ಘಟಕಗಳು

ಸ್ನೇಹ ಸಮ್ಮಿಲನ -2018

ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದ ಸದಸ್ಯರ ಸ್ನೇಹ ಸಮ್ಮಿಲನ ದಿನಾಂಕ 25-2-2018 ರಂದು ಮಂಗಳೂರು ತಣ್ಣೀರುಬಾವಿ ಟ್ರೀ ಪಾರ್ಕ್ನಲ್ಲಿ ನಡೆಯಿತು. ಆ ದಿನ ಬೆಳಿಗ್ಗೆ 9:00.ಗಂಟೆಗೆ ಘಟಕದ ಹೆಚ್ಚಿನ ಸದಸ್ಯರು ಹಾಜರಿದ್ದು ವಿಶೇಷವಾದ ರೀತಿಯಲ್ಲಿ ಘಟಕದ ಅಧ್ಯಕ್ಷರಾದ ನವೀನ್ ಚಂದ್ರ ಕಾರ್ಯದರ್ಶಿ ರಾಜೇಶ್ ಅಮೀನ್, ಕೇಂದ್ರ ಸಮಿತಿ ಅಧ್ಯಕ್ಷರಾದ ಯಶವಂತ ಪೂಜಾರಿ,ಕಾರ್ಯಕ್ರಮ ಸಂಚಾಲಕರಾದ ಪ್ರವೀಣ್ ಸಾಲ್ಯಾನ್ ಕಿರೋಡಿಯವರು ಅವಲಕ್ಕಿ,ತೆಂಗಿನಕಾಯಿ ಹುರಿ,ಬೆಲ್ಲ ,ಜೇನುತುಪ್ಪ ಬೆರೆಸುವುದರ ಮೂಲಕ ಸ್ನೇಹ ಸಮ್ಮಿಲನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ರೀತಿಯ […]

Read More

ಸ್ನೇಹ ಸಮ್ಮಿಲನ – 2018

ಯುವವಾಹಿನಿ (ರಿ) ಕೂಳೂರು ಘಟಕದ ಸ್ನೇಹ ಸಮ್ಮಿಲನ – 2018 ಕಾರ್ಯಕ್ರಮವು ದಿನಾಂಕ 25-02-2018 ರಂದು “ಕೆರಿಬಿಯನ್ ರೆಸಾರ್ಟ್” ಮುಲ್ಕಿ ಇಲ್ಲಿ ನಡೆಯಿತು. ಯುವವಾಹಿನಿ (ರಿ) ಮುಲ್ಕಿ ಘಟಕದ ಅಧ್ಯಕ್ಷರಾದ ರಕ್ಷಿತಾ ಕೋಟ್ಯಾನ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ಕೂಳೂರು ಘಟಕದ ಉಪಾಧ್ಯಕ್ಷರಾದ ಶ್ರೀಯುತ ಲೋಕೇಶ್ ಕೋಟ್ಯಾನ್, ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀಯುತ ಗಿರಿಧರ ಸನಿಲ್ ಉಪಸ್ಥಿತರಿದ್ದರು. ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ಸ್ವಾಗತಿಸಿದರು […]

Read More

ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ, ಎ1 ಫ್ರೆಂಡ್ಸ್ ಆಕಾಶಭವನ ಹಾಗೂ ಶ್ರೀನಿವಾಸ ಹಾಸ್ಪಿಟಲ್ ಮುಕ್ಕ ಇದರ ಸಹಯೋಗದೊಂದಿಗೆ ದಿನಾಂಕ 25.02.2018 ರಂದು ಪರಪಾದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಕಾಶಭವನದಲ್ಲಿ ಉಚಿತ ವೈದ್ಯಕೀಯ ಶಿಬಿರ ಜರುಗಿತು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ದೀಪಕ್ ಕೆ.ಪೂಜಾರಿ ಶಿಬಿರ ಉದ್ಘಾಟಿಸಿ ಶುಭ ಹಾರೈಕೆ ಮಾಡಿದರು.ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಸುಪ್ರೀತಾ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಎ1 ಫ್ರೆಂಡ್ಸ್ ಅಧ್ಯಕ್ಷರಾದ ಲೋಹಿತ್ ಕುಮಾರ್, ಪರಪಾದೆ ಸರಕಾರಿ […]

