15-06-2018, 3:47 PM
ಮೂಲ್ಕಿ: ಇಂದು ಯುವ ಸಮುದಾಯವು ಹಾದಿ ತಪ್ಪುತ್ತಿದ್ದಾರೆ ಎಂದು ಹೇಳುವ ಬದಲು ಅವರನ್ನು ಯುವವಾಹಿನಿಯಂತಹ ಸಮಾಜ ಮುಖಿ ಚಿಂತನೆಯ ಸಂಘಟನೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜವನ್ನು ಸೃಷ್ಟಿಸುವಲ್ಲಿ ಪ್ರಯತ್ನ ನಡೆಸಬೇಕು. ಹೆಣ್ಣು ಮಕ್ಕಳು ವಿದ್ಯೆಯ ಮೂಲಕ ಸದೃಢರಾಗುತ್ತಿರುವ ಇಂದಿನ ದಿನದಲ್ಲಿ ಯುವಕರು ಯಾಕಾಗಿ ಹಿನ್ನೆಡೆಯಾಗಿದ್ದಾರೆ ಎಂದು ಹೆತ್ತವರು ಚಿಂತಿಸಬೇಕಾಗಿದೆ ಎಂದು ಮಂಗಳೂರು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಹೇಳಿದರು. ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶನಿವಾರ ನಡೆದ ಮೂಲ್ಕಿ ಯುವವಾಹಿನಿ ಘಟಕದ […]
Read More
14-06-2018, 2:54 AM
ಉಪ್ಪಿನಂಗಡಿ : ಸ್ವಸ್ಥ ಸಮಾಜದ ಕನಸನ್ನು ಕಂಡ ಯುವವಾಹಿನಿ ಯುವಕರು ಕಳೆದ 30 ವರ್ಷಗಳಿಂದ ಅವರದೇ ಆದ ವೈಯಕ್ತಿಕ ಬದುಕನ್ನು ಪಕ್ಕಕ್ಕಿಟ್ಟು ಸಾಮೂಹಿಕ ಬದುಕಿಗೆ ಪಣತೊಟ್ಡು ಹಬ್ಬದ ವಾತಾವರಣ ಒಂದು ಮನೆಗೆ ಸೀಮಿತವಾಗಿರದೆ ಇಡೀ ಸಮಾಜವೇ ಹಬ್ಬದ ವಾತಾವರಣದಿಂದ ಕೂಡಿರಬೇಕು ಎಂಬ ಯುವವಾಹಿನಿ ಯುವಕರ ಸತತ ಪರಿಶ್ರಮದ ಫಲವೇ ಯುವವಾಹಿನಿಯ ಯಶಸ್ಸು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 14.06.2018 ನೇ ಗುರುವಾರ ಇಂದಿರಾ ವೆಂಕಟೇಶ್ ಸಭಾಂಗಣ, ಹಿರಿಯ ಪ್ರಾಥಮಿಕ […]
Read More
10-06-2018, 2:16 PM
ಕಡಬ: ಯುವ ಜನತೆ ಸ್ವಾಭಿಮಾನಿ ಸ್ವಾವಲಂಭಿ ಬದುಕಿನತ್ತ ಹೆಜ್ಜೆ ಇಟ್ಟು ಎಲ್ಲಾ ಕ್ಷೇತ್ರಗಳಲ್ಲೂ ಸಮಾಜದ ಮುಖ್ಯ ವಾಹಿನಿಗೆ ಬಂದು ಸದೃಡ ಸಮಾಜ ನಿರ್ಮಾಣಕ್ಕೆ ಕಾರಣೀಭೂತರಾಗಿರಬೇಕು ಎಂದು ಯುವವಾಹಿನಿ(ರಿ} ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷರಾದ ಯಶವಂತ ಪೂಜಾರಿಯವರು ಹೇಳಿದರು. ಅವರು ದಿನಾಂಕ 10.06.2018 ರಂದು ಕಡಬ ದುರ್ಗಾಂಬಿಕಾ ದೇವಸ್ಥಾನದ ಸಭಾಭವನದಲ್ಲಿ ನಡೆದ ಯುವವಾಹಿನಿ ಸಂಸ್ಥೆಯ 31ನೇ ಘಟಕ ಯುವವಾಹಿನಿ{ರಿ) ಕಡಬ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವವಾಹಿನಿ ಘಟಕ ಸ್ಥಾಪಿಸುವ ಮೂಲಕ ಬಿಲ್ಲವ ಸಮುದಾಯದ […]
Read More
10-06-2018, 2:54 AM
