10-08-2014, 11:33 AM
ಸೀಳು ತುಟಿ ಸಮಸ್ಯೆಯವರ ಆಶಾಕಿರಣ ಡಾ. ಅಶಿತ್ ಎಂ.ವಿ. ಉಪ್ಪಿನಂಗಡಿಯ ರಾಜ್ಮಹಲ್ ಎಂ. ವರದ ರಾಜ್ ಮತ್ತು ವಿಮಲಾ ವರದರಾಜ್ ಇವರ ಪುತ್ರರಾಗಿರುವ ಡಾ. ಅಶಿತ್ ಎಂ.ವಿ. ಇವರು ಶಿಕ್ಷಣ ರಂಗದ ಅದ್ವಿತೀಯ ಸಾಧಕ, ತನ್ನ ಪ್ರಾಥಮಿಕ ಹಂತದ ಶಿಕ್ಷಣದ ಸಮಯದಲ್ಲೇ ಸಾಧನೆಯನ್ನು ತೋರಿರುವ ಶ್ರೀಯುತರು ಪ್ರಸ್ತುತ ದಂತ ವೈದ್ಯಕೀಯ ವಿಭಾಗದಲ್ಲಿ ಎಂಡಿಎಸ್ ಪದವಿಯನ್ನು ಪಡೆದಿದ್ದಾರೆ, ವೈದ್ಯಕೀಯ ರಂಗದಲ್ಲಿ ಹೊಸತನಗಳ ಪ್ರಯೋಗಕ್ಕೆ ಸದಾ ತುಡಿಯುತ್ತಾ ಈ ಮೂಲಕದ ಪ್ರಯತ್ನವನ್ನೂ ನಡೆಸುತ್ತಿರುವ ಅಶಿತ್ ಅವರು ಸೀಳು ತುಟಿ ಸಮಸ್ಯೆಯಿಂದ […]
Read More
10-08-2014, 11:02 AM
ಸದಾ ಹಸನ್ಮುಖಿ, ಕ್ರಿಯಾ ಶೀಲ ನಡಿಗೆ, ಮೆಲು ಮಾತು, ಹಿತವಾದ ನುಡಿ, ಬಿಳಿ ಪಂಚೆ, ಬಿಳಿ ಅಂಗಿ ಇವಷ್ಟೇ ಅವರ ಆಸ್ತಿ. ಆದರೆ ಸಾಹಿತ್ಯದಲ್ಲಿ ಅವರದ್ದು ದೈತ್ಯ ಪ್ರತಿಭೆ. ತಿಮ್ಮಪ್ಪ ಪೂಜಾರಿಯವರು ಮೂಲತಃ ಜೆಪ್ಪಿನಮೊಗರು ನಿವಾಸಿ. ಈ ನಾಡು ಕಂಡ ಅಪರೂಪದ ಸಾಹಿತಿ, ತುಳು ಭಾಷೆಯಲ್ಲಿ ಎರಡು ಕೃತಿಗಳನ್ನು ಪ್ರಕಟಿಸಿದ್ದು ಇನ್ನೆರಡು ಕೃತಿಗಳನ್ನು ಪ್ರಕಟಣೆಗೆ ಸಿದ್ಧ ಪಡಿಸಿರುವ ತಿಮ್ಮಪ್ಪ ಪೂಜಾರಿಯವರು ತುಳು ಭಾಷೆಯಲ್ಲಿ ಸಾಕಷ್ಟು ಹಿಡಿತವನ್ನು ಹೊಂದಿದ್ದಾರೆ. ಗ್ರಾಮ್ಯವಾದ ಮತ್ತು ಅಷ್ಟೇ ಸರಳವಾದ ಭಾಷಾ ಪ್ರಯೋಗದ ಮೂಲಕ […]
Read More
10-08-2014, 10:41 AM
ಇವರ ವ್ಯಕ್ತತ್ವವೇ ವಿಶೇಷ, ತಾನೇನು?, ತನ್ನ ಪ್ರತಿಭೆ ಎಂತಹುದು ಎನ್ನುವ ಯಾವ ಸುಳಿವನ್ನೂ ನೀಡದೆ, ರಾಜ್ಯ ಮತ್ತು ರಾಷ್ಟ್ರ ಮನ್ನಣೆಯೊಂದಿಗೆ ಬೆಳ್ಳಿ ಪದಕವನ್ನು ತನ್ನ ನಿಷ್ಕಾಮ ಸೇವೆಯ ಗೃಹರಕ್ಷಕ ದಳದ ಪ್ರಥಮ ಚಿಕಿತ್ಸೆ ತರಬೇತಿಗಾಗಿ ಪಡೆದವರು. ಅಲ್ಲದೆ ತನ್ನ ನಾಯಕತ್ವದ ತಂಡವು ಇಲಾಖೆಯ ವಿವಿಧ ಚಟುವಟಿಕೆಗಳ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಕಂಚಿನ ಪದಕವನ್ನು ಪಡೆದಿರುತ್ತದೆ. ಯುವವಾಹಿನಿಯ ಜೊತೆಗೆ ಹದಿನೈದಕ್ಕೂ ಅಧಿಕ ವರುಷದ ಸೇವೆಯನ್ನು ಯಾವುದೇ ಕುಂದು ಇರದ ರೀತಿಯಲ್ಲಿ ನೀಡುತ್ತಾ ಬಂದರೂ, ತಾನು ಪಡೆದ ಪುರಸ್ಕಾರಗಳ ಬಗ್ಗೆ ಪ್ರಚಾರವನ್ನೇ […]
