09-10-2022, 7:50 AM
ಬೆಳ್ತಂಗಡಿ :- “ಕೆಸರುಗದ್ದೆ ಕ್ರೀಡಾಕೂಟ ಇಂದು ಜನಾಕರ್ಷಣೆ ಪಡೆಯುತ್ತಿದೆ. ಯಾವುದೇ ಒಂದು ಸಂಘಟನೆ ಬಲಪಡಿಸಲು ಈ ರೀತಿಯ ಕ್ರೀಡಾಕೂಟ ಅಗತ್ಯ. ಇಂತಹ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಬಿಲ್ಲವ ಸಮುದಾಯವನ್ನು ಒಟ್ಟುಗೂಡಿಸುವ ಕಾರ್ಯ ಯುವವಾಹಿನಿ ಸಂಘಟನೆಯಿಂದಾಗಲಿ” ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು. ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ವೇಣೂರು ಘಟಕದ ಆತಿಥ್ಯದಲ್ಲಿ ವೇಣೂರು ಮೂಡುಕೋಡಿ ಗ್ರಾಮದ ನೆಲ್ಲಿಗುಡ್ಡೆ ನೋನೊಟ್ಟು ಗದ್ದೆಯಲ್ಲಿ ಭಾನುವಾರ ನಡೆದ ”ಕೆಸರ್ ಡೊಂಜಿ ದಿನ”ಕೆಸರುಗದ್ದೆ ಕ್ರೀಡಾಕೂಟದ […]
Read More
09-10-2022, 3:17 AM
ವೇಣೂರು :- ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ವೇಣೂರು ಘಟಕದ ಆತಿಥ್ಯದಲ್ಲಿ “ಕೆಸರ್ ಡೊಂಜಿ ದಿನ”ಕೆಸರುಗದ್ದೆ ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಯುವವಾಹಿನಿ ಮಾಣಿ ಘಟಕವು ತನ್ನ ಮುಡಿಗೇರಿಸಿಕೊಂಡಿದೆ. ದಿನಾಂಕ 09 ಅಕ್ಟೋಬರ್ 2022ರಂದು ಜರಗಿದ ಕೆಸರ್ ಡೊಂಜಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಅತೀ ಹೆಚ್ಚು ವಿಭಾಗದಲ್ಲಿ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿ ಹೆಚ್ಚು ಬಹುಮಾನ ಪಡೆಯುವಲ್ಲಿ ಯಶಸ್ವಿಯಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪ್ರಶಸ್ತಿ ವಿತರಿಸಿದರು. ಈ ಸಂದರ್ಭದಲ್ಲಿಕಾರ್ಯಕ್ರಮದಲ್ಲಿ […]
Read More
09-10-2022, 3:10 AM
ವೇಣೂರು :- ಹಿರಿಯರ ಕಾಲದಿಂದಲೂ ಕೃಷಿಯೇ ನಮ್ಮ ಜೀವನಾಡಿ, ಕೃಷಿಯನ್ನು ಬೆಳೆಸಿ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸು ಜವಾಬ್ದಾರಿ ನಮ್ಮ ಮೇಲಿದೆ. ಕೃಷಿಯನ್ನು ಅವಲಂಬಿಸಿ ಬದುಕಿದ ನಮ್ಮ ಹಿರಿಯರ ಜೀವನವೇ ಅದರ್ಶ ಎಂದು ಮುಲ್ಕಿ-ಮೂಡಬಿದಿರೆ ಕ್ಷೇತ್ರದ ಶಾಸಕರಾದ ಉಮನಾಥ್ ಕೋಟ್ಯಾನ್ ತಿಳಿಸಿದರು. ಅವರು ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ವೇಣೂರು ಘಟಕದ ಆತಿಥ್ಯದಲ್ಲಿ “ಕೆಸರ್ ಡೊಂಜಿ ದಿನ”ಕೆಸರುಗದ್ದೆ ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಆತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಂಘಟನೆಗಳು ಸಮುದಾಯದ ಶಕ್ತಿಯಾಗಬೇಕು :- ಪದ್ಮರಾಜ್ ಆರ್ ಬ್ರಹ್ಮಶ್ರೀ ನಾರಾಯಣ […]
Read More
08-10-2022, 9:38 AM
