09-11-2019, 2:49 AM
ಮದ್ಯ ಮುಕ್ತ ಮದರಂಗಿಗೆ ಸಾಕ್ಷಿಯಾಯಿತು ಯುವವಾಹಿನಿ (ರಿ) ವೇಣೂರು ಘಟಕ ವೇಣೂರು ನ. 8 : ಮದ್ಯಪಾನವು ಸಾಮಾಜದ ಸ್ವಾಸ್ಥ್ಯ ದ ವಿನಾಶಕ್ಕೆ ಕಾರಣವಾಗುತ್ತಿದ್ದು,ಇತ್ತೀಜೆಗೆ ಮದುವೆಯ ಮದರಂಗಿಯು ನವಕುಡುಕರನ್ನು ಸೃಷ್ಟಿಸುವ ಸಮಾರಂಭವಾಗಿ ಪರಿವರ್ತನೆಗೊಂಡಿದೆ. ಇದು ಬದಲಾಗಿ ಎಲ್ಲಾ ಕಡೆ ಮದ್ಯಮುಕ್ತ ಮದರಂಗಿ ಕಾರ್ಯಕ್ರಮ ನಡೆಯುವಂತಾಗಲಿ ಎಂದು ಆಳ್ವಾಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗದ ಡಾ। ಯೋಗೀಶ್ ಕೈರೋಡಿ ಹೇಳಿದರು. ಯುವವಾಹಿನಿ (ರಿ) ವೇಣೂರು ಘಟಕದ ಆಶ್ರಯದಲ್ಲಿ ಬಜಿರೆಗ್ರಾಮದ ಹೊಸಮನೆ ಮನೋಜ್ ಪೂಜಾರಿಯವರ ಮನೆಯಲ್ಲಿ ನಡೆದ ಮದ್ಯ ಮುಕ್ತ ಮದರಂಗಿ ಕಾರ್ಯಕ್ರಮದಲ್ಲಿ […]
Read More
03-11-2019, 4:31 PM
ಯುವವಾಹಿನಿ(ರಿ.)ಬೆಳ್ತಂಗಡಿ ಘಟಕದ ಸ್ಪಂದನ ಸೇವಾ ಯೋಜನೆಯಿಂದ ಎರಡು ಕಿಡ್ನಿ ವೈಪಲ್ಯಗೊಂಡಿರುವ ಮತ್ತು ಶ್ರವಣ ಮತ್ತು ದೃಷ್ಟಿಯನ್ನು ಸಂಪೂರ್ಣ ಕಳೆದುಕೊಂಡಿರುವ ಗುರುವಾಯನಕೆರೆ ನಿವಾಸಿ ಜಯರಾಮ್ ಶೆಟ್ಟಿ ಯವರಿಗೆ ರೂಪಾಯಿ 10000.00 ಸಾಂತ್ವನ ನಿಧಿಯನ್ನು ಘಟಕದ ಅಧ್ಯಕ್ಷರಾದ ಹರೀಶ್ ಸುವರ್ಣ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಘಟಕದ ಗೌರವ ಸಲಹೆಗಾರರಾದ ರಮಾನಂದ ಸಾಲಿಯಾನ್ ಮೂಂಡೂರು ಯುವವಾಹಿನಿ(ರಿ.) ಕೇಂದ್ರ ಸಮಿತಿಯ ನಿರ್ದೇಶಕರಾದ ಪ್ರಶಾಂತ್ ಮಚ್ಚಿನ ಗೆಳೆಯರ ಬಳಗ(ರಿ.)ಗುರುವಾಯನಕೆರೆಯ ಕಾರ್ಯದರ್ಶಿ ಮಂಜುನಾಥ್, ಚಿದಾನಂದ ಬಂಗೇರ ಗುರುವಾಯನಕೆರೆ ಉಪಸ್ಥಿತರಿದ್ದರು.
