29-05-2022, 3:00 PM
ಯಡ್ತಾಡಿ :- ಯುವವಾಹಿನಿ (ರಿ.) ಯಡ್ತಾಡಿ ಹಾಗೂ ಗ್ರಾಮ ಒನ್ ನಾಗರೀಕ ಸೇವಾ ಕೇಂದ್ರ ಯಡ್ತಾಡಿ ಇವರ ಜಂಟಿ ಆಶ್ರಯದಲ್ಲಿ ಉಚಿತ “ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಕಾರ್ಡ್ ನ ನೋಂದಣಿಯನ್ನು ದಿನಾಂಕ 29 ಮೇ 2022 ರ ಭಾನುವಾರದಂದು ಏರ್ಪಡಿಸಲಾಗಿತ್ತು. ಘಟಕದ ಅಧ್ಯಕ್ಷರಾದ ಶ್ರೀ ಸೋಮಪ್ಪ ಪೂಜಾರಿಯವರು ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರಾಜು ಪೂಜಾರಿಯವರು ಸಾಂಕೇತಿಕವಾಗಿ ಆಯುಷ್ಮಾನ್ ಆರೋಗ್ಯ ಕಾರ್ಡನ್ನು ಫಲಾನುಭವಿಗಳಿಗೆ ವಿತರಿಸಿದರು. ಪರಿಸರದ 115 ಮಂದಿ ಫಲಾನುಭವಿಗಳಿಗೆ ಉಚಿತವಾಗಿ ಆಯುಷ್ಮಾನ್ ಆರೋಗ್ಯ […]
Read More
23-05-2022, 5:06 PM
ದಿನಾಂಕ 23.05.22ನೇ ಸೋಮವಾರದಂದು ಯುವವಾಹಿನಿ (ರಿ.) ಕಟಪಾಡಿ ಘಟಕ ಮತ್ತು ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಇದರ ಆಶ್ರಯದಲ್ಲಿ ಕಟಪಾಡಿ ಬ್ರಹ್ಮಶ್ರೀನಾರಾಯಣ ಗುರು ಸಭಾಭವನದಲ್ಲಿ “ಉಚಿತ ದಂತ ಚಿಕಿತ್ಸಾ” ಶಿಬಿರವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ಸುನಿಲ್ ಡಿ ಬಂಗೇರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಟಪಾಡಿ ಕ್ಷೇತ್ರದ ಮಾಜಿ ಗೌರವ ಪ್ರಧಾನ ಕಾಯ೯ದಶಿ೯ ಶಂಕರ ಪೂಜಾರಿ, ಗೌರವ ಪ್ರಧಾನ ಕಾಯ೯ದಶಿ೯ಯು ಶಿವಾನಂದ್ ಮತ್ತು ನವೀನ್ ಅಮಿನ್ ಶಂಕರಪುರ ಮತ್ತು ಆರ್. ಜಿ. ಕೋಟ್ಯಾನ್, ವಿಶ್ವನಾಥ […]
Read More
16-05-2022, 1:43 PM
ದಿನಾಂಕ 01.05.2022 ರಂದು “ಯುವವಾಹಿನಿ ಕುಟುಂಬ ಸಮ್ಮಿಲನ 2022” ಕಾರ್ಯಕ್ರಮವನ್ನು ಕುಳಾಯಿ ವಿಷ್ಣು ಮೂರ್ತಿ ದೇವಸ್ಥಾನದ ಪರಿಸರದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟ್ ರ್ ಹಾಗೂ ವೈಟ್ ಲಿಫ್ಟರ್ ಸುಪ್ರಿತಾ ಪೂಜಾರಿಯವರು ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಘಟಕದ ಅಧ್ಯಕ್ಷರಾದ ಶ್ರೀ ರವಿ ಅಮೀನ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಘಟಕದ ಸದಸ್ಯರಾದ ಯಶಸ್ವಿನಿ, ಜಯಶ್ರೀ, ಕೀರ್ತಿ ಹಾಗೂ ಕುಮಾರಿ ಅಕ್ಷಿತಾ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಶುಭಾರಂಭಗೊಂಡಿತು. ಈ ಕಾರ್ಯಕ್ರಮದಲ್ಲಿ ಘಟಕದ […]
Read More
13-05-2022, 2:13 PM
