12-01-2019, 4:40 AM
ಮಾಣಿ : ಯುವವಾಹಿನಿಯು ವಿದ್ಯೆ,ಉದ್ಯೋಗ ಮತ್ತು ಸಂಪರ್ಕ ಎಂಬ ಧ್ಯೇಯ ವಾಕ್ಯದೊಂದಿಗೆ ಚಿರಪರಿಚಿತವಾಗಿದೆ. ಈ ನೆಲೆಯಲ್ಲಿ ಆಸಕ್ತರಿಗೆ ಸಹಾಯ ಮಾಡಲು ಯುವವಾಹಿನಿ(ರಿ) ಮಾಣಿ ಘಟಕದ ವತಿಯಿಂದ ಕಳೆದ ಬಾರಿ ರೂಪುಗೊಂಡ ಯೋಜನೆಯೇ ಸ್ಪಂದನ. ಬರಿಮಾರು ಗ್ರಾಮದ ಮುಳ್ಳಿಬೈಲು ಬೆಟ್ಟು ಮನೆಯಲ್ಲಿ ವಾಸವಾಗಿರುವ ಗಣೇಶ ಮತ್ತು ರೂಪ ದಂಪತಿಗಳ ಒಂದೂವರೆ ವರ್ಷದ ಮಾಸ್ಟರ್ ಜೀವಿತ್ ಎಂಬ ಮಗುವಿಗೆ ಮಾತನಾಡಲು ಆಗದೆ,ತಲೆ ಎತ್ತಲು ಆಗದೆ,ನಡೆದಾಡಲು ಆಗದೆ, ದ್ರಷ್ಟಿ ಮಂದ ವಾದ ಕಾರಣ ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಮಗುವಿನ ಮೆದುಳಿಗೆ […]
Read More
06-01-2019, 3:53 PM
ಕೆಂಜಾರು-ಕರಂಬಾರು : ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶದೊಂದಿಗೆ ಸಮಾಜ ಸಾಧಕರನ್ನು ಗುರುತಿಸುವ, ವಿದ್ಯಾರ್ಜನೆ ಹಾಗೂ ಅಶಕ್ತರಿಗೆ ನೆರವು ನೀಡುವ ಮೂಲಕ ಯುವವಾಹಿನಿ ಕೆಂಜಾರು-ಕರಂಬಾರು ಘಟಕ ಸಮಾಜ ಮುಖೀಯಾಗಿದೆ. ಕುಟುಂಬ ಹಾಗೂ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಹೇಳಿದರು. ಕೆಂಜಾರು-ಕರಂಬಾರಿನ ಶ್ರೀದೇವಿ ಭಜನ ಮಂದಿರದಲ್ಲಿ ದಿನಾಂಕ 06.01.2019 ರಂದು ನಡೆದ ಯುವ ವಾಹಿನಿ ಕೆಂಜಾರು-ಕರಂಬಾರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು. ಬಿಲ್ಲವ ಸೇವಾ ಸಂಘ […]
Read More
25-12-2018, 5:03 PM
ಉಪ್ಪಿನಂಗಡಿ : ದಿನಾಂಕ 25-12-2018ನೇ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆ ಹಿರಿಯ ಪ್ರಾರ್ಥಮಿಕ ಶಾಲೆ ಆಲಂತಾಯದಲ್ಲಿ ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಆಯುಷ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಅರೋಗ್ಯ ಶಿಬಿರ ನಡೆಯಿತು. ಇದರ ಪ್ರಯೋಜನವನ್ನು ಸುಮಾರು ನೂರೈವತ್ತಕ್ಕಿಂತಲೂ ಹೆಚ್ಚು ಜನ ಪಡೆದುಕೊಂಡರು. ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾರ್ಥಮಿಕ ಶಾಲೆ ಆಲಂತಾಯ ಇದರ ಮುಖ್ಯ ಗುರುಗಳಾದ ಶ್ರೀ ವೈ.ಸಾಂತಪ್ಪ ಇವರು […]
Read More
23-12-2018, 3:08 PM
