ಸನ್ಮಾನ

ಸ್ವಪ್ರಯತ್ನವೇ ಜೀವಾಳ – ಶಶಾಂತ್ ಬಿ.

ಬಂಟ್ವಾಳ ಕಸ್ಬಾ ಗ್ರಾಮದ ಭೋಜ ಪೂಜಾರಿ ಮತ್ತು ವನಿತಾ ದಂಪತಿಗಳ ಸುಪುತ್ರ ಶಶಾಂತ್ ಬಿ. ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಗಣಿತ ಮತ್ತು ಸಂಸ್ಕೃತದಲ್ಲಿ 100 ಅಂಕಗಳನ್ನು ಪಡೆದು 625 ಕ್ಕೆ 614 (98.24%) ಅಂಕ ಗಳಿಸಿರುವುದು ಶ್ಲಾಘನೀಯ. ಬಿಡುವಿನ ವೇಳೆಯಲ್ಲಿ ತಾನೇ ದುಡಿದು ಶಾಲಾ ಶುಲ್ಕವನ್ನು ಭರಿಸಿ ಹೆತ್ತವರಿಗೆ ಹೊರೆಯಾಗದೆ ಎಲ್ಲರ ಪ್ರೀತಿ ಸಂಪಾದಿಸಿದ್ದಾರೆ. ತಾನೇ ನಾಟಕ ರಚಿಸಿ, ಅಭಿನಯಿಸಿದ ಉತ್ತಮ ರಂಗ ಕಲಾವಿದ. ಶಾಲಾ ದಿನಗಳಲ್ಲೇ ನಾಯಕತ್ವ ಗುಣ […]

Read More

ಕಲಿಕೆಯಲ್ಲಿ ನಿಧಿಯೇ ಸರಿ – ಕು| ನಿಧಿಶ್ರೀ ಯು. ಪೂಜಾರಿ

ಶ್ರೀಮತಿ ಭಾರತಿ ಹಾಗೂ ಶ್ರೀ ಉಮಾನಾಥ ದಂಪತಿಗಳಿಗೆ ಉತ್ತಮ ಹೆಮ್ಮೆ ಪಡತಕ್ಕೆ ಸಾಧನೆಯ ಕುವರಿ ನಿಧಿಶ್ರೀಯ ಬಗ್ಗೆ ಮತ್ತು ಅವಳ ಸಾಧನೆಯ ಬಗ್ಗೆ ಅರಿವಿರಲಿಕ್ಕಿಲ್ಲ ತಮ್ಮ ಜೀವನದ ಹಾದಿಯಲ್ಲಿ ತಮ್ಮ ಮಗಳು ಒಂದುದಿನ ಸ್ವಪ್ರತಿಭೆಯಿಂದ ಜನ ಮನ್ನಣೆಯನ್ನು ಗಳಿಸಿ ಕೊಡಲಿದ್ದಾಳೆ ಎಂಬ ಅರಿವಿರಲಿಕ್ಕಿಲ್ಲ. ಕಾರಣ ಅವರಿದ್ದದ್ದು 62 ತೋಕೂರು ಜೋಕಟ್ಟೆ ಎಂಬ ಸಣ್ಣ ಊರಿನಲ್ಲಿ. ಸಾಮಾನ್ಯವಾಗಿ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ಬೆಳೆದವರಿಗೆ ಬದುಕಿನ ಸೂಕ್ಷತೆಗಳ ಅರಿವಿರುತ್ತದೆ. ಜೀವನದ ಕಷ್ಟ ಕಾರ್ಪಣ್ಯಗಳ ಸರಿಯಾದ ದೃಷ್ಟಿಕೋನ ಇರುತ್ತದೆ ಇವರ ಬಾಳಿನಲ್ಲೂ ನಡೆದದ್ದು […]