ಯುವವಾಹಿನಿ (ರಿ.) ಕಟಪಾಡಿ ಘಟಕದ ವತಿಯಿಂದ ಏಣಗುಡ್ಡೆ ಶ್ರೀ ಬ್ರಹ್ಮಬೈದರ್ಕಳ ಗರಡಿ, ಕಟಪಾಡಿ ಇದರ ಪುನರ್ ಪ್ರತಿಷ್ಟಾಪನೆ ಮತ್ತು ಬ್ರಹ್ಮಕಲಾಶಭಿಷೇಕಾದ ಅಂಗವಾಗಿ ದಿನಾಂಕ 13/05/2022ರಂದು ಸಮಯ ಸಂಜೆ: 7:00 ಗಂಟೆಗೆ ಯುವವಾಹಿನಿ (ರಿ.) ಕಟಪಾಡಿ ಘಟಕದ ಸದಸ್ಯರಿಂದ ” ಶಶಿಪ್ರಭೆ ಪರಿಣಯ ” ಯಕ್ಷಗಾನ ಬಯಲಾಟ ನಡೆಯಿತು. ಹಿಮ್ಮೇಳದಲ್ಲಿ ಭಾಗವತರು: ಶ್ರೀ ಆನಂದ್ ಆರ್ ಪೂಜಾರಿ,ಮದ್ದಳೆ: ಶ್ರೀ ಚಂದ್ರಶೇಖರ ಆಚಾರ್ಯ,ಚೆಂಡೆ : ಶ್ರೀ ರಾಜೀವ ತೋನ್ಸೆ,ವೇಷಭೂಷಣ: ಶ್ರೀ […]
Read More
05-05-2022, 4:44 PM
ಕೂಳೂರು ಘಟಕದ ವತಿಯಿಂದ ಯುವವಾಹಿನಿಯ ಎಲ್ಲಾ ಸದಸ್ಯರ ಸಂಪರ್ಕ ಹಾಗೂ ಉತ್ತಮ ಭಾಂದವ್ಯಕ್ಕಾಗಿ ಯುವವಾಹಿನಿ (ರಿ.) ಕೂಳೂರು ಘಟಕದ ಸ್ನೇಹ ಸಮ್ಮಿಲನ 2022 ಕಾರ್ಯಕ್ರಮವು ದಿನಾಂಕ 15-05-2022 ರಂದು ಪಡುಬಿದ್ರಿ ಬ್ಲೂ ಪ್ಲ್ಲಾಗ್ ಬೀಚ್ ನಲ್ಲಿ ನಡೆಯಿತು. ಘಟಕದ ಅಧ್ಯಕ್ಷರಾದ ದೀಕ್ಷೀತ್ ಸಿ ಎಸ್ ಎಲ್ಲರನ್ನೂ ಸ್ವಾಗತಿಸಿದರು. ಪಡುಬಿದ್ರಿ ಘಟಕದ ಅಧ್ಯಕ್ಷರಾದ ಯಶೋಧರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸ್ನೇಹ ಮಿಲನ 2022 ಉತ್ತಮ ರೀತಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು. ನಂತರ ಮಾಜಿ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ರವರ […]
Read More
26-04-2022, 3:30 PM
ಭಾರತ ಪುಣ್ಯಭೂಮಿ, ವಿಶ್ವ ಸಂಸ್ಕೃತಿಯಲ್ಲಿ ತನ್ನದೇ ಮಹತ್ವ ಪಡೆದಕೊಂಡ ಈ ನಾಡಿನ ಅಂತರ್ಶಕ್ತಿ ವಿಶಿಷ್ಟವಾದುದು. ಇಂತಹ ಪುಣ್ಯ ಭೂಮಿಯಲ್ಲಿ ಮುಗ್ಧ ಮನಸ್ಸುಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಕೆಲಸವಾಗಬೇಕು, ಈ ನಿಟ್ಟಿನಲ್ಲಿ ಯುವವಾಹಿನಿ ಯಡ್ತಾಡಿ ಘಟಕ ಬೇಸಿಗೆ ಶಿಬಿರದಂತಹ ಕಾರ್ಯಕ್ರಮ ಆಯೋಜನೆ ಮೂಲಕ ಮಕ್ಕಳ ಭೌತಿಕ ವಿಕಸನದ ಮೂಲಕ ಸಂಸ್ಕಾರಯುತ ಶಿಕ್ಷಣಕ್ಕೆ ಅಡಿಪಾಯವಾಗುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ನವಭಾರತ್ ಸಹಕಾರಿ ಸಂಘ ಮೈರ್ಕೊಮೆ ಅಧ್ಯಕ್ಷ ಪ್ರಮೋದ್ ಮಂದಾರ್ತಿ ಹೇಳಿದರು.ಅವರು ಯುವವಾಹಿನಿ(ರಿ) ಯಡ್ತಾಡಿ ಘಟಕ ಸಾರಥ್ಯದಲ್ಲಿ ಸ.ಹಿ.ಪ್ರಾ.ಶಾಲೆ ಯಡ್ತಾಡಿ, […]
Read More
21-04-2022, 4:06 PM
ಕೂಳೂರು :- ದಿನಾಂಕ 21.04.2022 ಗುರುವಾರದಂದು ಫಲ್ಗುಣಿ ಆಡಿಟೋರಿಯಂ P.S.R.M ಕಟ್ಟಡ ಮೇಲಿನ ಮಹಡಿ ಸೊಸೈಟಿ ಬಿಲ್ಡಿಂಗ್ ಕೂಳೂರು ಇಲ್ಲಿ ನವಿಕೃತ ಪಲ್ಗುಣಿ ಸಭಾಂಗಣದ ದಾರವನ್ನು ಬಿಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಜಾನಕಿ ಸದಾಶಿವ ಅಮೀನ್ ಕೂಳೂರು ಘಟಕ ಒಂದು ಬಲಿಷ್ಠ ಘಟಕ. ಇನ್ನಷ್ಟು ಉತ್ತಮ ಸಮಾಜ ಮುಖಿ ಕಾರ್ಯ ನಡೆಯಲಿ. ಚಿಕ್ಕ ಗಿಡ ದೊಡ್ಡ ಮರವಾಗಿ ಬೆಳೆದು ರೆಂಬೆ ಕೊಂಬೆಗಳು ಮೂಡಿ ಹೊಸ ಚಿಗುರು ಚಿಗುರಲಿ ಎಂದು ಶುಭ ಹಾರೈಸಿದರು. ಸಭಾ ಕಾರ್ಯಕ್ರಮವನ್ನು ದೀಪ […]