ಶಕ್ತಿನಗರ :- ಭಕ್ತರಿಗೆ ಭಜನೆ ಮಾಡುವ ಕಲೆ ದೇವರು ಕೊಟ್ಟ ವರದಾನ , ಭಕ್ತಿಯಿಂದ ಭಗವಂತನನ್ನು ಹಾಡಿ ಹೊಗಳಿದರೆ ಭಗವಂತ ಅನುಗ್ರಹಿಸುತ್ತಾನೆ. ಭಕ್ತರಿಗೆ ಭಗವತ್ ದರ್ಶನವೇ ಜೀವನದ ಗುರಿ. ಸಕಲ ಜೀವರಾಶಿಗಳ ಸೃಷ್ಟಿ ಸ್ಥಿತಿ ಲಯಗಳ ನಿಯಂತ್ರಕನಾದ ಭಗವಂತನನ್ನು ಒಲಿಸಿಕೊಳ್ಳುವ ಏಕೈಕ ಮಾರ್ಗವೇ ಭಜನೆ ಎಂಬುದನ್ನು ಮನಗಂಡು ಘಟಕದ ವತಿಯಿಂದ ಪ್ರತಿ ಗುರುವಾರ ಶಕ್ತಿನಗರದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಂಜೆ ನಡೆಯುವ ಭಜನೆ ಕಾರ್ಯಕ್ರಮವು ಗುರುಗಳ ಕೃಪೆಯಿಂದ ಸಾಂಗವಾಗಿ ನಡೆಯಿತು, ಆಗಮಿಸಿದ ಎಲ್ಲರನ್ನೂ ಅಧ್ಯಕ್ಷರು ಜಯರಾಮ ಪೂಜಾರಿ […]
Read More
05-10-2022, 2:16 PM
ಮಂಗಳೂರು :- ವಿಶ್ವ ವಿಖ್ಯಾತ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವದ ಶಾರದಾ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರಿಗೆ ಯುವವಾಹಿನಿ (ರಿ.) ಮಂಗಳೂರು ಘಟಕವು ಉಚಿತ ಶರಬತ್ತು ಸೇವೆಯನ್ನು ನೀಡುವುದರೊಂದಿಗೆ ಜನಮನ ಗೆದ್ದಿತು. ಮಂಗಳೂರು ದಸರಾ ಮಹೋತ್ಸವದ ಶೋಭಾ ಯಾತ್ರೆಯ ದಿನವಾದ 05 ಅಕ್ಟೋಬರ್ 2022ರ ಬೆಳಿಗ್ಗೆಯಿಂದಲೇ ಶರಬತ್ತು ಸೇವೆಗೆ ಪೂರ್ವ ತಯಾರಿ ಕಾರ್ಯಕ್ರಮಗಳು ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿಯಿರುವ ಎಸ್. ಎಲ್. ಡೈಮಂಡ್ ಮಳಿಗೆಯ ಅಂಗಣದಲ್ಲಿ ಘಟಕದ ಅಜೀವ ಸದಸ್ಯರಾದ ಬಾಲಕೃಷ್ಣ […]
Read More
02-10-2022, 2:21 PM
ಕಡಬ :- ಭಜನೆ ಎಂಬ ಮೂರು ಅಕ್ಷರಕ್ಕೆ ಬಹಳ ಮಹತ್ವವಿದೆ.* ಭ,ಎಂದರೇ ಭಜಿಸು ಜ, ಎಂದರೇ ಜಪಿಸು ನೆ, ಎಂದರೇ ನೆನಪಿಸು ಈ ಸುಂದರ ಅರ್ಥ ಉಲ್ಲ ಭಜನೆಯನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿ ತಾಯಿ ದೇಯಿಬೈದೆತಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ದಿನಾಂಕ 02 ಅಕ್ಟೋಬರ್ 2022ರ ಆದಿತ್ಯವಾರದಂದು ಘಟಕದ ನಡೆಸಲಾಯಿತು. ಮಧ್ಯಾಹ್ನ ಗಂಟೆ 12:30ರಿಂದ 2:00 ಗಂಟೆಯವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಪ್ರವೀಣ್ ಓಂಕಾಲ್, ಕಾರ್ಯದರ್ಶಿ ಕೃಷ್ಣಪ್ಪ ಅಮೈ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ […]
Read More
02-10-2022, 2:06 PM
ಕೂಳೂರು :- ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ 25ನೇ ಸ್ವಚ್ಛತಾ ಅಭಿಯಾನವು ಗಾಂಧಿ ಜಯಂತಿ ಪ್ರಯುಕ್ತ ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಪರಪಾದೆ ಆಕಾಶಭವನ ಇಲ್ಲಿ ದಿನಾಂಕ 02 ಅಕ್ಟೋಬರ್ 2022 ಭಾನುವಾರದಂದು ನಡೆಯಿತು. ಸದಸ್ಯರಾದ ಜಯ ಬಂಗೇರರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ , ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಭಾಸ್ಕರ್ ಕೋಟ್ಯಾನ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಸಂಘಟನಾ ಕಾರ್ಯದರ್ಶಿ ಸಚಿನ್ ಪೂಜಾರಿ , ಮಹಿಮೂನಾ S.D.M.C.ಅಧ್ಯಕ್ಷರು, […]