Read More

ಅಡ್ವೆ ಘಟಕದ ಪದಗ್ರಹಣ ಕಾರ್ಯಕ್ರಮ

ಯುವವಾಹಿನಿ (ರಿ) ಅಡ್ವೆ ಘಟಕದ ಪದಗ್ರಹಣ ಕಾರ್ಯಕ್ರಮವು ದಿನಾಂಕ 10-7-2016 ರಂದು ಅಡ್ವೆ ಆನಂದಿ ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ವಹಿಸಿದ್ದರು. ಡಾ. ಎನ್.ಟಿ. ಅಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. 2016-17 ನೇ ಸಾಲಿನ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್, ಕಾರ್ಯದರ್ಶಿಯಾಗಿ ಶಶಿಧರ್ ಟಿ. ಪೂಜಾರಿ ಆಯ್ಕೆಗೊಂಡರು. ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಕೇಂದ್ರ ಸಮಿತಿ ಉಪಾಧ್ಯಕ್ಷ ಪದ್ಮನಾಭ ಮರೋಳಿ ಭೋದಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು. ಅಲ್ಲದೇ ಅಂದು ಪರಿಸರದ ಸುತ್ತಮುತ್ತಲಿನ ಶಾಲಾ ಕಾಲೇಜುಗಳಲ್ಲಿ […]

Read More

ಬಂಟ್ವಾಳ ಯುವವಾಹಿನಿಯ ವತಿಯಿಂದ ಪೊಲೀಸ್ ಅಧಿಕಾರಿ ಶಾಂತಾರಾಮ್ ಇವರಿಗೆ ಅಭಿನಂದನೆ

ಪೊಲೀಸ್ ಇಲಾಖೆಯಲ್ಲಿನ ತಮ್ಮ ವಿಶೇಷ ಸೇವೆಗಾಗಿ 2015-16 ನೇ ಸಾಲಿನ ಮುಖ್ಯ ಮಂತ್ರಿಗಳ ಚಿನ್ನದ ಪದಕ ಪಡೆದ ಪ್ರಾಮಾಣಿಕ, ನಿಷ್ಠಾವಂತ ದಕ್ಷ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್ ಇವರನ್ನು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ. ಸೇಸಪ್ಪ ಕೋಟ್ಯಾನ್, ಯುವವಾಹಿನಿ ಸಲಹೆಗಾರರಾದ ಬಿ. ತಮ್ಮಯ, ಅಣ್ಣು ಪೂಜಾರಿ, ಅಧ್ಯಕ್ಷರಾದ ರಾಜೇಶ್ ಸುವರ್ಣ, ಕೋಶಾಧಿಕಾರಿ […]

Read More

ಭಾರತ್ ಬ್ಯಾಂಕ್ : ಯುವವಾಹಿನಿ ಸಾಧನಾ ಶ್ರೇಷ್ಟ ಪ್ರಶಸ್ತಿ -2014

ಸಮಾಜದ ಜನರ ಆರ್ಥಿಕ ವ್ಯವಸ್ಥೆಗೊಂದು ಭದ್ರ ಬುನಾದಿಯನ್ನು ಹಾಕಿಕೊಡಬೇಕು, ಬ್ಯಾಂಕಿಂಗ್ ಕ್ಷೇತ್ರದಲ್ಲೂ ಸಮಾಜದ ಹೆಸರು ಅಗ್ರಸ್ಥಾನದಲ್ಲಿ ಬರಬೇಕು ಎನ್ನುವ ಉದಾತ್ತ ಚಿಂತನೆಯಿಂದ ಬಿಲ್ಲವರ ಅಸೋಸಿಯೇಶನ್ ಮುಂಬೈ ಇದರ ಪ್ರಾಯೋಜಿತವಾಗಿ ಹುಟ್ಟಿ ಕೊಂಡ ದಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಇಂದು ಮಲ್ಟಿ-ಸ್ಟೇಟ್ ಶೆಡ್ಯೂಲ್ಡ್ ಬ್ಯಾಂಕ್ ಆಗಿ ಪರಿವರ್ತನೆಗೊಂಡಿದೆ. ಭವಿಷ್ಯದ ದೃಷ್ಠಿಯಲ್ಲಿ ಸ್ಪಷ್ಟವಾದ ಗುರಿ ಇದ್ದರೂ ಆ ಗುರಿಯನ್ನು ಮುಟ್ಟುವುದು ಸುಲಭದ ಕೆಲಸ ಅಲ್ಲ ಎನ್ನುವ ಸತ್ಯ ಸ್ಪಷ್ಟವಾಗಿ ತಿಳಿದಿದ್ದರೂ ಕೆಲವೇ ವರುಷದ ಸೀಮಿತ ಅವಧಿಯಲ್ಲಿ ಮುಂಬೈಯ ಗಡಿ […]

