17-09-2019, 10:40 AM
ನಮ್ಮ ಎಲ್ಲಾ ಯುವವಾಹಿನಿ ಭಂಧುಗಳು ದಿನಾಂಕ17/09/2019ನೇ ಮಂಗಳವಾರ ಸಮಯ 6:45ಕ್ಕೆ ನಮ್ಮ ಯುವವಾಹಿನಿ ಶಕ್ತಿನಗರ ಘಟಕವು ನೂತನವಾಗಿ ರಚಿಸಿರುವ “ಯುವವಾಹಿನಿ ಭಜನಾ ಸಮಿತಿ” ಯ ಉಧ್ಘಾಟನಾ ಕಾರ್ಯಕ್ರಮ ಹಾಗೂ ತಂಡದಿಂದ ಭಜನಾ ಕಾರ್ಯಕ್ರಮ ಕೊಂಗೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಜರುಗಿದೆ, ಭಜನೆ ಸಮಿತಿಯನ್ನು ಮಠದ ಧರ್ಮದರ್ಶಿ ನೆರವೇರಿಸಿ ಧಾರ್ಮಿಕ ಉಪಾನ್ಯಾಸ ಮಾಡಿದ ಧರ್ಮದರ್ಶಿ ಅನಂತಕ್ರಷ್ಣರವರು ಭಜನೆ ಯಿಂದ ವಿಭಜನೆ ಆಗಲಾರದು ಹಾಗೂ ಎಲ್ಲರಿಗೂ ಒಳಿತಾಗಲಿ ದುರ್ಗಾಪರಮೇಶ್ವರಿ ದೇವಿಯ ಅನುಗ್ರಹ ನಿಮ್ಮೆಲ್ಲರಿಗೂ ಇರಲಿ ಎಂದು ಆಶಿರ್ವದಿಸಿದರು ನಮ್ಮೊಂದಿಗೆ […]
Read More
15-09-2019, 10:37 AM
ನಮ್ಮ ಸಮಾಜದಲ್ಲಿ ಮದುವೆಯ ಮದರಂಗಿ ಕಾರ್ಯಕ್ರಮದಲ್ಲಿ ಮದ್ಯಪಾನವು ವಿಪರೀತವಾಗಿದ್ದು ಅದರಿಂದ ಆಗುವ ತೊಂದರೆಗಳು ಹಲವಾರು. ಬ್ರಹ್ಮಶ್ರೀ ನಾರಾಯಣ ಗುರುಗಳು ಮದ್ಯಪಾನವನ್ನು ಬಹಳ ವಿರೋಧಿಸಿದ್ದರು. ಮೂಡಬಿದ್ರೆ ಯುವವಾಹಿನಿ ಘಟಕ ಬ್ರಹ್ಮಶ್ರೀ ನಾರಾಯಣ ಗುರುಗಳ 165 ಜನ್ಮದಿನಾಚರಣೆಯ ಅಂಗವಾಗಿ ಮದ್ಯಪಾನ ಮುಕ್ತ ಮದರಂಗಿ ಕಾರ್ಯಕ್ರಮವನ್ನು ನಡೆಸಬೇಕೆಂದು ವಿನಂತಿಸುವ ಗುರು ಸಂದೇಶ ಸಂಕಲ್ಪ ಎಂಬ ನಾಮಾಂಕಿತ ಮನವಿ ಪತ್ರವನ್ನು ದಿನಾಂಕ 15/09/2019 ರಂದು ಕಡಂದಲೆ ಪಾಲಡ್ಕ ಬಿಲ್ಲವ ಸಂಘದಲ್ಲಿ ನಡೆದ ಗುರು ಜಯಂತಿ ಕಾರ್ಯಕ್ರಮದಲ್ಲಿ ಹೊಸ್ಮಾರು ಬಲ್ಲೆಟ್ಟು ಸ್ವಾಮಿಗಳಾದ ಶ್ರೀಶ್ರೀಶ್ರೀ ವಿಖ್ಯಾತಾನಂದ […]
Read More
13-09-2019, 8:59 AM
ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕವು ನಾರಾಯಣ ಗುರು ಜಯಂತಿಯ ಪ್ರಯುಕ್ತ ಗುರುವರ್ಯರು ಸಮಾಜಕ್ಕೆ ಕೊಟ್ಟ ಸಂದೇಶವಾದ ಒಂದೇ ಜಾತಿ,ಒಂದೇ ಮತ,ಒಂದೇ ದೇವರು ಎಂಬ ಮಾತಿನಂತೆ ವಿವಿಧ ಮಹಿಳಾ ಮಂಡಳಿಗಳನ್ನು ಜೊತೆಗೂಡಿಸಿ ಬೆಳಗ್ಗೆ12ರಿಂದ ಸಂಜೆ 7 ಘಂಟೆಯವರೆಗೆ ಭಜನಾ ಕಾರ್ಯಕ್ರಮವನ್ನು ನಡೆಯಸಿತು. ಕಾರ್ಯಕ್ರಮಕ್ಕೆಗುರುಸ್ತೋತ್ರ ಹಾಗೂ ಭಜನೆ ಮೂಲಕ ಮಂಗಳೂರು ಮಹಿಳಾ ಘಟಕವು ಚಾಲನೆ ನೀಡಿ ನಂತರ ವಿವಿಧ ಮಹಿಳಾ ಮಂಡಳಿಗಳಿಗೆ ಅವಕಾಶಕೊಟ್ಟು ನಂತರ ಕೊನೆಯ ಹಂತವನ್ನು ಮಂಗಳೂರುಘಟಕದವರೊಂದಿಗೆ ಸೇರಿ ಮುಕ್ತಾಯ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಉಮಾಶ್ರೀಕಾಂತ್, ನೈನವಿಶ್ವನಾಥ್,ರವಿಕಲ, ನಾರಾಯನಗುರು ತತ್ವ […]
Read More
08-09-2019, 5:07 PM
ಯುವವಾಹಿನಿ ಕೂಳೂರು ಘಟಕದ ವತಿಯಿಂದ ದಿನಾಂಕ 08.09.19 ರಂದು ಹಳ್ಳಿಡೊಂಜಿ ದಿನ ಕಾರ್ಯಕ್ರಮವು ಘಟಕದ ಸದಸ್ಯರಾದ *ಪ್ರಸಾದ್ ಈದು ಬಟ್ಟೇಣಿ ಇವರ ಊರು ಈದು ಬಟ್ಟೇಣಿ, ಕಾರ್ಕಳ* ಇಲ್ಲಿ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಘಟಕದ 50 ಸದಸ್ಯರು ಕೂಳೂರಿನಿಂದ ಹೊರಟು 10.30 ಕ್ಕೆ ಶಿರ್ತಾಡಿ ತಲುಪಿ ಘಟಕದ ಸದಸ್ಯರಾದ *ಜಯ ಬಂಗೇರ* ಅವರ ಮನೆಯಲ್ಲಿ ಉಪಹಾರ ಮುಗಿಸಿ ನಂತರ ಅಲ್ಲಿಂದ ಹೊಸ್ಮಾರು ಆಶ್ರಮಕ್ಕೆ ಭೇಟಿ ನೀಡಿ, *ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರ ದರ್ಶನ […]
Read More
08-09-2019, 4:48 PM
ದಿನಾಂಕ 08/09/2019 ರಂದು ಯುವವಾಹಿನಿ ಸಭಾಂಗಣದಲ್ಲಿ ಸೋಣ ಸಂಭ್ರಮ ಕಾರ್ಯಕ್ರಮವು ಬೆಳಗ್ಗೆ 9:30ರಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮಾಶ್ರೀಕಾಂತ್ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗೋಕರ್ಣನಾಥೇಶ್ವರ ಬಿ ಎಡ್ ಕಾಲೇಜಿನ ಪ್ರಾಂಶುಪಾಲರಾದ ದೀಪ್ತಿ ನಾಯಕ್ ಉದ್ಘಾಟಿಸಿದರು. ಇಲ್ಲಿನ ಸಂಸ್ಕೃತಿಯ ಬಗ್ಗೆ ನಾನು ಕಲಿತೆ ಹಾಗೂ ಈ ಸಂಸ್ಕೃತಿ ಮುಂದಿನ ಪೀಳಿಗೆಗೆ ತಿಳಿಸಿವ ಕೆಲಸ ನಮ್ಮಿಂದ ಆಗಬೇಕು ಹಾಗಾಗಿ ಆದಷ್ಟು ಮಕ್ಕಳನ್ನು ಜೋಡಿಸಿಕೊಳ್ಳುವಂತೆ ತಿಳಿಸಿದರು.ನಂತರ ಶಕ್ತಿ ಎಜುಕೇಶನ್ ಟ್ರಸ್ಟ್ ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ್ ಆಚಾರ್ಯ ಸೋಣದ ಮದಿಪನ್ನು ನೀಡಿ […]
