ಸಿಂಚನ

ಜಾತಿ-ಸಂಘಟನೆ-ಸಂಶೋಧನೆ

ಕಳೆದ ಹತ್ತಿಪ್ಪತ್ತು ವರ್ಷಗಳಿಂದೀಚೆಗೆ ಜಾತಿ ಸಂಘಟನೆಗಳಿಗೊಂದು ವಿಶೇಷ ಬಲ ಬಂದಿದೆ. ಜಾತ್ಯಾತೀತ ರಾಷ್ಟ್ರದಲ್ಲಿ ಹೀಗೆ ಜಾತಿ ಸಂಘಟನೆ ಸರಿಯೇ ಎಂಬ ಪ್ರಶ್ನೆ ಮೂಡುತ್ತದೆ. ಸರಿಯಲ್ಲ ಎಂದು ವಾದಿಸುವವರ ತರ್ಕ ಏನೇ ಇರಲಿ. ಅವರ ತರ್ಕವನ್ನು ಗೌರವಿಸುತ್ತಾ ಜಾತಿ ಸಂಘಟನೆಗಳು ಪ್ರತೀ ಹಳ್ಳಿ ಹಳ್ಳಿಗಳಲ್ಲಿ ಗಟ್ಟಿಗೊಳ್ಳುತ್ತಿರುವುದಕ್ಕೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಜಾತಿ ವಿನಾಶಕ್ಕಾಗಿ ಶತಮಾನಗಳಿಂದ ನಮ್ಮ ನಾಡಿನ ಮಹಾಪುರುಷರೆಲ್ಲಾ ಸಾಕಷ್ಟು ಚಿಂತನೆ, ಬೋಧನೆಗಳನ್ನು ಮಾಡಿದರೂ ಅದರ ಬೇರನ್ನು ಕೀಳಲು ಸಾಧ್ಯವಾಗಲಿಲ್ಲ. ‘ಹೋದೆಯಾ ಪಿಶಾಚಿ ಎಂದರೆ, ಬಂದೆ ಗವಾಕ್ಷೀಲಿ’ ಎಂಬಂತೆ […]

Read More

2016-17ನೇ ಸಾಲಿನ ವಾರ್ಷಿಕ ವರದಿ

ಬ್ರಹ್ಮಶ್ರೀ ನಾರಾಯಣ ಗುರುವರ್ಯರ “ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ” ಎಂಬ ಅಮರವಾಣಿಯ ಅನುಸಾರ ‘ವಿದ್ಯೆ-ಉದ್ಯೋಗ-ಸಂಪರ್ಕ’ ಎಂಬ ಮೂರು ಮುಖ್ಯ ಧ್ಯೇಯಗಳನ್ನಿಟ್ಟುಕೊಂಡು ಸಮಾಜ ಅಭ್ಯುದಯದ ಕೈಂಕರ್ಯಕ್ಕಾಗಿ ಬಿಲ್ಲವ ಸಮಾಜದ ಸಮಾನ ಮನಸ್ಕ ಯುವಜನರ ಸಂಘಟನೆಯಾಗಿ 1987ರಲ್ಲಿ ಯುವವಾಹಿನಿಯು ರೂಪುಗೊಂಡಿತು. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಹಾಗೂ ಮುಖ್ಯವಾಗಿ ಶೈಕ್ಷಣಿಕವಾಗಿ ಸಮಾಜದಲ್ಲಿ ಬಿಲ್ಲವರು ಬಲಿಷ್ಠರಾಗಬೇಕು ಎಂಬ ಸಂಕಲ್ಪದೊಂದಿಗೆ ಯುವವಾಹಿನಿ ಕಾರ್ಯನಿರ್ವಹಿಸುತ್ತಾ ಬಂದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು, ಹಳೆಯಂಗಡಿ, ಹೆಜಮಾಡಿ, […]

Read More

ಸಾಯಿಸುವವರು ಮತ್ತು ಸಾಯಬಯಸುವವರು!