Read More

ಅಂತರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ಶ್ರೀ ವಿನೋದ್‍ರಾಜ್

ಏಕಾಗ್ರತೆ ಮತ್ತು ದೈಹಿಕ ಕ್ಷಮತೆಯ ಕ್ಷೇತ್ರವಾಗಿರುವ ಪವರ್‍ಲಿಫ್ಟಿಂಗ್ ವಿಭಾಗದ , ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಹತ್ತಕ್ಕೂ ಅಧಿಕ ಚಿನ್ನದ ಪದಕವನ್ನು ಪಡೆದು ರಾಷ್ಟ್ರಕ್ಕೆ ಮತ್ತು ಸಮಾಜಕ್ಕೆ ಕೀರ್ತಿ ತಂದಿರುವ ಒಬ್ಬ ಅಪೂರ್ವ ಸಾಧಕ ಶ್ರೀ ವಿನೋದ್ ರಾಜ್‍ಇವರು, ವಾಮಂಜೂರು ನಿವಾಸಿ ವಿಠಲ ಇವರ ಸುಪುತ್ರರಾಗಿರುವ ವಿನೋದ್ ರಾಜ್ ಬಿ.ಕಾಂ ಪದವೀಧರರು. ಶಿಕ್ಷಣದ ಜೊತೆ ಜೊತೆ ಇವರನ್ನು ಬಹುವಾಗಿ ಆಕರ್ಷಿಸಿದ ಮತ್ತೊಂದು ಕ್ಷೇತ್ರ ಎಂದರೆ ಅದು ಪವರ್‍ಲಿಫ್ಟಿಂಗ್.ಕೇವಲ 25ರಹರೆಯದ ಯುವಕ ಇಂದು ಹತ್ತಕ್ಕೂ ಅಧಿಕ ಅಂತರಾಷ್ಟ್ರೀಯ ಚಿನ್ನದ […]

Read More

ಸಾಧನಶೀಲ ವಿಶಿಷ್ಟ ಯುವ ಉದ್ಯಮಿ ಶ್ರೀ ಪ್ರಜ್ವಲ್ ಕುಮಾರ್

ಶ್ರೀ ವಿಜಯ ಕುಮಾರ್ ಬಂಗೇರಾ ಮತ್ತು ಪದ್ಮಾವತಿ ದಂಪತಿಗಳ ಸುಪುತ್ರರರಾಗಿರುವ ಶ್ರೀ ಪ್ರಜ್ವಲ್ ವಿ. ಕುಮಾರ್ ಅವರು ನಮ್ಮ ದೇಶಕಂಡ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು. ನಿಟ್ಟೆಯ ಎನ್.ಎಮ್.ಎ.ಎಮ್.ಐ.ಟಿ ವಿದ್ಯಾ ಸಂಸ್ಥೆಯಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಬಿ.ಇ ಪದವಿಯನ್ನು ಪಡೆದಿರುವ ಶ್ರೀ ಪ್ರಜ್ವಲ್ ವಿ. ಕುಮಾರ್ ಅವರು Pಐಅ ಟಚಿಜಜeಡಿ ಟogiಛಿ ಚಿಟಿಜ iಟಿಜusಣಡಿiಚಿಟ ಚಿuಣomಚಿಣioಟಿ ಛಿeಡಿಣiಜಿiಛಿಚಿಣioಟಿ ಬಗ್ಗೆ ISಂ ಠಿuಟಿe, ಇಲ್ಲಿ ಮತ್ತು ಔಓಉಅ ಒಖPಐ ಇಲ್ಲಿ ಒಂದು ತಿಂಗಳ ಕಾಲ Iಟಿsಣಡಿumeಟಿಣಚಿಣioಟಿ ಚಿಟoಟಿg ತಿiಣh […]

Read More

ಬಹುಮುಖ ಪ್ರತಿಭೆಯ ಶಿಕ್ಷಕ ಶ್ರೀ ನರೇಂದ್ರ ಕುಮಾರ್ ಕೋಟ

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಮಾತೊಂದು ಕನ್ನಡದಲ್ಲಿ ಚಾಲ್ತಿಯಲ್ಲಿದೆ, ಆಡಿಗೆ ಎಲ್ಲಾ ರೀತಯ ಸೊಪ್ಪೂ ರುಚಿಸುತ್ತದೆ ಮಾತ್ರವಲ್ಲದೆ ಅಂತಹ ವಿಶೇಷ ಗುಣವನ್ನೂ ಅದು ಹೊಂದಿದೆ.ಬಹುಷ ಸಾಹಿತ್ಯ ಸಾಂಸ್ಕøತಿಕ, ಶೈಕ್ಷಣಿಕ, ಕ್ರೀಡೆ ಮತ್ತು ತರಬೇತಿ ಹೀಗೆ ಕ್ರೀಯಾಶೀಲತೆಯ ಬಹುಮುಖಗಳನ್ನು ತನ್ನೊಬ್ಬನೊಳಗೆ ಹುದುಗಿಸಿಕೊಂಡು ಒತ್ತಡದ ಜೀವನದ ನಡುವೆಯೂ ಪಾದರಸದಂತೆ ಕೆಲಸ ಮಾಡುತ್ತಿರುವ ವ್ಯಕ್ತಿ ನರೇಂದ್ರ ಕುಮಾರ್ ಕೋಟ. ತಾನು ನಿರ್ವಹಿಸುತ್ತಿರುವ ಶಿಕ್ಷಕ ವೃತ್ತಿಯನ್ನು ವೃತ್ತಿ ಎಂದು ಕೊಂಡು ದುಡಿಯದೆ ಅದು ನನ್ನ ಜೀವನದಲ್ಲಿ ದೇವರು ನೀಡಿದ ಕರ್ತವ್ಯ ಎನ್ನುವ ರೀತಿಯಲ್ಲಿ […]

Read More

ಸೀಳು ತುಟಿ ಸಮಸ್ಯೆಯವರ ಆಶಾಕಿರಣ ಡಾ. ಅಶಿತ್ ಎಂ.ವಿ.

ಸೀಳು ತುಟಿ ಸಮಸ್ಯೆಯವರ ಆಶಾಕಿರಣ ಡಾ. ಅಶಿತ್ ಎಂ.ವಿ. ಉಪ್ಪಿನಂಗಡಿಯ ರಾಜ್‍ಮಹಲ್ ಎಂ. ವರದ ರಾಜ್ ಮತ್ತು ವಿಮಲಾ ವರದರಾಜ್ ಇವರ ಪುತ್ರರಾಗಿರುವ ಡಾ. ಅಶಿತ್ ಎಂ.ವಿ. ಇವರು ಶಿಕ್ಷಣ ರಂಗದ ಅದ್ವಿತೀಯ ಸಾಧಕ, ತನ್ನ ಪ್ರಾಥಮಿಕ ಹಂತದ ಶಿಕ್ಷಣದ ಸಮಯದಲ್ಲೇ ಸಾಧನೆಯನ್ನು ತೋರಿರುವ ಶ್ರೀಯುತರು ಪ್ರಸ್ತುತ ದಂತ ವೈದ್ಯಕೀಯ ವಿಭಾಗದಲ್ಲಿ ಎಂಡಿಎಸ್ ಪದವಿಯನ್ನು ಪಡೆದಿದ್ದಾರೆ, ವೈದ್ಯಕೀಯ ರಂಗದಲ್ಲಿ ಹೊಸತನಗಳ ಪ್ರಯೋಗಕ್ಕೆ ಸದಾ ತುಡಿಯುತ್ತಾ ಈ ಮೂಲಕದ ಪ್ರಯತ್ನವನ್ನೂ ನಡೆಸುತ್ತಿರುವ ಅಶಿತ್ ಅವರು ಸೀಳು ತುಟಿ ಸಮಸ್ಯೆಯಿಂದ […]