Read More
03-09-2019, 2:48 AM
ಯುವವಾಹಿನಿ (ರಿ) ಹೆಜಮಾಡಿ ಘಟಕ . ಬ್ರಹ್ಮ್ಮಶ್ರೀ ನಾರಾಯಣ ಗುರುವರ್ಯರ 165 ನೇ ಗುರು ಜಯಂತಿಯ ಅಂಗವಾಗಿ ಹೆಜಮಾಡಿ ಬಿಲ್ಲವರ ಹತ್ತು ಸಮಸ್ತರಿಗೆ ವಿವಿಧ ಕ್ರೀಡಾಕೂಟಗಳು ದಿನಾಂಕ 25/08/2019 ರಂದು ಹೆಜಮಾಡಿ ಬಿಲ್ಲವ ಸಂಘದ ವಠಾರದಲ್ಲಿ ಜರಗಿತು . ಈ ಪಂದ್ಯಾಟದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ಹೆಜಮಾಡಿ ಘಟಕದ ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ಹರೀಶ್ ವಹಿಸಿದ್ದರು . ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ಹರೀಶ್ ಸರ್ವರನ್ನು ಸ್ವಾಗತಿಸಿದರು . ಹೆಜಮಾಡಿ ಬಿಲ್ಲವರ ಸಂಘ ದ ಉಪಾಧ್ಯಕ್ಷರು, ಹೆಜಮಾಡಿ ಮಹಾಲಿಂಗೇಶ್ವರ […]
Read More
28-08-2019, 5:14 PM
ಯುವವಾಹಿನಿ (ರಿ) ಕಟಪಾಡಿ ಘಟಕದ ಪದಗ್ರಹಣ ಸಮಾರಂಭವು ಆಗಸ್ಟ್ 28 ರಂದು ಶ್ರೀ ವಿಶ್ವನಾಥ ಕ್ಷೇತ್ರದ ಗುರುಪ್ರಸಾದ್ ಸಭಾಂಗಣದಲ್ಲಿ ಜರಗಿತು.ಉದ್ಯಮಿ ಕಾಪು ಪ್ರಭಾಕರ್ ಪೂಜಾರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಪದ ಪ್ರಧಾನ ವನ್ನು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ನರೇಶ್ ಸಶಿಹಿತ್ಳು ನೆರವೇರಿಸಿದರು, ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿಯ ನಮ್ಮ ಘಟಕದ ಸಲಹೆಗರರಾದ ರವಿರಾಜ್ ಮತ್ತು ಉಡುಪಿ ವಲಯ ಸಂಘಟಕರಾದ ರಮೇಶ್ ಕೋಟಿಯಾನ್ ಹಾಗೂ ಕ್ಷೇತ್ರದ ಅಧ್ಯಕ್ಷರಾದ ಬಿ ಎನ್ ಶಂಕರ್ ಪೂಜಾರಿ ಉಪಸ್ಥಿತರಿದ್ದರು. 2018-19 ರ ಅಧ್ಯಕ್ಷರಾದ […]
Read More
27-08-2019, 1:17 PM