ಹಲವು ಸಮಯದಿಂದ ನನ್ನನ್ನು ಕಾಡುತ್ತಿರುವ ಎರಡು ಶಬ್ಧಗಳಿವು. ‘ಮರ್ಯಾದಾ ಹತ್ಯೆ ಮತ್ತು ದಯಾಮರಣ’ ನಂಬುವುದಿದ್ದರೆ ನಂಬಿ. ಮೊದಲನೆಯದರಲ್ಲಿ ಪ್ರೀತಿಯ ಹೆಸರಿನಲ್ಲಿ ಮಕ್ಕಳು ಸಾಯುತ್ತಾರೆ. ಎರಡನೆಯದರಲ್ಲಿ ಗುಣವಾಗದ ಕಾಯಿಲೆಯಿಂದ ಆಗುವ ಹಿಂಸೆಯ ಹೆಸರಿನಲ್ಲಿ ಜೀವಗಳು ಸಾಯಬಯಸುತ್ತವೆ. ಹುಟ್ಟಿದಂದಿನಿಂದ ತಮ್ಮ ಆಶ್ರಯದ ನೆರಳಿನಲ್ಲಿ ಬೆಳೆದು, ಯೌವನ ಅವಸ್ಥೆಗೆ ಬಂದಾಗ ತಮ್ಮ ಮಾತನ್ನು ಮೀರಿ ಅವನ/ಅವಳ ಪ್ರೀತಿಯಲ್ಲಿ ಬಿದ್ದು ತಮ್ಮ ಮಾತನ್ನು ದಿಕ್ಕರಿಸಿ ನಡೆಯುವ ಮಕ್ಕಳನ್ನು ಮರ್ಯಾದೆಯ ಹೆಸರಿನಲ್ಲಿ ಹೆತ್ತವರು ಕೊಲ್ಲುವುದು ಅದು ಮರ್ಯಾದಾ ಹತ್ಯೆಯಂತೆ. ಇಲ್ಲಿ ಮಗುವಾಗಿದ್ದಾಗ ಅದೇ ಮಕ್ಕಳನ್ನು […]

Read More

ಗುರು ಉಲ್ಲಾಯಗ್ ಸೊಲ್ಮೆ ಸಂದಾಯ…

ಒಂಜಿ ಬಿನ್ನಯ ಕೇನ್ಲೆ ಉಲ್ಲಾಯ ಇರೆ ಪಾದ ಪುರ್ಪೊಗೆ ಸೊಲ್ಮೆ ಸಂದಯಾ… ಕಬಿದಿ ಮಬ್ಬುಡು ಸಾದಿ ತೋಜಂದೆ ದಿಕ್ಕ್ ಓಲುಂದು ದಿಂಜ ನಾಡಿಯಾ… || ಪ || ಕುಟ್ಟಿ ಅಮ್ಮಾಳೆ ಪುಣ್ಯ ಗರ್ಭೊಡೆ ಪುಟ್ಟಿ ಬಾಲೆ ಈರಾದೆ ಮುಗುರು ತೆಲ್ತರ್… ಕೇರಳ ಪನ್ಪಿಂಚಿ ದೇವೆರೆ ನಾಡ್‍ಡ್ ನಾರಾಯಣ ಪುದರ್‍ಡೆ ಮೆರೆಯರ್ ….! ಎಂಕ್ಲೆ ಲೆಪ್ಪುಗು ಬೇಗ ಓಕೊಂಡರ್ ಗುರುನ ರೂಪೊಡೆ ಭೂಮಿ ಜತ್ತರ್… ಸೋತಿ ಜೀವೊಗು ಮತಿನ್ ಕೊರಿಯರ್ ಭ್ರಾಂತಿ ದೂರ ಮಲ್ತ್‍ದ್ ತೆಲಿಪಯರ್… || ಪ […]