Read More

ಉಚಿತ ವೈದ್ಯಕೀಯ ಹಾಗೂ ದ೦ತ ಚಿಕಿತ್ಸಾ ಶಿಬಿರ

ಯುವವಾಹಿನಿ (ರಿ.) ಉಪ್ಪಿನ೦ಗಡಿ ಘಟಕ ಮತ್ತು ಸ್ಥಳೀಯ ಸ೦ಘ ಸಂಸ್ಥೆಗಳ ಸ೦ಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ಹಾಗೂ ದ೦ತ ಚಿಕಿತ್ಸಾ ಶಿಬಿರವು ಯೆನಪೋಯ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಯೆನಪೋಯ ದ೦ತ ಮಹಾ ವಿದ್ಯಾಲಯ ದೇರಳಕಟ್ಟೆ ಇಲ್ಲಿಯ ತಜ್ನ ವೈದ್ಯರ ತ೦ಡದೊ೦ದಿಗೆ ದಿನಾಂಕ 18/02/2018 ರಂದು ಸ.ಹಿ.ಪ್ರಾ. ಶಾಲೆ ಹಿರೇಬ೦ಡಾಡಿಯಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಪ್ಪಿನ೦ಗಡಿ ಸಹಸ್ರಲಿ೦ಗೇಶ್ವರ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿ ಸದಸ್ಯರು, ಹಿರೇಬ೦ಡಾಡಿ ಗ್ರಾ. ಪ೦ ಸದಸ್ಯರಾದ ಪ್ರಕಾಶ್ ರೈಯವರು ದೀಪ ಬೆಳಗಸಿ ಉದ್ಘಾಟಿಸಿ […]

Read More

ಬೆಳದಿಂಗಳಲ್ಲಿ ಒಂದು ದಿನ

ಸುರತ್ಕಲ್ : ಯುವವಾಹಿನಿ (ರಿ) ಸುರತ್ಕಲ್ ಘಟಕದ ಆಶ್ರಯದಲ್ಲಿ ದಿನಾಂಕ 18.02.2018 ರಂದು ಸುರತ್ಕಲ್ ಯುವವಾಹಿನಿ ಸದಸ್ಯರ ಬೆಳದಿಂಗಳಲ್ಲಿ ಒಂದು ದಿನ ಕಾರ್ಯಕ್ರಮ ಜರುಗಿತು. ಘಟಕದ ಮಾಜಿ ಅಧ್ಯಕ್ಷರಾದ ರಿತೇಶ್ ಕುಮಾರ್ ಮನರಂಜನಾ ಆಟಗಳನ್ನು ಏರ್ಪಡಿಸುವ ಮೂಲಕ ಮಕ್ಕಳು, ಯುವಕರು, ಯುವತಿಯರು, ದಂಪತಿಯರು ಹಾಗೂ ಎಲ್ಲಾ ಸದಸ್ಯರಲ್ಲಿ ಪರಸ್ಪರ ಸಂತಸ ಮೂಡಿಸಿದರು. ಮಂಗಳೂರು ಮಾಹಾನಗರ ಪಾಲಿಕೆಯ ಸದಸ್ಯರಾದ ಪ್ರತಿಭಾ ಕುಳಾಯಿ , ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ, ಸಲಹೆಗಾರರಾದ ಸಾಧು ಪೂಜಾರಿ , ಕೇಂದ್ರ […]