ದಿನಾಂಕ 10 .06.2018 ರಂದು ಘಟಕದ ವತಿಯಿಂದ ದೇಗುಲ ದರ್ಶನಕ್ಕಾಗಿ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಕುಪ್ಪೆಪದವಿನಿಂದ ಹೊರಟೆವು ಪ್ರಥಮವಾಗಿ ನಮ್ಮ ಪ್ರಯಾಣ ಆನೆಗುಡ್ಡೆಯತ್ತ ಸಾಗಿ.ದೇವರ ದರ್ಶನ ಪಡೆದು.ಅಲ್ಲಿಂದ ಪ್ರಯಾಣ ಕಮಲಶಿಲೆಯತ್ತ ಸಾಗಿ ಬ್ರಾಹ್ಮಿ ದುರ್ಗಾಪರಮೇಶ್ವರಿ ಅಮ್ಮನವರ ಮಹಾಪೂಜೆ ದರ್ಶನ ಪಡೆದು .ಮಹಾಪ್ರಸಾದವಾದ ಅನ್ನಪ್ರಸಾದವನ್ನು ಸ್ವೀಕರಿಸಿದ ನಂತರ.ಪ್ರಯಾಣವು ಮಂದಾರ್ತಿ ಕ್ಷೇತ್ರಕ್ಕೆ ಸಾಗಿ .ಅಲ್ಲಿ ದೇವರ ದರ್ಶನ ಪಡೆದನಂತರ, ಪಯಣವು ಮಲ್ಪೆ ಕಡಲತೀರಕ್ಕೆ ಬಂದು ಅಲ್ಲಿಯ ಕಡಲತೆರೆಯ ಅಬ್ಬರದ ಸೊಬಗನ್ನು ನೋಡಿ.ಕುಪ್ಪಳಿಸಿದ ನಂತರ. ಪಾಯಣವು ಸ್ವಗ್ರಹದತ್ತ ಸಾಗಿ ಕೊನೆಗೊಂಡಿತು..ಈ […]
Read More
10-06-2018, 2:45 AM
ಉಡುಪಿ : ಸಾಮೂಹಿಕ ಪ್ರಯತ್ನದಿಂದ ಮಾತ್ರ ಮಾದರಿ ಸಂಘಟನೆ ನಿರ್ಮಾಣ ಸಾಧ್ಯ, ಹಾಗೂ ಯುವವಾಹಿನಿ ಎಂಬ ದೇವಾಲಯದಲ್ಲಿ ಅಧ್ಯಕ್ಷರು ಅರ್ಚಕರಾಗಿ ಸದಸ್ಯರು ಭಕ್ತಾದಿಗಳೆಂಬ ಪರಿಕಲ್ಪನೆಯಲ್ಲಿ ಯುವವಾಹಿನಿ ಸಾಗುತ್ತಿರುವುದು ಶ್ಲಾಘನೀಯ ಎಂದು ಮೆಸ್ಕಾಮ್ ಕಾರ್ಯಪಾಲಕ ಇಂಜಿನಿಯರ್ ಜಯಾನಂದ ಎಮ್ ತಿಳಿಸಿದರು ಅವರು ದಿನಾಂಕ 10.06.2018 ರಂದು ಉದ್ಯಾವರ ಬಲಾಯಿಪಾದೆ ಯುವವಾಹಿನಿ ಸಭಾಭವನದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ 2018-19 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಗಣೇಶ್ ಕುಮಾರ್ […]
Read More
10-06-2018, 2:17 AM
ಪಡುಬಿದ್ರಿ : ಸಮಾಜದಲ್ಲಿ ಯುವಜನಾಂಗವು ದಾರಿ ತಪ್ಪುತ್ತಿರುವ ಸಂದರ್ಭದಲ್ಲಿ ಸಂಘಟನೆಗಳ ಮೂಲಕ ಜಾಗೃತಿ ಮೂಡಿಸುವುದು ಅನಿವಾರ್ಯ. ಹಲವಾರು ಸಮಸ್ಯೆಗಳ ನಿವಾರಣೆಗೆ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಬಿಲ್ಲವರ ಯೂನಿಯನ್, ಕುದ್ರೊಟ್ಟು, ಬ್ರಹ್ಮ ಬೈದರ್ಕಳ ಗರಡಿ ಎರ್ಮಾಳ್ ಬಡಾದ ಕಾರ್ಯದರ್ಶಿ ರಮೇಶ್ ಅಂಚನ್ ತಿಳಿಸಿದರು. ಅವರು ಪಡುಬಿದ್ರಿ ಬಿಲ್ಲವ ಸಂಘದ ಸಭಾ ಭವನದಲ್ಲಿ ಜರಗಿದ ಯುವವಾಹಿನಿ ಪಡುಬಿದ್ರಿ ಘಟಕದ 2018 ನೇ ಸಾಲಿನ ಪದಗ್ರಹಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಜಯಂತ ನಡುಬೈಲು […]
Read More
10-06-2018, 2:16 AM
ಹೆಜಮಾಡಿ : ವಿಜ್ಞಾನ ಮುಂದುವರಿದಂತೆ ಮಾನವೀಯ ಮೌಲ್ಯಗಳು ವ್ಯವಹಾರವಾಗಿ ಬದಲಾಗುತ್ತಿದೆ, ಪ್ರೀತಿ, ವಿಶ್ವಾಸ , ನಂಬಿಕೆ, ಗೌರವ, ಸ್ನೇಹ ಇಲ್ಲದಂತಾಗಿದೆ, ಈ ನಿಟ್ಟಿನಲ್ಲಿ ಯುವವಾಹಿನಿ ಮಾನವೀಯ ಮೌಲ್ಯಗಳ ಪ್ರೇರಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಯುವವಾಹಿನಿ ಕೆಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ತಿಳಿಸಿದರು. ದಿನಾಂಕ10.06.2018 ರಂದು ಯುವವಾಹಿನಿ (ರಿ) ಹೆಜಮಾಡಿ ಘಟಕದ 2018-19 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಭೋಧಿಸಿ ಮಾತನಾಡಿದರು. ಯುವವಾಹಿನಿ (ರಿ) ಹೆಜಮಾಡಿ ಘಟಕದ ಅಧ್ಯಕ್ಷ ಮಹೇಂದ್ರ ಸಾಲ್ಯಾನ್ ಸಮಾರಂಭ […]
