29-07-2018, 4:31 PM
ಕುಳಾಯಿ : ತುಳುನಾಡಿನ ಸಂಸ್ಕೃತಿ ಉಳಿಸುವಲ್ಲಿ ಮಹಿಳೆಯರ ಹೊಣೆಗಾರಿಕೆ ಪ್ರಾಮುಖ್ಯವಾಗಿದೆ. ಯುವವಾಹಿನಿ ಸಂಘಟನೆ ಯುವಕರಲ್ಲಿ ಶಿಕ್ಷಣ, ಸಂಘಟನೆ ಬಗ್ಗೆ ಜಾಗ್ರತಿ ಮೂಡಿಸಿ ಸುಸಂಸ್ಕ್ರತ ಪ್ರಜೆಗಳನ್ನಾಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆಟಿದ ಪೊನ್ನುಪೊಂಜೊವುಲು ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಪೆರ್ಮನ್ನೂರು ಸರಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಕಟೀಲು ತಿಳಿಸಿದರು. ಅವರು ದಿನಾಂಕ 29-07-2018ನೇ ಆದಿತ್ಯವಾರದಂದು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ, ಯುವವಾಹಿನಿ(ರಿ) ಪಣಂಬೂರು ಘಟಕ ಮತ್ತು ಯುವವಾಹಿನಿ(ರಿ) ಸುರತ್ಕಲ್ […]
Read More
29-07-2018, 4:30 PM
ಪುತ್ತೂರು : ವಿದ್ಯೆ-ಉದ್ಯೋಗ -ಸಂಪರ್ಕ ಎಂಬ ದ್ಯೇಯವಾಕ್ಯದಡಿಯಲ್ಲಿ ಕರ್ತವ್ಯ ನಿರ್ವಹಿಸುವ ಯುವವಾಹಿನಿ ಸಂಘಟನೆಂಯು ಕಷ್ಟದಲ್ಲಿರುವವರೆಗೆ ಸದಾ ಸ್ವಂದಿಸುವ ಸಂಘಟನೆಯಾಗಿ ಹೆಸರು ಗಳಿಸಿದೆ ಎಂದು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಜಯಂತ ನಡುಬೈಲುರವರು ಹೇಳಿದರು. ಅವರು ಜು .೨೨ ರಂದು ಬಪ್ಪಳಿಗೆ ಬ್ರಹ್ಮಶ್ರಿ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ ಯುವವಾಹಿನಿ ಪುತ್ತೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಯುವವಾಹಿನಿ ಘಟಕದಲ್ಲಿ ಕಳೆದ […]
Read More
29-07-2018, 4:25 PM
ಮೂಲ್ಕಿ: ತುಳುನಾಡಿನ ಸಂಸ್ಕೃತಿ ಪರಂಪರೆ ನಮ್ಮ ಧ್ಯೇಯವಾಗಬೇಕು, ಮುಂದಿನ ಪೀಳಿಗೆಗೆ ಹಿಂದಿನ ಸಾಂಸ್ಕೃತಿಕತೆಯನ್ನು ತಿಳಿ ಹೇಳುವ ಕೆಲಸ ಇಂದು ಸಂಘ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ, ಮೂಲ್ಕಿ ಯುವವಾಹಿನಿಯಂತಹ ಸಂಸ್ಥೆಗಳಿಂದ ಯುವ ಪೀಳಿಗೆಯನ್ನು ಸಂಘಟನಾ ಶಕ್ತಿಯನ್ನು ತೋರಿಸಿರುವುದು ಸಮಾಜ ಗುರುತಿಸಿದೆ ಎಂದು ಕರ್ನಾಟಕ ಧಾರ್ಮಿಕ ಪರಿಷತ್ನ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು. ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮೂಲ್ಕಿಯ ಯುವವಾಹಿನಿ ಘಟಕದ ಆಶ್ರಯದಲ್ಲಿ ಭಾನುವಾರ ನಡೆದ ಹದಿನಾರನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ವೇದಿಕೆಯಲ್ಲಿ ತರಕಾರಿ, […]
Read More
29-07-2018, 4:05 PM