Read More
03-11-2019, 4:12 PM
ದಿನಾಂಕ 03/11/2019 ರಂದು ಪೂರ್ವಾಹ್ನ 7.00ಘಂಟೆಗೆ ಬೇಸಾಯದ ಕಡೆಗೆ ನಮ್ಮ ನಡೆ ಎಂಬ ಪರಿಕಲ್ಪನೆಯಲ್ಲಿ ಇಂದು ನಮ್ಮ ಘಟಕದ ವತಿಯಿಂದ ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಬಹಳ ಆಸಕ್ತಿದಾಯಕವಾಗಿ ಮತ್ತು ಸಮರ್ಪಣಾ ಭಾವದಿಂದ ನಾಗಂದಡಿಯ ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆವು. ಕೇವಲ ಒಂದು ಗಂಟೆಯಲ್ಲಿ ಒಂದು ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯಕ್ರಮವನ್ನು ಪರಿಪೂರ್ಣಗೊಳಿಸಿದೆವು.ಇಂದಿನ ದಿನಗಳಲ್ಲಿ ಯುವ ಜನತೆಯು ಕೃಷಿಯತ್ತ ಒಲವು ಪ್ರದರ್ಶಿಸದ ಈ ಸಮಯದಲ್ಲಿ, ನಮ್ಮ ಘಟಕವು ಯುವಜನತೆಯನ್ನು ಒಗ್ಗೂಡಿಸಿ , ಈ ಕಾರ್ಯಕ್ರಮವನ್ನು […]
Read More
02-11-2019, 2:35 AM
ದಿನಾಂಕ 2/11/2019 ರಂದು ಶ್ರೀ ಗೋಕರ್ಣನಾಥ ಬಿ ಎಡ್ ಕಾಲೇಜು ಗಾಂಧಿನಗರ ಇಲ್ಲಿ ಬಿ ಎಡ್ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಮಾಹಿತಿ ಶಿಬಿರ ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ದೀಪ್ತಿ ನಾಯಕ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷರಾದ ಉಮಾಶ್ರೀಕಾಂತ್ ಸ್ವಾಗತಿಸಿದರು. ನಂತರ ಸಂಪನ್ಮೂಲ ವ್ಯಕ್ತಿಯಾದ ಅಲೋಸಿಯಸ್ ಕಾಲೇಜಿನ assistant professor, ಎಂ ಸಿ ಎ department ಹಾಗೂ ಮಾಜಿ ಅಧ್ಯಕ್ಷರು ಮಂಗಳೂರು ಘಟಕದ ರಾಕೇಶ್ ಕುಮಾರ್ ಇವರು ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ವಿವಿಧ ಕಥೆಗಳನ್ನು , ಚಟುವಟಿಕೆಗಳನ್ನು ನೀಡುತ್ತಾ […]
Read More
01-11-2019, 4:29 PM
ದಿನಾಂಕ 1/11/2019ರ ಶುಕ್ರವಾರ ಸಂಜೆ ಘಟಕದ ಆಶ್ರಯದಲ್ಲಿ ಕುಣಿತ ಭಜನಾ ತರಗತಿಯನ್ನು ಘಟಕದ ಸಲಹೆಗಾರರು ರಘುನಾಥ ಶಾಂತಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಹರೀಶ್ ಸುವರ್ಣ ವಹಿಸಿದರು. ಘಟಕದ ಕಾರ್ಯದರ್ಶಿ ವಿಜಯ್ ಕುಮಾರ್ , ಯುವವಾಹಿನಿ ಮಹಿಳಾ ಸಂಚಲನ ಸಮಿತಿಯ ಸಂಚಾಲಕಿ ಶ್ರೀಮತಿ ಸುಜಾತ ಅಣ್ಣಿ ಪೂಜಾರಿ,ಕಲೆ ಮತ್ತು ಸಾಹಿತ್ಯ ನಿರ್ದೇಶಕರು ಜೀತೆಶ್ ಬೆಳ್ತಂಗಡಿ, ತರಬೇತುದಾರ ವಾಸು ಮುಂಡಾಜೆ ಉಪಸ್ಥಿತರಿದ್ದರು. ಗುರುರಾಜ ಗುರಿಪಳ್ಳ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಮಚ್ಚಿನ ನಿರೂಪಿಸಿ ,ವಂದಿಸಿದರು.
