28-01-2025, 4:36 PM
ವಿಶ್ವ ಬಿಲ್ಲವ ಸಮುದಾಯದ ಯುವಶಕ್ತಿಯ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿ ಬೆಳೆದು ನಿಂತಿರುವ ಯುವವಾಹಿನಿ ಸಂಘಟನೆ, ದೇಶದ ಯಾವುದೇ ಸಾಮುದಾಯಿಕ ಚೌಕಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಗಳಲ್ಲೇ ಮುಂಚೂಣಿಯಲ್ಲಿರುವ ಬಲಿಷ್ಠ ಮತ್ತು ಶಿಸ್ತುಬದ್ಧ ಸಂಸ್ಥೆಯೆಂಬ ಕೀರ್ತಿಗೆ ಭಾಜನವಾಗಿದೆ. ವಿದ್ಯೆ – ಉದ್ಯೋಗ- ಸಂಪರ್ಕ ಎಂಬ ಉದಾತ್ತ ಧ್ಯೇಯವಾಕ್ಯವನ್ನಿಟ್ಟುಕೊಂಡು ನಮ್ಮ ಹಿರಿಯರು 1989 ರಲ್ಲಿ ಸ್ಥಾಪಿಸಿದ ಯುವ ವಾಹಿನಿ ಪ್ರಸ್ತುತ 35 ಶಾಖೆಗಳ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲೂ ಹಬ್ಬಿ ನಿಂತಿದೆ. ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಕೀರ್ತಿ ಶಿಖರವಾಗಿ ಬೆಳಗುತ್ತಿರುವ ಯುವವಾಹಿನಿ […]
Read More
24-09-2024, 4:47 PM
ದಿನಾಂಕ: 30-09-2024 ಸಮಯ: ಬೆಳಗ್ಗೆ 9.00 ಗಂಟೆಗೆ ಸ್ಥಳ: ಕುದ್ಮುಲ್ ರಂಗರಾವ್ ಪುರಭವನ, ಮಂಗಳೂರು
Read More
19-09-2024, 4:35 PM
ಬಂಟ್ವಾಳ : ನಾರಾಯಣ ಗುರುಗಳು ಸಾರಿದ ಸಾರ್ವಕಾಲಿಕ ಮೌಲ್ಯಗಳು ನಿಜಾರ್ಥದಲ್ಲಿ ಅನುಷ್ಠಾನಕ್ಕೆ ಬರಲೇಬೇಕಾದ ತುರ್ತು ಇಂದಿನ ಸಮಾಜಕ್ಕಿದೆ, ಶಿಕ್ಷಣದಿಂದ ಮಾತ್ರ ಮೌಡ್ಯದಿಂದ ಹೊರಬರಲು ಸಾಧ್ಯ ಎಂದು ಶಿಕ್ಷಣದ ಮಹತ್ವವನ್ನು ಪ್ರತಿಪಾದಿಸಿದರು ಎಂದು ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ತಿಳಿಸಿದರು. ಇವರು ದಿನಾಂಕ 19.09.2024 ನೇ ಗುರುವಾರ ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರಾದ ದೀಕ್ಷಿತಾ ಕಲ್ಲಗುಡ್ಡೆ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 12 ನೇ ಮಾಲಿಕೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ […]
Read More
11-09-2024, 2:29 PM