ಮಾಣಿ : ತುಳು ಬದುಕು ಎನ್ನುವುದು ಹಲವು ಆಯಾಮಗಳ ಒಟ್ಟು ಮೊತ್ತದ ಪ್ರತಿರೂಪ. ಇಲ್ಲಿನ ಸಂಸ್ಕ್ರತಿ , ಆಚರಣೆ, ವೈಶಿಷ್ಟಗಳು ಅನನ್ಯವಾದುದು. ದೈವಾರಾಧನೆಯಲ್ಲಿ ಬಳಕೆಯಾಗುವ ನುಡಿಗಟ್ಟುಗಳು ತುಳುವರ ಬದುಕಿನ ಶ್ರೀಮಂತಿಕೆಗೆ ಸಾಕ್ಷಿ. ಅವುಗಳ ಮರು ಪ್ರಸ್ತುತಿಯು ಆಟಿಡೊಂಜಿ ದಿನದಂತಹ ಕಾರ್ಯಕ್ರಮದಲ್ಲಿ ನಡೆದು ಬರುತ್ತಿರುವುದು ಸಮಂಜಸವಾಗಿದೆ ಎಂದು ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನ ಉಪನ್ಯಾಸಕ ಚೇತನ್ ಮುಂಡಾಜೆ ನುಡಿದರು. ಅವರು ಯುವವಾಹಿನಿ (ರಿ) ಮಾಣಿ ಘಟಕದ ವತಿಯಿಂದ ದಿನಾಂಕ: 29.07.2018ರ ಆದಿತ್ಯವಾರದಂದು ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರುಗಿದ […]
Read More
29-07-2018, 6:25 AM
ಕೂಳೂರು : ಬದಲಾವಣೆ ಬೇಕು ಆದರೆ ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ತುಳುನಾಡಿನ ಸಂಸ್ಕೃತಿ ,ಸಂಪ್ರದಾಯ ಹಾಗೂ ಆಚರಣೆಯ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಇದರಿಂದ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ರವಾನಿಸಬಹುದು, ಎಂದು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ(ರಿ) ಇದರ ಸ್ಥಾಪಕ ಅಧ್ಯಕ್ಷರಾದ ಕೆಎ ರೋಹಿಣಿತಿಳಿಸಿದರು. ಆಗಿನ ಕಾಲದಲ್ಲಿ ಹೆತ್ತವರು ಹೇಳಿದಂತೆ ಮಕ್ಕಳು ಕೇಳುತ್ತಿದ್ದರು, ಆದರೆ ಈಗಿನ ಕಾಲದಲ್ಲಿ ಮಕ್ಕಳು ಹೇಳಿದಂತೆ ಹೆತ್ತವರು ಕೇಳಬೇಕಾದ ಪರಿಸ್ಥಿತಿ , ಆಟಿ ತಿಂಗಳಿನ ವಿಶೇಷತೆ ,ಅಮಾವಾಸ್ಯೆ ಬಡಿಸುವುದು ,ಆಟಿ ಕಳಂಜ […]
Read More
29-07-2018, 3:32 AM
ಮಂಗಳೂರು : ಯುವವಾಹಿನಿಯ ಉಪನಿಬಂಧನೆಗ ಹಾಗೂ ಉಪನಿಯಮಗಳನ್ನು ಒಳಗೊಂಡ ಮಾರ್ಗದರ್ಶಿ ಪುಸ್ತಕವನ್ನು ಯುವವಾಹಿನಿಯ ಸಲಹೆಗಾರರಾದ ಬಿ.ತಮ್ಮಯ ಬಿಡುಗಡೆಗೊಳಿಸಿದರು. ದಿನಾಂಕ 29.07.2018 ರಂದು ನಡೆದ ಯುವವಾಹಿನಿ ಕೇಂದ್ರ ಸಮಿತಿಯ ಮಾಸಿಕ ಸಭೆಯಲ್ಲಿ ಈ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ, ನಿಯೋಜಿತ ಅಧ್ಯಕ್ಷ ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಉಪಾಧ್ಯಕ್ಷ ನರೆಶ್ ಕುಮಾರ್ ಸಸಿಹಿತ್ಲು, ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಮರೋಳಿ, ಮಾಜಿ ಅಧ್ಯಕ್ಷರಾದ ಅಶೋಕ್ ಕುಮಾರ್, ವಿಶ್ವನಾಥ್ ಕೆ. ಮತ್ತಿತರರು […]
Read More
29-07-2018, 2:10 AM