Read More

ನಾಗರಿಕಾ ಸೇವಾ ಪರೀಕ್ಷೆ ಕಬ್ಬಿಣದ ಕಡಲೆಯಲ್ಲ : ಲೋಬೋ

ನಾಗರಿಕಾ ಸೇವಾ ಪರೀಕ್ಷೆ ಕಬ್ಬಿಣದ ಕಡಲೆಯಲ್ಲ ಶಿಸ್ತು, ಶ್ರದ್ಧೆ, ಗುರಿ, ಆಳ ಅಧ್ಯಯನ, ಜತೆಗೆ ದೃಢವಾದ ಆತ್ಮವಿಶ್ವಾಸ ಇದ್ದರೆ ಖಂಡಿತವಾಗಿ ಯಶಸ್ಸು ಸಾಧ್ಯ ಎಂದು ಶಾಸಕ ಜೆ.ಆರ್.ಲೋಬೋ ಹೇಳಿದರು. ಮಂಗಳೂರು ಬಲ್ಮಠದ ಬೆಸೆಂಟ್ ಜತ್ತನ್ನ ಸಭಾಂಗಣದಲ್ಲಿ ದಿನಾಂಕ 18.02.2018 ರಂದು ಜರುಗಿದ ಯುವವಾಹಿನಿ (ರಿ) ಮಂಗಳೂರು ಘಟಕ, ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ, ಕರ್ನಾಡಕ ಕ್ರಿಶ್ಚಿಯನ್ ಅಸೋಸಿಯೇಷನ್ ಸಿಸೈಟಿ, ಹಾಗೂ ಸರ್ವಜ್ಞ ಐಎಎಸ್ ಅಕಾಡೆಮಿ ವತಿಯಿಂದ ಐಎಎಸ್, ಐಪಿಎಸ್, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ […]

Read More

ಜೀವನ ಮೌಲ್ಯ ಅಳವಡಿಸಿ : ಯಶವಂತ ಪೂಜಾರಿ

 ಉಡುಪಿ: ಪ್ರಸ್ತುತ ಇರುವ ಸ್ಥಿತಿಯಿಂದ ಉತ್ತಮ ಸ್ಥಿತಿಯತ್ತ ಕೊಂಡೋಯ್ಯುವುದೇ ಸಂಸ್ಕಾರ, ಮಾನವ ಅರಿಷಡ್ವರ್ಗಗಳನ್ನು ತ್ಯಜಿಸಿದಾಗ ಮಾಧವನಾಗುತ್ತಾನೆ, ಇದಕ್ಕೆ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ ಇಂತಹ ಕಾರ್ಯಾಗಾರವನ್ನು ನಿರಂತರ ನಡೆಸುತ್ತಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 18.02.2018 ನೇ ಆದಿತ್ಯವಾರ ಉಡುಪಿ ಬಲೈಪಾದೆ ನಿತ್ಯಾನಂದ ಆರ್ಕೆಡ್ ನಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಜರುಗಿದ ಬಹು […]

Read More

ಜಿಲ್ಲೆಯ ಜನತೆ ಸ್ವಚ್ಛತೆಯಲ್ಲಿ ಬದ್ಧತೆ ಹೊಂದಿರುವವರು : ಶಾಸಕ ಸೊರಕೆ

ಕಾಪು : ಉಡುಪಿ ಜಿಲ್ಲೆ ಸ್ವಚ್ಚತೆಯಲ್ಲಿ ಪ್ರಥಮ, ಹಾಗೂ ಕಾಪು ಪುರಸಭೆ ದ್ವಿತೀಯ ಸ್ಥಾನವನ್ನು ಗಳಿಸಿದ್ದು ನಮ್ಮ ಜಿಲ್ಲೆಯ ಜನ ಸ್ವಚ್ಚತೆಯಲ್ಲಿ ಬದ್ಧತೆ ಹೊಂದಿದವರಾಗಿದ್ದಾರೆ. ಯುವಕರು ಈ ನಿಟ್ಟಿನಲ್ಲಿ ಇಂತಹ ಶಿಬಿರಗಳನ್ನು ನಡೆಸುವುದಯ ಶ್ಲಾಘನೀಯ ಎಂದು ಕಾಪು ಕ್ಷೇತ್ರದ ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದರು. ಅವರು ದಿನಾಂಕ 18.02.2018 ನೇ ಆದಿತ್ಯವಾರ ಯುವವಾಹಿನಿ (ರಿ) ಕಾಪು ಘಟಕದ ಆಶ್ರಯದಲ್ಲಿ ಕರಾವಳಿ ಪ್ರೇಂಡ್ಸ್ ಎರ್ಮಾಳ್, ಎಸ್ ಎನ್ ಜಿ ಸ್ಪೋರ್ಟ್ಸ್ ಕ್ಲಬ್ ಎರ್ಮಾಳ್, ಸ್ವರ್ಣ ಸೌಹಾರ್ದ ಕ್ರೆಡಿಟ್ […]