Read More
10-08-2014, 10:30 AM
ಶೈಕ್ಷಣಿಕ ಸಾಧಕಿಯಾಗಿ, ಉಪನ್ಯಾಸಕಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ ತನ್ನ ಚಾತುರ್ಯವನ್ನು ಮರೆದಿರುವ ಮತ್ತು ಪ್ರಸ್ತುತ ಸಂಶೋಧನಾ ವಿಭಾಗದಲ್ಲಿ PhD(ಡಾಕ್ಟರೇಟ್) ಪದವಿಯನ್ನು ಪಡೆದಿರುವ ಡಾ| ಮಮತಾ ಬಾಲಚಂದ್ರ ಇವರ ಶೈಕ್ಷಣಿಕ ಸಾಧನೆ ಅಪೂರ್ವವಾದುದು. ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿ ಮಣಿಪಾಲ್ ಇನ್ಸಿಟ್ಯೂಟ್ ಆಫ್ ಟೆಕ್ನೋಲಜಿ ಸಂಸ್ಥೆಯಲ್ಲಿ ಕಳೆದ ಹದಿನಾಲ್ಕು ವರುಷದಿಂದ ದುಡಿಯುತ್ತಿರುವ ಮಮತಾ ಬಾಲಚಂದ್ರ ಅವರು ಅನುಭವದ ಗನಿ ಎಂದರೂ ತಪ್ಪಾಗಲಾರದು. ಪ್ರಸ್ತುತ ಇಲ್ಲಿ (MIT) ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲ್ಲಿಸುತ್ತಿರುವ ಇವರು ಉಪ್ಪೂರು ನಿವಾಸಿ ಶ್ರೀ ಆನಂದ […]
Read More
10-07-2014, 11:12 AM
ಶ್ರೀಮತಿ ಎಂ. ಜಾನಕಿ ಬ್ರಹ್ಮಾವರ ಕನ್ನಡ ಮತ್ತು ತುಳು ಭಾಷೆಯಲ್ಲಿ ತಮ್ಮ ಚಾತುರ್ಯವನ್ನು ಮೆರೆಸಿದ ಮೇರು ಸಾಹಿತಿಗಳಲ್ಲಿ ಶ್ರೀಮತಿ ಜಾನಕಿ ಬ್ರಹ್ಮಾವರ ಅವರೂ ಒಬ್ಬರು. ಭಾಷೆ, ಬರಹ ಮತ್ತು ಕಥಾ ಅಭಿವಕ್ತಿಯಲ್ಲಿ ಆಳಕ್ಕೆ ಇಳಿದು ಓದುಗನ ಮನಸ್ಸನ್ನು ಮುಟ್ಟುವಂತೆ, ತಟ್ಟುವಂತೆ ಮಾಡಿ ತನ್ನ ಬರಹದ ಮೂಲಕವೇ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿರುವ ಶ್ರೀಮತಿ ಎಂ. ಜಾನಕಿ ಬ್ರಹ್ಮಾವರ ಅವರು ಈ ನಾಡುಕಂಡ ಅಪೂರ್ವ ಸಾಹಿತಿಗಳಲ್ಲಿ ಅಗ್ರ ಪಂಕ್ತಿಯಲ್ಲಿ ಬರುವವರು. ಎಂ.ಎ., ಬಿ.ಎಡ್. ಪದವೀಧರರಾಗಿದ್ದು ಬ್ರಹ್ಮಾವರದ ಎಸ್.ಎಮ್.ಎಸ್. ಪದವಿಪೂರ್ವ […]
Read More
19-01-2014, 11:57 AM
