14-11-2019, 3:01 AM
ಯುವವಾಹಿನಿ ಮಾಣಿ ಘಟಕದ ವತಿಯಿಂದ ಮಕ್ಕಳ ದಿನಾಚರಣೆ ಸಂಭ್ರಮ ನವೆಂಬರ್ 14… ಈ ದಿನ ಪ್ರತಿಯೊಬ್ಬರ ಬದುಕಿನಲ್ಲೂ ಅಮೂಲ್ಯವಾಗಿದ್ದು. ಯಾಕೆಂದರೆ, ಇದು ಬರೀ ದಿನ ಅಲ್ಲ. ಇದು ನೆನಪಿನ ಮೆರವಣಿಗೆ… ಮಕ್ಕಳ ದಿನಾಚರಣೆ ಎಂದರೇನೇ ಹಾಗೆ… ಚಿಣ್ಣರಿಗಂತೂ ಇದು ಅಕ್ಷರಶಃ ಹಬ್ಬ. ದೊಡ್ಡವರಿಗೆ ಬಾಲ್ಯದ ದಿನಗಳನ್ನು ಮತ್ತೆ ಮೆಲುಕು ಹಾಕುವ ಕ್ಷಣ… ಇದೇ ಕಾರಣಕ್ಕೆ ಯುವವಾಹಿನಿ ಮಾಣಿ ಘಟಕದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅನಂತಾಡಿ ಹಾಗೂ ಬಾಬಣಕಟ್ಟೆ ಆಂಗನವಾಡಿ ಕೇಂದ್ರಕ್ಕೆ ತೆರಳಿ ಮಕ್ಕಳಿಗೆ ಸಿಹಿಹಂಚಿ, ಪಠ್ಯ […]
Read More
12-11-2019, 4:06 PM
ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ವತಿಯಿಂದ ಒಂದು ದಿನದ ಪ್ರವಾಸ ದಿನಾಂಕ :10:11:2019ರ ಭಾನುವಾರ ಯುವವಾಹಿನಿ ರಿ ಬೆಳ್ತಂಗಡಿ ಘಟಕದ ವತಿಯಿಂದ ಮನೋರಂಜನೆ ಉದ್ದೇಶದಿಂದ ಶ್ರಂಗೇರಿ ಶ್ರೀ ಶಾರದಾದೇವಿ ದೇವಾಲಯ ಮತ್ತು ಶಿರಿಮನೆ ಪಾಲ್ಸ್ ಜಲಪಾತ ಕ್ಕೆ ಒಂದು ದಿನ ಪ್ರವಾಸ ಕೈಗೂಂಡಿರುತ್ತದೆ.. 55ಜನ ಇದರಲ್ಲಿ ಭಾಗವಹಿಸಿದರು. ಸಾಮೂಹಿಕ ಸಹಬೋಜನ, ವಿಶೇಷ ಅಥಿತ್ಯ, ವಿವಿಧ ಮನೋರಂಜನಾ ಆಟ, ಇಲ್ಲಿ ವಿಶೇಷ ಮೇರುಗು ನೀಡಿತ್ತು. ಪ್ರವಾಸದ ಸಂಚಾಲಕರು ಚಂದ್ರಶೇಖರ ಅಳದಂಗಡಿ ಮತ್ತು ಉಮೇಶ್ ಸುವರ್ಣ ಇವರ ಶ್ರಮ ಎಲ್ಲರ […]
Read More
12-11-2019, 2:01 AM
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ವತಿಯಿಂದ ತಾರೀಕು 10-11-2019 ನೇ ಆದಿತ್ಯವಾರ ಮಧ್ಯಾಹ್ನ 3:00 ಗಂಟೆಗೆ ಸರಿಯಾಗಿ ಮಿನಿವಿಧಾನ ಸೌಧ ದ ಬಳಿ ಇರುವ ನೇತ್ರಾವತಿ ಸಭಾಂಗಣ ದಲ್ಲಿ ಘಟಕಗಳ ಅಧ್ಯಕ್ಷರು-ಕಾರ್ಯದರ್ಶಿ ಹಾಗೂ ಕಲೆ ಮತ್ತು ಸಾಹಿತ್ಯದ ನಿರ್ದೇಶಕರಿಗಾಗಿ ವಿಶೇಷವಾದ ಕಾರ್ಯಕ್ರಮ ಡೆನ್ನಾನ-ಡೆನ್ನನ ದ ಪ್ರಥಮ ಹೆಜ್ಜೆ *”””””””””ರಂಗ-ತರಬೇತಿ “”””””””””* ಡೆನ್ನಾನ ಡೆನ್ನನ ದ ಒಳ-ಹೊರ ಆಯಾಮಗಳ ವಿಚಾರಧಾರೆ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಕೊಲ್ಯ ಘಟಕದ ಕಲೆ ಮತ್ತು ಸಾಹಿತ್ಯ ದ ನಿರ್ದೇಶಕರಾದ […]