Read More

ಬಂಟ್ವಾಳದಲ್ಲಿ ‘ಡೆನ್ನಾನ… ಡೆನ್ನನ’ದ ಇಂಪು

ತುಳು ನಾಡ ವೀರ ಪುರುಷರ ಕಥೆಗಳು ಇಂದಿಗೂ ಜೀವಂತವಾಗಿದೆ ಎಂದರೆ ಅದು ತುಳುನಾಡ ಪಾಡ್ದನದ ಮೂಲಕ. ಅದು ನಮ್ಮ ಹಿರಿಯರ ಸಂಸ್ಕೃತಿಯ ಮೂಲಕ , ತುಳುನಾಡ ಸಂಸ್ಕೃತಿಯಲ್ಲಿ ಬೆರೆತು ಹೋದ ವೀರ ಪುರುಷರ, ಮಾತೆಯರ ಕಥೆಗಳು ಪ್ರಾರಂಭವಾಗುವುದೇ ಪಾಡ್ದನದ ಮೊದಲ ಎರಡು ಪದಗಳಾದ ಡೆನ್ನಾನ ಡೆನ್ನಾನದಿಂದ ಬಿ.ಸಿ ರೋಡಿನ ನಾರಾಯಣ ಗುರು ವೃತದ ಬಳಿಯಿರುವ ಸ್ಪರ್ಶ ಕಲಾಮಂದಿರದಲ್ಲಿ , ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಬಂಟ್ವಾಳ ಆತಿಥ್ಯದಲ್ಲಿ . ಡೆನ್ನಾನ ಡೆನ್ನಾನ […]

Read More

ಗುಪ್ತಗಾಮಿನಿ ಯುವವಾಹಿನಿ…….. ರಮ್ಯ ಸುಜೀರ್

ಬದುಕು ಆಧುನೀಕತೆಯತ್ತ ಹೊರಳುತ್ತಿದೆ. ಗತವೈಭವದ ಸಂದಿ ಪಾಡ್ದನಗಳು ನೇಪಥ್ಯಕ್ಕೆ ಸರಿಯುತ್ತಿದೆ. ತುಳುವ ಆಚಾರ-ವಿಚಾರ, ಹಿರಿಮೆ-ಗರಿಮೆಗಳು ಸದ್ದಡಗಿಸಿ ಮೂಕವಾಗಿದೆಯೆನೋ ಎನ್ನುವಂತಹ ದಿನಗಳಲ್ಲಿಯೇ, ಸಂದಿ ಹೋದ ಕಾಲವನ್ನು ಮರುಕಳಿಸುವಂತೆ ಮಾಡಿ, ಸತ್ಯದ ಹೊಳಪ ಲೇಪನವನ್ನು ನೀಡುತ್ತಾ, ನಿತ್ಯ-ನಿರಂತರ ಗುಪ್ತಗಾಮಿನಿಯಾಗಿ ಹರಿಯುತ್ತಾ, ತನ್ನೊಂದಿಗೆ ತುಳುವ ಮಣ್ಣಿನ ಸತ್ವ-ಸಾರ, ಬಿರುವ ಸಮುದಾಯದ ಯುವಜನತೆಯ ಪ್ರತಿಭಾ ಕೌಶಲ್ಯವನ್ನು ಒಗ್ಗೂಡಿಸಿಕೊಂಡು, ಎಲ್ಲೋ ಮರೆಯಾಗಿ ಹೋಗುತ್ತಿರುವ ಪ್ರತಿಭೆಗಳ ಮೇಲೆ ಬೆಳಕು ಚೆಲ್ಲಿ, ಅವರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟು, ಸಾಧನಾಲೋಕಕ್ಕೆ ಪರಿಚಯಿಸಿಕೊಂಡು ಸಾಧನೆಯ ಮೇರುಶಿಖರದ ಅನಂತತೆಯ ಪಥದತ್ತ ಸಾಗಿಬರುತ್ತಿರುವ ಹೆಮ್ಮೆಯ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!