ಉಪ್ಪಿನಂಗಡಿ : ದಿನಾಂಕ 23-12-2018ನೇ ಆದಿತ್ಯವಾರದಂದು ದಿ.ಗುರುಸಾಗರ್ ಇವರ ಸ್ಮರಣಾರ್ಥದಲ್ಲಿ ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕ ಮತ್ತು ಶ್ರೀ ರಾಮ ಭಜನಾ ಮಂಡಳಿ ಕರುವೇಲು ಮತ್ತು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಪುತ್ತೂರು ಹಾಗೂ ಯೆನೊಪೊಯ ದಂತ ಮಹಾವಿದ್ಯಾಲಯ ದೇರಳಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ ಬಂಟ್ವಾಳ ತಾಲೂಕಿನ ಕರವೇಲು ಶಾಲೆಯಲ್ಲಿ ನಡೆಯಿತು. ಈ ಶಿಬಿರವನ್ನು ದಿ. ಗುರುಸಾಗರ್ ಇವರ ತಾಯಿ ವಂದನಾ ಶರತ್ ಮುದಲಾಜೆ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಯುವವಾಹಿನಿ ಘಟಕದ ಉಪ್ಪಿನಂಗಡಿ ಅಧ್ಯಕ್ಷರಾದ […]
Read More
23-12-2018, 2:57 PM
ಜೈನ ಕವಿ ರತ್ನಾಕರರ್ಣಿ ಹೇಳಿದ ಸಾಲುಗಳಿವು ಅಯ್ಯಾಯ್ಯಾ ಬಲು ಚೆನ್ನಾದುದೆನೆ ಕನ್ನಡಿಗ, ರಯ್ಯ ಮಂಚಿದಿಯೆನೆ ತೆಲುಗ, ಅಯ್ಯಾಯ್ಯ ಎಂಚ ಪೊರ್ಲಾಂಡ್ಂದ್ ತುಳುವರು ಮೈಯುಬ್ಬಿ ಕೇಳಬೇಕಣ್ಣ” ಎಂಬ ಧ್ವನಿ ಭಾವದಂತೆ “ಅಯ್ಯಾಯ್ಯಾ ಎಂಚ ಪೊರ್ಲಾಂಡ್ ಯುವವಾಹಿನಿಯ ಅಂತರ್ ಘಟಕ ಕೋಟಿ ಚೆನ್ನಯ ಕೆಸರುಗದ್ದೆ ಕ್ರೀಡಾಕೂಟ-2018” ಎಂದು ಹೇಳಿದರೂ ಉತ್ಪ್ರೇಕ್ಷೆಯಾಗಲಾರದು. ಮೂಡಣದ ಮಟ್ಟದಿಂದ ಪಡುವಣದ ಕಡಲ ಸೆರಗಿನವರೆಗೆ,ಉತ್ತರದ ಬಾರ್ಕೂರಿನಿಂದ ದಕ್ಷಿಣದ ನೀಲೇಶ್ವರದವರೆಗೆ,ರಾಜ್ಯ ರಾಜಧಾನಿ ಸೇರಿದಂತೆ ಬಿಲ್ಲವ ಸಮಾಜದ ಯುವಶಕ್ತಿ ಯುವವಾಹಿನಿಯ 33ಘಟಕಗಳಾಗಿ ಬೆಳೆದು ಬೆಳಗುತ್ತಿರುವ ಈ ಸುಸಂಧರ್ಭದಲ್ಲಿ ಆ ಎಲ್ಲಾ […]
Read More
16-12-2018, 4:19 PM
ಬೆಳ್ತಂಗಡಿ : ಯುವ ಸಮುದಾಯವನ್ನು ಒಟ್ಟುಗೂಡಿಸಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ಅಶಕ್ತರಿಗೆ ಸಂಜೀವಿನಿಯಾಗಿ.ಇಂತಹ ಕ್ರೀಡಾಕೂಟದ ಮೂಲಕ ನೊಂದವರಿಗೆ ನೆರವನ್ನು ನೀಡುತ್ತಾ ನುಡಿದಂತೆ ನಡೆಯುತ್ತಿರುವ ಸಂಘಟನೆ ಅದು ಯುವವಾಹಿನಿ ಬೆಳ್ತಂಗಡಿ ಘಟಕ ಎಂದು ಶ್ರೀ ಗುರುನಾರಯಣ ಸ್ವಾಮಿ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಭಗೀರಥ ಜಿ ಹೇಳಿದರು. ಅವರು ದಿನಾಂಕ 16.12.2018 ರಂದು ಬೆಳ್ತಂಗಡಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವವಾಹಿನಿ(ರಿ) ಬೆಳ್ತಂಗಡಿ ಘಟಕದಿಂದ ನಡೆದ ಸಾಂತ್ವನ ನಿಧಿಯ ಸಹಾಯಾರ್ಥ ನಡೆದ ಕ್ರಿಕೆಟ್ ಪಂದ್ಯಾಟದ ಸಮಾರೋಪ […]
Read More
16-12-2018, 1:03 PM
ವೇಣೂರು : ಯುವವಾಹಿನಿ (ರಿ) ವೇಣೂರು ಘಟಕ, ಲಯನ್ಸ್ ಕ್ಲಬ್ ವೇಣೂರು, ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುಕ್ಕೇಡಿ, ಆಯುಷ್ ಇಲಾಖೆಯ ಜಂಟಿ ಆಶ್ರಯದಲ್ಲಿ ಕುಕ್ಕೇಡಿ ಅಂಬೇಡ್ಕರ್ ಭವನದಲ್ಲಿ ದಿನಾಂಕ 16.12.2018 ರಂದು ಆದಿತ್ಯವಾರ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಆಯುಷ್ ವೈದ್ಯರಾದ ಡಾ.ಕೃಷ್ಣಪ್ರಸಾದ್, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ಕೇಂದ್ರ ಸಮಿತಿಯ ನಾಮನಿರ್ದೇಶಿತ ಸದಸ್ಯ […]
