರ್ 2022ರಂದು ಸಂಜೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ ಕೋಯoಬುತ್ತೂರು ತಲುಪಿ ಆಲ್ಲಿಂದ ಮಾರುತಮಲೈ ಷಣ್ಮುಗ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಾಯಿತು. ನಂತರ ಸುಮಾರು 2000 ವರ್ಷಗಳ ಹಿಂದಿನ […]