ಕಾಪು, ಜು. 29 :ತುಳುವರ ಆಚರಣೆ, ಸಂಪ್ರದಾಯ ಮತ್ತು ಪದ್ಧತಿ ಗಳು ಸರ್ವರಿಗೂ ಅನುಕರಣೀವಾಗಿದೆ. ಅದನ್ನು ಮತ್ತಷ್ಟು ಗಟ್ಟಿಗೊಳಿಸಿ ಮುಂದಿನ ಪೀಳಿಗೆಗೂ ಉಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಧಾರ್ಮಿಕ ಚಿಂತಕ ಸುಧಾಕರ ಡಿ. ಅಮೀನ್ ಹೇಳಿದರು. ಯುವವಾಹಿನಿ ಕಾಪು ಘಟಕದ ವತಿಯಿಂದ ರವಿವಾರ ಕಾಪು ಬಿಲ್ಲವರ ಸಹಾಯಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಆಟಿ ತಿಂಗಳನ್ನು ಅನಿಷ್ಟದ ತಿಂಗಳು ಎಂಬ ಅರ್ಥವನ್ನು ಕಲ್ಪಿಸಲಾಗುತ್ತಿದೆ. ಆದರೆ ಇದು ಅನಿಷ್ಡದ ತಿಂಗಳು ಅಲ್ಲವೇ […]
Read More
22-07-2018, 6:26 PM
ಬಂಟ್ವಾಳ : ನೆಲ ಮೂಲ ಸಂಸ್ಕೃತಿಯನ್ನು ನಂಬಿಕೊಂಡು ಬಂದವರು ತುಳುವರು, ಅವರ ಪ್ರತಿಯೊಂದು ಆಚರಣೆಗಳು ಮೂಲ ನಂಬಿಕೆಯಿಂದ ಕೂಡಿತ್ತು, ಇದಕ್ಕೆ ವೈಜ್ಞಾನಿಕ ಹಿನ್ನಲೆ ಇರುವುದು ವಿಶೇಷ. ಎಲ್ಲರೂ ಕೂಡಿ ಆಚರಿಸುವ ಆಟಿಡೊಂಜಿ ಕೂಟ ಎನ್ನುವ ಇಂತಹ ಕಾರ್ಯಕ್ರಮಗಳು ಇಂದಿನ ಯುವ ಪೀಳಿಗೆಗೆ ತುಳುನಾಡಿನ ಗತವೈಭವವನ್ನು ನೆನಪಿಸುತ್ತದೆ. ಇಂತಹ ಸಂಸ್ಕೃತಿ, ಸಂಸ್ಕಾರಯುತ ಆಚರಣೆಗಳು ಬದುಕನ್ನು ಶ್ರೀಮಂತವಾಗಿಸುತ್ತದೆ ಎಂದು ಎಸ್.ಡಿ.ಎಮ್ ಕಾಲೇಜಿನ ಉಪನ್ಯಾಸಕ ಸ್ಮಿತೇಶ್. ಎಸ್.ಬಾರ್ಯ ತಿಳಿಸಿದರು ಅವರು ದಿನಾಂಕ 22.07.2018 ರಂದು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ […]
Read More
14-07-2018, 8:18 AM
ಬಜ್ಪೆ: ವಿದ್ಯೆ ಉದ್ಯೋಗ ಸಂಪರ್ಕವೆನ್ನುವ ಮಹತ್ತರವಾದ ಆಶಯವನ್ನಿರಿಸಿಕೊಂಡು, ಸಮಾಜಮುಖಿಯಾಗಿ ಕಾರ್ಯೋನ್ಮುಖವಾಗಿರುವ ಯುವವಾಹಿನಿ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲೂ ತನ್ನನ್ನು ಬಹುವಾಗಿ ಅನ್ವಯಿತಗೊಳಿಸಿಕೊಂಡಿರುವ ಕಾರಣವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನ ಮಡಿಗೇರಿಸಿಕೊಂಡಿರುವುದು ಕಡಿಮೆ ಸಾಧನೆಯೇನಲ್ಲ. ಯುವವಾಹಿನಿ ಕೇಂದ್ರ ಸಮಿತಿಯ ಪಡಿನೆಳಲಲ್ಲಿ ತನ್ನ ಪ್ರತಿಭೆಯನ್ನು ವಿಸ್ತಾರಗೊಳಿಸಿಕೊಂಡಿರುವ ಘಟಕಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಯುವವಾಹಿನಿ(ರಿ.) ಬಜ್ಪೆ ಘಟಕದ ಆಶ್ರಯದಲ್ಲಿ ದಿನಾಂಕ. 14.07.2018 ರಂದು ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ(SEZ) ಇದರ ಸಹಭಾಗಿತ್ವದಲ್ಲಿ, ಪ್ರಸಾದ್ ನೇತ್ರಾಲಯ […]
Read More
12-07-2018, 4:22 PM
ಪಡುಬಿದ್ರಿ : ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ವತಿಯಿಂದ ದಿನಾಂಕ ೧೨. ೦೭. ೨೦೧೮ ಪಡುಬಿದ್ರಿ ನಾರಾಯಣಗುರು ಮಂದಿರದಲ್ಲಿ ವಾರದ ಭಜನೆಯು ನಡೆಯಿತು. ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳು, ಸದಸ್ಯರು, ಬಿಲ್ಲವ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಮಹಿಳಾ ವಿಭಾಗದ ಸದಸ್ಯೆಯರು ಉಪಸ್ಥಿತರಿದ್ದರು.
Read More