Read More
13-12-2018, 3:58 PM
ಎಕ್ಕಾರು ಪೆರ್ಮುದೆ : ಮನನೊಂದ ಅಶಕ್ತ ಸಮಾಜ ಬಾಂಧವರ ಸಹಾಯಕ್ಕೆ ಸದಾ ಸಿದ್ದ ಎನ್ನುವ ಯುವವಾಹಿನಿ(ರಿ) ಎಕ್ಕಾರು ಪೆರ್ಮುದೆ ಘಟಕವು ತನ್ನ ಧ್ಯೇಯ ವಾಕ್ಯದಂತೆ ಮತ್ತೊಂದು ನೊಂದ ಬಡ ಮನಸ್ಸಿಗೆ ತನ್ನ ಸಹಾಯ ಹಸ್ತವನ್ನು ನೀಡಿರುತ್ತದೆ ಮೂಡಿಗೆರೆಯ ಸುರೇಶ್ ಇವರು ಕಳೆದ ಕೆಲ ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ನಗರದ ಎ.ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಮೂಲತಃ ಬಡ ಕುಟುಂಬದವರಾಗಿದ್ದು, ಅವಿವಾಹಿತರಾಗಿದ್ದು ತನ್ನ ತಂದೆಯನ್ನೂ ಕಳೆದುಕೊಂಡಿರುತ್ತಾರೆ. ಇವರ ಚಿಕಿತ್ಸೆಗೆ ಹಣ ಹೊಂದಿಸಲು ಇವರ ಸಹೋದರಿ ಸುಮ ಇವರು ಕಷ್ಟ […]
Read More
09-12-2018, 3:38 PM
ಬೆಳ್ತಂಗಡಿ :ಸಂಘ ಸಂಸ್ಥೆಗಳ ಹಿಂದೆ ಮಹತ್ತರವಾದ ಮಾನವೀಯ ಕಾರ್ಯಗಳಿಂದ ಅಂತಹ ಸಾಮಾಜಿಕ ಸಂಘಟನೆಗಳು ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ. ಅಂತಹ ಕಾರ್ಯಗಳನ್ನು ಯುವವಾಹಿನಿ ಸಂಘಟನೆ ಮಾಡುತ್ತಿರುವುದು ಶಾಘ್ಲನೀಯ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಹೇಳಿದರು. ಇವರು ದಿನಾಂಕ 09.12.2018 ರಂದು ಬೆಳ್ತಂಗಡಿ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವವಾಹಿನಿ(ರಿ) ಬೆಳ್ತಂಗಡಿ ಘಟಕದಿಂದ ನಡೆದ ಸಾಂತ್ವನ ನಿಧಿ ಸಹಾಯಾರ್ಥ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಕ್ರಿಕೆಟ್ ಕೂಟದ ಮೂಲಕ ಸಹಾಯ ಧನ ಸಂಗ್ರಹ ಮಾಡಿ ಬಡ ಜನರಿಗೆ ನೆರವಾಗುವ ಕಾರ್ಯ […]
Read More
09-12-2018, 3:01 PM
ಬಜಪೆ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ.) ಬಜಪೆ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಅಂತರ್ ಘಟಕ ರಸಗೀತಾ – 2018 ರ ಜಾನಪದ ಗೀತೆ ಸಮೂಹ ಗಾಯನ ಸ್ಪರ್ಧೆಯಲ್ಲಿ ಯುವವಾಹಿನಿ ಬೆಂಗಳೂರು ಘಟಕ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಯುವವಾಹಿನಿ ಮಂಗಳೂರು ಘಟಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಜಾನಪದ ಗೀತಾ ಗಾಯನ ಸ್ಪರ್ಧೆಯ ತೀರ್ಪುಗಾರರಾಗಿ ಉಮಾಕಾಂತ್ ನಾಯಕ್ ಮತ್ತು ಮಲ್ಲಿಕಾ ಶೆಟ್ಟಿ ಇವರು ಭಾಗವಹಿಸಿದ್ದರು. ಈ ವಿಭಾಗದಲ್ಲಿ ಒಟ್ಟು 11 ಘಟಕಗಳು ಸ್ಪರ್ಧೆಯನ್ನು ನೀಡಿದುವು. ಕನಕಾ […]
Read More