ಯುವವಾಹಿನಿ(ರಿ.) ಅಡ್ವೆ ಘಟಕದ ಆತಿಥ್ಯದಲ್ಲಿ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆಯ ಅಂಗವಾಗಿ ದಿನಾಂಕ 24-08-2019 ಶನಿವಾರದಂದು ಪುಟಾಣಿಗಳಿಗೆ ಮುದ್ದುಕೃಷ್ಣ ಸ್ಪರ್ಧೆ, ಬಾಲಕೃಷ್ಣ ಸ್ಪರ್ಧೆ ಹಾಗೂ ಶಾಲಾ ಮಕ್ಕಳಿಗೆ ಭಜನೆ ಸ್ಪರ್ಧೆ ಹಮ್ಮಿಕೊಳ್ಳಲಾಯಿತು. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
Read More
27-08-2019, 2:32 AM
ಸಾರ್ವಜನಿಕ ಗಣೇಶೋತ್ಸವ ಸಮಿತಿ, ಅಲೆವೂರ್ ಇದರ ಜಿಲ್ಲಾ ಮಟ್ಟದ ಸಂಗೀತ ಮತ್ತು ಚಿತ್ರ ಕಲೆ ಸ್ವರ್ಧೆ ಯುವವಾಹಿನಿ ಉಡುಪಿ ಘಟಕ ಸಹಭಾಗಿತ್ವದಲ್ಲಿ ದಿನಾಂಕ 25/08/2019 ರಂದು ನಡೆಯಿತು. ನಮ್ಮ ಘಟಕದ ಉಪಾಧ್ಯಕ್ಷರಾದ ಜಗದೀಶ್ ಕುಮಾರ್,ನಿಕಟಪೂರ್ವ ಅಧ್ಯಕ್ಷರಾದ ಅಶೋಕ್ ಕೋಟ್ಯಾನ್,ಕಾರ್ಯದರ್ಶಿ ಮಹಾಬಲ ಅಮೀನ್ ಕಾರ್ಯಕ್ರಮವನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಬಹಳ ಉತ್ಸಹ ದಿಂದ ಈ ಸ್ವರ್ಧೆಯಲ್ಲಿ ಬಗವಹಿಸಿದರು.ಯುವವಾಹಿನಿ ಉಡುಪಿ ಘಟಕದ ನಿಕಟಪೂರ್ವ ಅಧ್ಯಕ್ಷ ರಾದ ಅಶೋಕ್ […]
Read More
26-08-2019, 6:02 PM
ಯುವವಾಹಿನಿ (ರಿ) ಕಾರ್ಕಳ ಘಟಕ ಹಾಗು ಜೇಸಿಐ ಕಾರ್ಕಳ ರೂರಲ್ ಘಟಕದ ವತಿಯಿಂದ ತನ್ನ ಸದಸ್ಯರೀಗೆ ಮೋರಾಜಿ ದೇಸಾಯಿ ಶಾಲೆ ಮಿಯಾರ್ ಇಲ್ಲಿ Life is Beautiful ಎನ್ನುವ ತರಬೇತಿಯನ್ನು ನಡೆಸಲಾಯಿತು. ಅಧ್ಯಕ್ಷ ತೆಯನ್ನು ವೀಣಾ ರಾಜೇಶರವರು ವಹಿಸಿದ್ದರು. ಯುವವಾಹಿನಿಯ ಸದಸ್ಯರಾದ ಮತ್ತು ಪ್ರಾಂಶುಪಾಲರಾದ ಜಗದೀಶರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಯುವವಾಹಿನಿ ಕಾರ್ಕಳ ಘಟಕದ ಸ್ಥಾಪಕಾಧ್ಯಕ್ಷರಾದ ಸುಧಾಕರ್ ಕಾರ್ಕಳರವರು ಉಪಸ್ಥಿತರಿದ್ದರು. ರಾಷ್ಟ್ರೀಯ ತರಬೇತುದಾರರಾದ ಕೇರಳದ ಡಾ ಸರ್ನ ಸಿ ಮ್ ಮತ್ತು ವಲಯ ತರಬೇತುದಾರರಾದ ಪ್ರಕಾಶ್ ಕೆ […]
Read More