Read More
09-06-2018, 4:25 PM
ಸುಳ್ಯ: ಯುವವಾಹಿನಿ ಸುಳ್ಯ ಘಟಕದ ಪದಗ್ರಹಣ ಸಮಾರಂಭ ಜೂ.9 ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಯುವಸದನದಲ್ಲಿ ನಡೆಯಿತು. ಸುಳ್ಯ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಎನ್.ಎಸ್.ಡಿ ವಿಠಲ್ದಾಸ್ ಬೆಳ್ಳಾರೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಜಯಂತ ನಡುಬೈಲು ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿದರು. ಚಂದ್ರಶೇಖರ್ ಹೈದಂಗೂರು ನೇತೃತ್ವದ ನೂತನ ತಂಡ ಪ್ರತಿಜ್ನಾವಿಧಿ ಸ್ವೀಕರಿಸಿದರು . ಯುವವಾಹಿನಿ ಸುಳ್ಯ ಘಟಕದ ಅಧ್ಯಕ್ಷ ಶಿವಪ್ರಸಾದ್ ಕೆ.ವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ […]
Read More
09-06-2018, 2:50 AM
ಪಣಂಬೂರು : ಅವ್ಯವಸ್ಥೆಯನ್ನು ತಿಂದುಂಡು ಹೊದ್ದು ಮಲಗೇಳುವ ನಮ್ಮ ಪರಿಸ್ಥಿತಿಯನ್ನು ಬದಲಾಯುಸೋ ಪ್ರಯತ್ನಕ್ಕೆ ಯುವವಾಹಿನಿ ಸಂಘಟನೆ ಅನಿವಾರ್ಯ ಹಾಗೂ ಆಗ ಮಾತ್ರ ಒಂದು ಸುಭದ್ರ ನಾಳೆ, ಒಂದು ನೆಮ್ಮದಿಯ ನಾಳೆ, ಒಂದು ನಿರಾತಂಕ ನಾಳೆ, ಒಂದು ಸ್ಪಷ್ಟ ನಾಳೆ, ಒಂದು ಸಮೃದ್ಧಿಯ ನಾಳೆ ನಿರ್ಮಾಣಕ್ಕೆ ಸಾಧ್ಯ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 09.06.2018 ರಂದು ಪಣಂಬೂರು, ನವಮಂಗಳೂರು ಬಂದರು ಮಂಡಳಿಯ ರಿಕ್ರಿಯೇಶನ್ ಕ್ಲಬ್ ಇಲ್ಲಿ ಯುವವಾಹಿನಿ(ರಿ) ಪಣಂಬೂರು ಘಟಕದ […]
Read More
07-06-2018, 4:46 PM
ಕಂಕನಾಡಿ : ಸಂಸ್ಕೃತಿ ಉಳಿದರೆ ಪರಿಸರ ಉಳಿಯುತ್ತದೆ. ದೇಶದ ಅಭಿವೃದ್ಧಿ ಯಾಗಬೇಕಾದರೆ ಮಾನವರ ಅಭಿವೃದ್ಧಿಯಾಗಬೇಕು. ಸುಸ್ಥಿರ ಅಭಿವೃದ್ಧಿ ಗುರಿಗಳಿದ್ದರೆ ಮಾತ್ರ ಮಾನವರ ಅಭಿವೃದ್ಧಿ ಸಾಧ್ಯ ಎಂದು ರೋಶನಿ ನಿಲಯದ ಚೈಲ್ಡ್ ಲೈನ್ ನಗರ ಸಂಚಾಲಕರಾದ ಯೋಗಿಶ್ ಮಲ್ಲಿಗೆ ಮಾಡು ತಿಳಿಸಿದರು. ಅವರು ದಿನಾಂಕ 07-06-2018ರಂದು ಯುವವಾಹಿನಿ (ರಿ) ಕಂಕನಾಡಿ ಘಟಕದ ವಾರದ ಸಭೆಯಲ್ಲಿ “ತಂಬಾಕು ರಹಿತ ದಿನ” ಮತ್ತು “ವಿಶ್ವ ಪರಿಸರ ದಿನಾಚರಣೆ”ಯ ಪ್ರಯುಕ್ತ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಮಾದಕ ವ್ಯಸನಗಳಲ್ಲಿ ತಂಬಾಕು ಕೂಡ ಒಂದು. […]
Read More