Read More

ಸಂಪಾದಕರ ಮಾತು : ಗಂಗಾಧರ ಪೂಜಾರಿ

ಆತ್ಮೀಯ ಓದುಗ ಬಾಂಧವರೇ, ಮಾನವ ತನ್ನ ಸುತ್ತ ತಾನೇ ನಿರ್ಮಿಸಿಕೊಂಡಿರುವ, ಅಜ್ಞಾನ, ಅಂಧಕಾರ, ಮೂಢನಂಬಿಕೆಗಳ ಕೋಟೆಯನ್ನು ಒಡೆದು, ಆಕರ್ಷಕ ವ್ಯಕ್ತಿತ್ವವನ್ನು ಹೊಂದಿ ಪರಿಪೂರ್ಣತೆಯನ್ನು ಹೊಂದುವುದಕ್ಕೆ ಸಾಧ್ಯವಿದೆ ಎಂಬ ಸತ್ಯವನ್ನು ಹಲವಾರು ಮಂದಿ ಯುಗಪುರುಷರು ನಮಗೆ ಸಾಧಿಸಿ, ತೋರಿಸಿಕೊಟ್ಟಿರುತ್ತಾರೆ. ಅಂತಹ ಮಹತ್ತರವಾದ ದಿವ್ಯ ಪಥವನ್ನು ತಮ್ಮ ಕೃತಿಯಿಂದ ಮತ್ತು ಸಾಧನೆಗಳಿಂದ ನಮಗೆ ತೋರಿಸಿಕೊಟ್ಟು ನಮ್ಮ ಸಮಾಜಕ್ಕೆ ಅಂಟಿದ್ದ ಅಸ್ಪ್ರಶ್ಯತೆ ಶಾಪವನ್ನು ತೊಡೆದು ಹಾಕಿ, ಸನ್ಮಾರ್ಗದತ್ತ ನಮಗೆ ಬೆಳಕು ತೋರಿದವರು ಬ್ರಹ್ಮಶ್ರೀ ನಾರಾಯಣಗುರುಗಳು. ಅವರು ಸಾರಿದ ಒಂದೇ ಜಾತಿ, ಒಂದೇ […]

Read More

ದಾರಿದೀಪ

ಭಗವಂತನನ್ನು ಪೂಜಿಸಿದರೆ ಅಮ್ಮ ಬರುವುದಿಲ್ಲ ಆದರೆ ಅಮ್ಮನನ್ನು ಪೂಜಿಸಿದರೆ ಭಗವಂತ ಖಂಡಿತಾ ಬರುತ್ತಾನೆ. ಜೀವನದಲ್ಲಿ ಎಲ್ಲಾವನ್ನು ಶಾಶ್ವತವಾಗಿ ಪಡೆಯಲು ಬಯಸುತ್ತೇವೆ ಆದರೆ ಜೀವನವೇ ಶಾಶ್ವತವಲ್ಲ ಎಂಬುದನ್ನು ಮರೆಯುತ್ತೇವೆ. ನೀವೂ ಇನ್ನೊಬ್ಬರ ಕೆಲಸಗಳ ಬಗ್ಗೆ ಚುಚ್ಚಿ ಮಾತನಾಡುವ ಬದಲು ಇನ್ನೊಬ್ಬರು ನಿಮ್ಮನ್ನು ಮೆಚ್ಚಿ ಮಾತನಾಡುವಂತಹ ಕೆಲಸ ಮಾಡಿ. ಹುಟ್ಟಿದವರು ಒಂದು ದಿನ ಸಾಯಲೇಬೇಕು ಹಾಗಂತ ದಿನವು ಸತ್ತು ಬದುಕುವುದಲ್ಲ ಬದುಕು, ಸಾಧ್ಯವಾದರೆ ಆಗಬೇಕು ನಮ್ಮ ಬದುಕು ಮತ್ತೊಬ್ಬರ ಬಾಳಿನ ಬೆಳಕು ಬೆಳಕಾಗದಿದ್ದರೂ ಅಡ್ಡಿಯಿಲ್ಲ ನಮ್ಮಿಂದ ಇನ್ನೊಬ್ಬರ ಬಾಳು ಕತ್ತಲಾಗದಿದ್ದರೆ […]