ಕೊಲ್ಯ: ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ನಿವೃತ್ತ ಹಿರಿಯ ಶಿಕ್ಷಕಿ ಶ್ರೀಮತಿ ವೇದಾವತಿ ಕೆ ಅವರೊಂದಿಗೆ ಶಿಕ್ಷಕರ ದಿನಾಚರಣೆ ವಿಶೇಷ ಸಂವಾದ ದಿ : 11-09-2024 ರಂದು ಬ್ರಹ್ಮ ಶ್ರೀ ನಾರಾಯಣ ಗುರು ಸಭಾ ಭವನ ಕೊಲ್ಯದಲ್ಲಿ ನಡೆಯಿತು. ಅಧ್ಯಕ್ಷರಾದ ಶ್ರೀಮತಿ ಸುಧಾ ಸುರೇಶ್ ಸರ್ವರನ್ನು ಸ್ವಾಗತಿಸಿ, ಶಿಕ್ಷಕರ ದಿನಾಚರಣೆ ಕುರಿತು ಪ್ರಸ್ತಾವಣೆಗೈದರು. ಮುಖ್ಯ ಅತಿಥಿಯಾದ ನಿವೃತ್ತ ಹಿರಿಯ ಶಿಕ್ಷಕಿ ಶ್ರೀಮತಿ ವೇದಾವತಿ ಕೆ ಅವರನ್ನು ಘಟಕದ ವತಿಯಿಂದ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ಶಿಕ್ಷಕಿಯವರು ತಮ್ಮ ಶಿಕ್ಷಕ […]
Read More
07-11-2019, 2:56 AM
ಯುವವಾಹಿನಿಯ ಉಡುಪಿ ಘಟಕದಲ್ಲಿ ಉಪಾಧ್ಯಕ್ಷರಾದ ಜಗದೀಶ್ ಕುಮಾರ್ ಇವರ ನೇತೃತ್ವದಲ್ಲಿ 6 ದಿನಗಳ ಉಚಿತ ಯೋಗ ತರಬೇತಿ ಕಾರ್ಯಕ್ರಮ ದಿನಾಂಕ 31/10/2019 ರಿಂದ 5/11/2019 ರ ವರಗೆ ಘಟಕದ ಸಭಾಂಗಣದಲ್ಲಿ ಜರಗಿತು. ಅಧ್ಯಕ್ಷರಾದ ನಾರಾಯಣ ಬಿ. ಎಸ್, ಸಲಹೆಗಾರರಾದ ಸಂತೋಷ್ ಕುಮಾರ್ ರವರು ಕಾರ್ಯದರ್ಶಿ ಮಹಾಬಲ ಅಮೀನ್ ರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯುವವಾಹಿನಿಯ ಯೋಗಾಸಕ್ತ ಸದಸ್ಯರು ಇದರ ಪ್ರಾಯೋಜನ ಪಡೆದುಕೊಂಡರು. ಪತಾಂಜಲಿಯ ಯೋಗ ಗುರುಗಳಾದ ಷಣ್ಮುಗಪ್ಪ ಸರ್ ಮತ್ತು ರಾಮಚಂದ್ರ ಐತಾಳ್ ಇವರನ್ನು ಈ […]
Read More
02-11-2019, 2:53 AM
ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕ ದಿನಾಂಕ 2/11/2019ರಂದು ದೀಪಾವಳಿ ಹಬ್ಬವನ್ನು ಸದಸ್ಯರೆಲ್ಲರೂ ಸೇರಿ ಆಚರಿಸಲಾಯಿತು. ರಂಗೋಲಿ ಹಾಕಿ ದೀಪ ಹಚ್ಚಲಾಯಿತು. ನಂತರ ದೇವರ ಕೀರ್ತನೆಗಳನ್ನು ಭಜಿಸಲಾಯಿತು.ಚಿತ್ರಶ್ರೀ ಮನೋಜ್ ದೀಪಾವಳಿಯ ವಿಶೇಷತೆಯ ಬಗ್ಗೆ ಬೌದ್ಧಿಕ ನೀಡಿದರು. ನಂತರ ಸದಸ್ಯರೆಲ್ಲರೂ ಸೇರಿ ದಾಂಡಿಯ ನೃತ್ಯ ಮಾಡಿದರು. ನಂತರ ಎಲ್ಲರೂ ಒಡಗೂಡಿ ಪ್ರಸಾದ ಸ್ವೀಕರಿಸಲಾಯಿತು.