Read More
11-11-2019, 11:14 AM
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ನಿಂದ ಶೈಕ್ಷಣಿಕ ದತ್ತು ಸ್ವೀಕಾರ – ಪ್ರತಿಭಾ ಪುರಸ್ಕಾರ ‘ಪ್ರೇರಣಾ -2019’ ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶೈಕ್ಷಣಿಕ ದತ್ತು ಸ್ವೀಕಾರ ವಿದ್ಯಾರ್ಥಿ ವೇತನ ವಿತರಣೆ ಅಕ್ಷರ ಪುರಸ್ಕಾರ ಮತ್ತು ಪ್ರತಿಭಾ ಪುರಸ್ಕಾರ – ಪ್ರೇರಣಾ -2019 ಕಾರ್ಯಕ್ರಮವು ನ.11 ರಂದು ನಡೆಯಿತು. ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಸಲಹೆಗಾರರಾದ ಲೋಕಯ್ಯ ಪೂಜಾರಿಯವರು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು, ವಿದ್ಯಾನಿದಿ ಟ್ರಸ್ಟ್ […]
Read More
10-11-2019, 2:44 AM
ಗುತ್ತು ಮನೆಯಲ್ಲಿ ಯುವವಾಹಿನಿ ಮಾಣಿ ಘಟಕದ ತುಳಸಿ ಪರ್ಬ ಕಾರ್ಯಕ್ರಮ ‘ಗುತ್ತು’ ಎಂದರೆ ಇತಿಹಾಸ ಘನೀಭವಿಸಿದಂತೆ ಮತ್ತು ಮರುಜೀವಿಸಿದಂತೆ. ಅದು ಒಂದು ವಾಸ್ತವವೂ ಹೌದು, ಕಲ್ಪನೆಯೂ ಹೌದು. ಅದೊಂದು ಅನುಭವಜನ್ಯ ಸತ್ಯ ಮತ್ತು ಪುನಃ ಪಡೆದುಕೊಂಡ ಅನುಭವ”. ಇಂತಹ ಗುತ್ತು ಮನೆತನದಲ್ಲಿ ಒಂದು ಇಡ್ಕಿದು ಗ್ರಾಮದ ಸೂರ್ಯ ಚಂದ್ರಾವತಿ ಅಮ್ಮನವರ ಗುತ್ತು ಮನೆತನ. ನಮ್ಮ ಸಂಸ್ಕೃತಿಯನ್ನು ನೆನಪಿಸುವ, ಹಾಗೂ ಧಾರ್ಮಿಕತೆಯನ್ನು ಬಿಂಬಿಸುವ ಯುವವಾಹಿನಿ ತುಳಸಿಪರ್ಬ ಕಾರ್ಯಕ್ರಮ ಘಟಕದ ನೂತನ ಅಧ್ಯಕ್ಷರಾದ ರಮೇಶ್ ಪೂಜಾರಿ ಮುಜಾಲ ಇವರ ಅಧ್ಯಕ್ಷತೆಯಲ್ಲಿ […]
Read More
09-11-2019, 2:49 AM