Read More

ಶ್ರೀ ಜೆ. ತಿಮ್ಮಪ್ಪ ಪೂಜಾರಿ ಇವರಿಗೆ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ -2014

ಸದಾ ಹಸನ್ಮುಖಿ, ಕ್ರಿಯಾ ಶೀಲ ನಡಿಗೆ, ಮೆಲು ಮಾತು, ಹಿತವಾದ ನುಡಿ, ಬಿಳಿ ಪಂಚೆ, ಬಿಳಿ ಅಂಗಿ ಇವಷ್ಟೇ ಅವರ ಆಸ್ತಿ. ಆದರೆ ಸಾಹಿತ್ಯದಲ್ಲಿ ಅವರದ್ದು ದೈತ್ಯ ಪ್ರತಿಭೆ. ತಿಮ್ಮಪ್ಪ ಪೂಜಾರಿಯವರು ಮೂಲತಃ ಜೆಪ್ಪಿನಮೊಗರು ನಿವಾಸಿ. ಈ ನಾಡು ಕಂಡ ಅಪರೂಪದ ಸಾಹಿತಿ, ತುಳು ಭಾಷೆಯಲ್ಲಿ ಎರಡು ಕೃತಿಗಳನ್ನು ಪ್ರಕಟಿಸಿದ್ದು ಇನ್ನೆರಡು ಕೃತಿಗಳನ್ನು ಪ್ರಕಟಣೆಗೆ ಸಿದ್ಧ ಪಡಿಸಿರುವ ತಿಮ್ಮಪ್ಪ ಪೂಜಾರಿಯವರು ತುಳು ಭಾಷೆಯಲ್ಲಿ ಸಾಕಷ್ಟು ಹಿಡಿತವನ್ನು ಹೊಂದಿದ್ದಾರೆ. ಗ್ರಾಮ್ಯವಾದ ಮತ್ತು ಅಷ್ಟೇ ಸರಳವಾದ ಭಾಷಾ ಪ್ರಯೋಗದ ಮೂಲಕ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 25-12-2024
ಸ್ಥಳ : ಯುವವಾಹಿನಿ ಸಭಾಂಗಣ ಊರ್ವಸ್ಟೋರ್

ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು

ದಿನಾಂಕ : 21-12-2024
ಸ್ಥಳ : ಹೆಚ್. ಎಂ. ಆಡಿಟೋರಿಯಂ ಉಪ್ಪಿನಂಗಡಿ

ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ

ದಿನಾಂಕ : 22-12-2024
ಸ್ಥಳ : ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣ ಕಡಬ

ಯುವವಾಹಿನಿ (ರಿ.) ಕಡಬ ಘಟಕ

ದಿನಾಂಕ : 20-12-2024
ಸ್ಥಳ : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ವೆ

ಯುವವಾಹಿನಿ (ರಿ) ಅಡ್ವೆ ಘಟಕ

ದಿನಾಂಕ : 29-12-2024
ಸ್ಥಳ : ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆ

ಯುವವಾಹಿನಿ (ರಿ.) ಮೂಡುಬಿದಿರೆ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
error: Content is protected !!