Read More

ಅಂತಃಪಟದಾಚೆ

ಅದೊಂದು ಸುಂದರವಾದ ಮಂದಿರ. ಯಾವ ದೇವರಿದ್ದಾರೆಂದು ಅಸ್ಪಷ್ಟವಾಗಿತ್ತು. ಸುತ್ತಲೂ ವಿಶಾಲವಾದ ಹೊರಾಂಗಣ. ಸದ್ದು ಗದ್ದಲಗಳಿರಲಿಲ್ಲ. ನಿತ್ಯ ನಿರ್ಮಲ ಪ್ರಶಾಂತವಾದ ವಾತಾವರಣದಲ್ಲಿ ಒಂದಷ್ಟು ಮಂದಿ ತಮ್ಮಷ್ಟಕ್ಕೆ ತಾವೆನುವಂತೆ ಆಚೀಚೆಗೆ ಓಡಾಡುತ್ತಿದ್ದರು. ಹಾಗಂತ ಅಲ್ಲಿ ಓಡಾಡುತ್ತಿದ್ದವರೆಲ್ಲಾ ಅಪರಿಚಿತರೆನ್ನುವಂತಿರಲಿಲ್ಲ. ಆದರೂ ಒಬ್ಬರಿಗೊಬ್ಬರು ಮುಖಗೊಟ್ಟು ಮಾತಾಡುವಂತಹ ಗೊಡವೆಯೂ ಅವರಲ್ಲಿರಲಿಲ್ಲ. ಶಿಲ್ಪ ಆವರಣದ ಒಂದು ಮೂಲೆಯಲ್ಲಿ ನಿಂತು ತನಗೆ ಕಾಣಿಸುವಷ್ಟೇ ದೂರದಲ್ಲಿ ಕುಳಿತಿದ್ದ ಸುಶಾಂತನನ್ನೇ ಗಮನಿಸುತ್ತಿದ್ದಳು. ಅವನು ಮಾತ್ರ ತನ್ನ ಆಪ್ತ ಸ್ನೇಹಿತ ಹೇಮಂತನೊಡನೆ, ಮೊಬೈಲ್ ನಲ್ಲಿರುವ ವಾಟ್ಸಪ್ ಚಾಟಿಂಗ್‍ನಲ್ಲಿ ನಿರತನಾಗಿದ್ದ. ಹೌದು; ಸುಶ್ […]

Read More

ಸಿಂಚನ ವಿಶೇಷಾಂಕ -2017 ಬಿಡುಗಡೆ

ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ದಿನಾಂಕ 06.08.2017 ರಂದು ಉಪ್ಪಿನಂಗಡಿಯ ಎಚ್ ಎಮ್.ಆಡಿಟೋರಿಯಂ ಇಲ್ಲಿ ಜರುಗಿದ ಯುವವಾಹಿನಿಯ 30ನೇ ವಾರ್ಷಿಕ ಸಮಾವೇಶದಲ್ಲಿ ಕರ್ನಾಟಕ ಸರಕಾರದ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಕೆ.ವಸಂತ ಬಂಗೇರ ಅವರು ಸಿಂಚನ ವಿಶೇಷಾಂಕ -2017 ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಐ ಎಪ್ ಎಸ್ ಅಧಿಕಾರಿ ಶ್ರೀ ದಾಮೋದರ ಎ.ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಯನಾ […]