ಮದ್ಯ ಮುಕ್ತ ಮದರಂಗಿಗೆ ಸಾಕ್ಷಿಯಾಯಿತು ಯುವವಾಹಿನಿ (ರಿ) ವೇಣೂರು ಘಟಕ ವೇಣೂರು ನ. 8 : ಮದ್ಯಪಾನವು ಸಾಮಾಜದ ಸ್ವಾಸ್ಥ್ಯ ದ ವಿನಾಶಕ್ಕೆ ಕಾರಣವಾಗುತ್ತಿದ್ದು,ಇತ್ತೀಜೆಗೆ ಮದುವೆಯ ಮದರಂಗಿಯು ನವಕುಡುಕರನ್ನು ಸೃಷ್ಟಿಸುವ ಸಮಾರಂಭವಾಗಿ ಪರಿವರ್ತನೆಗೊಂಡಿದೆ. ಇದು ಬದಲಾಗಿ ಎಲ್ಲಾ ಕಡೆ ಮದ್ಯಮುಕ್ತ ಮದರಂಗಿ ಕಾರ್ಯಕ್ರಮ ನಡೆಯುವಂತಾಗಲಿ ಎಂದು ಆಳ್ವಾಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗದ ಡಾ। ಯೋಗೀಶ್ ಕೈರೋಡಿ ಹೇಳಿದರು. ಯುವವಾಹಿನಿ (ರಿ) ವೇಣೂರು ಘಟಕದ ಆಶ್ರಯದಲ್ಲಿ ಬಜಿರೆಗ್ರಾಮದ ಹೊಸಮನೆ ಮನೋಜ್ ಪೂಜಾರಿಯವರ ಮನೆಯಲ್ಲಿ ನಡೆದ ಮದ್ಯ ಮುಕ್ತ ಮದರಂಗಿ ಕಾರ್ಯಕ್ರಮದಲ್ಲಿ […]
Read More
03-11-2019, 4:12 PM
ದಿನಾಂಕ 03/11/2019 ರಂದು ಪೂರ್ವಾಹ್ನ 7.00ಘಂಟೆಗೆ ಬೇಸಾಯದ ಕಡೆಗೆ ನಮ್ಮ ನಡೆ ಎಂಬ ಪರಿಕಲ್ಪನೆಯಲ್ಲಿ ಇಂದು ನಮ್ಮ ಘಟಕದ ವತಿಯಿಂದ ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಬಹಳ ಆಸಕ್ತಿದಾಯಕವಾಗಿ ಮತ್ತು ಸಮರ್ಪಣಾ ಭಾವದಿಂದ ನಾಗಂದಡಿಯ ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆವು. ಕೇವಲ ಒಂದು ಗಂಟೆಯಲ್ಲಿ ಒಂದು ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯಕ್ರಮವನ್ನು ಪರಿಪೂರ್ಣಗೊಳಿಸಿದೆವು.ಇಂದಿನ ದಿನಗಳಲ್ಲಿ ಯುವ ಜನತೆಯು ಕೃಷಿಯತ್ತ ಒಲವು ಪ್ರದರ್ಶಿಸದ ಈ ಸಮಯದಲ್ಲಿ, ನಮ್ಮ ಘಟಕವು ಯುವಜನತೆಯನ್ನು ಒಗ್ಗೂಡಿಸಿ , ಈ ಕಾರ್ಯಕ್ರಮವನ್ನು […]
Read More
02-11-2019, 2:35 AM
ದಿನಾಂಕ 2/11/2019 ರಂದು ಶ್ರೀ ಗೋಕರ್ಣನಾಥ ಬಿ ಎಡ್ ಕಾಲೇಜು ಗಾಂಧಿನಗರ ಇಲ್ಲಿ ಬಿ ಎಡ್ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಮಾಹಿತಿ ಶಿಬಿರ ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ದೀಪ್ತಿ ನಾಯಕ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷರಾದ ಉಮಾಶ್ರೀಕಾಂತ್ ಸ್ವಾಗತಿಸಿದರು. ನಂತರ ಸಂಪನ್ಮೂಲ ವ್ಯಕ್ತಿಯಾದ ಅಲೋಸಿಯಸ್ ಕಾಲೇಜಿನ assistant professor, ಎಂ ಸಿ ಎ department ಹಾಗೂ ಮಾಜಿ ಅಧ್ಯಕ್ಷರು ಮಂಗಳೂರು ಘಟಕದ ರಾಕೇಶ್ ಕುಮಾರ್ ಇವರು ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ವಿವಿಧ ಕಥೆಗಳನ್ನು , ಚಟುವಟಿಕೆಗಳನ್ನು ನೀಡುತ್ತಾ […]
Read More
01-11-2019, 4:29 PM
ದಿನಾಂಕ 1/11/2019ರ ಶುಕ್ರವಾರ ಸಂಜೆ ಘಟಕದ ಆಶ್ರಯದಲ್ಲಿ ಕುಣಿತ ಭಜನಾ ತರಗತಿಯನ್ನು ಘಟಕದ ಸಲಹೆಗಾರರು ರಘುನಾಥ ಶಾಂತಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಹರೀಶ್ ಸುವರ್ಣ ವಹಿಸಿದರು. ಘಟಕದ ಕಾರ್ಯದರ್ಶಿ ವಿಜಯ್ ಕುಮಾರ್ , ಯುವವಾಹಿನಿ ಮಹಿಳಾ ಸಂಚಲನ ಸಮಿತಿಯ ಸಂಚಾಲಕಿ ಶ್ರೀಮತಿ ಸುಜಾತ ಅಣ್ಣಿ ಪೂಜಾರಿ,ಕಲೆ ಮತ್ತು ಸಾಹಿತ್ಯ ನಿರ್ದೇಶಕರು ಜೀತೆಶ್ ಬೆಳ್ತಂಗಡಿ, ತರಬೇತುದಾರ ವಾಸು ಮುಂಡಾಜೆ ಉಪಸ್ಥಿತರಿದ್ದರು. ಗುರುರಾಜ ಗುರಿಪಳ್ಳ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಮಚ್ಚಿನ ನಿರೂಪಿಸಿ ,ವಂದಿಸಿದರು.
Read More
31-10-2019, 4:05 PM
ಯುವವಾಹಿನಿ (ರಿ.) ಬಂಟ್ವಾಳ ಘಟಕದ ವತಿಯಿಂದ ನೆರವೇರಿದ ವಿಶಿಷ್ಟ ಕಾರ್ಯಕ್ರಮ.. ಲೋಕ ಶಾಂತಿಯ ಹರಿಕಾರ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವವನ್ನು ಜೀವನದಲ್ಲಿ ಪಾಲಿಸಲು ಪಣತೊಟ್ಟು,, ಕಠಿಬದ್ಧರಾಗುವುದರೊಂದಿಗೆ ಮದುವೆಯ ಮುಂಚಿತವಾಗಿ ಜರಗುವ ಶುಭಕಾರ್ಯವನ್ನು ಪಾವಿತ್ರ್ಯತೆಯೆಡೆಗೊಯ್ದ “ಮದ್ಯಮುಕ್ತ ಮದರಂಗಿ” ಯುವವಾಹಿನಿ(ರಿ.) ಬಂಟ್ವಾಳ ಘಟಕದ ಸಕ್ರಿಯ ಸದಸ್ಯರಾದ ಹರೀಶ್ ಸಾಲ್ಯಾನ್ ಅಜಕಲ ರವರ ಮದುವೆಯ ಮದರಂಗಿಯ ಕಾರ್ಯಕ್ರಮವು ವಿಭಿನ್ನತೆಯಿಂದ ನೆರವೇರಿದ್ದು,ಸಮಾಜದಿಂದಲೇ ಸಮಾಜವನ್ನು ತಿದ್ದಿ ಸರಿದಾರಿಗೊಯ್ಯುವ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದ ಯುವವಾಹಿನಿ (ರಿ.)ಬಂಟ್ವಾಳ ಘಟಕ ದ ಸದಸ್ಯರ ವಿಶಾಲವಾದ […]
Read More