Read More
01-11-2019, 4:28 PM
ಕಡಬ : ವಿದ್ಯೆ,ಉದ್ಯೋಗ ಸಂಪರ್ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿ(ರಿ) ಕಡಬ ಘಟಕದ ವತಿಯಿಂದ ನ.೧ರಂದು ಕೋಡಿಂಬಾಳ ಸ.ಮಾ.ಹಿ.ಪ್ರಾ.ಶಾಲಾ ಮಕ್ಕಳಿಗೆ ಉಚಿತ ಐಡಿ ಕಾರ್ಡ್ ವಿತರಿಸಲಾಯಿತು. ಆರ್ಯಭಟ ಪುರಸ್ಕೃತ ರವಿ ಕಕ್ಕೆಪದವು ಅವರು ಶಾಲಾ ಮಕ್ಕಳಿಗೆ ಐಡಿಕಾರ್ಡನ್ನು ವಿತರಿಸಿ ಸಂಘಟನಾತ್ಮಕವಾಗಿ ಬೆಳೆಯುತ್ತಿರುವ ಯುವವಾಹಿನಿ ಸಂಘಟನೆಯು ಸಮಾಜಮುಖಿಯಾಗಿ ಅವಿರತ ಶ್ರಮಿಸುತ್ತಿದ್ದು ವಿವಿಧ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಜನಸೇವೆಯೆ ಜನಾರ್ದನ ಸೇವೆ ಎಂದು ಎಲ್ಲರ ಶ್ರೇಯೋಬಿವೃದ್ಧಿಯಲ್ಲಿ ತೊಡಗಿಕೊಂಡಿದ್ದು ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವ ನಮ್ಮ ಸಂಘಟನೆ ಇಂದು […]
Read More
31-10-2019, 4:05 PM
ಯುವವಾಹಿನಿ (ರಿ.) ಬಂಟ್ವಾಳ ಘಟಕದ ವತಿಯಿಂದ ನೆರವೇರಿದ ವಿಶಿಷ್ಟ ಕಾರ್ಯಕ್ರಮ.. ಲೋಕ ಶಾಂತಿಯ ಹರಿಕಾರ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವವನ್ನು ಜೀವನದಲ್ಲಿ ಪಾಲಿಸಲು ಪಣತೊಟ್ಟು,, ಕಠಿಬದ್ಧರಾಗುವುದರೊಂದಿಗೆ ಮದುವೆಯ ಮುಂಚಿತವಾಗಿ ಜರಗುವ ಶುಭಕಾರ್ಯವನ್ನು ಪಾವಿತ್ರ್ಯತೆಯೆಡೆಗೊಯ್ದ “ಮದ್ಯಮುಕ್ತ ಮದರಂಗಿ” ಯುವವಾಹಿನಿ(ರಿ.) ಬಂಟ್ವಾಳ ಘಟಕದ ಸಕ್ರಿಯ ಸದಸ್ಯರಾದ ಹರೀಶ್ ಸಾಲ್ಯಾನ್ ಅಜಕಲ ರವರ ಮದುವೆಯ ಮದರಂಗಿಯ ಕಾರ್ಯಕ್ರಮವು ವಿಭಿನ್ನತೆಯಿಂದ ನೆರವೇರಿದ್ದು,ಸಮಾಜದಿಂದಲೇ ಸಮಾಜವನ್ನು ತಿದ್ದಿ ಸರಿದಾರಿಗೊಯ್ಯುವ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದ ಯುವವಾಹಿನಿ (ರಿ.)ಬಂಟ್ವಾಳ ಘಟಕ ದ ಸದಸ್ಯರ ವಿಶಾಲವಾದ […]
Read More
30-10-2019, 4:16 PM