ಸಾಮಾಜಿಕ ಸ್ಥಾನಮಾನ ಇಲ್ಲದ ವರ್ಗದವರಿಗೆ ಶಕ್ತಿ ತುಂಬುವ ಕಾರ್ಯವನ್ನು ಬ್ರಹ್ಮಶ್ರೀ ನಾರಾಯಣಗುರು ಮಾಡಿದ್ದಾರೆ. ಅವರ ತತ್ವ ಸಂದೇಶವನ್ನು ಯುವಕರು ಪಾಲಿಸಬೇಕು ಹಾಗೂ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಕಳೆದ 25 ವರ್ಷಗಳ ಸಾಧನೆ ಶ್ಲಾಘನೀಯವಾದುದು ಎಂದು ಕೇಂದ್ರ ಸರಕಾರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ತಿಳಿಸಿದರು. ಅವರು ದಿನಾಂಕ 19.01.2014ನೇ ಆದಿತ್ಯವಾರ ಬಿ.ಸಿ.ರೋಡ್ ಗಾಣದಪಡ್ಪು ನಾರಾಯಣಗುರು ನಗರದ ಕಾಂತಬಾರೆ ಬೂದಬಾರೆ ಸಭಾಂಗಣದ ಕೋಟಿ ಚೆನ್ನಯ ವೇದಿಕೆಯಲ್ಲಿ ಜರುಗಿದ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ರಜತ ಸಂಭ್ರಮ […]
Read More
19-01-2014, 4:03 AM
ತಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಕಿರಿಯರು ಮುಂದೆ ಬರಲು ಅವಕಾಶ ಕಲ್ಪಿಸಬೇಕು, ಇದ್ದಷ್ಟು ಸಮಯ ತಾನೇ ಇರಬೇಕು ಎಂಬ ನಿಯಮ ಸರಿಯಲ್ಲ, ಹಾಗೂ ಯುವಕರು ಯುವ ಬಿಲ್ಲವ ಸಮಾವೇಶ ಅತ್ಯಂತ ಯಶಸ್ವಿಯಾಗಿ ಸಂಘಟಿಸಿರುವುದು ಬಂಟ್ವಾಳ ಯುವವಾಹಿನಿಯ ಶಕ್ತಿಯನ್ನು ಅನಾವರಣಗೊಳಿಸಿದೆ ಎಂದು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ತಿಳಿಸಿದರು. ಅವರು ದಿನಾಂಕ 19.01.2014ನೇ ಆದಿತ್ಯವಾರ ಬಿ.ಸಿ.ರೋಡ್ ಗಾಣದಪಡ್ಪು ನಾರಾಯಣಗುರು ನಗರದ ಕಾಂತಬಾರೆ ಬೂದಬಾರೆ ಸಭಾಂಗಣದ ಕೋಟಿ ಚೆನ್ನಯ ವೇದಿಕೆಯಲ್ಲಿ ಜರುಗಿದ ಯುವವಾಹಿನಿ ಬಂಟ್ವಾಳ ತಾಲೂಕು […]
Read More
07-10-2011, 4:42 AM
ಪ್ರಕೃತಿಯು ಯಾರ ಸೊತ್ತೂ ಅಲ್ಲ. ಮನುಷ್ಯನ ನಿಜವಾದ ನೋವು ಪ್ರಕೃತಿಗೆ ತಿಳಿದಿರುತ್ತದೆ. ಇಂತಹ ಸಂದರ್ಭದಲ್ಲಿ ದೇವರು ಮಹಾ ಗುರು ಒಬ್ಬನನ್ನು ಅವತಾರ ಪುರುಷನನ್ನಾಗಿಯೋ, ಮಹಾತ್ನನನ್ನಾಗಿಯೋ ಭೂಮಿಗೆ ಕಳುಹಿಸುತ್ತಾನೆ. ಇಂತಹವರು ಧರ್ಮದ ಪರಿಪಾಲನೆಗಾಗಿ ಬಹಳ ಶ್ರಮಿಸುತ್ತಿರುವುದರಿಂದ ಮನುಷ್ಯನು ಸುಖವನ್ನು ಕಾಣುತ್ತಾನೆ. ತನ್ನಂತೆ ಎಲ್ಲಾ ಮಾನವ ಜೀವಿಗಳಲ್ಲಿ ಭಗವಂತನನ್ನು ಕಂಡು ಎಲ್ಲರಿಗೂ ಬದುಕುವ ದಾರಿಯನ್ನು ತೋರಿಸುತ್ತಾನೆ. ನೂರ ಐವತ್ತೇಳು ವರ್ಷಗಳ ಹಿಂದೆ ಅಸ್ಪೃಶ್ಯತೆಯ ಕರಿ ನೆರಳು ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರಿದಾಗ ದೇವರು ನಾರಾಯಣ ಗುರುಗಳನ್ನು ಅವತಾರ ಪುರುಷರನ್ನಾಗಿ […]