Read More
02-10-2022, 2:02 PM
ಪಣಂಬೂರು ಕುಳಾಯಿ :-ಯುವವಾಹಿನಿ (ರಿ.) ಪಣಂಬೂರು-ಕುಳಾಯಿ ಘಟಕದ 2022-23ನೇ ಸಾಲಿನ ಪದಗ್ರಹಣ ಕಾರ್ಯಕ್ರಮವು ದಿನಾಂಕ 02 ಅಕ್ಟೋಬರ್ 2022 ರ ಆದಿತ್ಯವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಕುಳಾಯಿ ಇದರ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬ್ರಹ್ಮ ಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಕುಳಾಯಿ ಇದರ ಅಧ್ಯಕ್ಷರಾದ ಗೋಪಾಲ ಬಂಗೇರ ನೇರವೇರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾದ ಜಯಾನಂದ ಅಂಜನ್, ಮಹಾಪೌರರು, ಮಂಗಳೂರು ಮಹಾನಗರ ಪಾಲಿಕೆ, ಸತ್ಯಜಿತ್ ಸುರತ್ಕಲ್, ರಾಜ್ಯಾಧ್ಯಕ್ಷರು, ನಾರಾಯಣಗುರು ವಿಚಾರ […]
Read More
02-10-2022, 9:01 AM
ಮಾಣಿ :- ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ವಿಶುಕುಮಾರ್ ದತ್ತಿನಿಧಿ ಸಮಿತಿ ವತಿಯಿಂದ ಕೊಡ ಮಾಡುವ 2022ನೇ ಸಾಲಿನ ವಿಶುಕುಮಾರ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 02 ಅಕ್ಟೋಬರ್ 2022 ರ ಆದಿತ್ಯವಾರದಂದು ಯುವವಾಹಿನಿ (ರಿ.)ಮಾಣಿ ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಮಾಣಿ ಇಲ್ಲಿ ನೆರವೇರಿತು. ಸಾಹಿತಿ ಹಾಗೂ ವಿಮರ್ಶಕರಾದ ಡಾ.ಬಿ.ಜನಾರ್ದನ ಭಟ್ ಇವರಿಗೆ ಈ ಬಾರಿಯ ವಿಶುಕುಮಾರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲೇಖಕ […]
Read More
30-09-2022, 2:24 PM
ಕೂಳೂರು :- ಹರಿನಾಮ ಸಂಕೀರ್ತನೆಯೇ ಸಾಕು ಎಲ್ಲರ ಪಾಪಸಂಚಯವನ್ನು ಉಪಶಮನಗೊಳಿಸಲು. ಶೃತಿ, ತಾಳ, ಲಯ ಬದ್ಧವಾಗಿ ಭಜನೆಯ ರೂಪದಲ್ಲಿ ಭಗವಂತನನ್ನು ಸೇವಿಸಬಹುದು ಹಾಗೂ ಆರಾಧಿಸಬಹುದು. ದೇವರ್ಷಿಗಳಾದ ನಾರದರು ಹೇಳುತ್ತಾರೆ ಭಗವನ್ನಾಮವು ಒಂದೇ ನನ್ನ ಪ್ರಾಣ. ಆಧ್ಯಾತ್ಮಿಕ ಅಂಧಕಾರದ ಕಲಿಯುಗದಲ್ಲಿ ಭಗವನ್ನಾಮಹೊರತು ಬೇರೆಯಾವುದೇ ಆಶ್ರಯವಿಲ್ಲ. ಕೂಳೂರು ಘಟಕದಿಂದ ಪ್ರತಿ ತಿಂಗಳ ಒಂದು ದಿನ ಸಂಪರ್ಕದ ನೆಲೆಯಲ್ಲಿ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಆನಂದ್ ರವರ ಸಂಚಾಲಕತ್ವದಲ್ಲಿ ನಡೆಸಿಕೊಂಡು ಬರುವ ಮನೆ ಮನೆ ಭಜನೆ ಕಾರ್ಯಕ್ರಮವು ಲಕ್ಷ್ಮೀ ಪೂಜೆಯ […]
Read More