Read More
13-09-2019, 4:39 PM
ಯುವವಾಹಿನಿ ರಿ. ಮೂಡಬಿದಿರೆ ಘಟಕದ ವತಿಯಿಂದ ಆರಂಭಿಸಲಾದ *ಯುವ ಸ್ಪಂದನ ಸೇವಾ ಯೋಜನೆಯ 18ನೇ ಸೇವೆಯನ್ನು ಕಡಂದಲೆ ಪಾಲಡ್ಕ ಬೆರ್ಕೆ ಮನೆ ಸೊಮಶೇಕರ್ ಇವರು ನಮ್ಮ ಘಟಕದ ಸಕ್ರಿಯ ಸದಸ್ಯರಾಗಿದ್ದಾರೆ ಇವರಿಗೆ ಬೆನ್ನು ಮೂಲೆಯ ತೀವ್ರವಾದ ಸಮಸ್ಯೆಯಿಂದ ಇದ್ದರೆ ಇವರು ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು ಇವಾಗ ಸುಮಾರು ಒಂದು ವರ್ಷದಿಂದ ಯಾವುದೇ ಕೆಲಸ ಮಾಡಲಿಕ್ಕೆ ಆಗದೆ ಮನೆಯಲ್ಲಿಯೇ ಇದ್ದಾರೆ ಇವರು *ಯುವವಾಹಿನಿ ರಿ. ಮೂಡಬಿದಿರೆ ಘಟಕಕ್ಕೆ ಆರ್ಥಿಕ ನೆರವಿಗಾಗಿ ಮನವಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿ ಇವರಿಗೆ ರೂ.5000/- […]
Read More
06-08-2017, 5:25 PM
ವಿದ್ಯಾತುರರಿಗೆ ನೆಮ್ಮದಿಯಾಗಲೀ ನಿದ್ರೆಯಾಗಲೀ ಇರದು – ಇದು ನಮ್ಮ ಜ್ಞಾನಾರ್ಜನೆಗೆ ಸಂಬಂಧಪಟ್ಟ ಒಂದು ಮಾತು. ಜ್ಞಾನ ದೇಗುಲ ನಮ್ಮ ಭಾರತ. ಸಾವಿರಾರು ವರ್ಷಗಳಿಂದ ಜಗತ್ತಿಗೆ ಶುದ್ಧ ಜ್ಞಾನ, ವಿಜ್ಞಾನವನ್ನು ಪ್ರಸಾರ ಮಾಡುತ್ತಾ ವಿಶ್ವದ ಎಲ್ಲ ಮಾನವ ಜನಾಂಗವನ್ನು ಶ್ರೇಷ್ಠರನ್ನಾಗಿ ಸುಸಂಸ್ಕøತರನ್ನಾಗಿಸುವುದರಲ್ಲಿ ಭಾರತೀಯ ಸಂಸ್ಕøತಿ ಗುರುತಿಸಲ್ಪಟ್ಟಿದೆ. ನಮ್ಮಲ್ಲಿರುವ ಮೆದುಳು ಪ್ರಪಂಚದಲ್ಲಿರುವ ಯಾವುದೇ ಅತ್ಯಂತ ಪ್ರಬಲ ಆಧುನಿಕ ಗಣಕ ಯಂತ್ರಕ್ಕಿಂತ ಹೆಚ್ಚು ಸಂಕೀರ್ಣ, ಬಲಶಾಲಿ ಎಂದು ಗುರುತಿಸಲ್ಪಟ್ಟಿದೆ. ಇದರ ಇನ್ನೊಂದು ರೂಪ “ಕಾಮಾತುರಾಣಾಂ ನಭಯಂ ನಲಜ್ಜಾ” ಇದು ಬಯಕೆಗಳ (ಕಾಮಗಳ) […]
Read More
06-08-2017, 3:52 PM
ಬಂಧುಗಳೇ, ಯುವವಾಹಿನಿಯ ಮೂರು ಮುಖ್ಯ ಧ್ಯೇಯಗಳಲ್ಲಿ ಒಂದಾದ “ವಿದ್ಯೆ”ಗೆ ಪೂರಕವಾಗಿ ಸ್ಥಾಪಿಸಲ್ಪಟ್ಟು ಕಾರ್ಯಚರಿಸುತ್ತಿರುವ ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ (ರಿ.), ಯುವವಾಹಿನಿ ಕೇಂದ್ರ ಸಮಿತಿಯ ಮಹತ್ವಾಕಾಂಕ್ಷೆಯ ಒಂದು ಯೋಜನೆ. ನಮ್ಮ ಸಮಾಜದ ವಿದ್ಯಾರ್ಥಿಗಳು ಆರ್ಥಿಕ ಕೊರತೆಯಿಂದಲೋ, ಮಾಹಿತಿಯ ಅಭಾವದಿಂದಲೋ ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಪೋಷಿಸುವ ಕೆಲಸವನ್ನು ಯುವವಾಹಿನಿ ಕಳೆದ ಹಲವು ವರ್ಷಗಳಿಂದ ನಿರ್ವಹಿಸುತ್ತಾ ಬಂದಿದೆ. ಪದವಿ, ಸ್ನಾತಕೋತ್ತರ ಪದವಿ, ವಿವಿಧ ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ನಮ್ಮ ವಿದ್ಯಾನಿಧಿಯಿಂದ ಆರ್ಥಿಕ ಧನಸಹಾಯ ಪಡೆದು ತಮ್ಮ ವಿದ್ಯಾರ್ಜನೆಯನ್ನು […]
Read More