Read More

ಬಿರ್ಮಣ ಬೈದನ ಬೆರಿಯೆ ಬತ್ತೆನಾ ಕೊಡಮಣಿತ್ತಾಯೆ…

ಬಿಲ್ಲವರು ಎಲ್ಲೂ ಸಲ್ಲುವರಯ್ಯಾ…ಪನ್ಪಿ ಪಾತೆರೊಗು ಸತ್ಯ ಒದಗಾದ್ ಕೊರಿ ಲೆಕಾನೆ ಈ ತುಳುನಾಡ್‍ಡ್ ಬಿರ್ವೆರ್ ಕೈ ಪಾಡಂದಿ ಕಾರ್ಯ ಇಜ್ಜಿ. ಬಿರ್ವೆರ್ ಇಜ್ಜಾಂದೆ ಲೇಸ್ ಇಜ್ಜಿ. ಕಂಡ ಸಾಗೊಲಿ, ಮೂರ್ತೆ, ದೈವೊದ ಪಾತ್ರಿ, ಮುಕ್ಕಾಲ್ದಿ, ವೈದ್ಯೆರಾದ್ ಪುರಪ್ಪು ಪಡೆಯಿನ ಪತ್ತ್ ಪದಿನಾಜಿ ಉದಾರ್ನೆ ನಂಕ್ ತಿಕ್ಕುಂಡು .ಅಂಚನೆ ನಯ ವಿನಯೊಡು ತಗ್ಗಿ ಕಂಡೊಗು ಮೂಜಿ ಬುಳೆಗೆ ಪನ್ಪಿಲೆಕಾನೆ ಸ್ವಾಮಿಗ್ ಭೂಮಿಗ್ ತಗ್ಗ್ ದ್ ಬಗ್ಗ್ ದ್ ನಡತ್ತಿನೇಡ್ದಾವರನೆ ಈ ತುಳುನಾಡ್‍ಡೆ ಎಚ್ಚಿನ ದೈವೊಲು ಬಿರ್ವೆರೆ ಬೆರಿ ಪತೊಂದೆ […]

Read More

ಸಾಮಾಜಿಕ ಆತ್ಮ ಶೋಧನೆ – ಪ್ರೊ| ಮೋಹನ್ ಕೋಟ್ಯಾನ್

ಒಂದು ಸಮಾಜಕ್ಕೆ ಆತ್ಮಶಕ್ತಿಯೆಂಬುದು ಇದೆಯೇ? ಅದು ಜೀವಂತ ಸಮಾಜವಾದರೆ ಖಂಡಿತವಾಗಿಯೂ ಆತ್ಮಶಕ್ತಿ ಇರಲೇಬೇಕು. ಬೌಧಿಕ ವಿಕಾಸ, ಯೋಚನಾ ಶಕ್ತಿಯ ಉತ್ಕ್ರಾಂತಿಯೇ ಆತ್ಮಶಕ್ತಿಗೆ ಮೂಲ. ವಿಜ್ಞಾನದಲ್ಲಿ ಜೀವ-ನಿರ್ಜೀವ ವಸ್ತುಗಳನ್ನು ವಿಶ್ಲೇಷಿಸುತ್ತಾ ಜೀವ ಇರುವ ವಸ್ತುವಿನ ಗುಣಗಳಲ್ಲಿ ಪುನರುತ್ಪತ್ತಿ (multiplication)  ಪ್ರತಿ ಸ್ಪಂದನೆ (Respose to stimuli),  ಸದಾ ಚಟುವಟಿಕೆ(biological activities)  ಮತ್ತು ಬೆಳವಣಿಗೆ(growth) ಪ್ರಾಮುಖ್ಯವಾದವುಗಳೆಂಬುದನ್ನು ಗುರುತಿಸಿದೆ. ಆದರೆ ಮಾನವನ ಬಗ್ಗೆ ಇಷ್ಟೇ ಸಾಲದು. ಆತನಿಗೆ ಯೋಚನಾಶಕ್ತಿಯೊಂದಿದೆ. ತನ್ನ ಬೇಕು ಬೇಡಗಳನ್ನು ವಿವೇಚಿಸಬಲ್ಲ. ಇಂತಹ ವಿವೇಚನಾಶೀಲ ಜನಸಮುದಾಯ ಸಮಾಜವಾಗಿ ಬೆಳೆದಾಗ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!