ನಮ್ಮ ಮನೆ ಹಬ್ಬ ದೀಪಾವಳಿ ಕತ್ತಲಿನಿಂದ ಬೆಳಕಿನೆಡೆಗೆ ಕಾರ್ಯಕ್ರಮವು ಘಟಕದ ಕೋಶಾಧಿಕಾರಿ ಇಂದಿರ ರವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸುಭಾಷ್ ರವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ, ಯುವವಾಹಿನಿ ಕೂಳೂರು ಘಟಕದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಪವಿತ್ರ. ಯು ಅಮೀನ್, ಮಾರ್ಗದರ್ಶಕರಾದ ಗಿರಿಧರ ಸನಿಲ್, ಕಾರ್ಯಕ್ರಮದ ಸಂಚಾಲಕರಾದ ಇಂದಿರ […]
Read More
30-10-2019, 4:00 PM
ಯುವವಾಹಿನಿ (ರಿ) ಬೆಳ್ತಂಗಡಿ ಘಟಕ ದಿಂದ ತುಳುನಾಡ ತುಡರ್ ಪರ್ಬ ಸಾಮೂಹಿಕ ದೀಪವಾಳಿ ಆಚರಣೆ. ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಯುವವಾಹಿನಿ ಮಹಿಳಾ ಸಂಚಲನ ಸಮಿತಿ ಬೆಳ್ತಂಗಡಿ, ಗೆಳೆಯರ ಬಳಗ ಗುರುವಾಯನಕೆರೆ,ಶಾರದಾಂಬ ಭಜನಾ ಮಂಡಳಿ ಗುರುವಾಯನಕೆರೆ,ಶ್ರೀ ಗುರು ಮಿತ್ರ ಸಮೂಹ ಬೆಳ್ತಂಗಡಿ, ವಿದ್ಯಾ ನಿಕೇತನ ನ್ರತ್ಯ ಶಾಲೆ ಗುರುವಾಯನಕೆರೆ ಇವರ ಸಹಕಾರದಿಂದ ದೀಪಾವಳಿ ಹಬ್ಬದ ಪ್ರಯುಕ್ತ ತುಳುನಾಡ ತುಡರ್ ಪರ್ಬ ಸಾಮೂಹಿಕ ದೀಪಾವಳಿ ಆಚರಣೆ ಅ 26ರಂದು ಗುರುವಾಯನಕೆರೆ ಶಾರದಾ ಮಂಟಪದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. […]
Read More
30-10-2019, 2:32 AM
ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ ಹಾಗೂ ಯುವ ವಾಹಿನಿ(ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಜರುಗುವ “ಧಾರ್ಮಿಕ ಶಿಕ್ಷಣ ಪದ್ಧತಿ ಹಾಗೂ ಭಜನಾ ತರಬೇತಿ ಕಮ್ಮಟ” ನಿರಂತರವಾಗಿ ನಡೆಯುತ್ತಿದ್ದು, ಇಂದು ದ್ವಿತೀಯ ತರಗತಿಯು ಭಜನಾ ಗುರುಗಳಾದ ಅರುಣ್ ಉಳ್ಳಾಲ್ ರವರಿಂದ ಸಂಜೆ 7.00 ರಿಂದ 8.00 ಗಂಟೆಯ ವರೆಗೆ ಜರಗಿತು. ಗುರುಗಳು ದೀಪಾವಳಿ ಹಬ್ಬದ ಮಹತ್ವವನ್ನು ಹಾಗೂ ಹಿಂದೂ ಪಂಚಾಂಗದ ಬಗ್ಗೆ ಕೆಲವು ಮಾಹಿತಿಗಳನ್ನು ಸಭೆಯಲ್ಲಿ ನೀಡಿದರು. ಭಜನೆಯಲ್ಲಿ ಸ್ವರ ಉಚ್ಛಾರದ ಬಗ್ಗೆ ಇರುವ ಮಹತ್ವಗಳನ್ನು ತಿಳಿಸಿದರು. […]
Read More