Read More
21-02-2010, 10:23 AM
ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ(ರಿ) ಉಪ್ಪಿನಂಗಡಿ ಇದರ ಅತಿಥ್ಯದಲ್ಲಿ ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಉಬಾರ ತುಡರ್ ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆಯ ಮುಗ್ಗ ಗುತ್ತು ಸೂರಪ್ಪ ಪೂಜಾರಿ ವೇದಿಕೆಯಲ್ಲಿ ಜರಗಿತು ಯುವವಾಹಿನಿ(ರಿ) ಮೂಲ್ಕಿ ಘಟಕ ಪ್ರಥಮ, ಯುವವಾಹಿನಿ(ರಿ) ಸಸಿಹಿತ್ಲು ಘಟಕ ದ್ವಿತೀಯ ಹಾಗೂ ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕ ತೃತೀಯ ಪ್ರಶಸ್ತಿ ಗಳಿಸಿತು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅದ್ಯಕ್ಷರಾದ ಜಯರಾಮ ಕಾರಂದೂರು ಸಮಾರೋಪ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು ಮಾಜಿ ಸಂಸದರಾದ […]
Read More
21-02-2010, 10:18 AM
ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕ ಇದರ ಅತಿಥ್ಯದಲ್ಲಿ ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಉಬಾರ ತುಡರ್ ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆಯ ಮುಗ್ಗ ಗುತ್ತು ಸೂರಪ್ಪ ಪೂಜಾರಿ ವೇದಿಕೆಯಲ್ಲಿ ಜರಗಿತು. ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಮದನ ಪೂಜಾರಿ ಕುದ್ಮಾರು ದೀಪ ಬೆಳಗಿಸಿ ತೆಂಗಿನ ಪಿಂಗಾರ ಅರಳಿಸುವುದರ ಮೂಲಕ ಉಬಾರ ತುಡರ್ ಉದ್ಘಾಟಿಸಿದರು. ದಿನಾಂಕ 21.02.2010 ರಂದು ಆದಿತ್ಯವಾರ. ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಗೂ […]
Read More