Read More
10-04-2022, 7:45 AM
ಮಾಣಿ : ಕಾರ್ಯಾಗಾರದಲ್ಲಿ ಭಾಗವಹಿಸಿದ ಸದಸ್ಯರ ಉತ್ಸಾಹ, ಶಿಸ್ತು, ಯುವವಾಹಿನಿಯ ಸಂಸ್ಥೆಯ ಮೇಲಿನ ಅತೀವ ಪ್ರೀತಿ ಕಾರ್ಯಾಗಾರದ ಯಶಸ್ಸಿನ ಮೂಲ ಎಂದು ರಾಷ್ಟ್ರೀಯ ತರಬೇತುದಾರರಾದ ಸದಾನಂದ ನಾವಡ ತಿಳಿಸಿದರು. ಅವರು ದಿನಾಂಕ 10.04.2022 ರಂದು ಯುವವಾಹಿನಿ ರಿ.ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ರಿ.ಮಾಣಿ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರು, ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ವ್ಯಕ್ತಿತ್ವ ವಿಕಸನ ನಿರ್ದೇಶಕರಿಗೆ ಮಾಣಿ ನಾರಾಯಣಗುರು ಸಭಾಭವನದಲ್ಲಿ ಜರುಗಿದ ಚೈತನ್ಯ-2022 ತರಬೇತಿ ಕಾರ್ಯಾಗಾರದ ಮುಖ್ಯ […]
Read More
10-04-2022, 7:42 AM
ಮಾಣಿ : ಚೈತನ್ಯ 2022 ತರಬೇತಿ ಕಾರ್ಯಾಗಾರವು ಯುವವಾಹಿನಿ ಸಂಘಟನೆಯು ಇನ್ನಷ್ಟು ಬಲಗೊಳ್ಳಲು ಸಹಕಾರಿಯಾಗಲಿದೆ ಹಾಗೂ ಕಾರ್ಯಾಗಾರವು ಯಶಸ್ವಿಯಾಗಿ ಸಂಪನ್ನಗೊಂಡಿರುವುದು ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದೆ. ಯುವವಾಹಿನಿ ಮಾಣಿ ಘಟಕದ ಅಚ್ಚುಕಟ್ಟುತನದ ಆತಿಥ್ಯ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಯುವವಾಹಿನಿ ರಿ.ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ತಿಳಿಸಿದರು. ಅವರು ದಿನಾಂಕ 10.04.2022 ರಂದು ಯುವವಾಹಿನಿ ರಿ.ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ರಿ.ಮಾಣಿ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರು, ಘಟಕಗಳ ಅಧ್ಯಕ್ಷರು, […]
Read More
04-04-2022, 5:03 PM
ಕಟಪಾಡಿ : ದಿನಾಂಕ 10/೦4/2022ರ ಆದಿತ್ಯವಾರದಂದು ಯುವವಾಹಿನಿ (ರಿ.) ಕಟಪಾಡಿ ಘಟಕ ಹಾಗೂ ಜೇಸಿಐ ಕಟಪಾಡಿ ಇವರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವು ಜೇಸಿ ಭವನ ಕಟಪಾಡಿಯಲ್ಲಿ ನಡೆಯಿತು.ಈ ಕಾರ್ಯಕ್ರಮವನ್ನು ಹರೀಶ್ ಚಂದ್ರ ಅಮೀನ್ ಉದ್ಘಾಟಿಸಿ ಶಿಬಿರಕ್ಕೆ ಶುಭ ಹಾರೈಸಿದರು.ಡಾ.ಸಂಜನಾ ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರಕ್ತದಾನದಿಂದ ಮನುಷ್ಯನ ಅತ್ಯಮೂಲ್ಯ ಜೀವವನ್ನು ಉಳಿಸಬಹುದು ಎಲ್ಲರೂ ರಕ್ತದಾನ ಮಾಡುವಂತೆ ಕೋರಿದರು. ಜೇಸಿಐ ಅಧ್ಯಕ್ಷರಾದ ಪ್ರವೀಣ್ ಕುಮಾರ್,ಘಟಕದ ಅಧ್ಯಕ್ಷರಾದ ಸುನಿಲ್ ಡಿ ಬಂಗೇರ,ನಿಕಟಪೂರ್ವ ಅಧ್ಯಕ್ಷರಾದ ಉಮೇಶ್ ಸುವರ್ಣ, ಉಪಾಧ್ಯಕ್ಷರಾದ […]
Read More